TOP NEWS
HD kumaraswamy questions about Vijay tvk guarantees

HD Kumaraswamy: ವಿಜಯ್ ಭರವಸೆಗಳಿಗೆ ಬಜೆಟ್ ಅಡ್ಡಿ; ದೇವರೇ ಕಾಪಾಡಬೇಕು ಎಂದ ಹೆಚ್‌ಡಿಕೆ

ಬೆಂಗಳೂರು: ತಮಿಳುನಾಡಿನಲ್ಲಿ ಅಧಿಕಾರ ಹಿಡಿಯಲು ಸಜ್ಜಾಗಿರುವ ನಟ ವಿಜಯ್ ಅವರ ರಾಜಕೀಯ ನಡೆಗಳ ಬಗ್ಗೆ ಅತ್ತ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಆರ್ಥಿಕ ಆತಂಕ ವ್ಯಕ್ತಪಡಿಸಿದ್ದರೆ, ಇತ್ತ ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರು ಸಂವಿಧಾನಬದ್ಧ ಕ್ರಮಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆರ್ಥಿಕ ಅಸಾಧ್ಯತೆಗಳ ಬಗ್ಗೆ ಕುಮಾರಸ್ವಾಮಿ ಪ್ರಶ್ನೆ: ತಮಿಳುನಾಡಿನ ರಾಜಕೀಯ ಬದಲಾವಣೆಗಳ ಕುರಿತು ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ ಅವರು, “ತಮಿಳು ಜನತೆ ಸಿನಿಮೀಯ ನಾಯಕರನ್ನು ಮೊದಲಿನಿಂದಲೂ ಆರಾಧಿಸಿಕೊಂಡು ಬಂದಿದ್ದಾರೆ. ಆದರೆ ವಿಜಯ್ ನೀಡಿರುವ ಭರವಸೆಗಳು…

Read More
kerala congress leader tried to hug new lady MLA forcefully

Kerala: ಶಾಸಕಿಯ ಆಲಿಂಗನಕ್ಕೆ ಯತ್ನಿಸಿದ ಹಿರಿಯ ನಾಯಕ: ಕಾಂಗ್ರೆಸ್ ಕಚೇರಿಯಲ್ಲಿ ನಡೆದಿದ್ದೇನು?

ತಿರುವನಂತಪುರ: ಕೊಲ್ಲಂ ಕ್ಷೇತ್ರದ ನೂತನ ಶಾಸಕಿ ಬಿಂದು ಕೃಷ್ಣ ಅವರು ಚುನಾವಣಾ ಗೆಲುವಿನ ನಂತರ ಪಕ್ಷದ ಕಚೇರಿಗೆ ಭೇಟಿ ನೀಡಿದ್ದಾಗ ಈ ಮುಜುಗರದ (Kerala) ಸನ್ನಿವೇಶ ಎದುರಾಗಿದೆ. ಕಚೇರಿಯಲ್ಲಿದ್ದ ನಾಯಕರಿಗೆ ಬಿಂದು ಕೃಷ್ಣ ಅವರು ಕೈಮುಗಿದು ಅಥವಾ ಹಸ್ತಲಾಘವ ಮಾಡುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಹಿರಿಯ ನಾಯಕ ಚೆರಿಯನ್ ಫಿಲಿಪ್ ಅವರು ಎದುರಾದಾಗ ಬಿಂದು ಅವರು ಕೈಕುಲುಕಲು ಮುಂದಾಗಿದ್ದಾರೆ. ಆದರೆ, ಬಿಂದು ಅವರ ಹಸ್ತಲಾಘವವನ್ನು ಗಮನಿಸದ ಫಿಲಿಪ್, ಅವರನ್ನು ಬಲವಂತವಾಗಿ ಅಪ್ಪಿಕೊಳ್ಳಲು ಪ್ರಯತ್ನಿಸಿದ್ದಾರೆ….

Read More
good news indian railway releases bullet train route maps

Bullet Train: ಕರ್ನಾಟಕಕ್ಕೆ ಮೂರು ಬುಲೆಟ್ ರೈಲು ಮಾರ್ಗಗಳ ನಕ್ಷೆ ರಿಲೀಸ್: ಮೈಸೂರು-ಬೆಂಗಳೂರು ನಡುವೆ ಅತೀ ವೇಗದ ಪ್ರಯಾಣ!

