TOP NEWS
Massive Win for Opposition Centre Relents on NEET Paper Leak Controversy Ready for Parliamentary Discussion

NEET: ಸಂಸತ್ತಿನಲ್ಲಿ ನೀಟ್ ಹಗರಣದ ಚರ್ಚೆಗೆ ಮುನ್ನ ಶಿಕ್ಷಣ ಸಚಿವರ ರಾಜೀನಾಮೆಗೆ ಪಟ್ಟು; ಲೋಕಸಭೆ ಕಲಾಪ ಮುಂದೂಡಿಕೆ

ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಹಾಗೂ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯದ (Protest) ವಿರುದ್ಧ ವಿರೋಧ ಪಕ್ಷಗಳು ನಡೆಸುತ್ತಿರುವ ತೀವ್ರ ಹೋರಾಟಕ್ಕೆ ಕೇಂದ್ರ ಸರ್ಕಾರ ಕೊನೆಗೂ ಮಣಿದಿದೆ. ಈ ಗಂಭೀರ ವಿಷಯದ ಕುರಿತು ಸಂಸತ್ತಿನಲ್ಲಿ ಸುದೀರ್ಘ ಚರ್ಚೆ ನಡೆಸಲು ಸಿದ್ಧವಿರುವುದಾಗಿ ಕೇಂದ್ರ ಸರ್ಕಾರ ಬುಧವಾರ ಅಧಿಕೃತವಾಗಿ ಪ್ರಕಟಿಸಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಈ ಮಹತ್ವದ…

Read More
NSUI different type protest Infront of KPCC office regarding Priyank kharge questions to RSS

RSS: ಆರ್‌ಎಸ್‌ಎಸ್ ನಾಯಕರ ಮುಖವಾಡ ಧರಿಸಿ ಚಡ್ಡಿ ಒದ್ದೆ ಮಾಡಿಕೊಂಡಂತೆ ನಾಟಕ: ಪ್ರಿಯಾಂಕ್ ಖರ್ಗೆ ಪ್ರಶ್ನೆಗೆ ಎನ್‌ಎಸ್‌ಯುಐ ಅಣುಕು ಪ್ರತಿಭಟನೆಯ ಹೈಡ್ರಾಮಾ!

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ನೋಂದಣಿ ಮತ್ತು ಆರ್ಥಿಕ ಮೂಲಗಳ ಪಾರದರ್ಶಕತೆಗೆ ಆಗ್ರಹಿಸಿ ಕರ್ನಾಟಕ ರಾಜಕಾರಣದಲ್ಲಿ ಸೃಷ್ಟಿಯಾಗಿರುವ ಕಿಚ್ಚು ಈಗ ಬೀದಿ ಹೋರಾಟದ ರೂಪ ಪಡೆದಿದೆ. ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಸರಣಿ ಸವಾಲುಗಳಿಗೆ ಬೆಂಬಲ ಸೂಚಿಸಿರುವ ಕಾಂಗ್ರೆಸ್ ವಿದ್ಯಾರ್ಥಿ ಘಟಕವಾದ ಎನ್‌ಎಸ್‌ಯುಐ (NSUI) ಕಾರ್ಯಕರ್ತರು, ಬೆಂಗಳೂರಿನ ಕೆಪಿಸಿಸಿ ಕಚೇರಿ ಎದುರು ಹಮ್ಮಿಕೊಂಡಿದ್ದ ವಿನೂತನ ಬೀದಿ ನಾಟಕ ಹಾಗೂ ಅಣುಕು ಪ್ರತಿಭಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪ್ರತಿಭಟನೆಯ ಭಾಗವಾಗಿ…

Read More
Bengaluru condiments association called for strike on june 18 against rowdies harassment

Bengaluru: ಹಫ್ತಾ ವಸೂಲಿ, ಅಧಿಕಾರಿಗಳ ದರ್ಪಕ್ಕೆ ಬೇಸತ್ತ ವರ್ತಕರು: ಜೂನ್ 18 ರಿಂದ ಬೆಂಗಳೂರಿನಲ್ಲಿ ಬೇಕರಿ, ಸಣ್ಣ ಅಂಗಡಿಗಳು ಬಂದ್!

