TOP NEWS
Eviction of street vendors is a collective government decision not an individual one CM DK Shivakumar

DK Shivakumar: ಬೀದಿ ವ್ಯಾಪಾರಿಗಳ ತೆರವು ಸರ್ಕಾರದ ಸಾಮೂಹಿಕ ತೀರ್ಮಾನ, ಯಾರದ್ದೋ ವೈಯಕ್ತಿಕ ನಿರ್ಧಾರವಲ್ಲ: ಸಿಎಂ ಡಿ.ಕೆ. ಶಿವಕುಮಾರ್ ಸಮರ್ಥನೆ

ಬೆಳಗಾವಿ: ಬೆಂಗಳೂರಿನಲ್ಲಿ ಸದ್ಯ ನಡೆಯುತ್ತಿರುವ ಬೀದಿ ಬದಿ ವ್ಯಾಪಾರಿಗಳ ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಇದು ಯಾವುದೇ ಒಬ್ಬ ಸಚಿವರ ವೈಯಕ್ತಿಕ ತೀರ್ಮಾನವಲ್ಲ. ಬದಲಿಗೆ ಎಲ್ಲಾ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ ಬಳಿಕ ಸರ್ಕಾರ ಕೈಗೊಂಡಿರುವ ಸಾಮೂಹಿಕ ನಿರ್ಧಾರ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಶಾಸಕರ ಸಭೆಯ ಒಮ್ಮತದ ತೀರ್ಮಾನ: ತಾವು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳನ್ನು ನೆನಪಿಸಿಕೊಂಡ ಮುಖ್ಯಮಂತ್ರಿಗಳು, “ಬೀದಿಬದಿ ವ್ಯಾಪಾರಿಗಳ ಸಮಸ್ಯೆ ಮತ್ತು…

Read More
Footpath Eviction Sparks Outrage Street Vendors Call for Bengaluru Bandh on July 8

GBA: ಫುಟ್‌ಪಾತ್ ತೆರವು ಕಾರ್ಯಾಚರಣೆಗೆ ವ್ಯಾಪಾರಿಗಳ ಆಕ್ರೋಶ: ಜುಲೈ 8 ರಂದು ಬೆಂಗಳೂರು ಬಂದ್‌ಗೆ ಕರೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಜಿಬಿಎ ಕೈಗೊಂಡಿರುವ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಸರ್ಕಾರದ ಈ ಕ್ರಮದ ವಿರುದ್ಧ ಬೀದಿ ಬದಿ (GBA) ವ್ಯಾಪಾರಿಗಳ ಜಂಟಿ ಹೋರಾಟ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನೇರವಾಗಿ ರಾಜ್ಯ ಸರ್ಕಾರ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಅವರ ವಿರುದ್ಧ ತಿರುಗಿಬಿದ್ದಿದೆ. ನ್ಯಾಯಾಲಯವು ಪಾದಚಾರಿಗಳ ಹಕ್ಕಿನ ಬಗ್ಗೆ ಆದೇಶ ನೀಡಿರುವಂತೆಯೇ, ತಮ್ಮ ರಕ್ಷಣೆಗೂ ಕಾನೂನಿನಲ್ಲಿ ಅವಕಾಶವಿದೆ ಎಂದು ನೆನಪಿಸಿರುವ ವ್ಯಾಪಾರಿಗಳು, ನಮಗೆ ಯಾವುದೇ…

Read More
BMTCs Loud Plan Audio Ads Inside Bengaluru Buses Leave Commuters Fuming

BMTC: ಬಿಎಂಟಿಸಿ ಬಸ್‌ಗಳಲ್ಲಿ ಇನ್ಮುಂದೆ ‘ಆಡಿಯೋ ಜಾಹೀರಾತು’ ಕಿರಿಕಿರಿ? ನಿಗಮದ ಪ್ಲಾನ್‌ಗೆ ಪ್ರಯಾಣಿಕರು ಫುಲ್ ಗರಂ!

