TOP NEWS
America-Iran taunts trump in Bollywood style

America-Iran: ಬಾಲಿವುಡ್‌ ಸ್ಟೈಲ್‌ನಲ್ಲಿ ಅಮೆರಿಕಾಗೆ ಇರಾನ್‌ ಟಾಂಗ್

ಮುಂಬೈ: ಅಮೆರಿಕ ಮತ್ತು ಇರಾನ್ ನಡುವಿನ ಜಟಾಪಟಿ ಈಗ ಬಾಲಿವುಡ್ ಡೈಲಾಗ್‌ಗಳ ಮಟ್ಟಕ್ಕೆ ಬಂದು ನಿಂತಿದೆ. ಇರಾನ್‌ನ 158 ಹಡಗುಗಳನ್ನು ಅಮೆರಿಕ ಸೇನೆ ಧ್ವಂಸಗೊಳಿಸಿದೆ ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ, ಮುಂಬೈನಲ್ಲಿರುವ ಇರಾನ್ ರಾಯಭಾರ ಕಚೇರಿಯು ಶಾರುಖ್ ಖಾನ್ ಅವರ ಸಿನಿಮಾ (America-Iran) ಶೈಲಿಯಲ್ಲೇ ಖಡಕ್ ತಿರುಗೇಟು ನೀಡಿದೆ. ಸೋಮವಾರ ‘ಎಕ್ಸ್’ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ರಾಯಭಾರ ಕಚೇರಿ, ಅಮೆರಿಕಕ್ಕೆ ಎಚ್ಚರಿಕೆ ನೀಡಲು “ಓಂ ಶಾಂತಿ ಓಂ” ಸಿನಿಮಾದ ಜನಪ್ರಿಯ ಸಂಭಾಷಣೆಯನ್ನು ಬಳಸಿಕೊಂಡಿದೆ. ಸಿನಿಮಾ…

Read More
331 children infected HIV in pakistan

Pakistan: ಮಕ್ಕಳ ಜೀವನದ ಜೊತೆ ಆಸ್ಪತ್ರೆ ಸಿಬ್ಬಂದಿ ಚೆಲ್ಲಾಟ, 331 ಮಕ್ಕಳಿಗೆ HIV ಸೋಂಕು

ಇಸ್ಲಾಮಾಬಾದ್‌: ಪಾಕಿಸ್ತಾನದ (Pakistan) ಪಂಜಾಬ್ ಪ್ರಾಂತ್ಯದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ವೈದ್ಯಕೀಯ ಸಿಬ್ಬಂದಿಯ ಭೀಕರ ನಿರ್ಲಕ್ಷ್ಯ ಮುಂದುವರಿದಿದ್ದು, ನೂರಾರು ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಆಘಾತಕಾರಿ ಅಂಶ ಬಿಬಿಸಿ ನಡೆಸಿದ ತನಿಖೆಯಿಂದ ಬಹಿರಂಗವಾಗಿದೆ. ಅಲ್ಲಿನ ಟೌನ್ಸಾ ಪಟ್ಟಣದ ಟಿಎಚ್‌ಕ್ಯೂ (THQ) ಆಸ್ಪತ್ರೆಯಲ್ಲಿ ಇಂಜೆಕ್ಷನ್ ನೀಡುವಾಗ ಸುರಕ್ಷತಾ ಕ್ರಮಗಳನ್ನು ಗಾಳಿಗೆ ತೂರಿ, ಬಳಸಿದ ಸಿರಿಂಜ್‌ಗಳನ್ನೇ ಮತ್ತೆ ಬಳಸುತ್ತಿರುವುದು ರಹಸ್ಯ ಕಾರ್ಯಾಚರಣೆಯಲ್ಲಿ ಪತ್ತೆಯಾಗಿದೆ. ಮಕ್ಕಳಲ್ಲಿ ಹೆಚ್‌ಐವಿ (HIV) ಪ್ರಕರಣಗಳು ಏಕಾಏಕಿ ಹೆಚ್ಚಾದ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರೂ,…

