TOP NEWS
West Bengal bjp won TMC loss brutally

West Bengal: ಬಂಗಾಳದಲ್ಲಿ ದೀದಿ ಸಾಮ್ರಾಜ್ಯ ಪತನ: 15 ವರ್ಷಗಳ ಟಿಎಂಸಿ ಆಡಳಿತಕ್ಕೆ ಮುಕ್ತಿ ಹಾಡಿದ ಮತದಾರ!

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಇಂದು ಹೊಸ ಅಧ್ಯಾಯವೊಂದು ಆರಂಭವಾಗಿದೆ. ಕಳೆದ ಒಂದೂವರೆ ದಶಕದಿಂದ ಅಲುಗಾಡದಂತೆ ಆಡಳಿತ ನಡೆಸಿದ್ದ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಭದ್ರಕೋಟೆಯನ್ನು (West Bengal) ಬಿಜೆಪಿ ಅಕ್ಷರಶಃ ಧೂಳೀಪಟ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ನೀಡಿದ್ದ “ಗಂಗೆ ಬಿಹಾರದ ಮೂಲಕ ಬಂಗಾಳಕ್ಕೆ ಹರಿಯುತ್ತಾಳೆ” ಎಂಬ ಮಾತು ಇಂದು ಚುನಾವಣಾ ಫಲಿತಾಂಶದ ಮೂಲಕ ನಿಜವಾಗಿದ್ದು, ಬಂಗಾಳದ ಗದ್ದುಗೆ ಕೇಸರಿಮಯವಾಗಿದೆ. 200ರ ಗಡಿ ದಾಟಿದ ಬಿಜೆಪಿ ಚುನಾವಣಾ ಫಲಿತಾಂಶದ…

Read More
Kamlesh Parekh and Aalok Kumar brought back to India from CBI

CBI: ಭಾರತದ ಬಿಗಿಬಲೆಗೆ ಬಿದ್ದ ಇಬ್ಬರು ಪರಾರಿಗಳು: ಬ್ಯಾಂಕ್ ವಂಚನೆ ಮತ್ತು ಪಾಸ್‌ಪೋರ್ಟ್ ದಂಧೆಕೋರರು ದುಬೈನಿಂದ ಹಸ್ತಾಂತರ

ನವದೆಹಲಿ: ಕೇಂದ್ರ ತನಿಖಾ ದಳ (CBI), ವಿದೇಶಾಂಗ ಸಚಿವಾಲಯ ಮತ್ತು ಗೃಹ ಸಚಿವಾಲಯದ ಜಂಟಿ ಕಾರ್ಯಾಚರಣೆಯ ಫಲವಾಗಿ, ವಿದೇಶಕ್ಕೆ ಪರಾರಿಯಾಗಿದ್ದ ಇಬ್ಬರು ಪ್ರಮುಖ ಆರೋಪಿಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ (UAE) ಭಾರತಕ್ಕೆ ಯಶಸ್ವಿಯಾಗಿ ಕರೆತರಲಾಗಿದೆ. ಮೇ 1ರಂದು ನಡೆದ ಈ ಹಸ್ತಾಂತರ ಪ್ರಕ್ರಿಯೆಯು ಭಾರತ ಮತ್ತು ಯುಎಇ ಅಧಿಕಾರಿಗಳ ನಡುವಿನ ಸಮನ್ವಯದ ಮೂಲಕ ಸಾಧ್ಯವಾಗಿದ್ದು, ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳು ಈಗ ಭಾರತೀಯ ಪೊಲೀಸರ ವಶದಲ್ಲಿದ್ದಾರೆ. ನೂರಾರು ಕೋಟಿ ಬ್ಯಾಂಕ್…

Read More
TVK Actor vijay meeting with candidates regarding election result

TVK: ತಮಿಳುನಾಡು ಫಲಿತಾಂಶಕ್ಕೆ ಕ್ಷಣಗಣನೆ: ಅಭ್ಯರ್ಥಿಗಳಿಗೆ ‘ದಳಪತಿ’ ವಿಜಯ್ ಖಡಕ್ ಸೂಚನೆ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಇನ್ನು ಕೇವಲ ಎರಡು ದಿನಗಳು ಬಾಕಿ ಉಳಿದಿದ್ದು, ರಾಜ್ಯದಲ್ಲಿ ರಾಜಕೀಯ ಕಾವು ಏರಿದೆ. ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿರುವ ನಟ ದಳಪತಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಭರ್ಜರಿ ಜಯದ ನಿರೀಕ್ಷೆಯಲ್ಲಿದ್ದು, ವಿಜಯ್ ಅವರು ತಮ್ಮ ಅಭ್ಯರ್ಥಿಗಳಿಗೆ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ. ವಿಜಯ್‌ ಹೇಳಿದ್ದೇನು? ಚೆನ್ನೈನ ಪಣೈಯೂರ್‌ನಲ್ಲಿರುವ ಪಕ್ಷದ ಕಚೇರಿಯಲ್ಲಿ 233 ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿದ ವಿಜಯ್, ಮತ ಎಣಿಕೆಯ ದಿನದಂದು ಅನುಸರಿಸಬೇಕಾದ ಕ್ರಮಗಳ…

