CM Siddaramaiah: ಹಂಪಿ ಉತ್ಸವಕ್ಕೆ ಸ್ಥಿರ ದಿನಾಂಕ ನಿಗದಿ ಮಾಡಿದ ಸಿಎಂ ಸಿದ್ದರಾಮಯ್ಯ

CM Siddaramaiah fixed hampi utsava date for every year

ವಿಜಯನಗರ: ಹಂಪಿ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ (CM Siddaramaiah) ಅವರು. ಸ್ಥಿರ  ದಿನಾಂಕ ಘೋಷಣೆ ಮಾಡಿದ್ದು, ಇನ್ನು ಮುಂದೆ   ಪ್ರತಿವರ್ಷ ನವೆಂಬರ್  3, 4 ಮತ್ತು 5ರಂದು   ಹಂಪಿ ಉತ್ಸವ  ಆಚರಿಸುವುದಾಗಿ ತಿಳಿಸಿದರು.

ಹಂಪಿ ಉತ್ಸವ  ಉದ್ಘಾಟನೆ

ವಿಜಯನಗರ ಜಿಲ್ಲೆಯಲ್ಲಿ ಹಂಪಿ ಉತ್ಸವ  ಉದ್ಘಾಟಿಸಿದ  ಬಳಿಕ ಅವರು ,  ನಾಡು, ನುಡಿ ಸಂಸ್ಕೃತಿಗಳ ರಕ್ಷಣೆಗೆ ಸರ್ಕಾರ ಸದಾ ಬದ್ಧವಾಗಿದೆ. ಸರ್ಕಾರ ಆಚರಿಸುವ ಚಾಲುಕ್ಯ ಉತ್ಸವ, ಹಂಪಿ ಉತ್ಸವ, ಕಿತ್ತೂರು ಉತ್ಸವ, ಆನೆಗುಂದಿ ಉತ್ಸವ, ಮೈಸೂರು ದಸರಾ, ಕರಾವಳಿ ಉತ್ಸವಗಳು ನಾಡಿನ ಸಾಹಿತ್ಯ, ಕಲೆ, ಸಂಗೀತ ಪರಂಪರೆಗಳನ್ನು ಸಂರಕ್ಷಿಸುವ ದಿಸೆಯಲ್ಲಿ  ಮುಖ್ಯವಾಗಿವೆ ಎಂದು ಹೇಳಿದರು

ಹಂಪಿಯ ಹಿರಿಮೆ ಉತ್ಸವದಲ್ಲಿ ಕಾಣಬಹುದು

.ಸರ್ಕಾರ ಸಾಹಿತ್ಯ, ಸಂಸ್ಕೃತಿ, ಕಲೆಗಳಿಗೆ ಆದ್ಯತೆ ನೀಡುತ್ತದೆ. ವಿಜಯನಗರ ಕಾಲದಲ್ಲಿ ಸಂಪತ್ಬರಿತವಾದ ಹಂಪಿಯ ಹಿರಿಮೆಯನ್ನು ಹಂಪಿ ಉತ್ಸವದಿಂದ ತಿಳಿಯಬಹುದಾಗಿದೆ. ಜತೆಗೆ ವಿಜಯನಗರದ ಗತ ವೈಭವವನ್ನು  ಸಹ ಈ ಉತ್ಸವ  ಪ್ರತಿಬಿಂಬಿಸಲಿದೆ ಎಂದರು.

ಇದನ್ನೂ ಓದಿ: ಬೆಳಗಾವಿ ಜನರಿಗೆ ಬಂಪರ್‌ ನ್ಯೂಸ್‌, ಹೊಸ ರೈಲು ಸೇವೆ ಸದ್ಯದಲ್ಲಿ ಆರಂಭ?

Leave a Reply

Your email address will not be published. Required fields are marked *