Vijayalakshmi Darshan: ಅಮೃತಸರದ ಸುವರ್ಣ ಮಂದಿರದಲ್ಲಿ ದರ್ಶನ್ ಪತ್ನಿ ಪ್ರಾರ್ಥನೆ: “ನಗುವಿನ ಹಿಂದೆ ದೈವದತ್ತ ಶಕ್ತಿಯಿದೆ” ಎಂದ ವಿಜಯಲಕ್ಷ್ಮಿ!
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪ ಎದುರಿಸುತ್ತಿರುವ ನಟ ದರ್ಶನ್ ತೂಗುದೀಪ ಸದ್ಯ ಜೈಲು ವಾಸ ಅನುಭವಿಸುತ್ತಿದ್ದಾರೆ. ಇತ್ತ ಪತಿಯ ಸಂಕಷ್ಟದ ಸಮಯದಲ್ಲಿ ಧೈರ್ಯಗುಂದದ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಅವರು ದೈವದ ಮೊರೆ ಹೋಗಿದ್ದಾರೆ. ವಿವಿಧ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವ ಅವರು, ಇದೀಗ ಪಂಜಾಬ್ನ ಅಮೃತಸರದಲ್ಲಿರುವ ಪವಿತ್ರ ಗೋಲ್ಡನ್ ಟೆಂಪಲ್ಗೆ (ಸುವರ್ಣ ಮಂದಿರ) ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಸಂಕಷ್ಟದ ನಡುವೆಯೂ (Vijayalakshmi Darshan) ಸ್ಥಿತಪ್ರಜ್ಞೆ ಗುರುದ್ವಾರಕ್ಕೆ ಭೇಟಿ ನೀಡಿದ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ…