ಬೆಂಗಳೂರು: ತೀವ್ರ ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC), ನಷ್ಟದ ಸುಳಿಯಿಂದ ಹೊರಬರಲು ಇದೀಗ ವಿನೂತನ ಆದಾಯ ಮೂಲದ ಮೊರೆ ಹೋಗಿದೆ. ಬಸ್‌ಗಳ ಬಾಡಿ ಹಾಗೂ ಟಿಕೆಟ್‌ಗಳ ಹಿಂಭಾಗವನ್ನು ಕಮರ್ಷಿಯಲ್ ಜಾಹೀರಾತುಗಳಿಗೆ ಬಳಸಿಕೊಳ್ಳುತ್ತಿರುವ ನಿಗಮ, ಈಗ ಬಸ್ಸುಗಳ ಒಳಗಿರುವ ಸ್ಪೀಕರ್‌ಗಳ ಮೂಲಕ ಧ್ವನಿ (ಆಡಿಯೋ) ಜಾಹೀರಾತುಗಳನ್ನು ಬಿತ್ತರಿಸಲು ಯೋಜನೆ ರೂಪಿಸಿದೆ. ದೇಶದಲ್ಲೇ ಮೊದಲ ಎನ್ನಲಾದ ಈ ಪ್ರಯೋಗಕ್ಕೆ ಪ್ರಯಾಣಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕೋಟಿ ಕೋಟಿ ಕಮಾಯಿ ಮಾಡಲು ಸಾರಿಗೆ ಇಲಾಖೆ ಕಸರತ್ತು…

Read More
CM DK Shivakumar Orders Top Treatment for Quarry Blast Victims FIR Registered Against Owners for Negligence

DK Shivakumar: ರಾಮನಗರ ಕಲ್ಲು ಕ್ವಾರಿ ದುರಂತ: 7 ಕಾರ್ಮಿಕರು ದಾರುಣ ಸಾವು; ಆಸ್ಪತ್ರೆಗೆ ಸಿಎಂ ಭೇಟಿ, ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲು!

ರಾಮನಗರ: ಜಿಲ್ಲೆಯ ಮಾದಾಪಟ್ಟಣದ ಸಮೀಪವಿರುವ ಕಲ್ಲು ಕ್ವಾರಿಯೊಂದರಲ್ಲಿ ಸಂಭವಿಸಿದ ಭೀಕರ ಬಂಡೆ ಕುಸಿತದ ದುರಂತದಲ್ಲಿ ಏಳು ಮಂದಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇನ್ನುಳಿದ ಕಾರ್ಮಿಕರನ್ನು ಬೆಂಗಳೂರಿನ ಆರ್.ಆರ್. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ. ವಿಧಾನಸೌಧದಲ್ಲಿ ಪ್ರಮುಖ ಸಚಿವ ಸಂಪುಟ ಸಭೆ ಮುಗಿಯುತ್ತಿದ್ದಂತೆಯೇ ನೇರವಾಗಿ ಆಸ್ಪತ್ರೆಗೆ ಧಾವಿಸಿದ ಮುಖ್ಯಮಂತ್ರಿಗಳು, ಗಾಯಾಳುಗಳಿಗೆ ಯಾವುದೇ ಲೋಪವಿಲ್ಲದೆ ಅತ್ಯಾಧುನಿಕ ಚಿಕಿತ್ಸೆ ಕಲ್ಪಿಸುವಂತೆ ವೈದ್ಯಕೀಯ ಸಿಬ್ಬಂದಿಗೆ…

Read More
Minister krishna byre gowda statement about GBA footpath clearance

Bengaluru: ಬೆಂಗಳೂರು ಫುಟ್‌ಪಾತ್ ಕ್ಲಿಯರೆನ್ಸ್: ಸಾರ್ವಜನಿಕರ ಜೀವ ರಕ್ಷಣೆಗೆ ಮೊದಲ ಆದ್ಯತೆ

ಬೆಂಗಳೂರು: ಗ್ರೇಟರ್ ಬೆಂಗಳೂರು ಅಭಿವೃದ್ಧಿ (ಜಿಬಿಎ) ಮಿತಿಯಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ಮುಕ್ತಗೊಳಿಸುವ ಕಾರ್ಯಾಚರಣೆ ಚುರುಕುಗೊಂಡಿದ್ದು, ಈ ಪ್ರಕ್ರಿಯೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹೊಟ್ಟೆಯ ಮೇಲೆ ಹೊಡೆಯುವುದಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ (Bengaluru) ತಿಳಿಸಿದ್ದಾರೆ. ಅಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಅವರು, ಪ್ರಮುಖ ಲಿಂಕ್ ರಸ್ತೆಗಳಿಂದ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗದಂತೆ ಒಳಗಿನ ವಾರ್ಡ್ ರಸ್ತೆಗಳಿಗೆ ಮಾತ್ರ ಇವರನ್ನು ಶಿಫ್ಟ್ ಮಾಡಲಾಗುವುದು. ಫುಟ್‌ಪಾತ್‌ಗಳ ಮೇಲೆ ಅಡ್ಡಲಾಗಿ ನಿಲ್ಲಿಸುವ ವಾಹನಗಳು, ಅನಧಿಕೃತ ಪಾರ್ಕಿಂಗ್ ಮತ್ತು ಕಟ್ಟಡಗಳ ಮುಂದೆ…

