TOP NEWS
MLC election cross voting BY Vijayendra position at risk

BJP: ವಿಧಾನಪರಿಷತ್ ಚುನಾವಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಆಂತರಿಕ ಸ್ಫೋಟ; ಹೈಕಮಾಂಡ್ ಕೋಪಕ್ಕೆ ಗುರಿಯಾದರೇ ವಿಜಯೇಂದ್ರ?

ಬೆಂಗಳೂರು: ಇತ್ತೀಚೆಗೆ ನಡೆದ ವಿಧಾನಸಭೆಯಿಂದ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದ ಬಳಿಕ ರಾಜ್ಯ ಬಿಜೆಪಿಯಲ್ಲಿ ತೀವ್ರ ರಾಜಕೀಯ ವಿಪ್ಲವ ಆರಂಭವಾಗಿದೆ. ಮೈತ್ರಿಕೂಟದ ಶಾಸಕರು ನಡೆಸಿದ್ದಾರೆನ್ನಲಾದ ಅಡ್ಡ ಮತದಾನವು (Cross Voting) ಕಮಲ (BJP) ಪಾಳಯಕ್ಕೆ ಭಾರಿ ಮುಜುಗರ ತಂದಿಟ್ಟಿದೆ. ಇದರ ನೇರ ಪರಿಣಾಮ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹುದ್ದೆಯ ಮೇಲಾಗುವ ಮುನ್ಸೂಚನೆ ಸಿಕ್ಕಿದ್ದು, ಅವರ ನಾಯಕತ್ವದ ಭವಿಷ್ಯ ಈಗ ದೆಹಲಿ ವರಿಷ್ಠರ ಕೈಯಲ್ಲಿದೆ. ರಾಜ್ಯ ಘಟಕದ ಈ ಗೊಂದಲ ಹಾಗೂ ಶಿಸ್ತು ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿರುವ…

Read More
UT Khader promises to start 247 helpline for patients

UT Khader: ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆಗೆ ಬ್ರೇಕ್: ರೋಗಿಗಳ ನೆರವಿಗೆ 24 ಗಂಟೆ ಸಹಾಯವಾಣಿ!

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಬರುವ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲ ಕಲ್ಪಿಸಲು ಆರೋಗ್ಯ ಇಲಾಖೆಯು ಮಹತ್ವದ ಕ್ರಮವೊಂದನ್ನು ಕೈಗೊಂಡಿದೆ. ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸರಿಯಾದ ಮಾಹಿತಿ ಸಿಗದೆ ಅಲೆದಾಡುವುದು, ಸಿಬ್ಬಂದಿಯ ಉದ್ಧಟತನದ ವರ್ತನೆ ಹಾಗೂ ವಿವಿಧ ಗೊಂದಲಗಳಿಗೆ ಪೂರ್ಣವಿರಾಮ ಹಾಕಲು ದಿನದ 24 ಗಂಟೆಯೂ ಲೈವ್ ಆಗಿ ಕೆಲಸ ಮಾಡುವ ವಿಶೇಷ ಸಹಾಯವಾಣಿಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ (UT Khader) ಪ್ರಕಟಿಸಿದ್ದಾರೆ. ವಿಶೇಷವೆಂದರೆ, ಈ ಸಹಾಯವಾಣಿಯು ಯಾವುದೇ…

Read More
Minister UT khader statement about jana aushadi medical shops

UT Khader: ಜನೌಷಧಿ ಕೇಂದ್ರಗಳಿಗೆ ಇಲಾಖೆ ಭೇಟಿ: ತಪ್ಪು ಮಾಡದವರು ಹೆದರಬೇಕಿಲ್ಲ ಎಂದ ಸಚಿವ ಯು.ಟಿ.ಖಾದರ್

