Crime: ಭೀಕರ ಆಸಿಡ್ ದಾಳಿಯಲ್ಲಿ ಅಂತ್ಯವಾದ ಕೌಟುಂಬಿಕ ಕಲಹ
ಹುಬ್ಬಳ್ಳಿಯಲ್ಲಿ ನಾದಿನಿಯರ ಫೋಟೋ ತೆಗೆಯುವ ವಿಚಾರಕ್ಕೆ ಶುರುವಾದ ಕೌಟುಂಬಿಕ ಕಲಹವೊಂದು ಭೀಕರ ಆ್ಯಸಿಡ್ ದಾಳಿಯಲ್ಲಿ (Crime) ಅಂತ್ಯವಾಗಿದೆ. ಆರು ತಿಂಗಳ ಹಸುಗೂಸು ಸೇರಿದಂತೆ ಕುಟುಂಬದ ಐವರು ಈ ಘಟನೆಯಲ್ಲಿ ಗಾಯಗೊಂಡಿದ್ದು, ನಗರದ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಘಟನೆಯ ವಿವರ: ತಾರಿಹಾಳದ ವಾಜಪೇಯಿ ನಗರದ ನಿವಾಸಿ ಸುರೇಶ್ ಬೈಲ್ ಪತ್ತಾರ ಎಂಬಾತ ತನ್ನ ನಾದಿನಿಯರ ಫೋಟೋ ತೆಗೆಯುತ್ತಿದ್ದ ಎನ್ನಲಾಗಿದೆ. ಇದಕ್ಕೆ ಪತ್ನಿ ರಾಜೇಶ್ವರಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ ದಂಪತಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಸಿಟ್ಟಿಗೆದ್ದ…
