TOP NEWS
kodagu dubare elephant camp bridge construction fight between bjp and congress

Kodagu: ದುಬಾರೆ ತೂಗುಸೇತುವೆ ರಾಜಕೀಯ ಜಿದ್ದಾಜಿದ್ದಿ: ಸಚಿವ ಖಂಡ್ರೆಗೆ ಬಿಜೆಪಿ ಘೇರಾವ್, ಕಾಂಗ್ರೆಸ್ ತೀಕ್ಷ್ಣ ಪ್ರತಿಕ್ರಿಯೆ

ಕುಶಾಲನಗರ: ಕೊಡಗಿನ (Kodagu) ಪ್ರಸಿದ್ಧ ಪ್ರವಾಸಿ ಕೇಂದ್ರ ದುಬಾರೆಯಲ್ಲಿ ಬಹುನಿರೀಕ್ಷಿತ ತೂಗುಸೇತುವೆ ನಿರ್ಮಾಣದ ವಿಚಾರವು ಈಗ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಬಿಜೆಪಿಯ ನಡುವಿನ ಕೆಸರೆರಚಾಟಕ್ಕೆ ಸಾಕ್ಷಿಯಾಗಿದೆ. ಬುಧವಾರ ಜಿಲ್ಲೆಗೆ ಭೇಟಿ ನೀಡಿದ್ದ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರಿಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದು, ರಾಜಕೀಯ ವಲಯದಲ್ಲಿ ಬಿಸಿ ಏರಿಸಿದೆ. ಸಚಿವರ ವಾಹನ ತಡೆದ ಬಿಜೆಪಿ ಕಾರ್ಯಕರ್ತರು: ದುಬಾರೆ ಆನೆ ಶಿಬಿರಕ್ಕೆ ಸಂಪರ್ಕ ಕಲ್ಪಿಸುವ 7.50 ಕೋಟಿ ರೂಪಾಯಿ ವೆಚ್ಚದ ತೂಗುಸೇತುವೆ…

Read More
cm Siddaramaiah on sringeri result accused bjp

CM Siddaramaiah: ಶೃಂಗೇರಿ ಫಲಿತಾಂಶದ ವಿರುದ್ಧ ಕಾನೂನು ಹೋರಾಟ: ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಮೈಸೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆಯಲ್ಲಿ ಬಿಜೆಪಿ (BJP) ಕುತಂತ್ರ ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಆಪಾದಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಫಲಿತಾಂಶದ ಹಿಂದೆ ಕ್ರಿಮಿನಲ್ ಸಂಚು ಅಡಗಿದ್ದು, ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ತಿಳಿಸಿದರು. ಅರ್ಹ ಮತಗಳ ಅನರ್ಹತೆ: ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ಅವರಿಗೆ ಚಲಾವಣೆಯಾಗಿದ್ದ 255 ಅರ್ಹ ಅಂಚೆ ಮತಗಳನ್ನು ಉದ್ದೇಶಪೂರ್ವಕವಾಗಿ ತಿರಸ್ಕರಿಸಲಾಗಿದೆ. ಮತ ಎಣಿಕೆಯ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ, ತನ್ನ ಪ್ರಭಾವ…

Read More
Good work in belthangady 16 cobra eggs rescued

Good Work: 16 ನಾಗರಹಾವಿನ ಮರಿಗಳಿಗೆ ಜೀವದಾನ ನೀಡಿ ಕಾಡಿಗೆ ಬಿಟ್ಟ ಉರಗ ಮಿತ್ರ!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ (Good Work) ತಾಲೂಕಿನ ನೆರಿಯ ಗ್ರಾಮದಲ್ಲಿ ಅಪರೂಪದ ಜೀವ ಸಂರಕ್ಷಣಾ ಕಾರ್ಯವೊಂದು ನಡೆದಿದೆ. ಮನೆಯೊಂದರ ಗೋಡೆಯಲ್ಲಿ ಪತ್ತೆಯಾಗಿದ್ದ ನಾಗರಹಾವಿನ 16 ಮೊಟ್ಟೆಗಳನ್ನು ರಕ್ಷಿಸಿ, ಕೃತಕವಾಗಿ ಕಾವು ಕೊಡುವ ಮೂಲಕ ಮರಿಗಳನ್ನು ಮಾಡಿ ಅರಣ್ಯಕ್ಕೆ ಬಿಡಲಾಗಿದೆ. ಮೊಟ್ಟೆಗಳ ಮೇಲೆ ಇರುವೆಗಳ ದಾಳಿ: ನೆರಿಯದ ಬೊಮ್ಮಣ್ಣ ಗೌಡ ಅವರ ಮನೆಯ ಗೋಡೆಯ ಬಿರುಕಿನಲ್ಲಿ ನಾಗರಹಾವೊಂದು ಕಾಣಿಸಿಕೊಂಡಿತ್ತು. ಇದನ್ನು ಹಿಡಿಯಲು ಬಂದ ಕಕ್ಕಿಂಜೆಯ ಉರಗ ತಜ್ಞ ಸ್ನೇಕ್ ಅನಿಲ್ ಅವರು ಹಾವನ್ನು ಸೆರೆಹಿಡಿಯುವಾಗ ಅಲ್ಲಿ…

