TOP NEWS

Sandeep

director RGV post about old photo of vijay with karunanidhi

Vijay: ಅಂದು ಕರುಣಾನಿಧಿ ಹಿಂದೆ ನಿಂತಿದ್ದ ಆ ಹುಡುಗ ಇಂದು ಡಿಎಂಕೆ ಕೋಟೆ ಧೂಳೀಪಟ ಮಾಡಿದ ‘ಜನನಾಯಕ’!

ಚೆನ್ನೈ: ತಮಿಳುನಾಡು ರಾಜಕೀಯ ಅಖಾಡದಲ್ಲಿ ನಟ ವಿಜಯ್ ಸೃಷ್ಟಿಸಿರುವ ಸಂಚಲನಕ್ಕೆ ಇಡೀ ದೇಶವೇ ಬೆರಗಾಗಿದೆ. ದಶಕಗಳಿಂದ ರಾಜ್ಯವನ್ನು ಆಳುತ್ತಿದ್ದ ಡಿಎಂಕೆಯಂತಹ ಬಲಿಷ್ಠ ಪಕ್ಷವನ್ನೇ ಸೋಲಿಸಿ ವಿಜಯ್ ಈಗ ಸಿಎಂ ಪಟ್ಟ ಅಲಂಕರಿಸಲು ಸಜ್ಜಾಗಿದ್ದಾರೆ. ಈ ಅಭೂತಪೂರ್ವ ಬದಲಾವಣೆಯ ನಡುವೆಯೇ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (RGV) ಹಂಚಿಕೊಂಡಿರುವ ವಿಜಯ್‌ ಅವರ (Vijay) ಒಂದು ಪೋಟೋ ಮತ್ತು ಅದರ ಕ್ಯಾಪ್ಷನ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಆರ್​ಜಿವಿ ಹಂಚಿಕೊಂಡ ಆ ರೋಚಕ ಪೋಟೋ: ರಾಮ್ ಗೋಪಾಲ್…

Read More
actor vijay jana nayagan may release on June 4

Vijay: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ವಿಜಯ್; ಜೂನ್‌ನಲ್ಲಿ ತೆರೆಗೆ ಬರಲಿದೆ ಕೊನೆಯ ಸಿನಿಮಾ ‘ಜನನಾಯಗನ್’!

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 106 ಸ್ಥಾನಗಳನ್ನು ಗೆಲ್ಲುವ ಮೂಲಕ ‘ದಳಪತಿ’ ವಿಜಯ್ (Vijay) ಅವರ ‘ತಮಿಳಗ ವೆಟ್ರಿ ಕಳಗಮ್’ (TVK) ಪಕ್ಷ ಅದ್ಭುತ (Jana Nayagan) ಸಾಧನೆ ಮಾಡಿದೆ. ಈ ಭರ್ಜರಿ ಮುನ್ನಡೆಯೊಂದಿಗೆ ವಿಜಯ್ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುವುದು ಈಗ ನಿಶ್ಚಿತವಾಗಿದ್ದು, ಪ್ರಮಾಣವಚನ ಸ್ವೀಕಾರಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಈ ರಾಜಕೀಯ ಸಂಭ್ರಮದ ನಡುವೆಯೇ, ಅವರ ಚಿತ್ರರಂಗದ ಕೊನೆಯ ಸಿನಿಮಾ ಎನ್ನಲಾದ ‘ಜನನಾಯಗನ್’ (Jana Nayagan) ಬಿಡುಗಡೆಯ ಕುರಿತು ಕಾಲಿವುಡ್ ಅಂಗಳದಲ್ಲಿ ಭಾರಿ ಚರ್ಚೆ ಶುರುವಾಗಿದೆ….

Read More
tamil nadu dmk minister lost election by one vote

Tamil Nadu: ಕೇವಲ ಒಂದು ಮತದ ಅಂತರದಿಂದ ಸಚಿವರ ಸೋಲು: ತಿರುಪ್ಪತ್ತೂರಿನಲ್ಲಿ ‘ದೈತ್ಯ ಸಂಹಾರ’ ಮಾಡಿದ ವಿಜಯ್ ಪಕ್ಷದ ಅಭ್ಯರ್ಥಿ!

