TOP NEWS
From Toxic to Mollywood Rukmini Vasanth Kicks Off Shooting for Her Malayalam Debut with Nivin Pauly

Rukmini Vasanth: ‘ಟಾಕ್ಸಿಕ್’ ಅಬ್ಬರದ ನಡುವೆಯೇ ಮಲಯಾಳಂಗೆ ಹಾರಿದ ರುಕ್ಮಿಣಿ: ನಿವಿನ್ ಪೌಲಿ ಜೊತೆ ಹೊಸ ಸಿನಿಮಾದ ಚಿತ್ರೀಕರಣ ಶುರು

ಬೆಂಗಳೂರು: ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರ ಸಿನಿಮಾ ಜರ್ನಿ ದಿನದಿಂದ ದಿನಕ್ಕೆ ಹೊಸ ಎತ್ತರಕ್ಕೆ ಜಿಗಿಯುತ್ತಿದೆ. ‘ಸಪ್ತ ಸಾಗರದಾಚೆ ಎಲ್ಲೋ’ ಮತ್ತು ‘ಕಾಂತಾರ’ ಚಿತ್ರಗಳ ಮೂಲಕ ಸೌತ್ ಸಿನಿಮಾರಂಗದಲ್ಲಿ ಭಾರಿ ಸದ್ದು ಮಾಡುತ್ತಿರುವ ಈ ನಟಿ, ಈಗ ಮಲಯಾಳಂ ಚಿತ್ರರಂಗಕ್ಕೂ ಅಧಿಕೃತವಾಗಿ ಪದಾರ್ಪಣೆ ಮಾಡಿದ್ದಾರೆ. ಮಲಯಾಳಂನ ಖ್ಯಾತ ನಟ ನಿವಿನ್ ಪೌಲಿ ಜೊತೆಗಿನ ತಮ್ಮ ಹೊಸ ಸಿನಿಮಾದ ಶೂಟಿಂಗ್ ಅನ್ನು ಅವರು ಅಧಿಕೃತವಾಗಿ ಆರಂಭಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿ ಶೇರ್‌ ಮಾಡಿಕೊಂಡ…

Read More
Land Acquisition Delay Bidadi Farmers Submit Memorandum to CM Demanding Final Notification

Bidadi: ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿ: ರೆಡ್ ಜೋನ್ ನಿಂದ ನಮಗೆ ಮುಕ್ತಿ ಬೇಕು, ಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಬಿಡದಿ ರೈತರ ಮನವಿ

ಬೆಂಗಳೂರು: “ನಮಗೆ ರೆಡ್ ಜೋನ್ ನಿಂದ ಮುಕ್ತಿ ಬೇಕು. ಬಿಡದಿ ಟೌನ್ ಶಿಪ್ ಗೆ ನಮ್ಮ ಭೂಮಿ ನೀಡಲು ಸಿದ್ಧರಿದ್ದೇವೆ. ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿ ನಮ್ಮ ಸಂಕಷ್ಟಕ್ಕೆ ನೆರವಾಗಬೇಕು” ಎಂದು ಬಿಡದಿಯ (Bidadi) ಸುತ್ತಮುತ್ತಲ ರೈತರ ನಿಯೋಗ ಇಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ತಮ್ಮ ಕಷ್ಟವನ್ನ ಸಿಎಂಗೆ ವಿವರಿಸಿದ ರೈತರು ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಿಯೋಗವು ರೆಡ್ ಜೋನ್ ನಿಂದ…

Read More
Lets All Work Together as Team Karnataka CM DK Shivakumar Calls for Unity

DK Shivakumar: ನಾವೆಲ್ಲಾ ಟೀಮ್ ಕರ್ನಾಟಕವಾಗಿ ಕೆಲಸ ಮಾಡೋಣ: ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: “ನಾನು ಸೇರಿದಂತೆ ನನ್ನ ಮಂತ್ರಿ ಮಂಡಲ, ಅಧಿಕಾರಿಗಳು ಎಲ್ಲರೂ ಸರ್ಕಾರಿ ನೌಕರರು. ನಮ್ಮದು ಟೀಮ್ ಕರ್ನಾಟಕ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಕಲ್ಯಾಣ ಮಾಡುವುದೇ ನಮ್ಮ ಗುರಿ” ಎಂದು ಸಿಎಂ ಡಿ ಕೆ ಶಿವಕುಮಾರ್ (DK Shivakumar) ಅವರು ಕರೆ ಕೊಟ್ಟರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಂಗಳವಾರ ನಡೆದ ಸರ್ಕಾರಿ ನೌಕರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ನೌಕರರನ್ನು ಉದ್ದೇಶಿಸಿ ಮಾತನಾಡಿದರು. “ನಮ್ಮನ್ನು ಸೇರಿದಂತೆ ರಾಜ್ಯದ ಜನರ ಸೇವೆ…

Read More
Tollywood Police Case Filed Against Singer Rahul Sipligunj and 11 Others for Threats

Tollywood: ಮದುವೆ ಆಮಿಷ, ಖಾಸಗಿ ವಿಡಿಯೋ ಲೀಕ್ ಬೆದರಿಕೆ: ವಿಶಾಖಪಟ್ಟಣಂನಲ್ಲಿ ರಾಹುಲ್ ಸಿಪ್ಲಿಗಂಜ್ ಸೇರಿ 12 ಜನರ ವಿರುದ್ಧ ಎಫ್‌ಐಆರ್!