Read More
Bengaluru footpath will be cleared soon krishna byre gowda

Bengaluru: ಶೇ. 15 ರಷ್ಟು ಫುಟ್‌ಪಾತ್ ತೆರವಿಗೆ ನಿರ್ಧಾರ: ಸಚಿವ ಕೃಷ್ಣ ಭೈರೇಗೌಡ

ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಪಾದಚಾರಿಗಳ ಹಿತದೃಷ್ಟಿಯಿಂದ ಹಾಗೂ ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ಆದೇಶದನ್ವಯ ಫುಟ್‌ಪಾತ್ (ಕಾಲುದಾರಿ) ಒತ್ತುವರಿ ತೆರವುಗೊಳಿಸುವ ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲುದಾರಿಗಳ ಅಕ್ರಮ ಆಕ್ರಮಣದಿಂದಾಗಿ ನಿತ್ಯ ಸಂಕಷ್ಟ ಎದುರಿಸುತ್ತಿರುವ ಸಾರ್ವಜನಿಕರ ಹಿತ ಕಾಯಲು ಸರ್ಕಾರ ಈ ಮಹತ್ವದ ಕ್ರಮ ಕೈಗೊಂಡಿದೆ. ಹೀಗಾಗಿ ರಸ್ತೆಬದಿಯ ವ್ಯಾಪಾರಿಗಳು ಸರ್ಕಾರದೊಂದಿಗೆ ಕೈಜೋಡಿಸಿ ಸಹಕರಿಸಬೇಕು ಎಂದು ವಿನಂತಿಸಿದರು. 2,000 ಕಿಲೋಮೀಟರ್ ಒತ್ತುವರಿ ಮುಕ್ತ ರಾಜಧಾನಿಯಲ್ಲಿ…

Read More
big twist in KR puram triple crime case

Crime: ಕೆ.ಆರ್. ಪುರಂ ಟ್ರಿಪಲ್ ಮರ್ಡರ್ ಕೇಸ್: ಆಸ್ತಿ ಮತ್ತು 30 ಲಕ್ಷ ಸಾಲದ ವಿವಾದಕ್ಕೆ ಹೆತ್ತವರನ್ನೇ ಬಲಿ ಪಡೆದ ಲಿವ್-ಇನ್ ಜೋಡಿ

ಬೆಂಗಳೂರು: ರಾಜಧಾನಿಯ ಕೆ.ಆರ್. ಪುರಂ ವ್ಯಾಪ್ತಿಯಲ್ಲಿ ನಡೆದಿದ್ದ ಒಂದೇ ಕುಟುಂಬದ ಮೂವರ ಭೀಕರ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಕೃತ್ಯದ ಸಣ್ಣ ಎಳೆಯನ್ನು (Crime) ಪೊಲೀಸರು ಬಿಚ್ಚಿಟ್ಟಿದ್ದಾರೆ. ಆರೋಪಿ ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನತ್ ಹೊಂದಿದ್ದ ಲಕ್ಷಾಂತರ ರೂಪಾಯಿ ಸಾಲ ಮತ್ತು ಆಸ್ತಿಯ ಜಗಳವೇ ಈ ರಕ್ತಪಾತಕ್ಕೆ ಪ್ರಮುಖ ಪ್ರೇರಣೆ ಎಂಬ ಅಂಶ ಬೆಳಕಿಗೆ ಬಂದಿದೆ. ಸಾಲ ತೀರಿಸಲು ಪೋಷಕರು ಹಣಕಾಸಿನ ನೆರವು ನೀಡದ ಕೋಪಕ್ಕೆ ಇಡೀ ಕುಟುಂಬವನ್ನೇ ಮುಗಿಸಲಾಗಿದೆ ಎಂದು ಶಂಕಿಸಲಾಗಿದೆ. ಹೆತ್ತವರ ನಿರಾಕರಣೆಯೇ…

Read More