ಚೆನ್ನೈ: ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿಯೊಂದು ಮತವೂ ಎಷ್ಟು ನಿರ್ಣಾಯಕ ಎಂಬುದಕ್ಕೆ ತಮಿಳುನಾಡಿನ ತಿರುಪ್ಪತ್ತೂರು (Tamil Nadu) ವಿಧಾನಸಭಾ ಕ್ಷೇತ್ರದ ಫಲಿತಾಂಶವು ಜೀವಂತ ಸಾಕ್ಷಿಯಾಗಿದೆ. ದಳಪತಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಮ್’ (TVK) ಪಕ್ಷದ ಅಭ್ಯರ್ಥಿ ಶ್ರೀನಿವಾಸ ಸೇತುಪತಿ ಅವರು ಡಿಎಂಕೆಯ ಪ್ರಭಾವಿ ಸಚಿವ ಕೆ.ಆರ್. ಪೆರಿಯಕರುಪ್ಪನ್ ಅವರನ್ನು ಕೇವಲ ಒಂದೇ ಒಂದು ಮತದ ಅಂತರದಿಂದ ಪರಾಭವಗೊಳಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಕೊನೆಯ ಕ್ಷಣದವರೆಗೆ ಉಸಿರು ಬಿಗಿಹಿಡಿಯುವ ಕುತೂಹಲ: ಡಿಎಂಕೆಯ ಭದ್ರಕೋಟೆ ಎಂದೇ ನಂಬಲಾದ ಈ ಕ್ಷೇತ್ರದಲ್ಲಿ…

Read More
Actor thalapathy vijay father directed many sandalwood heros

Sandalwood: ಸ್ಯಾಂಡಲ್‌ವುಡ್ ದಿಗ್ಗಜರ ನೆಚ್ಚಿನ ನಿರ್ದೇಶಕ ದಳಪತಿ ವಿಜಯ್ ತಂದೆ! ಕನ್ನಡಿಗರಿಗೆ ತಿಳಿಯದ ಅಚ್ಚರಿಯ ವಿಷಯವಿದು

ಚೆನ್ನೈ: ಕಾಲಿವುಡ್ ಸೂಪರ್ ಸ್ಟಾರ್ ವಿಜಯ್ ಅವರ ರಾಜಕೀಯ ಏಳಿಗೆಯ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಆದರೆ, ಅವರ ತಂದೆ ಎಸ್.ಎ. ಚಂದ್ರಶೇಖರ್ (SAC) ಅವರು ಕನ್ನಡ ಚಿತ್ರರಂಗದ ಮೇಲೆ ಬೀರಿದ ಪ್ರಭಾವದ ಬಗ್ಗೆ ಅನೇಕರಿಗೆ ಮಾಹಿತಿ ಇಲ್ಲ. ದಶಕಗಳ ಹಿಂದೆ ಸ್ಯಾಂಡಲ್‌ವುಡ್‌ನ ಸ್ಟಾರ್ ನಟರ ಚಿತ್ರಗಳಿಗೆ (Sandalwood) ಇವರೇ ನಿರ್ದೇಶಕರಾಗಿದ್ದರು ಎಂಬುದು ವಿಶೇಷ. ಕನ್ನಡ ಸಿನಿಮಾಗಳಲ್ಲಿ ಎಸ್‌ಎಸಿ ಹವಾ: ಎಸ್.ಎ. ಚಂದ್ರಶೇಖರ್ ಅವರು ಕೇವಲ ತಮಿಳಿಗಷ್ಟೇ ಸೀಮಿತವಾಗದೆ ಕನ್ನಡದ ಖ್ಯಾತ ನಟರಾದ ಶಂಕರ್ ನಾಗ್, ಅಂಬರೀಷ್ ಮತ್ತು…

Read More
Kiran Mazumdar Shaw selected niece Claire as successor for Biocon

Biocon: ಬಯೋಕಾನ್ ಭವಿಷ್ಯದ ಸಾರಥಿಯಾಗಿ ಕ್ಲೇರ್ ಮಜುಂದಾರ್ ಆಯ್ಕೆ

ಬೆಂಗಳೂರು: ಭಾರತದ ಪ್ರಮುಖ ಜೈವಿಕ ತಂತ್ರಜ್ಞಾನ ಸಂಸ್ಥೆಯಾದ ‘ಬಯೋಕಾನ್’ನ (Biocon) ಮುಂದಿನ ಹಾದಿಯನ್ನು ರೂಪಿಸಲು ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಅವರು ಭದ್ರವಾದ ಅಡಿಪಾಯ ಹಾಕಿದ್ದಾರೆ. ನಾಲ್ಕು ದಶಕಗಳ ಕಾಲ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಕಿರಣ್ ಮಜುಂದಾರ್ ಶಾ, ಇದೀಗ ತಮ್ಮ ಸೋದರಸಂಬಂಧಿ ಕ್ಲೇರ್ ಮಜುಂದಾರ್ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಗುರುತಿಸಿದ್ದಾರೆ. ಫಾರ್ಚೂನ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿರುವ ಅವರು, ಬಯೋಕಾನ್‌ನ ಮುಂದಿನ ಬೆಳವಣಿಗೆಯನ್ನು ಮುನ್ನಡೆಸಲು ಕ್ಲೇರ್ ಅತ್ಯಂತ ಸೂಕ್ತ ವ್ಯಕ್ತಿ ಎಂಬ ವಿಶ್ವಾಸ…