ವಿಶಾಖಪಟ್ಟಣಂ: ಖ್ಯಾತ ಹಿನ್ನೆಲೆ ಗಾಯಕ ರಾಹುಲ್ ಸಿಪ್ಲಿಗಂಜ್ (Rahul Sipligunj) ಹಾಗೂ ಅವರ ಒಕ್ಕೂಟದ ಇತರ 11 ಜನರ ವಿರುದ್ಧ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಪೊಲೀಸ್ ಪ್ರಕರಣ (Tollywood) ದಾಖಲಾಗಿದೆ. ಸಂತ್ರಸ್ತ ಮಹಿಳೆಯೊಬ್ಬರು ನೀಡಿದ ಗಂಭೀರ ದೂರಿನ ಅನ್ವಯ ಪೊಲೀಸರು ಈ ಕ್ರಮ ಕೈಗೊಂಡಿದ್ದು, ಪ್ರಕರಣದ ತನಿಖೆ ತೀವ್ರಗೊಂಡಿದೆ.‌ ಮಹಿಳೆಗೆ ಬೆದರಿಕೆ ಹಾಕಿದ ಗಾಯಕ ಮಹಿಳೆಯ ದೂರಿನ ಪ್ರಕಾರ, ಗಾಯಕ ರಾಹುಲ್ ಸಿಪ್ಲಿಗಂಜ್ ಅವರ ಭಾವ ಮೈದುನನಾದ ಕರ್ಪೂರಪು ರಾಹುಲ್ ರೆಡ್ಡಿ ಎಂಬಾತ ತನಗೆ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾನೆ….

Read More
Midair Disaster for China Space Program Censors Move Fast After Rocket Erupts into Fireball

China: ಚೀನಾ ರಾಕೆಟ್ ಉಡಾವಣೆ ವೇಳೆ ಮಹಾ ದುರಂತ: ಆಕಾಶದಲ್ಲೇ ಬೆಂಕಿಯ ಉಂಡೆಯಾದ ‘ಲಾಂಗ್ ಮಾರ್ಚ್ 7ಎ’

ಚೀನ: ಬಾಹ್ಯಾಕಾಶ ಕ್ಷೇತ್ರದಲ್ಲಿ ಜಾಗತಿಕವಾಗಿ ಅಧಿಪತ್ಯ ಸಾಧಿಸಲು ಮುನ್ನುಗ್ಗುತ್ತಿರುವ ಚೀನಾಕ್ಕೆ(China) ಭಾರಿ ಹಿನ್ನಡೆಯಾಗಿದೆ. ಚೀನಾದ (China) ಪ್ರತಿಷ್ಠಿತ ‘ಲಾಂಗ್ ಮಾರ್ಚ್ 7ಎ’ (CZ-7A) ರಾಕೆಟ್ ಉಡಾವಣೆಯಾದ ಕೆಲವೇ ಸೆಕೆಂಡುಗಳಲ್ಲಿ ಆಕಾಶದಲ್ಲೇ ಭೀಕರವಾಗಿ ಸ್ಫೋಟಗೊಂಡಿದೆ. ಹೈನಾನ್ ಪ್ರಾಂತ್ಯದ ವೆನ್‌ಚಾಂಗ್ ಉಪಗ್ರಹ ಉಡಾವಣಾ ಕೇಂದ್ರದಿಂದ ಜಿಗಿದ ಈ ರಾಕೆಟ್, ಮೇಲಕ್ಕೆ ಹಾರಿದ ಕೇವಲ 85 ಸೆಕೆಂಡುಗಳ ಅವಧಿಯಲ್ಲಿ ತಾಂತ್ರಿಕ ದೋಷಕ್ಕೆ ಒಳಗಾಗಿ ಸ್ಫೋಟಿಸಿದೆ. ರಾಕೆಟ್‌ನ ಮೊದಲ ಹಂತದ ಪ್ರಯಾಣದಲ್ಲೇ ಈ ದುರಂತ ಸಂಭವಿಸಿದ್ದು, ಇದರೊಂದಿಗೆ ಉಡಾವಣೆ ಮಾಡಲಾಗಿದ್ದ ಉಪಗ್ರಹ ಮತ್ತು…