Read More
sringeri controversy sabarimala prediction about dn jeevaraj become true

DN Jeevaraj: ಶೃಂಗೇರಿ ಕೋರ್ಟ್ ಕದನ ಗೆದ್ದ ಜೀವರಾಜ್: ನಿಜವಾಯಿತು ಶಬರಿಮಲೆ ಪೂಜಾರಿಯ ಭವಿಷ್ಯವಾಣಿ!

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಬಿಜೆಪಿಯ ಡಿ.ಎನ್. ಜೀವರಾಜ್ (DN Jeevaraj) ಅವರು ವಿಜಯಶಾಲಿಯಾಗಿದ್ದಾರೆ. ಇದರೊಂದಿಗೆ ಕಳೆದ ಮೂರು ವರ್ಷಗಳಿಂದ ನಡೆಯುತ್ತಿದ್ದ ಕಾನೂನು ಹೋರಾಟಕ್ಕೆ ಅಧಿಕೃತ ತೆರೆ ಬಿದ್ದಂತಾಗಿದೆ. ಆದರೆ ಈ ರಾಜಕೀಯ ವಿಜಯದ ಜೊತೆಗೆ ಈಗ ದೈವಿಕ ಪವಾಡವೊಂದು ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಏನಿದು ದೈವಿಕ ಪವಾಡ? ನಾಲ್ಕು ತಿಂಗಳ ಹಿಂದೆ ಶಬರಿಮಲೆಯಲ್ಲಿ ಪೂಜಾರಿಯೊಬ್ಬರು ಜೀವರಾಜ್ ಗೆಲುವಿನ ಬಗ್ಗೆ ನುಡಿದಿದ್ದ…

Read More
dk suresh cryptic statement about cm change row

DK Suresh: ಕಾಲ ಕೂಡಿ ಬರಲಿ ಎಂದು ಕಾಯುತ್ತಿದ್ದೇವೆ: ನಾಯಕತ್ವ ಬದಲಾವಣೆ ಕುರಿತು ಡಿ.ಕೆ. ಸುರೇಶ್ ಮಾರ್ಮಿಕ ಮಾತು

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ 64ನೇ ಜನ್ಮದಿನದ ಹೊಸ್ತಿಲಿನಲ್ಲಿ ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ‘ಅಧಿಕಾರ ಹಂಚಿಕೆ’ಯ ಚರ್ಚೆ ಮುನ್ನೆಲೆಗೆ ಬಂದಿದೆ. ಈ ವಿಶೇಷ ದಿನದಂದು ಹೈಕಮಾಂಡ್‌ನಿಂದ ಶುಭ ಸುದ್ದಿ ಸಿಗಲಿದೆಯೇ ಎಂಬ ಪ್ರಶ್ನೆಗೆ ಶಿವಕುಮಾರ್ ಅವರ ಸಹೋದರ, ಮಾಜಿ ಸಂಸದ ಡಿ.ಕೆ. ಸುರೇಶ್ (DK Suresh) ಅವರು ಕುತೂಹಲಕಾರಿ ಪ್ರತಿಕ್ರಿಯೆ ನೀಡಿದ್ದಾರೆ. 64ನೇ ವಸಂತಕ್ಕೆ ಕಾಲಿಡುವುದೇ ಶುಭ ಸುದ್ದಿ: ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಸುರೇಶ್, “ಶಿವಕುಮಾರ್ ಅವರಿಗೆ 63 ವರ್ಷ ಮುಗಿದು 64ನೇ ವರ್ಷಕ್ಕೆ ಕಾಲಿಡುತ್ತಿರುವುದೇ…

