TOP NEWS
supreme court order about acid attack victims

Supreme Court: ಆಸಿಡ್ ದಾಳಿ ಸಂತ್ರಸ್ತರಿಗೆ ಸುಪ್ರೀಂ ಕೋರ್ಟ್ ಐತಿಹಾಸಿಕ ಕೊಡುಗೆ

ನವದೆಹಲಿ: ಆಸಿಡ್ ದಾಳಿಗೆ ಒಳಗಾದವರ ಹಕ್ಕುಗಳ ರಕ್ಷಣೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ (Supreme Court) ಅತ್ಯಂತ ಮಾನವೀಯ ಮತ್ತು ಮಹತ್ವದ ತೀರ್ಪನ್ನು ಪ್ರಕಟಿಸಿದೆ. ಆಸಿಡ್ ದಾಳಿಯಿಂದಾಗಿ ಕೇವಲ ಮುಖ ಅಥವಾ ದೇಹದ ಚರ್ಮ ವಿರೂಪಗೊಂಡವರಿಗೆ ಮಾತ್ರವಲ್ಲದೆ, ಆಂತರಿಕವಾಗಿ ಗಂಭೀರ ಹಾನಿ ಅನುಭವಿಸಿದವರನ್ನೂ ಇನ್ಮುಂದೆ ‘ವಿಕಲಚೇತನರು’ ಎಂದು ಪರಿಗಣಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಬಾಹ್ಯ ಗುರುತಿಲ್ಲದಿದ್ದರೂ ಸಿಗಲಿದೆ ಸೌಲಭ್ಯ ಈವರೆಗಿನ ನಿಯಮಗಳ ಪ್ರಕಾರ, ಆಸಿಡ್ ದಾಳಿಯಿಂದ ಚರ್ಮ ಸುಟ್ಟು ಹೋಗಿದ್ದರೆ ಮಾತ್ರ ಅವರಿಗೆ ವಿಕಲಚೇತನರ ಕಾಯ್ದೆಯಡಿ ಸೌಲಭ್ಯಗಳು ಸಿಗುತ್ತಿದ್ದವು….

Read More
these are the main reason to loss of mamata Banerjee in west Bengal

West Bengal: ಬಂಗಾಳದಲ್ಲಿ ಮುಗಿಯಿತೇ ಮಮತಾ ಯುಗ? ಟಿಎಂಸಿ ಕೋಟೆ ಕುಸಿಯಲು ಕಾರಣವಾದ 5 ಪ್ರಮುಖ ವಿದ್ಯಮಾನಗಳು

ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ರಾಜಕೀಯ ಅಖಾಡದಲ್ಲಿ ಕಳೆದ 15 ವರ್ಷಗಳಿಂದ ಮಮತಾ ಬ್ಯಾನರ್ಜಿ ಅವರಿದ್ದ ಏಕಚಕ್ರಾಧಿಪತ್ಯಕ್ಕೆ ಈ ಬಾರಿ ಭಾರಿ ಪೆಟ್ಟು ಬಿದ್ದಿದೆ. ದಶಕಗಳ ಕಾಲ ಅಜೇಯವಾಗಿ ಉಳಿದಿದ್ದ ಟಿಎಂಸಿ ಭದ್ರಕೋಟೆ ಈಗ ನಡುಗುತ್ತಿದ್ದು, ಕೇಸರಿ ಪಡೆ ಅಧಿಕಾರದ ಹೊಸ್ತಿಲಿಗೆ ಬಂದು ನಿಂತಿದೆ. ದೀದಿ ಸರ್ಕಾರದ ಪತನಕ್ಕೆ ಪ್ರಮುಖವಾಗಿ ಕೆಲಸ ಮಾಡಿದ ಅಂಶಗಳ ವಿಶ್ಲೇಷಣೆ ಇಲ್ಲಿದೆ: 1. ಮಹಿಳಾ ಸುರಕ್ಷತೆ ಮತ್ತು ಆರ್‌ಜಿ ಕರ್ ಪ್ರಕರಣದ ಬಿಸಿ ಮಮತಾ ಬ್ಯಾನರ್ಜಿ ಅವರ ಅತಿದೊಡ್ಡ ವೋಟ್…

Read More
tamil nadu election axis my india prediction

Tamil Nadu: ತಮಿಳುನಾಡಿನಲ್ಲಿ ನಿಜವಾಯ್ತು ಪ್ರದೀಪ್ ಗುಪ್ತಾ ಭವಿಷ್ಯ: ವಿಜಯ್ ಅಬ್ಬರವನ್ನು ಮೊದಲೇ ಅಂದಾಜಿಸಿದ್ದ ಆಕ್ಸಿಸ್ ಮೈ ಇಂಡಿಯಾ