ಬೆಂಗಳೂರು: ರಾಜ್ಯದ ಜನತೆ ಬಹುಕಾಲದಿಂದ ಕಾಯುತ್ತಿದ್ದ ಹೈಸ್ಪೀಡ್ ರೈಲು ಯೋಜನೆಗಳ ಅಧಿಕೃತ ಮಾರ್ಗಸೂಚಿ ಹೊರಬಿದ್ದಿದೆ. ಬೆಂಗಳೂರಿನಿಂದ ನೆರೆಯ ರಾಜಧಾನಿಗಳಾದ ಹೈದರಾಬಾದ್ ಮತ್ತು ಚೆನ್ನೈಗೆ ಸಂಪರ್ಕ ಕಲ್ಪಿಸುವ ಯೋಜನೆಗಳ ಜೊತೆಗೆ, ಈಗ ಮೈಸೂರು-ಬೆಂಗಳೂರು ಹೈಸ್ಪೀಡ್ (Bullet Train) ಮಾರ್ಗದ ನಕ್ಷೆಯೂ ಸಿದ್ಧವಾಗಿರುವುದು ವಿಶೇಷ. ಮೈಸೂರು ಮಾರ್ಗದ ಹೈಲೈಟ್ಸ್: ಸಂಸದ ಯದುವೀರ್ ಒಡೆಯರ್ ಅವರ ಪ್ರಸ್ತಾವನೆಗೆ ಓಗೊಟ್ಟಿರುವ ಕೇಂದ್ರ ಸರ್ಕಾರ, ಚೆನ್ನೈ ಬುಲೆಟ್ ರೈಲು ಯೋಜನೆಯನ್ನು ಮೈಸೂರಿನವರೆಗೆ ವಿಸ್ತರಿಸಲು ಮುಂದಾಗಿದೆ. ಸುಮಾರು 157 ಕಿ.ಮೀ ಉದ್ದದ ಈ ಮಾರ್ಗವು ಮೈಸೂರಿನಿಂದ…

Read More
g parameshwar statement on ramachandra rao suspension revoke

G Parameshwar: ಡಿಜಿಪಿ ಅಮಾನತು ಹಿಂಪಡೆತ ಹಾಗೂ ಐಪಿಎಲ್ ವಿವಾದ: ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ

ಬೆಂಗಳೂರು: ರಾಜ್ಯದಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಎರಡು ಪ್ರಮುಖ ವಿಚಾರಗಳ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ (G Parameshwar) ಅವರು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಡಿಜಿಪಿ ರಾಮಚಂದ್ರರಾವ್ ಅವರ ಅಮಾನತು ಆದೇಶ ವಾಪಸ್ ಹಾಗೂ ಐಪಿಎಲ್ ಪಂದ್ಯಗಳು ಬೆಂಗಳೂರಿನಿಂದ ಕೈತಪ್ಪಿರುವ ಬಗ್ಗೆ ಅವರು ಸುದೀರ್ಘವಾಗಿ ಮಾತನಾಡಿದ್ದಾರೆ. ನಿವೃತ್ತಿ ಹಿನ್ನೆಲೆ ಡಿಜಿಪಿ ಅಮಾನತು ವಾಪಸ್: ಡಿಜಿಪಿ ರಾಮಚಂದ್ರರಾವ್ ಅವರು ಇದೇ ತಿಂಗಳ ಕೊನೆಯಲ್ಲಿ ನಿವೃತ್ತರಾಗುತ್ತಿರುವುದರಿಂದ, ಅವರ ಅಮಾನತನ್ನು ಮುಖ್ಯಮಂತ್ರಿಗಳ ಒಪ್ಪಿಗೆಯೊಂದಿಗೆ ರದ್ದುಗೊಳಿಸಲಾಗಿದೆ. “ನಿವೃತ್ತಿಯ ನಂತರ ಪಿಂಚಣಿ…

Read More
Protest against nuclear power plant in sagara taluk ex mla haratalu halappa participated

Sagara: ಅಣುವಿದ್ಯುತ್ ಸ್ಥಾವರ ವಿರೋಧಿಸಿ ಪ್ರತಿಭಟನೆ, ಮಾಜಿ ಶಾಸಕ ಹರತಾಳು ಹಾಲಪ್ಪ ಭಾಗಿ

ಶಿವಮೊಗ್ಗ: ಸಾಗರ (Sagara) ತಾಲ್ಲೂಕು ಅವಿನಹಳ್ಳಿ ಹೋಬಳಿ ಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಸೂರು ಗ್ರಾಮದಲ್ಲಿ ಅಣುವಿದ್ಯುತ್ ಸ್ಥಾವರ ನಿರ್ಮಿಸುವ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಉದ್ದೇಶವನ್ನು ವಿರೋಧಿಸಿ ಇಂದು ಪ್ರತಿಭಟನೆ ನಡೆಸಲಾಗಿದೆ. ಮಾಜಿ ಶಾಸಕ ಹರತಾಳು ಹಾಲಪ್ಪ ಭಾಗಿ ಜನಹೋರಾಟ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ಹೋರಾಟದಲ್ಲಿ ಸಾಗರ ತಾಲೂಕಿನ ಮಾಜಿ ಶಾಸಕ ಹರತಾಳು ಹಾಲಪ್ಪ ಸಹ ಭಾಗವಹಿಸಿ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಅಲ್ಲದೇ, ಈ ಹೋರಾಟದಲ್ಲಿ ಜನರ ಪರವಾಗಿ ನಿಲ್ಲುವುದಾಗಿ ಭರವಸೆ ಸಹ…

