Bengaluru: ಬೆಂಗಳೂರಿನಲ್ಲಿ ‘ಬಾಡಿಗೆ ಗಣಪ’ ಸಂಚಲನ: ಪರಿಸರ ಸ್ನೇಹಿ ಹಬ್ಬದ ನಡುವೆ ಬೃಹತ್ ಫೈಬರ್ ಮೂರ್ತಿಗಳಿಗೆ ಭರ್ಜರಿ ಬೇಡಿಕೆ
ಬೆಂಗಳೂರು: ಈ ಬಾರಿಯ ಗೌರಿ-ಗಣೇಶ ಹಬ್ಬದ ಸಿದ್ಧತೆಗಳು ಜೋರಾಗಿ ನಡೆಯುತ್ತಿದ್ದು, ಮಾರುಕಟ್ಟೆಯಲ್ಲಿ ವೈವಿಧ್ಯಮಯ ಹಾಗೂ ಆಕರ್ಷಕ ಗಣೇಶ ಮೂರ್ತಿಗಳು ಪ್ರಮುಖ ಕೇಂದ್ರ ಬಿಂದುವಾಗಿವೆ. ಸಣ್ಣ ಗಾತ್ರದ ವಿಗ್ರಹಗಳಿಂದ ಹಿಡಿದು ಬೃಹತ್ ಗಾತ್ರದ ಭವ್ಯ ಮೂರ್ತಿಗಳವರೆಗೆ ಎಲ್ಲ ಶೈಲಿಯ ಗಣಪತಿಗಳು ಮಾರಾಟಕ್ಕೆ (Bengaluru) ಲಭ್ಯವಿವೆ. ಎಂದಿನಂತೆ ಮಣ್ಣಿನ ಮೂರ್ತಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತಿದ್ದರೂ, ಈ ಬಾರಿಯ ಹಬ್ಬದ ಮಾರುಕಟ್ಟೆಯಲ್ಲಿ ಎಲ್ಲರ ವಿಶೇಷ ಗಮನ ಸೆಳೆಯುತ್ತಿರುವುದು ಮತ್ತು ಹೊಸ ಚರ್ಚೆಗೆ ಗ್ರಾಸವಾಗಿರುವುದು ‘ಬಾಡಿಗೆ ಗಣಪ’ ಎಂಬ ವಿನೂತನ ಪರಿಕಲ್ಪನೆ. ಗಣೇಶನ…