Read More
AAP leader Sanjay singh to join bjp

AAP: ಸತ್ತರೂ ಬಿಜೆಪಿ ಸೇರಲ್ಲ ಎಂದ ಆಪ್‌ನ ಸಂಜಯ್‌ ಸಿಂಗ್

ನವದೆಹಲಿ: ಆಮ್ ಆದ್ಮಿ ಪಕ್ಷದ (AAP) ಪ್ರಮುಖ ನಾಯಕರು ಸಾಲು ಸಾಲಾಗಿ ಬಿಜೆಪಿ ಸೇರುತ್ತಿರುವ ಬೆನ್ನಲ್ಲೇ, ಎಎಪಿ ಹಿರಿಯ ನಾಯಕ ಸಂಜಯ್ ಸಿಂಗ್ ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ರಾಘವ್ ಛಡ್ಡಾ ಅವರಂತಹ ಪ್ರಭಾವಿ ನಾಯಕರು ಪಕ್ಷ ತೊರೆದ ನಂತರ ಸಂಜಯ್ ಸಿಂಗ್ ಅವರೂ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗಳಿಗೆ ಅವರು ಬಲವಾದ ತಿರುಗೇಟು ನೀಡಿದ್ದಾರೆ. ‘ಸಾಯುವವರೆಗೂ ಬಿಜೆಪಿ ಸೇರಲ್ಲ’: ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಸಂಜಯ್ ಸಿಂಗ್, “ನಾನು ಸಾಯುವವರೆಗೂ ಬಿಜೆಪಿಗೆ ಸೇರುವುದಿಲ್ಲ. ಸಿದ್ಧಾಂತದ ನೆಲೆಯಲ್ಲಿ ನಾನು…

Read More
I-PAC director Vinesh Chandel granted bail

I-PAC: ಹಣ ಅಕ್ರಮ ವರ್ಗಾವಣೆ ಪ್ರಕರಣ: ಐ-ಪ್ಯಾಕ್ ನಿರ್ದೇಶಕ ವಿನೇಶ್ ಚಂದೇಲ್‌ಗೆ ಜಾಮೀನು

ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಂಡ ಬೆನ್ನಲ್ಲೇ, ಮನಿ ಲಾಂಡರಿಂಗ್ (ಹಣ ಅಕ್ರಮ ವರ್ಗಾವಣೆ) ಪ್ರಕರಣದಲ್ಲಿ ಬಂಧಿತರಾಗಿದ್ದ ಐ-ಪ್ಯಾಕ್ (I-PAC) ಸಂಸ್ಥೆಯ ನಿರ್ದೇಶಕ ವಿನೇಶ್ ಚಂದೇಲ್ ಅವರಿಗೆ ದೆಹಲಿ ನ್ಯಾಯಾಲಯ ಗುರುವಾರ ಜಾಮೀನು ನೀಡಿದೆ. ಜಾರಿ ನಿರ್ದೇಶನಾಲಯವು (ಇಡಿ) ಈ ಬಾರಿ ಚಂದೇಲ್ ಅವರ ಜಾಮೀನು ಅರ್ಜಿಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸದ ಕಾರಣ ಪಟಿಯಾಲ ಹೌಸ್ ನ್ಯಾಯಾಲಯವು ಈ ರಿಲೀಫ್ ನೀಡಿದೆ. ಜಾಮೀನಿಗೆ ಒಪ್ಪಿಗೆ ನೀಡಿದ ತನಿಖಾ ಸಂಸ್ಥೆ ಗಮನಾರ್ಹವೆಂದರೆ, ಕಳೆದ ಮಂಗಳವಾರವಷ್ಟೇ ನ್ಯಾಯಾಲಯವು…

Read More
Supreme Court Reserves Judgment On Pawan Kheras bail Plea

Pawan Khera: ಪವನ್ ಖೇರಾ ಜಾಮೀನು ಅರ್ಜಿಗೆ ಅಸ್ಸಾಂ ಪೊಲೀಸರ ತೀವ್ರ ವಿರೋಧ

ನವದೆಹಲಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ದಾಖಲಿಸಿರುವ ದೂರಿನ ಹಿನ್ನೆಲೆಯಲ್ಲಿ, ಕಾಂಗ್ರೆಸ್ ನಾಯಕ ಪವನ್ ಖೇರಾ (Pawan Khera) ಸಲ್ಲಿಸಿರುವ ಮುಂಜಾಗ್ರತೆ ಜಾಮೀನು ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ಕಾಯ್ದಿರಿಸಿದೆ. ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಅತುಲ್ ಚಂದೂರ್ಕರ್ ಅವರನ್ನೊಳಗೊಂಡ ಪೀಠವು ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿತು. ಬಂಧಿಸಿ ಅವಮಾನ ಮಾಡಬೇಡಿ ಎಂದ ಖೇರಾ ಖೇರಾ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್…

Read More
west bengal assembly election voting percentage increased

West Bengal: ಪಶ್ಚಿಮ ಬಂಗಾಳ ಚುನಾವಣೆ: ದಾಖಲೆ ಬರೆದ ಮತದಾರರು

ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಮತದಾರರು ಹೊಸ ದಾಖಲೆ ಬರೆದಿದ್ದಾರೆ. 2021ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮತದಾನದ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಇದು ರಾಜಕೀಯ ವಲಯದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಕಳೆದ ಚುನಾವಣೆಯಲ್ಲಿ 5.98 ಕೋಟಿ ಜನರು ಮತ ಚಲಾಯಿಸಿದ್ದರೆ, ಈ ಬಾರಿ ಆ ಸಂಖ್ಯೆ 6.31 ಕೋಟಿಗೆ ಏರಿಕೆಯಾಗಿದೆ. ಅಂದರೆ ಸುಮಾರು 34 ಲಕ್ಷಕ್ಕೂ ಹೆಚ್ಚು ಹೊಸ ಮತದಾರರು ಈ ಬಾರಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ….

Read More