Read More
elephant arjuna memorial inaugurated in Hassana

Arjuna: ಗಜರಾಜ ಅರ್ಜುನನ ನೆನಪು ಅಮರ: ದಬ್ಬಳಕಟ್ಟೆಯಲ್ಲಿ ಭವ್ಯ ಸ್ಮಾರಕ ಉದ್ಘಾಟಿಸಿದ ಸಚಿವ ಈಶ್ವರ ಖಂಡ್ರೆ

ಯಸಳೂರು (ಹಾಸನ): ಮೈಸೂರು ದಸರಾದಲ್ಲಿ ಸತತ ಎಂಟು ಬಾರಿ ಅಂಬಾರಿ ಹೊತ್ತು ನಾಡದೇವತೆಯ ಸೇವೆ ಮಾಡಿದ್ದ ವೀರಗಜ ‘ಅರ್ಜುನ’ನ (Arjuna) ಸ್ಮಾರಕವು ಕೊನೆಗೂ ಲೋಕಾರ್ಪಣೆಯಾಗಿದೆ. ಹಾಸನ ಮತ್ತು ಕೊಡಗು ಜಿಲ್ಲೆಯ ಗಡಿಭಾಗದ ದಬ್ಬಳಕಟ್ಟೆಯಲ್ಲಿ ನಿರ್ಮಾಣವಾಗಿರುವ ಈ ಸ್ಮಾರಕವನ್ನು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಉದ್ಘಾಟಿಸಿ, ಅಪ್ರತಿಮ ಆನೆಗೆ ಗೌರವ ಸಲ್ಲಿಸಿದರು. ವೀರಮರಣ ಹೊಂದಿದ ಸ್ಥಳದಲ್ಲೇ ಸ್ಮಾರಕ: 2023ರ ಡಿಸೆಂಬರ್‌ನಲ್ಲಿ ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆ ವೇಳೆ ಅರ್ಜುನ ಮರಣ ಹೊಂದಿದ್ದನು. ಆತನ ಅಂತ್ಯಕ್ರಿಯೆ ನಡೆದ ಸ್ಥಳದಲ್ಲೇ…

Read More
davanagere south mla samarth shamanur first interaction with media

Davanagere: ದಾವಣಗೆರೆ ದಕ್ಷಿಣದಲ್ಲಿ ಸಮರ್ಥ್ ಶಾಮನೂರು ವಿಜಯೋತ್ಸವ: ಅಜ್ಜನ ಹಾದಿಯಲ್ಲೇ ಅಜಾತಶತ್ರು ಸಂಕಲ್ಪ, ಕಾಂಗ್ರೆಸ್ ಬಣ ರಾಜಕೀಯ ಚರ್ಚೆ ಚುರುಕು!

ದಾವಣಗೆರೆ: ದಾವಣಗೆರೆ (Davanagere) ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಸುಮಾರು 7,000 ಮತಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿರುವ ಸಮರ್ಥ್ ಮಲ್ಲಿಕಾರ್ಜುನ್ (ಶಾಮನೂರು), ಶಾಸಕರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಜನರ ಮುಂದೆ ಬಂದಿದ್ದಾರೆ. ಅಜ್ಜ ಶಾಮನೂರು ಶಿವಶಂಕರಪ್ಪ ಅವರಂತೆಯೇ ಸರ್ವರನ್ನೂ ಪ್ರೀತಿಸುವ ‘ಅಜಾತಶತ್ರು’ ನಾಯಕನಾಗಿ ಹೊರಹೊಮ್ಮುವುದು ನನ್ನ ಆಶಯ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸದಾ ಲಭ್ಯವಿರುವ ಶಾಸಕ: ಕ್ಷೇತ್ರದ ಜನರ ಮೇಲೆ ಅತೀವ ವಿಶ್ವಾಸ ವ್ಯಕ್ತಪಡಿಸಿದ ಸಮರ್ಥ್, “ನನ್ನ ಮೇಲೆ ನಂಬಿಕೆಯಿಟ್ಟು ಮತ ನೀಡಿದ ಜನತೆಗೆ…

Read More