Haratalu Halappa: ಕೆಪಿಸಿ ಸಾಗುವಳಿದಾರರ ಸಮಸ್ಯೆ, ಹರತಾಳು ಹಾಲಪ್ಪಗೆ ಮನವಿ
ಸಾಗರ: ಕರ್ನಾಟಕ ವಿದ್ಯುತ್ ನಿಗಮದ (KPC) ವ್ಯಾಪ್ತಿಯಲ್ಲಿ ಬರುವ ಸಾಗುವಳಿದಾರರು ಎದುರಿಸುತ್ತಿರುವ ವಿವಿಧ ಜಟಿಲ ಸಮಸ್ಯೆಗಳ ಕುರಿತು ಮಾಜಿ ಸಚಿವರು ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಹರತಾಳು ಹಾಲಪ್ಪ (Haratalu Halappa) ಅವರ ಗಮನಕ್ಕೆ ತರಲಾಗಿದೆ. ಶೀಘ್ರ ಪರಿಹಾರ ಕಲ್ಪಿಸುವಂತೆ ಮನವಿ ಇಂದು ಹರತಾಳು ಹಾಲಪ್ಪ ಅವರನ್ನು ಭೇಟಿಯಾದ ನಿಯೋಗವು, ಕೆಪಿಸಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರು ಎದುರಿಸುತ್ತಿರುವ ತೊಡಕುಗಳು ಹಾಗೂ ಕಾನೂನಾತ್ಮಕ ಸಮಸ್ಯೆಗಳ ಕುರಿತು ಸುದೀರ್ಘವಾಗಿ ಚರ್ಚಿಸಿ, ಶೀಘ್ರ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿತು. ರೈತರ…
