DK Shivakumar: ಹೈಕೋರ್ಟ್ ಆವರಣದಲ್ಲಿದ್ದ ಬೃಹತ್ ಕಟೌಟ್ಗಳನ್ನು ಕಿತ್ತೆಸೆದ ಪೊಲೀಸರು!
ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಅಧಿಕಾರ ಸ್ವೀಕರಿಸುವ ಐತಿಹಾಸಿಕ ಕ್ಷಣಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಬೆಂಗಳೂರಿನ ಹೈಕೋರ್ಟ್ ಅನಧಿಕೃತ ಫ್ಲೆಕ್ಸ್ ಹಾವಳಿ ವಿರುದ್ಧ ತೀವ್ರ ಕೆಂಗಣ್ಣು ಬೀರಿದೆ. ಜೂನ್ 3ರಂದು ನಡೆಯಲಿರುವ ಈ ಪಟ್ಟಾಭಿಷೇಕದ ಸಡಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೈಕೋರ್ಟ್ ಮತ್ತು ವಿಧಾನಸೌಧದ ಸುತ್ತಮುತ್ತ ಅಳವಡಿಸಿದ್ದ ಸಾಲು ಸಾಲು ದೈತ್ಯ ಕಟೌಟ್ಗಳು ಹಾಗೂ ಬ್ಯಾನರ್ಗಳನ್ನು ನ್ಯಾಯಾಧೀಶರ ಖಡಕ್ ಆದೇಶದ ಮೇರೆಗೆ ಅಧಿಕಾರಿಗಳು ಜಾಗದಲ್ಲೇ ತೆರವುಗೊಳಿಸಿದ್ದಾರೆ. ಕೊನೆಗೂ ಪಟ್ಟ ಗಿಟ್ಟಿಸಿಕೊಂಡ…
