Good news for Bengaluru Pourakarmikas as GBA Greenlights Bonus After Three Years

GBA: ಪೌರಕಾರ್ಮಿಕರಿಗೆ ಜಿಬಿಎ ಸಿಹಿಸುದ್ದಿ: ಮೂರು ವರ್ಷಗಳ ಬಳಿಕ ಸಿಗಲಿದೆ ಬೋನಸ್ ಭಾಗ್ಯ!

ಬೆಂಗಳೂರು: ಕಳೆದ ಮೂರು ವರ್ಷಗಳಿಂದ ಬೋನಸ್ ಸಿಗದೆ ಕಾಯುತ್ತಿದ್ದ ರಾಜಧಾನಿಯ ಪೌರಕಾರ್ಮಿಕರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕೊನೆಗೂ ಸಿಹಿಸುದ್ದಿ ನೀಡಿದೆ. ಜಿಬಿಎ ವ್ಯಾಪ್ತಿಯ ಒಟ್ಟು ಐದು ನಗರಪಾಲಿಕೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 14 ಸಾವಿರ ಕಾರ್ಮಿಕರಿಗೆ ಈ ಬಾರಿ ಬೋನಸ್ ವಿತರಿಸಲು ಪ್ರಾಧಿಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಯೋಜನೆಯಡಿ ಸುಮಾರು 12,600 ಕಾಯಂ ನೌಕರರು ಹಾಗೂ 1,500 ಗುತ್ತಿಗೆ ಆಧಾರಿತ ಪೌರಕಾರ್ಮಿಕರು ಸೌಲಭ್ಯ ಪಡೆಯಲಿದ್ದಾರೆ. ಪ್ರತಿಯೊಬ್ಬ ಕಾರ್ಮಿಕನಿಗೂ ತಲಾ 22 ಸಾವಿರ ರೂಪಾಯಿ ಬೋನಸ್…

Read More
Good news Big relief for private vehicle owners Government proposes BS6 pollution certificate validity extension to 3 years

Good News: ಖಾಸಗಿ ವಾಹನ ಸವಾರರಿಗೆ ಬಂಪರ್ ಆಫರ್: 3 ವರ್ಷಕ್ಕೊಮ್ಮೆ ಪಿಯುಸಿ ಮಾಡಿಸಿದ್ರೆ ಸಾಕು; ಕೇಂದ್ರದಿಂದ ಹೊಸ ರೂಲ್ಸ್!

ನವದೆಹಲಿ: ದೇಶದ ಲಕ್ಷಾಂತರ ಕಾರು ಹಾಗೂ ಬೈಕ್ ಮಾಲೀಕರಿಗೆ ಕೇಂದ್ರ ಸಾರಿಗೆ ಇಲಾಖೆಯು ಭರ್ಜರಿ ದೀಪಾವಳಿ ಮುಂಚಿತವಾಗಿಯೇ ಸಿಹಿ ಸುದ್ದಿ (Good News) ನೀಡಲು ಮುಂದಾಗಿದೆ. ಅತ್ಯಾಧುನಿಕ ಬಿಎಸ್-6 (BS6) ನಿಯಮಾವಳಿಯ ಖಾಸಗಿ ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರದ (PUC) ವ್ಯಾಲಿಡಿಟಿಯನ್ನು ಬರೋಬ್ಬರಿ 3 ವರ್ಷಗಳಿಗೆ ವಿಸ್ತರಿಸುವ ಮಹತ್ವದ ಕರಡು ಪ್ರಸ್ತಾವನೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪ್ರಕಟಿಸಿದೆ. ಸದ್ಯ ಜಾರಿಯಲ್ಲಿರುವ ನಿಯಮದ ಪ್ರಕಾರ ಪ್ರತಿ ವರ್ಷ ಪಿಯುಸಿ ಮಾಡಿಸುವುದು ಕಡ್ಡಾಯವಾಗಿದೆ. ಆದರೆ ಹೊಸ…

Read More
Good news Big medical boost Central Govt caps prices of 39 critical drugs strict action warned against overchargin

Good News: ಸಾಮಾನ್ಯ ಜನರಿಗೆ ಭಾರಿ ನಿರಾಳ: ಮಧುಮೇಹ, ಹೃದಯರೋಗ ಸೇರಿದಂತೆ 39 ಅಗತ್ಯ ಔಷಧಿಗಳ ಗರಿಷ್ಠ ಬೆಲೆ ನಿಗದಿಪಡಿಸಿ ಕೇಂದ್ರ ಸರ್ಕಾರ ಆದೇಶ!

