TOP NEWS
Ban on bottle supply of petrol and diesel in state

Petrol: ಇಂಧನ ಮಾರಾಟಕ್ಕೆ ಸರ್ಕಾರದ ಹೊಸ ಬ್ರೇಕ್: ಬಂಕ್‌ಗಳಲ್ಲಿ ಇನ್ನುಮುಂದೆ ಪೆಟ್ರೋಲ್ ಕ್ಯಾನ್, ಬಾಟಲಿಗಳಿಗೆ ನೋ ಎಂಟ್ರಿ!

ಬೆಂಗಳೂರು: ರಾಜ್ಯದ ಪೆಟ್ರೋಲ್ ಬಂಕ್‌ಗಳಲ್ಲಿ (Petrol) ಇಂಧನ ವಿತರಣೆಗೆ ಸಂಬಂಧಿಸಿದಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಮಹತ್ವದ ಬದಲಾವಣೆ ತಂದಿದೆ. ಇಂಧನ ದಾಸ್ತಾನು ನಿರ್ವಹಣೆ ಮತ್ತು ಸಾರ್ವಜನಿಕರ ರಕ್ಷಣೆಯ ಹಿತದೃಷ್ಟಿಯಿಂದ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದ್ದು, ನಿಯಮ ಮೀರುವ ಮಾಲೀಕರಿಗೆ ಭಾರೀ ದಂಡ ಹಾಗೂ ಪರವಾನಗಿ ರದ್ದತಿಯ ಎಚ್ಚರಿಕೆ ನೀಡಲಾಗಿದೆ. ವಾಹನಗಳ ಟ್ಯಾಂಕ್‌ಗಷ್ಟೇ ಇಂಧನ ಸೀಮಿತ ಸಾಮಾನ್ಯವಾಗಿ ತುರ್ತು ಅಗತ್ಯಕ್ಕೆ ಅಥವಾ ಗಾಡಿ ರಿಪೇರಿ ಎಂಬ ಕಾರಣ ನೀಡಿ ಬಾಟಲಿ ಹಾಗೂ ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಪೆಟ್ರೋಲ್…

Read More
Koppala anjanadri hills temple gold donation creates controversy

Koppala: ಅಂಜನಾದ್ರಿಯಲ್ಲಿ ‘ಬಂಗಾರ’ದ ಗದ್ದಲ: ಕೋಟಿ ಮೌಲ್ಯದ ದೇಣಿಗೆ ಅಸಲಿಗೆ ‘ಗೋಲ್ಡ್ ಪ್ಲೇಟೆಡ್’!?

ಕೊಪ್ಪಳ: ಹನುಮಂತನ ಜನ್ಮಕ್ಷೇತ್ರ ಅಂಜನಾದ್ರಿ ಬೆಟ್ಟಕ್ಕೆ ಹರಕೆಯಾಗಿ ಬಂದಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಆಭರಣಗಳು ಈಗ ದೊಡ್ಡ (Koppala) ವಿವಾದವನ್ನೇ ಸೃಷ್ಟಿಸಿವೆ. 2.50 ಕೋಟಿ ರೂಪಾಯಿ ಬೆಲೆಬಾಳುವ ಬಂಗಾರದ ವಸ್ತುಗಳೆಂದು ಅದ್ದೂರಿಯಾಗಿ ನೀಡಲಾಗಿದ್ದ ದೇಣಿಗೆಯ ಅಸಲಿ ಬಣ್ಣ ಈಗ ಬಯಲಾಗಿದ್ದು, ಜಿಲ್ಲಾಡಳಿತವು ದಾನಿ ಮಹೇಶ್ ರೆಡ್ಡಿ ಅವರಿಗೆ ಅಧಿಕೃತ ದಾಖಲೆ ಸಲ್ಲಿಸುವಂತೆ ನೋಟಿಸ್ ನೀಡಿದೆ. ಅಂಜನಾದ್ರಿಗೆ ಬಂದಿತ್ತು ಭರ್ಜರಿ ಉಡುಗೊರೆ ಇತ್ತೀಚೆಗಷ್ಟೇ ಹೈದರಾಬಾದ್ ಮೂಲದ ಎಎಂಆರ್ ಸಮೂಹದ ಮುಖ್ಯಸ್ಥ ಮಹೇಶ್ ರೆಡ್ಡಿ ಅವರು, ಶಾಸಕ ಜನಾರ್ದನ ರೆಡ್ಡಿ…

Read More
new policy in Excise department from Karnataka government

New Policy: ಮದ್ಯ ಪ್ರಿಯರೇ ಗಮನಿಸಿ: ಕರ್ನಾಟಕದಲ್ಲಿ ಇಂದಿನಿಂದ ಹೊಸ ಅಬಕಾರಿ ನೀತಿ ಜಾರಿ – ಯಾವುದರ ಬೆಲೆ ಏರಿಕೆ? ಯಾವುದು ಇಳಿಕೆ?