Read More
bjp worker shaved head after west Bengal win

BJP: ಬಂಗಾಳದಲ್ಲಿ ಬಿಜೆಪಿ ದಿಗ್ವಿಜಯ: ಒಂದು ವರ್ಷದ ಬಳಿಕ ಶಪಥ ಪೂರೈಸಿ ಮುಂಡನ ಮಾಡಿಸಿಕೊಂಡ ಕಾರ್ಯಕರ್ತ!

ಧನ್‌ಬಾದ್: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಬಹುಮತ ಗಳಿಸುತ್ತಿದ್ದಂತೆಯೇ, ನೆರೆಯ ಜಾರ್ಖಂಡ್ ರಾಜ್ಯದ ಧನ್‌ಬಾದ್‌ನಲ್ಲಿ ಅಪರೂಪದ ಸಂಭ್ರಮಾಚರಣೆ ನಡೆದಿದೆ. ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವವರೆಗೂ ಕೂದಲು ಕತ್ತರಿಸುವುದಿಲ್ಲ ಎಂದು ಪಣ ತೊಟ್ಟಿದ್ದ ಕಾರ್ಯಕರ್ತರೊಬ್ಬರು, ಫಲಿತಾಂಶ (BJP) ಹೊರಬೀಳುತ್ತಿದ್ದಂತೆಯೇ ಸಾರ್ವಜನಿಕವಾಗಿ ಮುಂಡನ ಮಾಡಿಸಿಕೊಳ್ಳುವ ಮೂಲಕ ತಮ್ಮ ಸಂಕಲ್ಪ ಪೂರೈಸಿದ್ದಾರೆ. ಏನಿದು ವಿಶೇಷ ಶಪಥ? ಧನ್‌ಬಾದ್‌ನ ಮನೈಟಾಂಡ್ ಮಂಡಲದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಸುನಿಲ್ ಕುಮಾರ್ ಪಾಂಡೆ ಈ ವಿಶಿಷ್ಟ ಶಪಥ ಮಾಡಿದವರು. ಕಳೆದ ಒಂದು ವರ್ಷದ ಹಿಂದೆ,…

Read More
Will trisha Krishnan and vijay get married soon

Trisha: ತಮಿಳುನಾಡು ರಾಜಕೀಯದಲ್ಲಿ ವಿಜಯ್ ‘ದರ್ಬಾರ್’: ಗೆಲುವಿನ ಸಂಭ್ರಮದ ನಡುವೆ ತ್ರಿಶಾ ಜೊತೆಗಿನ ಮದುವೆ ವದಂತಿಗಳ ಹವಾ!

ಚೆನ್ನೈ: ತಮಿಳುನಾಡು ಚುನಾವಣಾ ಕಣದಲ್ಲಿ 108ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆದ್ದಿರುವ ದಳಪತಿ ವಿಜಯ್ ಅವರ ‘ಟಿವಿಕೆ’ ಪಕ್ಷ, ಅಧಿಕಾರ ಹಿಡಿಯುವ ಅಂಚಿನಲ್ಲಿದೆ. ಶಾಸಕರಾಗಿ ಆಯ್ಕೆಯಾಗಿರುವ ವಿಜಯ್ ಶೀಘ್ರದಲ್ಲೇ ಮುಖ್ಯಮಂತ್ರಿಯಾಗುವ ಸಾಧ್ಯತೆಗಳಿದ್ದು, ಸರ್ಕಾರ ರಚನೆಗೆ ಬೇಕಾದ ಉಳಿದ 10 ಶಾಸಕರ ಬೆಂಬಲ ಪಡೆಯುವ ಕಸರತ್ತು ಆರಂಭವಾಗಿದೆ. ಈ ರಾಜಕೀಯ ಸಂಚಲನದ ನಡುವೆಯೇ, ನಟ ವಿಜಯ್ ಹಾಗೂ ನಟಿ ತ್ರಿಶಾ (Trisha) ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ. ತಿರುಪತಿ ಭೇಟಿ…

Read More