ಬೆಂಗಳೂರು: ದೇಶದ ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ಔಷಧ (Good News) ಬೆಲೆ ನಿಯಂತ್ರಣ ಪ್ರಾಧಿಕಾರವು (NPPA) ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದೆ. ಇತ್ತೀಚೆಗೆ ಹೊರಡಿಸಲಾದ ಹೊಸ ಅಧಿಕೃತ ನಿಯಮಾವಳಿಗಳ ಪ್ರಕಾರ, ಮಾರುಕಟ್ಟೆಯಲ್ಲಿ ಲಭ್ಯವಿರುವ ಒಟ್ಟು 39 ಅತ್ಯಗತ್ಯ ಹೊಸ ಔಷಧ ಸೂತ್ರೀಕರಣಗಳ (Formulations) ಗರಿಷ್ಠ ಚಿಲ್ಲರೆ ಬೆಲೆಯನ್ನು ಔಷಧ ಬೆಲೆ ನಿಯಂತ್ರಣ ಕಾಯ್ದೆಯಡಿ ಕಟ್ಟುನಿಟ್ಟಾಗಿ ನಿಗದಿಪಡಿಸಲಾಗಿದೆ. ಸಾರ್ವಜನಿಕರು ನಿರಂತರವಾಗಿ ಬಳಸುವ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ…

Read More
Good news Karnataka government waives late admission fine for government PU college students

Good News: ಸರ್ಕಾರಿ ಪಿಯು ಕಾಲೇಜುಗಳ ಲೇಟ್ ಅಡ್ಮಿಷನ್ ಫೈನ್ ರದ್ದು: ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ದೊಡ್ಡ ರಿಲೀಫ್

ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸರ್ಕಾರ ಭರ್ಜರಿ ಕೊಡುಗೆಯೊಂದನ್ನು ನೀಡಿದೆ. ಇನ್ಮುಂದೆ ನಿಗದಿತ ಸಮಯ ಮುಗಿದ (Good News) ನಂತರ ಕಾಲೇಜು ಸೇರುವ ವಿದ್ಯಾರ್ಥಿಗಳಿಗೆ ವಿಧಿಸಲಾಗುತ್ತಿದ್ದ ‘ವಿಳಂಬ ದಾಖಲಾತಿ ದಂಡ ಶುಲ್ಕ’ವನ್ನು ಅಧಿಕೃತವಾಗಿ ರದ್ದುಗೊಳಿಸಲಾಗಿದೆ. ಈ ಹಿಂದಿನ ಕಠಿಣ ನಿಯಮವನ್ನು ವಾಪಸ್ ಪಡೆದಿರುವ ಸರ್ಕಾರ, ಪ್ರಸಕ್ತ 2026-27ನೇ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರುವಂತೆ ಈ ವಿನಾಯಿತಿ ಘೋಷಿಸಿದೆ. ಏನಿದೆ ಹೊಸ ಆದೇಶದಲ್ಲಿ? ಹೊಸ ಆದೇಶದ ಅನ್ವಯ, ಸರ್ಕಾರಿ ಪಿಯು ಕಾಲೇಜುಗಳಲ್ಲಿ ಪ್ರಥಮ ಹಾಗೂ…

Read More
BMTC Launches Tumakuru Electronic City AC Bus Route Check Timings Fares and Stops

Good News: ತುಮಕೂರು-ಎಲೆಕ್ಟ್ರಾನಿಕ್ ಸಿಟಿ ನಡುವೆ ನೈಸ್ ರಸ್ತೆ ಮೂಲಕ ಹೊಸ ಬಿಎಂಟಿಸಿ ಎಸಿ ಬಸ್ ಸಂಚಾರ ಆರಂಭ

