TOP NEWS

High Court: ಯೋಗೇಶ್ ಗೌಡ ಹತ್ಯೆ ಕೇಸ್: ಸಿಸ್ಟಮ್ ಹೈಜಾಕ್ ಮಾಡಿದ್ದ ವಿನಯ್ ಕುಲಕರ್ಣಿಗೆ ಬೇಲ್ ಬೇಡ; ಹೈಕೋರ್ಟ್‌ನಲ್ಲಿ ಸಿಬಿಐ ಖಡಕ್ ವಾದ!

Yogesh gowda case vinay Kulkarni bail plea investigation

ಧಾರವಾಡ: ಬಿಜೆಪಿ ಲೀಡರ್ ಯೋಗೇಶ್ ಗೌಡ ಹತ್ಯೆ ಕೇಸ್‌ನ ಹೈಕೋರ್ಟ್ ವಿಚಾರಣೆ ಈಗ ಇಡೀ ರಾಜ್ಯದ ಗಮನ ಸೆಳೆದಿದೆ. ಪ್ರಕರಣದ ಮೇನ್ ಅಕ್ಯೂಸ್ಡ್, ಮಾಜಿ ಶಾಸಕ ವಿನಯ್ ಕುಲಕರ್ಣಿಗೆ ಕೆಳ ನ್ಯಾಯಾಲಯ ನೀಡಿರುವ ಜೀವಾವಧಿ ಶಿಕ್ಷೆಯನ್ನು ಯಾವುದೇ ಕಾರಣಕ್ಕೂ ಸಸ್ಪೆಂಡ್ ಮಾಡಬಾರದು ಮತ್ತು ಅವರಿಗೆ ಬೇಲ್ ಕೊಡಬಾರದು ಎಂದು ಸಿಬಿಐ (CBI) ಪರ ವಕೀಲರು ಹೈಕೋರ್ಟ್‌ನಲ್ಲಿ (High Court) ಖಡಕ್ ವಾದ ಮಂಡಿಸಿದ್ದಾರೆ. ಇದು ಕೇವಲ ಒಂದು ಮರ್ಡರ್ ಕೇಸ್ ಅಲ್ಲ, ಇದೊಂದು ದೊಡ್ಡ ರಾಜಕೀಯ ಪಿತೂರಿಯಾಗಿದ್ದು, ವ್ಯವಸ್ಥಿತವಾಗಿ ಸಾಕ್ಷ್ಯ ನಾಶ ಮಾಡಲು ಇಡೀ ಕಾನೂನು ವ್ಯವಸ್ಥೆಯನ್ನೇ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಸಿಬಿಐ ಜಡ್ಜ್‌ಗಳ ಮುಂದೆ ಬಿಚ್ಚಿಟ್ಟಿದೆ.