ನವದೆಹಲಿ: ತಮಿಳುನಾಡು (Tamil Nadu) ವಿಧಾನಸಭಾ ಚುನಾವಣೆಯ ಫಲಿತಾಂಶದ ಟ್ರೆಂಡ್ ಇಡೀ ದೇಶವನ್ನೇ ಬೆರಗುಗೊಳಿಸಿದೆ. ನಟ ವಿಜಯ್ ಅವರ ‘ಟಿವಿಕೆ’ ಪಕ್ಷವು ಐತಿಹಾಸಿಕ ಮುನ್ನಡೆ ಸಾಧಿಸುತ್ತಿದ್ದಂತೆಯೇ, ಖ್ಯಾತ ಚುನಾವಣಾ ವಿಶ್ಲೇಷಕ ಪ್ರದೀಪ್ ಗುಪ್ತಾ ನೇತೃತ್ವದ ‘ಆಕ್ಸಿಸ್ ಮೈ ಇಂಡಿಯಾ’ ಸಂಸ್ಥೆಯ ಭವಿಷ್ಯವಾಣಿ ಈಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. “ನಾವು ಅಂದು ಹೇಳಿದ್ದನ್ನು ನಗುವಿನಿಂದ ತಳ್ಳಿಹಾಕಿದವರು ಇಂದು ನಮ್ಮ ನಿಖರತೆಯನ್ನು ನೋಡಿ ಬೆರಗಾಗುತ್ತಿದ್ದಾರೆ” ಎಂದು ಪ್ರದೀಪ್ ಗುಪ್ತಾ ಹರ್ಷ ವ್ಯಕ್ತಪಡಿಸಿದ್ದಾರೆ. ಅಂದು ಲೇವಡಿ ಮಾಡಿದವರಿಗೆ ಇಂದು…

Read More
tamil nadu election mk satlin may loss against tvk candidate

TVK: ಸ್ಟಾಲಿನ್‌ಗೆ ಭಾರಿ ಹಿನ್ನಡೆ, ಮ್ಯಾಜಿಕ್ ನಂಬರ್ ಸನಿಹದಲ್ಲಿ ವಿಜಯ್!

ಚೆನ್ನೈ: ತಮಿಳುನಾಡು ರಾಜಕೀಯ ಅಖಾಡದಲ್ಲಿ ದಶಕಗಳ ದ್ರಾವಿಡ ಪಾರುಪತ್ಯಕ್ಕೆ ಬ್ರೇಕ್ ಬೀಳುವ ಲಕ್ಷಣಗಳು ದಟ್ಟವಾಗಿವೆ. ಚೊಚ್ಚಲ ಚುನಾವಣೆಯಲ್ಲೇ ನಟ ವಿಜಯ್ ಸಾರಥ್ಯದ ‘ತಮಿಳಗ ವೆಟ್ರಿ ಕಳಗಂ’ (TVK) ಅಬ್ಬರದ ಮುನ್ನಡೆ ಸಾಧಿಸಿದ್ದು, ರಾಜ್ಯದಲ್ಲಿ ಹೊಸ ಯುಗ ಆರಂಭವಾಗುವ ಮುನ್ಸೂಚನೆ ಸಿಕ್ಕಿದೆ. ಸದ್ಯದ ಅಂಕಿ-ಅಂಶಗಳ ಪ್ರಕಾರ, ವಿಜಯ್ ಪಡೆ ಸರಳ ಬಹುಮತಕ್ಕೆ ಬೇಕಾದ 118 ಸ್ಥಾನಗಳ ಮ್ಯಾಜಿಕ್ ಸಂಖ್ಯೆಯ ಹತ್ತಿರದಲ್ಲಿದೆ. ಸ್ವಕ್ಷೇತ್ರದಲ್ಲೇ ಸಿಎಂ ಸ್ಟಾಲಿನ್‌ಗೆ ಶಾಕ್! ಈ ಬಾರಿಯ ಚುನಾವಣೆಯ ಅತ್ಯಂತ ದೊಡ್ಡ ಅಚ್ಚರಿ ಎಂದರೆ ಮುಖ್ಯಮಂತ್ರಿ ಎಂ.ಕೆ….