ಬೆಂಗಳೂರು: ರಾಜ್ಯದ ಮದ್ಯದ ಮಾರುಕಟ್ಟೆಯಲ್ಲಿ ಇಂದಿನಿಂದ ಹೊಸ ಯುಗ ಆರಂಭವಾಗಿದೆ. ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣವನ್ನು ಆಧರಿಸಿ ತೆರಿಗೆ ವಿಧಿಸುವ (Alcohol-in-Beverage) ಐತಿಹಾಸಿಕ (New Policy) ತೀರ್ಮಾನವನ್ನು ಸರ್ಕಾರ ಜಾರಿಗೆ ತಂದಿದೆ. ಈ ಮೂಲಕ 60 ವರ್ಷ ಹಳೆಯದಾದ ತೆರಿಗೆ ಪದ್ಧತಿಯನ್ನು ಕೈಬಿಟ್ಟಿರುವ ಕರ್ನಾಟಕ, ದೇಶದಲ್ಲೇ ಇಂತಹ ವಿನೂತನ ಪ್ರಯೋಗ ಮಾಡಿದ ಮೊದಲ ರಾಜ್ಯ ಎಂಬ ಇತಿಹಾಸ ನಿರ್ಮಿಸಿದೆ. ಬಡವರಿಗೆ ಬೆಲೆ (New Policy) ಏರಿಕೆ ಬಿಸಿ, ಶ್ರೀಮಂತರಿಗೆ ಖುಷಿ! ಈ ಹೊಸ ಅಬಕಾರಿ ನೀತಿಯು ಮದ್ಯದ ಬೆಲೆಯಲ್ಲಿ…

Read More
Priyank Kharge accused bjp and rss using lok bhavan as their office

Priyank Kharge: ಲೋಕಭವನ ಬಿಜೆಪಿ-ಆರ್‌ಎಸ್‌ಎಸ್‌ ಕಚೇರಿಯಾಗಿದೆ: ಪ್ರಿಯಾಂಕ್‌ ಖರ್ಗೆ

ಕಲಬುರಗಿ: ರಾಜ್ಯಪಾಲರ ಕಚೇರಿಗಳು ಕೇವಲ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಅಡ್ಡೆಗಳಾಗಿ ಮಾರ್ಪಟ್ಟಿವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಕಟುವಾಗಿ ಟೀಕಿಸಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರವು ರಾಜ್ಯಪಾಲರ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಬಿಜೆಪಿಯೇತರ ರಾಜ್ಯ ಸರ್ಕಾರಗಳಿಗೆ ತೊಂದರೆ ನೀಡುತ್ತಿದೆ ಎಂದು ದೂರಿದರು. ತಮಿಳುನಾಡಿನ ಪ್ರಚಲಿತ ರಾಜಕೀಯ ಬಿಕ್ಕಟ್ಟಿನ ಕುರಿತು ಪ್ರತಿಕ್ರಿಯಿಸಿದ ಸಚಿವರು, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದವರನ್ನು ಸರ್ಕಾರ ರಚಿಸಲು ಕರೆಯುವುದು ಸಾಂವಿಧಾನಿಕ ಪದ್ಧತಿ. ಆದರೆ ಅಲ್ಲಿನ ರಾಜ್ಯಪಾಲರು…

Read More
High Court takes class to KKRTC on accident case

High Court: KKRTCಗೆ ಹೈಕೋರ್ಟ್‌ ತರಾಟೆ, 25 ಸಾವಿರ ದಂಡ

ಬೆಂಗಳೂರು: ಅಪಘಾತದ ಪ್ರಕರಣವೊಂದರಲ್ಲಿ ಸತ್ಯಾಂಶಗಳನ್ನು ಮುಚ್ಚಿಟ್ಟು, ನ್ಯಾಯಾಲಯದ ಹಾದಿ ತಪ್ಪಿಸಲು ಯತ್ನಿಸಿದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (KKRTC) ಹೈಕೋರ್ಟ್ (High Court) 25,000 ರೂಪಾಯಿ ದಂಡ ವಿಧಿಸಿ ಬಿಸಿ ಮುಟ್ಟಿಸಿದೆ. ಘಟನೆಯ ವಿವರ: 2023ರ ಜೂನ್ ತಿಂಗಳಲ್ಲಿ ಕಂದಾಯ ಇಲಾಖೆಯ ಉದ್ಯೋಗಿ ವಿನೋದ್ ಕುಮಾರ್ ಅವರು ಕೆಕೆಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ಚಾಲಕ ಅತಿ ವೇಗವಾಗಿ ತಿರುವು ಪಡೆದ ಪರಿಣಾಮ ಬಸ್ಸಿನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದರು. ಈ ಸಂಬಂಧ ಕಲಬುರಗಿಯ ನ್ಯಾಯಮಂಡಳಿಯು ಮೃತರ ಕುಟುಂಬಕ್ಕೆ 1.1…

