Gadag: ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರಿಗೆ ಜೀವ ಬೆದರಿಕೆ!; ಕೋಟಿ ಕೋಟಿ ಮಠದ ಹಣದ ಮೇಲೆ ಕಣ್ಣಿಟ್ಟ ಟ್ರಸ್ಟಿಗಳ ವಿರುದ್ಧ ಗಂಭೀರ ಆರೋಪ!
ಗದಗ: ಉತ್ತರ ಕರ್ನಾಟಕದ ಸುಪ್ರಸಿದ್ಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾದ ಗದಗದ (Gadag) ವೀರೇಶ್ವರ ಪುಣ್ಯಾಶ್ರಮದಲ್ಲಿ ಈಗ ಭಿನ್ನಮತದ ಸ್ಫೋಟವಾಗಿದೆ. ಮಠದ ವಾರ್ಷಿಕ ರಥೋತ್ಸವದ ಸುತ್ತ ವಿವಾದಗಳು ಹಬ್ಬುತ್ತಿರುವ ಬೆನ್ನಲ್ಲೇ, ಆಶ್ರಮದ ಪೀಠಾಧಿಪತಿಗಳಾದ ಶ್ರೀ ಕಲ್ಲಯ್ಯಜ್ಜನವರು ತಮಗೆ ಸ್ವಂತ ಟ್ರಸ್ಟ್ ಕಮಿಟಿಯ ಸದಸ್ಯರಿಂದಲೇ ಪ್ರಾಣ ಭೀತಿ ಎದುರಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಬುಧವಾರ ಮಠದಲ್ಲಿ ಆಯೋಜಿಸಲಾಗಿದ್ದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಕ್ಷಣದಲ್ಲೂ ತಮ್ಮ ಮೇಲೆ ಭೌತಿಕ ಹಲ್ಲೆ ನಡೆಯುವ ಸಂಭವವಿದ್ದು, ತಮಗೆ ಸೂಕ್ತ…