ಬೆಂಗಳೂರು: ರಾಜಧಾನಿಯ ಸಣ್ಣಪುಟ್ಟ ವ್ಯಾಪಾರಿಗಳು ಹಾಗೂ ಬೇಕರಿ ಮಾಲೀಕರು ಅಸಹನೀಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಪುಡಿ ರೌಡಿಗಳ ಹಾವಳಿ, ಮಾಮೂಲಿಗಾಗಿ ಪೀಡಿಸುವ ದಂಧೆ ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳ ನಿರಂತರ ಕಿರುಕುಳಕ್ಕೆ (Bengaluru) ಶಾಶ್ವತ ಪರಿಹಾರ ಕೋರಿ, ನಗರದ ಬೇಕರಿ, ಕಾಂಡಿಮೆಂಟ್ಸ್, ಬೀಡಾ ಮತ್ತು ಬೀದಿಬದಿ ವ್ಯಾಪಾರಿಗಳು ಜೂನ್ 18 ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹೂಡಲು ನಿರ್ಧರಿಸಿದ್ದಾರೆ. ಬೆಂಗಳೂರು ಬೇಕರಿ ಮತ್ತು ಕಾಂಡಿಮೆಂಟ್ಸ್ ಅಸೋಸಿಯೇಷನ್ ಹಮ್ಮಿಕೊಂಡಿರುವ ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, “ನಮಗೆ ನೆಮ್ಮದಿಯಿಂದ ವ್ಯಾಪಾರ…

Read More
medical shop shut down on may 20th nationwide to ban online service

Medical Shops: ಮೇ 20 ರಂದು ದೇಶಾದ್ಯಂತ ಮೆಡಿಕಲ್ ಶಾಪ್‌ಗಳು ಸಂಪೂರ್ಣ ಬಂದ್!

ನವದೆಹಲಿ: ಮೇ 20 ರಂದು ದೇಶಾದ್ಯಂತ ವೈದ್ಯಕೀಯ ಅಂಗಡಿಗಳು (Medical Shops) ಮುಚ್ಚಲಿವೆ ಎಂಬ ಒಕ್ಕಣೆಯುಳ್ಳ ಪೋಸ್ಟರ್ ಹಾಗೂ ವಿಡಿಯೋಗಳು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಆರಂಭದಲ್ಲಿ ಸಾರ್ವಜನಿಕರು ಇದನ್ನು ಕೇವಲ ಇಂಟರ್ನೆಟ್ ವದಂತಿ ಎಂದು ನಿರ್ಲಕ್ಷಿಸಿದ್ದರಾದರೂ, ಈ ಸುದ್ದಿ ಈಗ ಅಧಿಕೃತವಾಗಿ ನಿಜವಾಗಿದೆ. ಭಾರತದ ಅತ್ಯಂತ ದೊಡ್ಡ ಔಷಧ ವ್ಯಾಪಾರಿಗಳ ಸಂಘಟನೆಯಾದ ‘ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ಸ್ ಅಂಡ್ ಡ್ರಗ್ಗಿಸ್ಟ್ಸ್’ (AIOCD) ಮೇ 20 ರಂದು 24 ಗಂಟೆಗಳ…

Read More
Gig workers call 5 hour nationwide shutdown

GIPSWU: ಪೆಟ್ರೋಲ್ ಬೆಲೆ ಏರಿಕೆಗೆ ಆಕ್ರೋಶ: ಶನಿವಾರ ಆ್ಯಪ್ ಆಧಾರಿತ ಸೇವೆಗಳು ಸ್ಥಗಿತ

ನವದೆಹಲಿ: ದೇಶಾದ್ಯಂತ ಇಂಧನ ಬೆಲೆ ಏರಿಕೆಯಾಗಿರುವ ಬೆನ್ನಲ್ಲೇ ಆ್ಯಪ್ ಆಧಾರಿತ ಡೆಲಿವರಿ ಹಾಗೂ ಸಾರಿಗೆ ನೌಕರರು ಪ್ರತಿಭಟನೆಗೆ ಮುಂದಾಗಿದ್ದಾರೆ. ಗಿಗ್ ಅಂಡ್ ಪ್ಲಾಟ್‌ಫಾರ್ಮ್ ಸರ್ವಿಸ್ ವರ್ಕರ್ಸ್ ಯೂನಿಯನ್ (GIPSWU) ಶನಿವಾರ ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ದೇಶಾದ್ಯಂತ ಆ್ಯಪ್ ಆಧಾರಿತ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಕರೆ ನೀಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ತತ್ತರಿಸಿರುವ ತಮಗೆ ಪ್ರತಿ ಕಿಲೋಮೀಟರ್‌ಗೆ ಕನಿಷ್ಠ 20 ರೂಪಾಯಿ ನಿಗದಿಪಡಿಸಬೇಕು ಎಂದು ಕಾರ್ಮಿಕರು ಒತ್ತಾಯಿಸುತ್ತಿದ್ದಾರೆ. ನೌಕರರ ಜೀವ ದುಸ್ಥರ…