ಬೆಂಗಳೂರು: ಪ್ರತಿದಿನ ತುಮಕೂರಿನಿಂದ ಬೆಂಗಳೂರಿನ ಐಟಿ ವಲಯಕ್ಕೆ ಪ್ರಯಾಣಿಸುವ ಉದ್ಯೋಗಿಗಳಿಗೆ ಸಾರಿಗೆ (BMTC) ಸಂಸ್ಥೆಯು ಭರ್ಜರಿ ಕೊಡುಗೆ (Good News) ನೀಡಿದೆ. ಟ್ರಾಫಿಕ್‌ನಲ್ಲಿ ಸಿಲುಕಿ ಗಂಟೆಗಟ್ಟಲೆ ಪರದಾಡುತ್ತಿದ್ದ ಹಾಗೂ ಹತ್ತಾರು ಬಸ್‌ಗಳನ್ನು ಬದಲಾಯಿಸುತ್ತಿದ್ದ ಉದ್ಯೋಗಿಗಳ ಅನುಕೂಲಕ್ಕಾಗಿ ಬಿಎಂಟಿಸಿ ಇಂದಿನಿಂದ (ಜುಲೈ 6, 2026) ತುಮಕೂರಿನಿಂದ ನೇರವಾಗಿ ಎಲೆಕ್ಟ್ರಾನಿಕ್ ಸಿಟಿಯ ವಿಪ್ರೋ ಗೇಟ್‌ಗೆ ಐಷಾರಾಮಿ ‘ವಾಯು ವಜ್ರ’ ಹವಾನಿಯಂತ್ರಿತ ಬಸ್ ಸೇವೆಯನ್ನು ಆರಂಭಿಸಿದೆ. ಈ ಬಸ್‌ ಮಾರ್ಗ ಹೇಗಿರಲಿದೆ? ಈ ವಿಶೇಷ ಬಸ್ ನಗರದ ಒಳಗಿನ ವಿಪರೀತ ಟ್ರಾಫಿಕ್‌ಗೆ…

Read More
dk shivakumar cabinet allowed 15 days to get permanent electricity

DK Shivakumar: ಹಳೆಯ ಕಟ್ಟಡಗಳ ಮಾಲೀಕರಿಗೆ ಶಾಶ್ವತ ವಿದ್ಯುತ್ ಸೌಲಭ್ಯ

ಬೆಂಗಳೂರು: ದಶಕಗಳಿಂದ ತಾತ್ಕಾಲಿಕ ವಿದ್ಯುತ್ ಸಂಪರ್ಕದ ಮೇಲೆಯೇ ಅವಲಂಬಿತವಾಗಿದ್ದ ಹಳೆಯ ಕಟ್ಟಡಗಳ ಮಾಲೀಕರಿಗೆ ನಿರಾಳತೆ ನೀಡುವಂತಹ ಮಹತ್ವದ ತೀರ್ಮಾನವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ನೇತೃತ್ವದ ಸಚಿವ ಸಂಪುಟ ಕೈಗೊಂಡಿದೆ. ಇಂತಹ ಕಟ್ಟಡಗಳಿಗೆ ನಿಯಮಾನುಸಾರ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸಲು ಸರ್ಕಾರ ಕೊನೆಯದಾಗಿ 15 ದಿನಗಳ ವಿಶೇಷ ಗಡುವನ್ನು ನೀಡಿದೆ. ಯಾರಿಗೆಲ್ಲಾ ಅವಕಾಶ ನೀಡಲಾಗಿದೆ? ಈ ಸೌಲಭ್ಯವನ್ನು ಪಡೆದುಕೊಳ್ಳಲು ಸರ್ಕಾರ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದೆ. 2000ನೇ ಇಸವಿಯ ಮೇ 31ಕ್ಕೂ ಮುನ್ನ ನಿರ್ಮಾಣಗೊಂಡು, ಪ್ರಸ್ತುತ…

Read More
double decker fly over in namma metro orange line

Namma Metro: ಬೆಂಗಳೂರು ಟ್ರಾಫಿಕ್‌ಗೆ ಮುಕ್ತಿ: ‘ಆರೆಂಜ್ ಲೈನ್’ ಮೆಟ್ರೋ ಕಂ ಡಬಲ್ ಡೆಕ್ಕರ್ ಫ್ಲೈ ಓವರ್ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ!

ಬೆಂಗಳೂರು: ರಾಜಧಾನಿಯ ಹೊರವರ್ತುಲ ರಸ್ತೆ (ORR) ಭಾಗದ ನಿವಾಸಿಗಳು ಹಾಗೂ ವಾಹನ ಸವಾರರ ಬಹುದಿನಗಳ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ ನಡೆಸಿದ ದೆಹಲಿ ಪ್ರವಾಸ ಯಶಸ್ವಿಯಾಗಿದ್ದು, ನಮ್ಮ ಮೆಟ್ರೋದ (Namma Metro) 3ನೇ ಹಂತದ ‘ಆರೆಂಜ್ ಲೈನ್’ ಮಾರ್ಗದಲ್ಲಿ ಡಬಲ್ ಡೆಕ್ಕರ್ ಮೇಲ್ಸೇತುವೆ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಹಳಿಗೆ ಬರಲುವ ಮುನ್ಸೂಚನೆ ಸಿಕ್ಕಿದೆ. ಕಳೆದ ವರ್ಷದ ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಹಳದಿ ಲೈನ್…

Read More