Subsidy: ನಾನೊಬ್ಬ ರೈತ, ನಿಯಮಬದ್ಧವಾಗಿಯೇ ಸಬ್ಸಿಡಿ ಪಡೆದಿದ್ದೇನೆ: ವಿವಾದಕ್ಕೆ ಕೇಂದ್ರ ಸಚಿವ ಭಾಗೀರಥ್ ಚೌಧರಿ ಸ್ಪಷ್ಟನೆ!
ನವದೆಹಲಿ: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವ ಭಾಗೀರಥ್ ಚೌಧರಿ ಅವರು ತಮ್ಮದೇ ಸಚಿವಾಲಯದ ವ್ಯಾಪ್ತಿಯ ಯೋಜನೆಯೊಂದರ ಅಡಿಯಲ್ಲಿ ಸೌತೆಕಾಯಿ ಬೇಸಾಯಕ್ಕಾಗಿ ಬರೋಬ್ಬರಿ 99 ಲಕ್ಷ 60 ಸಾವಿರ ರೂಪಾಯಿ ಸರ್ಕಾರಿ ಸಬ್ಸಿಡಿ (Subsidy) ಪಡೆದಿರುವುದು ಇದೀಗ ದೇಶಾದ್ಯಂತ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಈ ವಿಷಯವನ್ನು ಮುನ್ನೆಲೆಗೆ ತಂದಿರುವ ವಿರೋಧ ಪಕ್ಷಗಳು, ಸಚಿವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಇಷ್ಟು ದೊಡ್ಡ ಮೊತ್ತದ ಸಬ್ಸಿಡಿ ಲಪಟಾಯಿಸಿದ್ದಾರೆ ಎಂದು ಗಂಭೀರ ಆರೋಪ ಮಾಡುತ್ತಿವೆ….