Read More
ksrtc employs protest on may 20 what is government plan

Protest: ಸಾರಿಗೆ ನೌಕರರ ವೇತನ ಸಮರ: ಮೇ 20ರಿಂದ ಬಸ್‌ ಸಂಚಾರ ಸ್ತಬ್ಧ; ಮುಷ್ಕರ ಹತ್ತಿಕ್ಕಲು ಸರ್ಕಾರದ ‘ಆಪರೇಷನ್ ಖಾಸಗಿ’ ಸಿದ್ಧ!

ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ಸಾರಿಗೆ ನೌಕರರ ನಡುವಿನ ವೇತನ ಭಿನ್ನಾಭಿಪ್ರಾಯ ಈಗ ಬೀದಿ ಜಗಳಕ್ಕೆ ಬಂದು ನಿಂತಿದೆ. ಸರ್ಕಾರ ಇತ್ತೀಚೆಗೆ ಘೋಷಿಸಿದ ಶೇ. 12.5ರಷ್ಟು ವೇತನ ಏರಿಕೆಯನ್ನು ‘ಕಣ್ಣೊರೆಸುವ ತಂತ್ರ’ ಎಂದು ಕರೆದಿರುವ ಸಾರಿಗೆ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು, ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ (Protest) ಘೋಷಿಸಿದೆ. ಈ ಬಿಕ್ಕಟ್ಟಿನಿಂದಾಗಿ ರಾಜ್ಯದ ಜನತೆಗೆ ಸಾರಿಗೆ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದೆ. ನೌಕರರ ಪಟ್ಟು ಮತ್ತು ಆಕ್ರೋಶಕ್ಕೆ ಕಾರಣವೇನು? ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ಮೂಲ…

Read More
Protest rally to oppose Nuclear power plant in sagara taluk besur village

Sagara: ಅಣುವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ವಿರೋಧಿಸಿ ನಾಳೆ ಪ್ರತಿಭಟನೆ

ಶಿವಮೊಗ್ಗ: ಸಾಗರ (Sagara) ತಾಲ್ಲೂಕು ಅವಿನಹಳ್ಳಿ ಹೋಬಳಿ ಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಸೂರು ಗ್ರಾಮದಲ್ಲಿ ಅಣುವಿದ್ಯುತ್ ಸ್ಥಾವರ ನಿರ್ಮಿಸುವ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಉದ್ದೇಶವನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧಾರ ಮಾಡಲಾಗಿದೆ. ಜನಹೋರಾಟ ವೇದಿಕೆವತಿಯಿಂದ ಈ ಹೋರಾಟ ಹಮ್ಮಿಕೊಳ್ಳಲಾಗಿದ್ದು, ಅಣುಸ್ಥಾವರದಿಂದ ಅಲ್ಲಿನ ಜನರ ಬದುಕಿಗೆ ಮಾರಕವಾಗುವುದು ಬೇಡ ಎಂದು ಜನ ಆಗ್ರಹ ಮಾಡಿದ್ದಾರೆ, ಎಲ್ಲಿ ಪ್ರತಿಭಟನೆ?ನಾಳೆ ಬೆಳಿಗ್ಗೆ 10-30ಕ್ಕೆ ಸಾಗರದ ಶಿವಪ್ಪ ನಾಯ್ಕ ವೃತ್ತದಿಂದ ಈ ಪ್ರತಿಭಟನೆ ರ್ಯಾಲಿ ಪ್ರಾರಂಭ ಮಾಡಲು ನಿರ್ಧಾರ…

Read More