Bengaluru: ಪರಪ್ಪನ ಅಗ್ರಹಾರದಲ್ಲಿ ಹೊಸ ಬದಲಾವಣೆ: ಜೈಲಿನಲ್ಲೇ ಆರಂಭವಾಯ್ತು ನವ ಸಂಕಲ್ಪ ಬೇಕರಿ
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಕೈದಿಗಳ ಜೀವನದಲ್ಲಿ ಹೊಸ ಭರವಸೆಯ ಬೆಳಕು ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ ಕಾರಾಗೃಹ ಇಲಾಖೆಯು ಅತ್ಯಂತ (Bengaluru) ಮಹತ್ವದ ಮತ್ತು ಶ್ಲಾಘನೀಯ ಹೆಜ್ಜೆಯೊಂದನ್ನು ಇಟ್ಟಿದೆ. ಸಜಾ ಬಂಧಿಗಳ ಪುನರ್ವಸತಿ ಹಾಗೂ ಅವರ ಕೌಶಲ್ಯಾಭಿವೃದ್ಧಿಯನ್ನು ಮುನ್ನೆಲೆಯಲ್ಲಿಟ್ಟುಕೊಂಡು ಜೈಲಿನ ಆವರಣದಲ್ಲಿಯೇ ‘ನವ ಸಂಕಲ್ಪ ಬೇಕರಿ’ ಘಟಕವನ್ನು ಇಂದು ಸಂಭ್ರಮದಿಂದ ಪ್ರಾರಂಭಿಸಲಾಗಿದೆ. ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು ಈ ವಿನೂತನ ಬೇಕರಿ ಘಟಕವನ್ನು ಲೋಕಾರ್ಪಣೆ ಮಾಡಿದ್ದು, ಇದೇ ಸಂದರ್ಭದಲ್ಲಿ ತಯಾರಾದ ಉತ್ಪನ್ನಗಳನ್ನು ಸಾರ್ವಜನಿಕರಿಗೆ…
