TOP NEWS
Iran supreme leader Mojtaba Khamenei health update

Iran: ಜೀವ ಉಳಿದರೂ ಕಷ್ಟವಾಗಿದೆ ಬದುಕು, ಇದು ಮೊಜ್ತಬಾ ಖಮೇನಿ ಆರೋಗ್ಯ ಸ್ಥಿತಿ

ಇರಾನ್‌: ದೇಶದ ಸುಪ್ರೀಂ ಲೀಡರ್ (Iran) ಮೊಜ್ತಬಾ ಖಮೇನಿ (Mojtaba Khamenei) ಅವರು ಬಾಂಬ್ ದಾಳಿಯಲ್ಲಿ ಬದುಕುಳಿದಿದ್ದರೂ, ತೀವ್ರ ಸ್ವರೂಪದ ಗಾಯಗಳಿಂದಾಗಿ ಆರೋಗ್ಯದ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಪರಿಸ್ಥಿತಿಯು ದೇಶದ ಆಡಳಿತದ ಮೇಲೆ ದೊಡ್ಡ ಪ್ರಭಾವ ಬೀರಿದ್ದು, ಅವರ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಬಗ್ಗೆ ಚರ್ಚೆಗಳು ಶುರುವಾಗಿವೆ. ದಾಳಿಯಲ್ಲಿ ಅವರ ಕೈಗೆ ಶಸ್ತ್ರಚಿಕಿತ್ಸೆ ನಡೆದಿದೆ, ಮುಖದ ಮೇಲೆ ಗಂಭೀರ ಸುಟ್ಟ ಗಾಯಗಳಾಗಿವೆ ಮತ್ತು ಅವರಿಗೆ ಕೃತಕ ಕಾಲಿನ ಅಳವಡಿಕೆ ಅಗತ್ಯವಿದೆ ಎಂದು ವರದಿಯಾಗಿದೆ. ಕಾಡುತ್ತಿದೆ ಅನೇಕ…

Read More
West Bengal election TMC workers manhandle BJP candidates

West Bengal: ಪಶ್ಚಿಮ ಬಂಗಾಳ ಚುನಾವಣೆ: ಭರ್ಜರಿ ಮತದಾನದ ನಡುವೆಯೇ ಹಿಂಸಾಚಾರದ ಅಬ್ಬರ

ಪಶ್ಚಿಮ ಬಂಗಾಳ: ವಿಧಾನಸಭೆ (West Bengal) ಚುನಾವಣೆಯ ಮೊದಲ ಹಂತದ ಮತದಾನವು ಭರ್ಜರಿ ಉತ್ಸಾಹದೊಂದಿಗೆ ನಡೆಯುತ್ತಿದ್ದು, ಮಧ್ಯಾಹ್ನ 3 ಗಂಟೆಯ ವೇಳೆಗೆ ರಾಜ್ಯದಲ್ಲಿ ಶೇ. 78.77ರಷ್ಟು ಮತದಾನ ದಾಖಲಾಗಿದೆ. ಭಾರಿ ಪ್ರಮಾಣದಲ್ಲಿ ಜನರು ಮತಗಟ್ಟೆಗಳಿಗೆ ಆಗಮಿಸುತ್ತಿರುವ ನಡುವೆಯೇ, ಮುರ್ಷಿದಾಬಾದ್, ಬಿರ್ಭೂಮ್ ಮತ್ತು ದಕ್ಷಿಣ ದಿನಾಜ್‌ಪುರ ಸೇರಿದಂತೆ ಹಲವು ಕಡೆಗಳಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಸಂಘರ್ಷಗಳು ವರದಿಯಾಗಿವೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಮತ್ತು ಸ್ಥಳೀಯ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸ ಪಡುತ್ತಿದ್ದಾರೆ. ಬಿಜೆಪಿ…