ಕೊಲೆಗೆ ಕಾರಣವಾದ ರಾಜಕೀಯ ದ್ವೇಷ

ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೇಶ್ ಗೌಡ ಅವರು ಜಿ.ಪಂ ಮೀಟಿಂಗ್‌ನಲ್ಲಿ ಕೇಳಿದ್ದ ಕೆಲವು ಪ್ರಶ್ನೆಗಳು ಹಾಗೂ ಅವರ ಬೆಳವಣಿಗೆಯೇ ಈ ಕೊಲೆಗೆ ಸ್ಕೆಚ್ ಹಾಕಲು ಮುಖ್ಯ ಕಾರಣ ಎನ್ನಲಾಗಿದೆ. ಇದೇ ಹಳೇ ರಾಜಕೀಯ ವೈಷಮ್ಯ ಮನಸ್ಸಿನಲ್ಲಿಟ್ಟುಕೊಂಡು ವಿನಯ್ ಕುಲಕರ್ಣಿ ಅವರು ಅಚ್ಚುಕಟ್ಟಾಗಿ ಪ್ಲಾನ್ ಮಾಡಿ ಯೋಗೇಶ್ ಗೌಡರ ಹತ್ಯೆ ಮಾಡಿಸಿದ್ದರು ಎಂಬುದು ಪ್ರಮುಖ ಆರೋಪವಾಗಿದೆ. ಈ ಕೇಸ್‌ನ ತಳಮಟ್ಟದಿಂದ ಇನ್ವೆಸ್ಟಿಗೇಷನ್ ಮಾಡಿದ್ದ ಸಿಬಿಐ ಅಧಿಕಾರಿಗಳು ಪ್ರಬಲ ಸಾಕ್ಷ್ಯಗಳನ್ನು ಕೋರ್ಟ್‌ಗೆ ಸಬ್ಮಿಟ್ ಮಾಡಿದ್ದರು. ಇದರ ಆಧಾರದ ಮೇಲೆ ಜಿಲ್ಲಾ ನ್ಯಾಯಾಲಯವು ವಿನಯ್ ಕುಲಕರ್ಣಿ ಮತ್ತು ಚಂದ್ರಶೇಖರ್ ಇಂಡಿಗೆ ಲೈಫ್ ಇಂಪ್ರಿಸನ್‌ಮೆಂಟ್ (ಜೀವಾವಧಿ ಶಿಕ್ಷೆ) ವಿಧಿಸಿ ತೀರ್ಪು ನೀಡಿತ್ತು. ಈಗ ಈ ತೀರ್ಪನ್ನು ಚಾಲೆಂಜ್ ಮಾಡಿ, ತಮಗೆ ಜಾಮೀನು ಬೇಕು ಎಂದು ಇಬ್ಬರೂ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಸಿಸ್ಟಮ್ ಅನ್ನೇ ಹೈಜಾಕ್ ಮಾಡಿದ್ದ ಪ್ರಭಾವಿ ನಾಯಕ

ಜಸ್ಟಿಸ್ ಮೊಹಮ್ಮದ್ ನವಾಜ್ ಹಾಗೂ ಜಸ್ಟಿಸ್ ಜಿ. ಬಸವರಾಜ ಅವರಿದ್ದ ಹೈಕೋರ್ಟ್‌ನ ಡಿವಿಷನ್ ಬೆಂಚ್ ಮುಂದೆ ಸಿಬಿಐ ಪರವಾಗಿ ಅಡಿಷನಲ್ ಸಾಲಿಸಿಟರ್ ಜನರಲ್ ಎಸ್. ವಿ. ರಾಜು ಅವರು ಹಾಜರಾಗಿ ವಿನಯ್ ಕುಲಕರ್ಣಿ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಂಡಿಸಿದರು. ವಿನಯ್ ಕುಲಕರ್ಣಿ ತಮ್ಮ ಪವರ್ ಮತ್ತು ರಾಜಕೀಯ ಪ್ರಭಾವ ಬಳಸಿ ಮರ್ಡರ್ ಮಾಡಿಸಿದ್ದಷ್ಟೇ ಅಲ್ಲ, ಕೊಲೆಯಾದ ಬಳಿಕ ಅಸಲಿ ಹಂತಕರನ್ನು ಬಚಾವ್ ಮಾಡಲು ಲೋಕಲ್ ಪೊಲೀಸರ ಜೊತೆ ಸೇರಿ ಹೈಡ್ರಾಮಾ ಮಾಡಿದ್ದರು. ನಕಲಿ ಶೂಟರ್‌ಗಳನ್ನು ಕ್ರಿಯೇಟ್ ಮಾಡಿ, ಅವರೇ ಕೊಲೆಗಾರರೆಂದು ಸ್ಟೇಷನ್‌ಗೆ ಸರೆಂಡರ್ ಮಾಡಿಸಲಾಗಿತ್ತು. ಮುಂದೆ ಕೋರ್ಟ್‌ನಲ್ಲಿ ಎವಿಡೆನ್ಸ್ ಇಲ್ಲದಂತೆ ಮಾಡಿ ಆ ಡುಪ್ಲಿಕೇಟ್ ಆರೋಪಿಗಳು ಈಸಿಯಾಗಿ ಖುಲಾಸೆಯಾಗುವಂತೆ ತನಿಖಾ ಸಂಸ್ಥೆಯ ಹಾದಿ ತಪ್ಪಿಸಲಾಗಿತ್ತು. ಇಷ್ಟು ದೊಡ್ಡ ಮಟ್ಟದಲ್ಲಿ ಕಾನೂನಿನ ಜೊತೆ ಆಟವಾಡಿರುವ ಪ್ರಭಾವಿಗಳಿಗೆ ಈಗ ಬೇಲ್ ಕೊಟ್ಟರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಸಿಬಿಐ ಆತಂಕ ಹೊರಹಾಕಿದೆ.