Read More
Apollo Mysuru climbathan for world health day

Apollo: ವಿಶ್ವ ಆರೋಗ್ಯ ದಿನ ಹಿನ್ನಲೆ, ಯಶಸ್ವಿಯಾಗಿ ನಡೆದ

ಮೈಸೂರು: ವಿಶ್ವ ಆರೋಗ್ಯ ದಿನದ ಅಂಗವಾಗಿ ಅಪೋಲೊ ಆಸ್ಪತ್ರೆಯು ಚಾಮುಂಡಿ ಬೆಟ್ಟದಲ್ಲಿ “ಹಂತ ಹಂತವಾಗಿ – 1001 ಹಂತಗಳು” ಎಂಬ ಘೋಷವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ‘ಅಪೋಲೊ ಕ್ಲೈಂಬಥಾನ್ 4.0’ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. (Apollo) ಎಲ್ಲಾ ವಯೋಮಾನದ ಫಿಟ್ನೆಸ್ ಆಸಕ್ತರು ಉತ್ಸಾಹದಿಂದ ಭಾಗವಹಿಸಿದರು. ಕಾರ್ಯಕ್ರಮವು ಬೆಳಗ್ಗೆ 6:15ಕ್ಕೆ ಗಣ್ಯರ ಆಗಮನದಿಂದೊಂದಿಗೆ ಪ್ರಾರಂಭಯಿತು. ಬಳಿಕ ಜುಂಬಾ ವಾರ್ಮ್-ಅಪ್ ಕಾರ್ಯಕ್ರಮ ನಡೆಯಿತು. ನಂತರ 6:30ಕ್ಕೆ ಕ್ಲೈಂಬಥಾನ್ಗೆ ಅಧಿಕೃತ ಚಾಲನೆ ನೀಡಲಾಯಿತು. 1001 ಮೆಟ್ಟಿಲುಗಳನ್ನು ದೃಢಸಂಕಲ್ಪದೊಂದಿಗೆ ಏರಿ, ಅಂತಿಮ ಗುರಿ ತಲುಪಿದವರಿಗೆ ಪದಕಗಳನ್ನು…

Read More
Yash promoted ramayana film in international event

Yash: ವಿಶ್ವಮಟ್ಟದಲ್ಲಿ ರಾಕಿ ಬಾಯ್‌ ಅಬ್ಬರ, ರಾಮಾಯಣ ಪ್ರಚಾರ ಮಾಡಿದ ಯಶ್‌

ಬೆಂಗಳೂರು: ಭಾರತೀಯ ಚಿತ್ರರಂಗದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ ‘ರಾಮಾಯಣ’ ಸಿನಿಮಾದ ಜಾಗತಿಕ ಮಟ್ಟದ ಪ್ರಚಾರ ಕಾರ್ಯಕ್ಕೆ ಅಮೆರಿಕದಲ್ಲಿ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಲಾಸ್ ವೇಗಸ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ‘ಸಿನಿಮಾಕಾನ್ 2026’ ಮೇಳದಲ್ಲಿ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತು ರಾವಣನ ಪಾತ್ರಧಾರಿ ನಟ ಯಶ್ (Yash) ಅವರು ಈ ಕನಸಿನ ಪ್ರಾಜೆಕ್ಟ್ ಅನ್ನು ಪಾಶ್ಚಿಮಾತ್ಯ ಪ್ರೇಕ್ಷಕರಿಗೆ ಪರಿಚಯಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಮಾಧ್ಯಮಗಳೊಂದಿಗೆ ಸುದೀರ್ಘ ಸಂವಾದ ಈ ಅದ್ದೂರಿ ಕಾರ್ಯಕ್ರಮದ ಮೊದಲ ದಿನವೇ ಯಶ್ ಮತ್ತು…