Read More
Iran makes fun of donald trump by AI video

Donald Trump: ಶಟಪ್‌ ಟ್ರಂಪ್‌, AI ವಿಡಿಯೋ ಮೂಲಕ ಟಾಂಗ್‌ ಕೊಟ್ಟ ಇರಾನ್

ಇರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಇರಾನ್ ಜೊತೆಗಿನ ಕದನ ವಿರಾಮವನ್ನು ವಿಸ್ತರಿಸಿದ್ದರೂ, ಇರಾನ್ ಮಾತ್ರ ಅಮೆರಿಕವನ್ನು ಬಿಡದೇ ಎಐ (AI) ತಂತ್ರಜ್ಞಾನ ಬಳಸಿ ಟ್ರೋಲ್ ಮಾಡುತ್ತಿದೆ. ಈ ಸಾಲಿನಲ್ಲಿ ಈಗ ಹೈದರಾಬಾದ್‌ನಲ್ಲಿರುವ ಇರಾನ್ ದೂತವಾಸ ಕಚೇರಿಯು ಒಂದು ಎಐ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಟ್ರಂಪ್ ಅವರ ನಿರ್ಧಾರವನ್ನು ಮತ್ತು ಪಾಕಿಸ್ತಾನದ ಪಾತ್ರವನ್ನು ವ್ಯಂಗ್ಯವಾಡಿದೆ. ಇರಾನ್‌ನಲ್ಲಿ ಈ ವಿಡಿಯೋ ಸದ್ಯ ಭಾರೀ ವೈರಲ್ ಆಗುತ್ತಿದ್ದು, ಅಮೆರಿಕದ ವಿದೇಶಾಂಗ ನೀತಿಯನ್ನು ಅಣಕಿಸಲು ಬಳಸಲಾಗಿದೆ. ಏನಿದೆ…

Read More
Bikaji Foods founder Shiv Ratan Agarwal passes away

Shiv Ratan: ಬಿಕಾಜಿ ಫುಡ್ಸ್ ಸಂಸ್ಥಾಪಕ ಶಿವ ರತನ್ ಅಗರ್ವಾಲ್ ನಿಧನ

ಚೆನ್ನೈ: ಪ್ಯಾಕೇಜ್ಡ್ ಸ್ನ್ಯಾಕ್ಸ್ ಮತ್ತು ಸಿಹಿತಿಂಡಿಗಳ ಕ್ಷೇತ್ರದಲ್ಲಿ ದೇಶದ ಪ್ರಮುಖ ಕಂಪನಿಯಾಗಿರುವ ‘ಬಿಕಾಜಿ ಫುಡ್ಸ್ ಇಂಟರ್‌ನ್ಯಾಷನಲ್’ನ ಸಂಸ್ಥಾಪಕ ಮತ್ತು ಅಧ್ಯಕ್ಷ ಶಿವ ರತನ್ ಅಗರ್ವಾಲ್ (Shiv Ratan) ಅವರು ನಿಧನರಾಗಿದ್ದಾರೆ. ಏಪ್ರಿಲ್ 23 ರಂದು ಅಗರ್ವಾಲ್ ವಿಧಿವಶರಾಗಿರುವ ವಿಷಯವನ್ನು ಕಂಪನಿಯು ಷೇರುಪೇಟೆಗೆ ನೀಡಿರುವ ಅಧಿಕೃತ ಮಾಹಿತಿಯಲ್ಲಿ ಖಚಿತಪಡಿಸಿದೆ. ಸಾಂಪ್ರದಾಯಿಕ ಭಾರತೀಯ ತಿಂಡಿ ತಿನಿಸುಗಳನ್ನು ದೇಶ-ವಿದೇಶಗಳಲ್ಲಿ ಜನಪ್ರಿಯಗೊಳಿಸುವಲ್ಲಿ ಅಗರ್ವಾಲ್ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅವರ ನಿಧನದ ಕಾರಣವನ್ನು ಕಂಪನಿ ಬಹಿರಂಗಪಡಿಸಿಲ್ಲ. ಕಂಪನಿ ಹೇಳಿದ್ದೇನು? ನಿಯಮಗಳ ಪ್ರಕಾರ ಶಿವ…

Read More
Am I a criminal? Pawan Khera asks as SC

Pawan Khera: ಕಾಂಗ್ರೆಸ್ ನಾಯಕ ಪವನ್ ಖೇರಾಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ

ನವದೆಹಲಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ದಾಖಲಿಸಿರುವ ಎಫ್‌ಐಆರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಪವನ್ ಖೇರಾ (Pawan Khera) ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ತಮಗೆ ನೀಡಲಾಗಿದ್ದ ಸಾರಿಗೆ ನಿಬಂಧಿತ ಜಾಮೀನು (Transit Bail) ಅವಧಿಯನ್ನು ಮಂಗಳವಾರದವರೆಗೆ ವಿಸ್ತರಿಸಬೇಕು ಎಂದು ಖೇರಾ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ. ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಅತುಲ್ ಎಸ್. ಚಂದೂರ್ಕರ್ ಅವರ ಪೀಠವು ಈ ಆದೇಶ ನೀಡಿದ್ದು, ಅಸ್ಸಾಂನ…

