DK Shivakumar: ಸತೀಶ್ ಜಾರಕಿಹೊಳಿ ವಿರುದ್ಧದ ದಾಳಿ ಸಂಪೂರ್ಣ ರಾಜಕೀಯ ಪ್ರೇರಿತ: ಕಾಂಗ್ರೆಸ್ ಪಕ್ಷವನ್ನು ಟ್ರ್ಯಾಪ್ ಮಾಡಲು ಸಂಚು ಎಂದ ಡಿ.ಕೆ. ಶಿವಕುಮಾರ್
ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ಯಾವುದೇ ಕಾನೂನುಬಾಹಿರ ಚಟುವಟಿಕೆ ಎಸಗಿಲ್ಲ ಮತ್ತು ಅವರ ಎಲ್ಲ ವ್ಯವಹಾರಗಳು ಕಾಯ್ದೆಯ ಚೌಕಟ್ಟಿನೊಳಗೇ ನಡೆದಿವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ತಮ್ಮ ಸಂಪುಟದ ಹಿರಿಯ ಸಹೋದ್ಯೋಗಿ ಎಂದು ಬಣ್ಣಿಸಿದರು. ಸಚಿವರು ಅಥವಾ ರಾಜಕಾರಣಿಗಳು ಹೊರಗೆ ಹೋಗಬಾರದು ಅಥವಾ ವೈಯಕ್ತಿಕ ವ್ಯವಹಾರಗಳನ್ನು ನಡೆಸಬಾರದು ಎಂದು ಎಲ್ಲೂ ನಿರ್ಬಂಧವಿಲ್ಲ. ವಿರೋಧ ಪಕ್ಷಗಳು ನಡೆಸುತ್ತಿರುವ ಈ ಎಲ್ಲಾ ಬೆಳವಣಿಗೆಗಳು ಕೇವಲ ರಾಜಕೀಯ ಪ್ರೇರಿತವಾಗಿವೆ ಎಂದು…