ಕರ್ನಾಟಕ ಸೇಫ್ ಎಂದ ಹೈಕೋರ್ಟ್‌ಗೆ ಸಿಬಿಐ ಕೌಂಟರ್

ಕೇಸ್‌ನ ಹಿಯರಿಂಗ್ ವೇಳೆ ಕೋರ್ಟ್, ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹೈಪ್ರೊಫೈಲ್ ಸರ್ಕಾರಿ ಅಧಿಕಾರಿಗಳು ಅಥವಾ ದೊಡ್ಡ ರಾಜಕಾರಣಿಗಳು ಇಂತಹ ಕ್ರಿಮಿನಲ್ ಕೃತ್ಯಗಳಲ್ಲಿ ಇನ್ವಾಲ್ವ್ ಆಗುವ ಪ್ರಮಾಣ ತುಂಬಾ ಕಡಿಮೆ ಇದೆ ಎಂದು ಅಭಿಪ್ರಾಯಪಟ್ಟಿತು. ಇದಕ್ಕೆ ತಕ್ಷಣವೇ ಕೌಂಟರ್ ಕೊಟ್ಟ ಸಿಬಿಐ ಲಾಯರ್, ಕರ್ನಾಟಕದಲ್ಲಿ ಸದ್ಯಕ್ಕೆ ಈ ರೇಟ್ ಕಡಿಮೆ ಇರಬಹುದು, ಆದರೆ ಲೀಡರ್ಸ್ ಮತ್ತು ಆಫೀಸರ್ಸ್ ಕ್ರೈಂ ಮಾಡಿ ಸಿಸ್ಟಮ್ ಹೈಜಾಕ್ ಮಾಡಿರುವ ಎಕ್ಸಾಂಪಲ್ಸ್ ಇತ್ತೀಚೆಗೆ ನಮ್ಮ ಕಣ್ಣಮುಂದೆಯೇ ಇವೆ. ಇಂತಹ ಡೇಂಜರಸ್ ಟ್ರೆಂಡ್‌ ಅನ್ನು ಆರಂಭದಲ್ಲೇ ಚಿವುಟಿ ಹಾಕಬೇಕು. ದೇಶದ ಹಲವೆಡೆ ಭ್ರಷ್ಟ ರಾಜಕಾರಣಿಗಳನ್ನು ಸರ್ಕಾರಗಳೇ ರಕ್ಷಿಸಿರುವ ಹಿಸ್ಟರಿ ಇದೆ. ಗವರ್ನಮೆಂಟ್ ಚೇಂಜ್ ಆದ ತಕ್ಷಣ ಪ್ರಾಸಿಕ್ಯೂಷನ್ ಪರ್ಮಿಷನ್ ವಾಪಸ್ ಪಡೆದ ಉದಾಹರಣೆಗಳೂ ಇವೆ. ಕಾನೂನು ಎಲ್ಲರಿಗೂ ಒಂದೇ, ಅದು ದೊಡ್ಡ ಮನುಷ್ಯರ ಮುಂದೆ ತಲೆಬಾಗಬಾರದು ಎಂದು ವಾದಿಸಿದರು. ಸಿಬಿಐ ವಾದ ಆಲಿಸಿದ ಹೈಕೋರ್ಟ್, ಕೇಸ್‌ನ ಗಾಂಭೀರ್ಯತೆ ನೋಡಿ ಮುಂದಿನ ವಿಚಾರಣೆಯನ್ನು ಪೋಸ್ಟ್‌ಪೋನ್ ಮಾಡಿದೆ. ಮುಂದಿನ ದಿನಗಳಲ್ಲಿ ವಿನಯ್ ಕುಲಕರ್ಣಿ ಪರ ವಕೀಲರು ತಮ್ಮ ವಾದ ಮಂಡಿಸಲಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ ಕೆಂಪೇಗೌಡ ಜಯಂತಿ ಗಲಾಟೆ ಮುನ್ನಲೆಗೆ: ಸಿದ್ದರಾಮಯ್ಯ ಎದುರು ಶಾಸಕ ಪ್ರದೀಪ್ ಈಶ್ವರ್ ಕಣ್ಣೀರು

Leave a Reply

Your email address will not be published. Required fields are marked *