Read More
India Makes Private Space History Skyroot Vikram 1 Achieves Super Success on Debut Attempt

Skyroot: ಖಾಸಗಿ ಬಾಹ್ಯಾಕಾಶ ರಂಗದಲ್ಲಿ ಭಾರತದ ಇತಿಹಾಸ: ‘ವಿಕ್ರಮ್-1’ ಮೊದಲ ಯತ್ನದಲ್ಲೇ ಸೂಪರ್ ಸಕ್ಸಸ್

ಹೈದರಾಬಾದ್: ಭಾರತದ ಉದಯೋನ್ಮುಖ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮತ್ತಷ್ಟು ಬಲ ಬಂದಿದೆ. ಹೈದರಾಬಾದ್ ಮೂಲದ ಖಾಸಗಿ ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆಯಾದ ‘ಸ್ಕೈರೂಟ್ ಏರೋಸ್ಪೇಸ್’ (Skyroot) ಅಭಿವೃದ್ಧಿಪಡಿಸಿದ್ದ ‘ವಿಕ್ರಮ್-1’ ರಾಕೆಟ್ ತನ್ನ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ಕಕ್ಷೆ ತಲುಪುವ ಮೂಲಕ ಇತಿಹಾಸ ನಿರ್ಮಿಸಿದೆ. ಜುಲೈ 18, 2026 ರಂದು ನಡೆದ ಈ ಐತಿಹಾಸಿಕ ಉಡಾವಣೆಯ ಬೆನ್ನಲ್ಲೇ ಕಂಪನಿಗೆ ಮತ್ತೊಂದು ದೊಡ್ಡ ಯಶಸ್ಸು ಸಿಕ್ಕಿದ್ದು, ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆಯಾದ ‘ಹೆಕ್ಸ್20’ (HEX20) ಜೊತೆಗೆ ಮೂರು ಪ್ರಮುಖ ಉಡಾವಣೆಗಳ ಹೊಸ ವಾಣಿಜ್ಯ…

Read More
Bengaluru Crackdown Gottigere Indira Canteen Snagged and Sealed After Rats Prowl in Dirty Kitchen

Indira Canteen: ಸ್ಟಾರ್ ಹೋಟೆಲ್ ಬೆನ್ನಲ್ಲೇ ಇಂದಿರಾ ಕ್ಯಾಂಟೀನ್‌ಗಳಿಗೂ ಶಾಕ್: ಅಡುಗೆ ಮನೆಯಲ್ಲೇ ಹೆಗ್ಗಣ ಪತ್ತೆ, ಗೊಟ್ಟಿಗೆರೆ ಕ್ಯಾಂಟೀನ್ ಸೀಜ್!

ಬೆಂಗಳೂರು: ಐಷಾರಾಮಿ ಪಂಚತಾರಾ ಹೋಟೆಲ್‌ಗಳಿಗೆ ಶಾಕ್ ನೀಡಿದ್ದ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು, ಇದೀಗ ಬಡವರ ಹಸಿವು ನೀಗಿಸುವ ಸರ್ಕಾರದ ಮಹತ್ವಾಕಾಂಕ್ಷಿ ‘ಇಂದಿರಾ ಕ್ಯಾಂಟೀನ್’ಗಳ (Indira Canteen) ಅಡುಗೆಮನೆಗಳ ಮೇಲೆಯೂ ಗದಾಪ್ರಹಾರ ನಡೆಸಿದ್ದಾರೆ. ರಾಜಧಾನಿಯ ಹಲವೆಡೆ ಏಕಾಏಕಿ ದಾಳಿ ನಡೆಸಿ ತಪಾಸಣೆ ನಡೆಸಿದ ಅಧಿಕಾರಿಗಳಿಗೆ, ಸಾರ್ವಜನಿಕರಿಗೆ ಸಿಗುವ ಆಹಾರದ ತಯಾರಿಕಾ ಸ್ಥಳಗಳ ಭೀಕರ ದುರಾವಸ್ಥೆ ಕಂಡು ಬೆಚ್ಚಿಬೀಳುವಂತಾಗಿದೆ. ಹೆಗ್ಗಣ, ಇಲಿಗಳ ಕಾಟ: ಗೊಟ್ಟಿಗೆರೆ ಕ್ಯಾಂಟೀನ್ ಸೀಜ್! ನಗರದ ಗೊಟ್ಟಿಗೆರೆ, ಲಿಂಗರಾಜಪುರ ಸೇರಿದಂತೆ ವಿವಿಧ ಭಾಗಗಳಲ್ಲಿರುವ ಇಂದಿರಾ ಕ್ಯಾಂಟೀನ್‌ಗಳ…

Read More