Kangana Ranaut: ತಮ್ಮನ್ನು ಜಿರಳೆ ಎನ್ನುವವರು ಗಟಾರದಲ್ಲೇ ಇರಬೇಕು: ಸಂಸದೆ ಕಂಗನಾ ರಣಾವತ್!
ನವದೆಹಲಿ: ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್, (Kangana Ranaut) ಇತ್ತೀಚೆಗೆ ಯುವ ಜನತೆಯ ವಿರುದ್ಧ ತಾವು ಮಾಡಿದ್ದ ‘ಜನರೇಷನ್ ಗಟಾರ್’ (ಗಟಾರದ ಪೀಳಿಗೆ) ಎಂಬ ವಿವಾದಾತ್ಮಕ ಕಾಮೆಂಟ್ ಅನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಸಂಸತ್ತಿನ ಮುಂಗಾರು ಅಧಿವೇಶನದ ಕೊನೆಯ ದಿನದಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾವು ಇಡೀ ದೇಶದ ಯುವ ಸಮೂಹವನ್ನು ನಿಂದಿಸಿಲ್ಲ, ಬದಲಿಗೆ ಕೇವಲ ಒಂದು ನಿರ್ದಿಷ್ಟ ಗುಂಪನ್ನು ಮಾತ್ರ ಗುರಿಯಾಗಿಸಿಕೊಂಡು ಈ ಮಾತು ಹೇಳಿದ್ದಾಗಿ…
