DK Shivakumar: ಗ್ಯಾರಂಟಿ ಹಗರಣಗಳಿಗೆ ಸಿಎಂ ಬ್ರೇಕ್: ಹೊರರಾಜ್ಯದವರ ಖಾತೆಗೆ ಹೋಗುತ್ತಿದ್ದ ಹಣ ನಿಲ್ಲಿಸಲು ಡಿ.ಕೆ. ಶಿವಕುಮಾರ್ ಕಟ್ಟುನಿಟ್ಟಿನ ಆರ್ಡರ್!
ಬೆಂಗಳೂರು: ರಾಜ್ಯ ಸರ್ಕಾರದ ಐದು ಪ್ರಮುಖ ಗ್ಯಾರಂಟಿ ಯೋಜನೆಗಳ ದುರುಪಯೋಗಕ್ಕೆ ತಡೆ ಒಡ್ಡಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಶುಕ್ರವಾರ ನಡೆದ ಗ್ಯಾರಂಟಿ ಯೋಜನೆಗಳ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅರ್ಹರಾದ ಯಾವುದೇ ಒಬ್ಬ ನಾಗರಿಕನಿಗೂ ಯೋಜನೆಯ ಸೌಲಭ್ಯ ಸಿಗುವುದು ತಪ್ಪಬಾರದು, ಆದರೆ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಖಜಾನೆಗೆ ಕನ್ನ ಹಾಕುವ ಅನರ್ಹರ ಆಟಕ್ಕೆ ತಕ್ಷಣವೇ…
