Session: ಸಿಎಂ ಆಗಿ ಡಿಕೆಶಿ ಮೊದಲ ಅಧಿವೇಶನ; ಮಂತ್ರಿ ಸ್ಥಾನ ತಪ್ಪಿದ್ದಕ್ಕೆ ಹಣೆಬರಹ ಎಂದರಾ ಲಕ್ಷ್ಮಿ ಹೆಬ್ಬಾಳ್ಕರ್?
ಬೆಂಗಳೂರು: ರಾಜ್ಯ ರಾಜಕೀಯದ ಮಹತ್ವದ ಬೆಳವಣಿಗೆಗಳ ನಡುವೆ ಇಂದಿನಿಂದ ವಿಧಾನಸಭೆಯ ಮುಂಗಾರು ಜಂಟಿ ಅಧಿವೇಶನ ಆರಂಭವಾಗಿದೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನಡೆಯುತ್ತಿರುವ ಚೊಚ್ಚಲ ಕಲಾಪ ಇದಾಗಿದ್ದು, ಆಡಳಿತ ಮತ್ತು ವಿರೋಧ ಪಕ್ಷದ ಎಲ್ಲಾ ನಾಯಕರು ಸದನಕ್ಕೆ ಹಾಜರಾಗಿದ್ದಾರೆ. ಆದರೆ, ಅಧಿವೇಶನದ (Session) ಮೊದಲ ದಿನವೇ ಇಬ್ಬರು ಪ್ರಮುಖ ನಾಯಕರ ನಡವಳಿಕೆಗಳು ಮತ್ತು ಸನ್ನಿವೇಶಗಳು ಸದನದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ‘ಎಲ್ಲಾ ಹಣೆಬರಹ’ ಎಂದು ಕೈ ಸನ್ನೆ ಮಾಡಿದ ಲಕ್ಷ್ಮಿ ಹೆಬ್ಬಾಳ್ಕರ್! ಸಿದ್ದರಾಮಯ್ಯ…