Read More
Ranveer Singh to reword his apology

Ranveer Singh: ‘ಕಾಂತಾರ’ ವಿವಾದ: ಅಫಿಡವಿಟ್ ತಿದ್ದುಪಡಿ ಮಾಡಲು ನಟ ರಣವೀರ್ ಸಿಂಗ್ ಸಮ್ಮತಿ

ಬೆಂಗಳೂರು: ‘ಕಾಂತಾರ’ ಚಲನಚಿತ್ರದ ದೃಶ್ಯವೊಂದನ್ನು ಅನುಕರಿಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh), ತಮ್ಮ ಕ್ಷಮೆಯಾಚನೆ ಪತ್ರವನ್ನು (ಅಫಿಡವಿಟ್) ದೂರುದಾರರ ಸಮಾಧಾನಕ್ಕೆ ತಕ್ಕಂತೆ ತಿದ್ದುಪಡಿ ಮಾಡಲು ಒಪ್ಪಿಕೊಂಡಿದ್ದಾರೆ. ಈ ಕುರಿತು ಶುಕ್ರವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ರಣವೀರ್ ಪರ ವಕೀಲರು ನ್ಯಾಯಾಲಯಕ್ಕೆ ಈ ಭರವಸೆ ನೀಡಿದ್ದಾರೆ. ಕಳೆದ ವರ್ಷ ಮಿಮಿಕ್ರಿ ಮಾಡಿದ್ದ ನಟ ಕಳೆದ ವರ್ಷ ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ…

Read More
Crime Kerala Girl who was Missing Found Dead

CRIME: ಕೇರಳ ಬಾಲಕಿ ನಾಪತ್ತೆ ಪ್ರಕರಣ, ಮೃತದೇಹ ಪತ್ತೆ

ಚಿಕ್ಕಮಗಳೂರು: ದತ್ತಪೀಠದ ಮಾಣಿಕ್ಯಧಾರಾ ಜಲಪಾತದ ಬಳಿ ಕಳೆದ ಮಂಗಳವಾರ ನಾಪತ್ತೆಯಾಗಿದ್ದ ಕೇರಳ ಮೂಲದ 10ನೇ ತರಗತಿ ವಿದ್ಯಾರ್ಥಿನಿ ಶ್ರೀನಂದಾ (15) ಅವರ ಮೃತದೇಹ ಶುಕ್ರವಾರ (Crime) ಪತ್ತೆಯಾಗಿದೆ. ಅರಿಶಿನಗುಪ್ಪೆ ಬೆಟ್ಟದ ಸಾಲಿನ ಸಾವಿರಾರು ಅಡಿ ಆಳದ ಪ್ರಪಾತದಲ್ಲಿ ಬಾಲಕಿಯ ಶವ ಪತ್ತೆಯಾಗಿದ್ದು, ಇದರೊಂದಿಗೆ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಸುದೀರ್ಘ ಶೋಧ ಕಾರ್ಯ ಅಂತ್ಯಗೊಂಡಿದೆ. ಪೋಷಕರ ಜೊತೆ ಬಂದಿದ್ದ ಬಾಲಕಿ ಕೇರಳದ ಪಾಲಕ್ಕಾಡ್ ಜಿಲ್ಲೆಯ ಶ್ರೀನಂದಾ ಅವರು ತಮ್ಮ ಕುಟುಂಬದ ಸುಮಾರು 40 ಮಂದಿ ಸಂಬಂಧಿಕರ ಜೊತೆ ಪ್ರವಾಸಕ್ಕೆ…

Read More

Supreme Court: ಜಾತಿ ಗಣತಿ ತಡೆಗೆ ಸುಪ್ರೀಂ ಕೋರ್ಟ್ ನಿರಾಕರಣೆ: ಅರ್ಜಿದಾರರ ಭಾಷೆಗೆ ಸಿಜೆಐ ಗರಂ

ನವದೆಹಲಿ: ದೇಶದಲ್ಲಿ ಮುಂಬರುವ ಜಾತಿ ಗಣತಿಯನ್ನು ನಿಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿದೆ. ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯವು, ಅರ್ಜಿಯಲ್ಲಿ ಬಳಸಿರುವ ಭಾಷೆಯ ಬಗ್ಗೆ ಅರ್ಜಿದಾರರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.‌ ಅರ್ಜಿದಾರರನ್ನ ತರಾಟೆಗೆ ತೆಗೆದುಕೊಂಡ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಾಂಚೋಲಿ ಅವರಿದ್ದ ಪೀಠದ ಮುಂದೆ ಈ ವಿಚಾರದ ಸುದೀರ್ಘ…

Read More