Read More
West Bengal assembly election points which helped BJP

West Bengal: ಬಂಗಾಳದಲ್ಲಿ ಕೇಸರಿ ಅಲೆ: ಬಿಜೆಪಿ ವಿಜಯಯಾತ್ರೆಯ ಹಿಂದಿನ 9 ಪ್ರಮುಖ ಕಾರಣಗಳು

ಪಶ್ಚಿಮ ಬಂಗಾಳದ ಚುನಾವಣಾ (West Bengal) ಕಣದಲ್ಲಿ ಈ ಬಾರಿ ಬಿಜೆಪಿ ಅಭೂತಪೂರ್ವ ಮುನ್ನಡೆ ಸಾಧಿಸಿರುವುದು ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಮಮತಾ ಬ್ಯಾನರ್ಜಿ ಅವರ ಸುದೀರ್ಘ ಆಳ್ವಿಕೆಗೆ ಬ್ರೇಕ್ ಹಾಕಿ, ಕೇಸರಿ ಪಡೆ 160ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಲು ಕಾರಣವಾದ ಪ್ರಮುಖ ಅಂಶಗಳನ್ನು ಈ ಕೆಳಗಿನಂತೆ ವಿಶ್ಲೇಷಿಸಬಹುದು: ಬಿಜೆಪಿ ವಿಜಯಯಾತ್ರೆಯ ಹಿಂದಿನ ಕಾರಣಗಳು 1. ಮತದಾರರ ಪಟ್ಟಿ ‘ಶುದ್ಧೀಕರಣ’ದ ಎಫೆಕ್ಟ್ ಚುನಾವಣೆಗೂ ಮುನ್ನ ನಡೆದ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ (SIR) ಬಿಜೆಪಿಗೆ ದೊಡ್ಡ…

Read More
Actor Vijay father offer congress a coalition

Actor Vijay: ಕಾಂಗ್ರೆಸ್‌ಗೆ ಮೈತ್ರಿ ಆಫರ್ ನೀಡಿದ ವಿಜಯ್ ತಂದೆ ಎಸ್‌ಎಸಿ!

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಅಂತಿಮ ಘಟ್ಟಕ್ಕೆ ತಲುಪುತ್ತಿದ್ದು, ನಟ ವಿಜಯ್ (Actor Vijay) ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ರಾಜ್ಯ ರಾಜಕೀಯದ ದಿಕ್ಕನ್ನೇ ಬದಲಿಸಿದೆ. ದಶಕಗಳಿಂದ ಆಳ್ವಿಕೆ ನಡೆಸಿದ್ದ ದ್ರಾವಿಡ ಪಕ್ಷಗಳ ಭದ್ರಕೋಟೆಯನ್ನು ನಡುಗಿಸಿರುವ ವಿಜಯ್, ಅಧಿಕಾರದ ಗದ್ದುಗೆಯ ಸನಿಹಕ್ಕೆ ಬಂದು ನಿಂತಿದ್ದಾರೆ. ಈ ರೋಚಕ ಬೆಳವಣಿಗೆಯ ನಡುವೆಯೇ ವಿಜಯ್ ತಂದೆ, ಖ್ಯಾತ ನಿರ್ದೇಶಕ ಎಸ್.ಎ. ಚಂದ್ರಶೇಖರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಮೈತ್ರಿ ಪ್ರಸ್ತಾಪವಿಟ್ಟು ಹೊಸ ಸಂಚಲನ ಮೂಡಿಸಿದ್ದಾರೆ. ಮ್ಯಾಜಿಕ್ ನಂಬರ್…

Read More
g parameshwar about mamata Banerjee allegation of vote deleting

G Parameshwar: ಬಂಗಾಳದ ಮತದಾನದಲ್ಲಿ ಅಕ್ರಮ ನಡೆದಿದೆಯೇ? ಪರಮೇಶ್ವರ್ ಪ್ರಶ್ನೆ

ಬೆಂಗಳೂರು: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರದತ್ತ ಮುನ್ನಡೆಯುತ್ತಿರುವ ಬೆನ್ನಲ್ಲೇ, ಅಲ್ಲಿನ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ (G Parameshwar) ಅನುಮಾನ ವ್ಯಕ್ತಪಡಿಸಿದ್ದಾರೆ. ಲಕ್ಷಾಂತರ ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ ಎಂಬ ಮಮತಾ ಬ್ಯಾನರ್ಜಿ ಅವರ ಆರೋಪದ ಹಿನ್ನೆಲೆಯಲ್ಲಿ, ಈ ಪ್ರಕ್ರಿಯೆಯ ಕಾನೂನುಬದ್ಧತೆಯ ಬಗ್ಗೆ ಸಚಿವರು ಪ್ರಶ್ನೆ ಎತ್ತಿದ್ದಾರೆ. ಕಾನೂನೂ ರೀತಿಯ ತನಿಖೆ ಅಗತ್ಯ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, “ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವು ಸಾಧಿಸಲೇಬೇಕು ಎಂಬ ಹಠಕ್ಕೆ ಬಿದ್ದಿರುವುದು…

Read More