ಬೆಂಗಳೂರು: ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಜನೌಷಧಿ ಕೇಂದ್ರಗಳ ಸದ್ಯದ ಸ್ಥಿತಿಗತಿ ಹಾಗೂ ಅಲ್ಲಿನ ಆಡಳಿತಾತ್ಮಕ ಲೋಪದೋಷಗಳನ್ನು ಪತ್ತೆಹಚ್ಚಲು ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳ ವಿಶೇಷ ತಂಡವು ಮೈದಾನಕ್ಕೆ ಇಳಿದಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ (UT Khader) ಪ್ರಕಟಿಸಿದ್ದಾರೆ. ಹಠಾತ್ ದಾಳಿ ನಡೆಸಿ ಭಯ ಹುಟ್ಟಿಸುವುದು ನಮ್ಮ ಉದ್ದೇಶವಲ್ಲ, ಬದಲಿಗೆ ಈ ವ್ಯವಸ್ಥೆಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸುವುದಷ್ಟೇ ನಮ್ಮ ಗುರಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ತಪ್ಪು ಮಾಡಿದವರು ಕ್ರಮವನ್ನ ವಿರೋಧಿಸುತ್ತಿದ್ದಾರೆ ಈ ಕುರಿತು ವಿಧಾನಸೌಧದಲ್ಲಿ ವಿವರಣೆ ನೀಡಿದ ಸಚಿವರು, ಜನೌಷಧಿ…

Read More
dk shivakumar slams opposition leaders regarding Bidadi township

DK Shivakumar: ಕುಮಾರಸ್ವಾಮಿ ವಿರುದ್ಧ ಸಿಎಂ ಡಿಕೆಶಿ ವಾಗ್ದಾಳಿ: ‘ಭೂಮಿ ನೋಟಿಫೈ ಮಾಡಿದ್ದೇ ಜೆಡಿಎಸ್, ಈಗ ನಾಟಕ ಆಡುತ್ತಿದ್ದಾರೆ’

ಬೆಂಗಳೂರು: ಬಿಡದಿ ಭಾಗದಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ನಡೆಯುತ್ತಿರುವ ಜಮೀನು ಸ್ವಾಧೀನ ಪ್ರಕ್ರಿಯೆ ಹಾಗೂ ಇದರ ವಿರುದ್ಧ ಜೆಡಿಎಸ್ ಹಮ್ಮಿಕೊಂಡಿರುವ ಹೋರಾಟದ ವಿರುದ್ಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಟೀಕೆಗಳಿಗೆ ಕಡಕ್ ಕೌಂಟರ್ ನೀಡಿರುವ ಸಿಎಂ, ವಿರೋಧ ಪಕ್ಷಗಳು ಕೇವಲ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ಇಡೀ ವಿಷಯವನ್ನು ವಿವಾದ ಮಾಡುತ್ತಿವೆ ಎಂದು ಜರೆದಿದ್ದಾರೆ. ಕುಮಾರಸ್ವಾಮಿ ಆಧಾರ ರಹಿತ ಆರೋಪ ಬಿಡದಿ ಜಮೀನು ವಿಚಾರದಲ್ಲಿ ಕುಮಾರಸ್ವಾಮಿ…

Read More
cm dk shivakumar gave green signal to start safari

Bus Fare: ಬಸ್‌ ದರ ಏರಿಕೆಗೆ ಸಾರಿಗೆ ನಿಗಮ ಪ್ರಸ್ತಾವನೆ, ಸಿಎಂ ಹೇಳಿದ್ದೇನು?

ಬೆಂಗಳೂರು: ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಜನಸಾಮಾನ್ಯರಿಗೆ ಈಗ ಸಾರಿಗೆ ವೆಚ್ಚದ ಭಾರಿ ಆಘಾತ (Bus Fare) ಎದುರಾಗಿದೆ. ಒಂದು ಕಡೆ ರಾಜ್ಯದ ಸರ್ಕಾರಿ ಸಾರಿಗೆ ನಿಗಮಗಳು ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಿದ್ದರೆ, ಇನ್ನೊಂದೆಡೆ ಖಾಸಗಿ ಬಸ್ ಮಾಲೀಕರ ಒಕ್ಕೂಟವು ಈಗಾಗಲೇ ಪ್ರಯಾಣ ದರವನ್ನು ಅಧಿಕೃತವಾಗಿ ಹೆಚ್ಚಿಸಿ ಸಾರ್ವಜನಿಕರಿಗೆ ಗಾಯದ ಮೇಲೆ ಬರೆ ಎಳೆದಿದೆ. ಡಿಸೇಲ್‌ ದರ ಏರಿಕೆ ಕಾರಣ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