Read More
Biometric made mandatory in Parappana Agrahara

Parappana Agrahara: ಪರಪ್ಪನ ಅಗ್ರಹಾರದಲ್ಲಿ ಹೈಟೆಕ್‌ ಭದ್ರತೆ, ಬಯೋಮೆಟ್ರಿಕ್‌ ಜಾರಿ

ಬೆಂಗಳೂರು: ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ಅಕ್ರಮಗಳಿಗೆ ಪೂರ್ಣವಿರಾಮ ಇಡಲು ಕಾರಾಗೃಹ ಇಲಾಖೆ ಈಗ ತಂತ್ರಜ್ಞಾನದ ಮೊರೆ ಹೋಗಿದ್ದು, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಹೊಸ ಭದ್ರತಾ ವ್ಯವಸ್ಥೆಗಳನ್ನು ಜಾರಿಗೊಳಿಸುತ್ತಿದೆ. ಈ ಕುರಿತ ವಿವರ ಇಲ್ಲಿದೆ: ಹೈಟೆಕ್ ಭದ್ರತೆಗೆ 2.25 ಕೋಟಿ ವೆಚ್ಚ: ಕಾರಾಗೃಹದಲ್ಲಿ ಕೈದಿಗಳ ಚಲನವಲನದ ಮೇಲೆ ಹದ್ದಿನ ಕಣ್ಣಿಡಲು ಇಲಾಖೆಯು 2.25 ಕೋಟಿ ರೂಪಾಯಿ ವೆಚ್ಚದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅಳವಡಿಸಿದೆ. ಈಗಾಗಲೇ ಎಐ (AI) ಕ್ಯಾಮೆರಾ ಮತ್ತು ಡಿಜಿಟಲ್ ಟ್ರ್ಯಾಕಿಂಗ್ ವ್ಯವಸ್ಥೆಗಳಿದ್ದರೂ, ಅಕ್ರಮಗಳನ್ನು ಸಂಪೂರ್ಣವಾಗಿ…

Read More
government ordered to buy sunflower in support price minister informed

Support Price: ರೈತರಿಗೆ ಆಸರೆಯಾದ ಸರ್ಕಾರ: ಸೂರ್ಯಕಾಂತಿ ಖರೀದಿಗೆ ಮುಹೂರ್ತ ನಿಗದಿ; ಕಬ್ಬಿನ ದರದಲ್ಲೂ ಏರಿಕೆ!

ಬೆಂಗಳೂರು: ರಾಜ್ಯದ ಕೃಷಿಕರ ಹಿತದೃಷ್ಟಿಯಿಂದ ಸರ್ಕಾರ ಎರಡು ಪ್ರಮುಖ ಘೋಷಣೆಗಳನ್ನು ಮಾಡಿದೆ. ಸೂರ್ಯಕಾಂತಿ ಬೆಳೆಗೆ ಬೆಂಬಲ ಬೆಲೆ ಘೋಷಿಸುವ ಜೊತೆಗೆ, ಕಬ್ಬು ಬೆಳೆಗಾರರಿಗೆ ನೀಡುವ ದರವನ್ನು (Support Price) ಹೆಚ್ಚಳ ಮಾಡಲಾಗಿದೆ. ಸೂರ್ಯಕಾಂತಿ ಬೆಳೆಗಾರರಿಗೆ ಸಿಕ್ಕಿತು ಬೆಂಬಲ: 2025-26ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಸೂರ್ಯಕಾಂತಿ ಬೆಳೆದಿರುವ ರೈತರಿಗಾಗಿ ಸಚಿವ ಶಿವಾನಂದ ಪಾಟೀಲ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಆತಂಕ ದೂರ ಮಾಡಲು, ಪ್ರತಿ ಕ್ವಿಂಟಾಲ್‌ಗೆ 7,721 ರೂಪಾಯಿ ನಿಗದಿಪಡಿಸಿ ಸರ್ಕಾರವೇ ನೇರವಾಗಿ ಖರೀದಿಸಲು…

Read More