Raghav Chadha: ನೀಟ್ ಅಕ್ರಮದ ಮೌನ ಮುರಿದ ರಾಘವ್ ಚಡ್ಡಾ: ‘ಅಂದು ವಿರೋಧ ಪಕ್ಷದಲ್ಲಿದ್ದೆ ಪ್ರಶ್ನಿಸಿದೆ, ಇಂದು ಆಡಳಿತ ಪಕ್ಷದಲ್ಲಿದ್ದೇನೆ ಪರಿಹಾರ ನೀಡುವೆ’!
ನವದೆಹಲಿ: ಸಂಸತ್ತಿನಲ್ಲಿ ವಿಮಾನ ನಿಲ್ದಾಣದ ಚಹಾ-ಸಮೋಸಾ ಬೆಲೆ ಏರಿಕೆಯಿಂದ ಹಿಡಿದು ಗಿಗ್ ಕಾರ್ಮಿಕರ ಸಮಸ್ಯೆಗಳವರೆಗೆ ಪ್ರತಿಯೊಂದು ಸಣ್ಣ ವಿಷಯದ ಬಗ್ಗೆಯೂ ಗಟ್ಟಿಯಾಗಿ ಧ್ವನಿ ಎತ್ತುತ್ತಿದ್ದ ಯುವ ನಾಯಕರೊಬ್ಬರು, ದೇಶವನ್ನೇ ಬೆಚ್ಚಿಬೀಳಿಸಿದ್ದ ನೀಟ್ (NEET) ಪೇಪರ್ ಸೋರಿಕೆ ಹಗರಣದ ವಿರುದ್ಧ ಸಾವಿರಾರು ವಿದ್ಯಾರ್ಥಿಗಳು ದೆಹಲಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾಗ ಸಂಪೂರ್ಣ ಮೌನಕ್ಕೆ ಶರಣಾಗಿದ್ದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಕ್ಷೇತ್ರದ ಪರವಾಗಿ ಸದಾ ಮಾತನಾಡುತ್ತಿದ್ದ ಈ ನಾಯಕನ ದಿಢೀರ್ ಮೌನ ಸಾರ್ವಜನಿಕರಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ಹಾಗೂ…
