Crime: ಕಲ್ಲಂಗಡಿ ಸೇವಿಸಿ ಮತ್ತೊಂದು ಬಲಿ: ಮುಂಬೈ ಬೆನ್ನಲ್ಲೇ ಛತ್ತೀಸ್ಗಢದಲ್ಲಿ 15 ವರ್ಷದ ಬಾಲಕ ಸಾವು, ಹಣ್ಣು ತಿನ್ನುವ ಮುನ್ನ ಎಚ್ಚರ!
ರಾಯ್ಪುರ: ಬೇಸಿಗೆಯ ಬಿಸಿಗೆ ತಂಪಾದ ಕಲ್ಲಂಗಡಿ ಸೇವಿಸುವ ಮುನ್ನ ಈಗ ಹತ್ತಾರು ಬಾರಿ ಯೋಚಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಬೈನಲ್ಲಿ ಸಂಭವಿಸಿದ ಸಾಮೂಹಿಕ ಸಾವುಗಳ ಬೆನ್ನಲ್ಲೇ, ಛತ್ತೀಸ್ಗಢದ ಜಾಂಜ್ಗೀರ್-ಚಂಪಾ ಜಿಲ್ಲೆಯಲ್ಲೂ ಕಲ್ಲಂಗಡಿ ಹಣ್ಣು ತಿಂದ 15 ವರ್ಷದ ಬಾಲಕನೊಬ್ಬ (Crime) ಮೃತಪಟ್ಟಿದ್ದಾನೆ. ಹಣ್ಣು ಸೇವಿಸಿದ ಇತರ ಮೂವರು ಮಕ್ಕಳು ಅಸ್ವಸ್ಥರಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಕತ್ತರಿಸಿಟ್ಟ ಹಣ್ಣು ಯಮನಾಗಿದ್ದು ಹೇಗೆ? ಜಾಂಜ್ಗೀರ್-ಚಂಪಾ ಜಿಲ್ಲೆಯ ಘುರ್ಕೋಟ್ ಗ್ರಾಮದ ಅಖಿಲೇಶ್ ಧಿವರ್ (15) ಎಂಬ ಬಾಲಕ ಮದುವೆ ಕಾರ್ಯಕ್ರಮಕ್ಕಾಗಿ…