Read More
china becomes indias biggest trade partner

CHINA: ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರನಾದ ಚೀನಾ

ನವದೆಹಲಿ: ಕಳೆದ ನಾಲ್ಕು ವರ್ಷಗಳಿಂದ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದ್ದ ಅಮೆರಿಕವನ್ನು ಹಿಂದಿಕ್ಕಿ ಚೀನಾ (China) ಮತ್ತೆ ಮೊದಲ ಸ್ಥಾನಕ್ಕೇರಿದೆ. ಸರ್ಕಾರದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, 2025-26ನೇ ಹಣಕಾಸು ವರ್ಷದಲ್ಲಿ ಭಾರತ ಮತ್ತು ಚೀನಾ ನಡುವಿನ ಒಟ್ಟು ದ್ವಿಪಕ್ಷೀಯ ವ್ಯಾಪಾರವು ಬರೋಬ್ಬರಿ 151.1 ಬಿಲಿಯನ್ ಡಾಲರ್‌ಗೆ ತಲುಪಿದೆ. ಈ ಮೂಲಕ 2021-22ರಿಂದ ಸತತವಾಗಿ ಅಗ್ರಸ್ಥಾನದಲ್ಲಿದ್ದ ಅಮೆರಿಕವನ್ನು ಚೀನಾ ಎರಡನೇ ಸ್ಥಾನಕ್ಕೆ ತಳ್ಳಿದ್ದು, ಜಾಗತಿಕ ವ್ಯಾಪಾರ ಸಮೀಕರಣದಲ್ಲಿ ಮಹತ್ವದ ಬದಲಾವಣೆಯಾಗಿದೆ. ಹೇಗಿದೆ ರಫ್ತು-ಆಮದು ಅಂಕಿಅಂಶ? ಕಳೆದ ಹಣಕಾಸು…

Read More
Israeli forces strike Hezbollah positions

Israel: ಹಿಜ್ಬುಲ್ಲಾ ಉಗ್ರರ ಮೇಲೆ ಮತ್ತೆ ಇಸ್ರೇಲ್‌ ದಾಳಿ

ಬೈರುತ್: ದಕ್ಷಿಣ ಲೆಬನಾನ್‌ನ ಆಯಕಟ್ಟಿನ ಪ್ರದೇಶವಾದ ಬಿಂಟ್ ಜಬೀಲ್ ನಗರವನ್ನು ಗುರಿಯಾಗಿಸಿಕೊಂಡು ಇಸ್ರೇಲ್ (Israel) ಸೇನೆ ತನ್ನ ಭೀಕರ ದಾಳಿಯನ್ನು ಮುಂದುವರಿಸಿದೆ. ಹಿಜ್ಬುಲ್ಲಾ ಉಗ್ರರ ವಿರುದ್ಧ ಸಮರ ಸಾರಿರುವ ಇಸ್ರೇಲ್ ಕಮಾಂಡೋಗಳು, ಸರಣಿ ದಾಳಿಗಳ ಮೂಲಕ ಸಂಘಟನೆಯ ಹತ್ತಾರು ಉಗ್ರರನ್ನು ಹತ್ಯೆ ಮಾಡಿರುವುದಾಗಿ ಮತ್ತು ಅವರ ಪ್ರಮುಖ ನೆಲೆಗಳನ್ನು ನಾಶಪಡಿಸಿರುವುದಾಗಿ ಘೋಷಿಸಿವೆ. ಕಳೆದ ಒಂದು ವಾರದಿಂದ ಈ ಭಾಗದಲ್ಲಿ ತೀವ್ರ ರಕ್ತಪಾತ ಮುಂದುವರಿದಿದ್ದು, ಇಡೀ ಪ್ರದೇಶವು ಯುದ್ಧ ಭೂಮಿಯಾಗಿ ಮಾರ್ಪಟ್ಟಿದೆ. ಇಸ್ರೇಲ್‌ ಹೇಳಿದ್ದೇನು? ಇಸ್ರೇಲ್ ಪ್ರಧಾನಿ ಬೆಂಜಮಿನ್…

Read More