Gruhajyoti: ಗೃಹಜ್ಯೋತಿ ಗ್ರಾಹಕರ ಡೇಟಾ ಸಂಗ್ರಹಕ್ಕೆ ತಾಂತ್ರಿಕ ಗ್ರಹಣ: ಸೌಲಭ್ಯ ರದ್ದಾಗುವ ಆತಂಕದಲ್ಲಿ ಜನಸಾಮಾನ್ಯರು
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಜ್ಯೋತಿ’ (Gruhajyoti) ಯೋಜನೆಯ ಫಲಾನುಭವಿಗಳ ಮಾಹಿತಿ ಸಂಗ್ರಹದ ಜವಾಬ್ದಾರಿ ಹೊತ್ತಿರುವ ಎಸ್ಕಾಂಗಳ ಸಿಬ್ಬಂದಿಗೆ ಹಲವು ತಾಂತ್ರಿಕ ಅಡಚಣೆಗಳು ತಲೆನೋವಾಗಿ ಪರಿಣಮಿಸಿವೆ. ಸ್ಥಳೀಯವಾಗಿ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಆ್ಯಪ್ಗಳ ಕೈಕೊಡುತ್ತಿರುವುದು ಹಾಗೂ ಸಾರ್ವಜನಿಕರ ಅಸಹಕಾರ ಸಿಬ್ಬಂದಿಯನ್ನು ಹೈರಾಣಾಗಿಸಿದೆ. ಸಿಬ್ಬಂದಿಯನ್ನು ಕಾಡುತ್ತಿರುವ ತಾಂತ್ರಿಕ ದೋಷಗಳು ಮೊಬೈಲ್ ಆ್ಯಪ್ನಲ್ಲಿ ಗ್ರಾಹಕರ ವಿದ್ಯುತ್ ಸಂಪರ್ಕದ ಆರ್ಆರ್ (RR) ಸಂಖ್ಯೆಯನ್ನು ನಮೂದಿಸಿದ ತಕ್ಷಣ, ಮಾಲೀಕರ ಹೆಸರು ಮತ್ತು ಯೋಜನೆಗೆ ನೋಂದಾಯಿತರಾದವರ ವಿವರಗಳು ಸ್ವಯಂಚಾಲಿತವಾಗಿ ಮೂಡಬೇಕಿದೆ. ಆದರೆ, ಹಲವು ಫಲಾನುಭವಿಗಳ…
