R Ashok: ಕಾಂಗ್ರೆಸ್ ಒಳಜಗಳಕ್ಕೆ ಡಿಕೆಶಿ ಬಲಿ, ಸಿದ್ದರಾಮಯ್ಯ ಕೊಟ್ಟ ಹಳೇ ಬಸ್ಸಿಗೆ ಡೀಸೆಲ್ ಕೂಡ ಇಲ್ಲ: ಆರ್. ಅಶೋಕ್ ಲೇವಡಿ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಉಂಟಾಗಿರುವ ದಿಢೀರ್ ಬದಲಾವಣೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಗಮನದ ಬೆನ್ನಲ್ಲೇ, ಹೊಸದಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯದ ಕುರಿತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashok) ತೀವ್ರ ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ಅವರಿಗೆ ನೀಡಿರುವ ಅಧಿಕಾರ ಒಂಥರಾ ‘ಭಸ್ಮಾಸುರನ ಆಶೀರ್ವಾದ’ ಇದ್ದಂತೆ ಎಂದು ಲೇವಡಿ ಮಾಡಿರುವ ಅವರು, ಭಸ್ಮಾಸುರನಿಗೆ ಸಿಕ್ಕ ವರವೇ ಅವನಿಗೆ ಮುಳುವಾದಂತೆ ಈ ಮುಖ್ಯಮಂತ್ರಿ ಕುರ್ಚಿ ಡಿಕೆಶಿಯವರ…
