Vande Bharat: ಶಿವಮೊಗ್ಗ-ತಿರುಪತಿ ವಂದೇ ಭಾರತ್ ಎಕ್ಸ್ಪ್ರೆಸ್ ಸಂಚಾರಕ್ಕೆ ಚಿಂತನೆ: ರೈಲ್ವೆ ಸಚಿವಾಲಯದಿಂದ ಸಕಾರಾತ್ಮಕ ಪ್ರತಿಕ್ರಿಯೆ!
ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಎಂದೇ ಖ್ಯಾತಿ ಪಡೆದಿರುವ ಐತಿಹಾಸಿಕ ಶಿವಮೊಗ್ಗ ಜಿಲ್ಲೆಯ ಜನತೆಗೆ ಭಾರತೀಯ ರೈಲ್ವೆ ಇಲಾಖೆಯಿಂದ ಅತ್ಯಂತ ಹರ್ಷದಾಯಕ ಸುದ್ದಿಯೊಂದು (Vande Bharat) ಹೊರಬಿದ್ದಿದೆ. ಕರ್ನಾಟಕದ ಪ್ರಮುಖ ವಾಣಿಜ್ಯ ಹಾಗೂ ರಾಜಧಾನಿಯಾದ ಬೆಂಗಳೂರು ಮಾರ್ಗವಾಗಿ ನೇರವಾಗಿ ದಕ್ಷಿಣ ಭಾರತದ ಪ್ರಸಿದ್ಧ ಆಧ್ಯಾತ್ಮಿಕ ಕ್ಷೇತ್ರವಾದ ತಿರುಪತಿಗೆ ಹೊಸದಾಗಿ ಅತಿವೇಗದ ‘ವಂದೇ ಭಾರತ್ ಎಕ್ಸ್ಪ್ರೆಸ್’ ರೈಲನ್ನು ಪರಿಚಯಿಸುವ ಪ್ರಸ್ತಾವನೆಗೆ ರೈಲ್ವೆ ಸಚಿವಾಲಯದಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಹುನಿರೀಕ್ಷಿತ ರೈಲು ಸಂಚಾರವು ಆರಂಭವಾದರೆ ಶಿವಮೊಗ್ಗದಿಂದ ಹೊರಡುವ ಪ್ರಯಾಣಿಕರಿಗೆ, ಭಕ್ತಾದಿಗಳಿಗೆ…