Read More
two peacocks lost life due to bird flu

Bird Flu: ತುಮಕೂರಿನಲ್ಲಿ ನವಿಲುಗಳ ಮಾರಣಹೋಮ: ಹಕ್ಕಿಜ್ವರಕ್ಕೆ ಮತ್ತೆರಡು ಬಲಿ

ತುಮಕೂರು: ಕಲ್ಪತರು ನಾಡು ತುಮಕೂರಿನಲ್ಲಿ ರಾಷ್ಟ್ರಪಕ್ಷಿ ನವಿಲುಗಳ ಸಾವು ಮುಂದುವರಿದಿದ್ದು, ಪರಿಸರ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ. ಹಕ್ಕಿಜ್ವರದ (Bird Flu) ಬಾಧೆಯಿಂದಾಗಿ ತಾಲೂಕಿನ ಗೂಳರಿವೆ ಗ್ರಾಮದ ‘ಸುಣ್ಣಕಲ್ಲು ಕಟ್ಟೆ’ ಬಳಿ ಮತ್ತೆರಡು ನವಿಲುಗಳು ಮೃತಪಟ್ಟಿವೆ. ಈ ಭಾಗದಲ್ಲಿ ಸತತವಾಗಿ ನವಿಲುಗಳು ಸಾವನ್ನಪ್ಪುತ್ತಿರುವುದು ಪ್ರಕೃತಿ ಪ್ರೇಮಿಗಳ ನಿದ್ರೆ ಗೆಡಿಸಿದೆ. ಬೀದಿ ನಾಯಿಗಳ ಪಾಲಾದ ಮೃತದೇಹ: ಘಟನಾ ಸ್ಥಳದಲ್ಲಿ ಮೃತ ನವಿಲುಗಳ ದೇಹಗಳು ಅನಾಥವಾಗಿ ಬಿದ್ದಿದ್ದು, ಅವುಗಳನ್ನು ಬೀದಿ ನಾಯಿಗಳು ಕಿತ್ತು ತಿನ್ನುತ್ತಿರುವ ದೃಶ್ಯ ಮನಕಲಕುವಂತಿದೆ. ಇತ್ತೀಚೆಗಷ್ಟೇ ಈ ಭಾಗದಲ್ಲಿ…

Read More
Protest rally to oppose Nuclear power plant in sagara taluk besur village

Sagara: ಅಣುವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ವಿರೋಧಿಸಿ ನಾಳೆ ಪ್ರತಿಭಟನೆ

ಶಿವಮೊಗ್ಗ: ಸಾಗರ (Sagara) ತಾಲ್ಲೂಕು ಅವಿನಹಳ್ಳಿ ಹೋಬಳಿ ಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಸೂರು ಗ್ರಾಮದಲ್ಲಿ ಅಣುವಿದ್ಯುತ್ ಸ್ಥಾವರ ನಿರ್ಮಿಸುವ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಉದ್ದೇಶವನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧಾರ ಮಾಡಲಾಗಿದೆ. ಜನಹೋರಾಟ ವೇದಿಕೆವತಿಯಿಂದ ಈ ಹೋರಾಟ ಹಮ್ಮಿಕೊಳ್ಳಲಾಗಿದ್ದು, ಅಣುಸ್ಥಾವರದಿಂದ ಅಲ್ಲಿನ ಜನರ ಬದುಕಿಗೆ ಮಾರಕವಾಗುವುದು ಬೇಡ ಎಂದು ಜನ ಆಗ್ರಹ ಮಾಡಿದ್ದಾರೆ, ಎಲ್ಲಿ ಪ್ರತಿಭಟನೆ?ನಾಳೆ ಬೆಳಿಗ್ಗೆ 10-30ಕ್ಕೆ ಸಾಗರದ ಶಿವಪ್ಪ ನಾಯ್ಕ ವೃತ್ತದಿಂದ ಈ ಪ್ರತಿಭಟನೆ ರ್ಯಾಲಿ ಪ್ರಾರಂಭ ಮಾಡಲು ನಿರ್ಧಾರ…

Read More