Read More
dk shivakumar cabinet allowed 15 days to get permanent electricity

DK Shivakumar: ಹಳೆಯ ಕಟ್ಟಡಗಳ ಮಾಲೀಕರಿಗೆ ಶಾಶ್ವತ ವಿದ್ಯುತ್ ಸೌಲಭ್ಯ

ಬೆಂಗಳೂರು: ದಶಕಗಳಿಂದ ತಾತ್ಕಾಲಿಕ ವಿದ್ಯುತ್ ಸಂಪರ್ಕದ ಮೇಲೆಯೇ ಅವಲಂಬಿತವಾಗಿದ್ದ ಹಳೆಯ ಕಟ್ಟಡಗಳ ಮಾಲೀಕರಿಗೆ ನಿರಾಳತೆ ನೀಡುವಂತಹ ಮಹತ್ವದ ತೀರ್ಮಾನವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ನೇತೃತ್ವದ ಸಚಿವ ಸಂಪುಟ ಕೈಗೊಂಡಿದೆ. ಇಂತಹ ಕಟ್ಟಡಗಳಿಗೆ ನಿಯಮಾನುಸಾರ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸಲು ಸರ್ಕಾರ ಕೊನೆಯದಾಗಿ 15 ದಿನಗಳ ವಿಶೇಷ ಗಡುವನ್ನು ನೀಡಿದೆ. ಯಾರಿಗೆಲ್ಲಾ ಅವಕಾಶ ನೀಡಲಾಗಿದೆ? ಈ ಸೌಲಭ್ಯವನ್ನು ಪಡೆದುಕೊಳ್ಳಲು ಸರ್ಕಾರ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದೆ. 2000ನೇ ಇಸವಿಯ ಮೇ 31ಕ್ಕೂ ಮುನ್ನ ನಿರ್ಮಾಣಗೊಂಡು, ಪ್ರಸ್ತುತ…

Read More
Good News new Karnataka bhavan to construct in new delhi for UPSC and IAS students

Good News: ದೆಹಲಿಯಲ್ಲಿ ನಾಗರಿಕ ಸೇವೆಗಳ ಆಕಾಂಕ್ಷಿಗಳಿಗೆ ಹೊಸ ಆಸರೆ: ₹80 ಕೋಟಿ ವೆಚ್ಚದ ‘ಕರ್ನಾಟಕ ಭವನ-4’ ಕ್ಕೆ ಕ್ಯಾಬಿನೆಟ್ ಅಸ್ತು

ಬೆಂಗಳೂರು: ದೇಶದ ರಾಜಧಾನಿ ದೆಹಲಿಗೆ ತೆರಳಿ ಯುಪಿಎಸ್‌ಸಿ ಪರೀಕ್ಷೆಗಳಿಗೆ ತರಬೇತಿ ಪಡೆಯುವ ರಾಜ್ಯದ ಪ್ರತಿಭಾವಂತ ಯುವಜನತೆಗೆ ಸರ್ಕಾರ ಸಿಹಿ ಸುದ್ದಿ (Good News) ನೀಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನವದೆಹಲಿಯಲ್ಲಿ ಹೊಸದಾಗಿ ‘ಕರ್ನಾಟಕ ಭವನ-4’ ಕಟ್ಟಡವನ್ನು ನಿರ್ಮಿಸಲು ಹಸಿರು ನಿಶಾನೆ ನೀಡಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರದ ನಿರ್ಧಾರ ಐಎಎಸ್ ಮತ್ತು ಐಪಿಎಸ್‌ನಂತಹ ಉನ್ನತ ಹುದ್ದೆಗಳ ಕನಸು ಹೊತ್ತು ದೆಹಲಿಯಲ್ಲಿ ಬೀಡುಬಿಡುವ ಕರ್ನಾಟಕದ…

Read More