TOP NEWS
Rocking star yash talks about Ramayana film

Ramayana; ಮೊದಲ ಭಾಗದಲ್ಲಿ ಮುಖಾಮುಖಿ ಆಗಲ್ವಂತೆ ರಾಮ-ರಾವಣ, ರಾಮಾಯಣ ಸಿನಿಮಾದ ಹೊಸ ವಿಚಾರ ಬಯಲು

ಬೆಂಗಳೂರು: ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿರುವ ‘ರಾಮಾಯಣ’ (Ramayana) ಸಿನಿಮಾದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಒಂದು ಕುತೂಹಲಕಾರಿ ವಿಷಯವನ್ನು ಬಿಚ್ಚಿಟ್ಟಿದ್ದಾರೆ. ಈ ಚಿತ್ರದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್ ಮತ್ತು ಲಂಕಾಧಿಪತಿ ರಾವಣನಾಗಿ ಯಶ್ ನಟಿಸುತ್ತಿರುವುದು ಅಭಿಮಾನಿಗಳಲ್ಲಿ ಭಾರಿ ಹವಾ ಎಬ್ಬಿಸಿದೆ. ಆದರೆ, ಚಿತ್ರದ ಮೊದಲ ಭಾಗದಲ್ಲಿ ಇಬ್ಬರೂ ದಿಗ್ಗಜ ನಟರು ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಮೂಲಕ ಯಶ್ ಅಚ್ಚರಿ ಮೂಡಿಸಿದ್ದಾರೆ. ಮುಖಾಮುಖಿ ಆಗಲ್ವಂತೆ ರಾಮ-ರಾವಣ ಸದ್ಯ ಅಂತರಾಷ್ಟ್ರೀಯ ಮಟ್ಟದ…

Read More
America-Iran taunts trump in Bollywood style

America-Iran: ಬಾಲಿವುಡ್‌ ಸ್ಟೈಲ್‌ನಲ್ಲಿ ಅಮೆರಿಕಾಗೆ ಇರಾನ್‌ ಟಾಂಗ್

ಮುಂಬೈ: ಅಮೆರಿಕ ಮತ್ತು ಇರಾನ್ ನಡುವಿನ ಜಟಾಪಟಿ ಈಗ ಬಾಲಿವುಡ್ ಡೈಲಾಗ್‌ಗಳ ಮಟ್ಟಕ್ಕೆ ಬಂದು ನಿಂತಿದೆ. ಇರಾನ್‌ನ 158 ಹಡಗುಗಳನ್ನು ಅಮೆರಿಕ ಸೇನೆ ಧ್ವಂಸಗೊಳಿಸಿದೆ ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ, ಮುಂಬೈನಲ್ಲಿರುವ ಇರಾನ್ ರಾಯಭಾರ ಕಚೇರಿಯು ಶಾರುಖ್ ಖಾನ್ ಅವರ ಸಿನಿಮಾ (America-Iran) ಶೈಲಿಯಲ್ಲೇ ಖಡಕ್ ತಿರುಗೇಟು ನೀಡಿದೆ. ಸೋಮವಾರ ‘ಎಕ್ಸ್’ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ರಾಯಭಾರ ಕಚೇರಿ, ಅಮೆರಿಕಕ್ಕೆ ಎಚ್ಚರಿಕೆ ನೀಡಲು “ಓಂ ಶಾಂತಿ ಓಂ” ಸಿನಿಮಾದ ಜನಪ್ರಿಯ ಸಂಭಾಷಣೆಯನ್ನು ಬಳಸಿಕೊಂಡಿದೆ. ಸಿನಿಮಾ…

Read More
Ranveer Singh to reword his apology

Ranveer Singh: ‘ಕಾಂತಾರ’ ವಿವಾದ: ಅಫಿಡವಿಟ್ ತಿದ್ದುಪಡಿ ಮಾಡಲು ನಟ ರಣವೀರ್ ಸಿಂಗ್ ಸಮ್ಮತಿ

ಬೆಂಗಳೂರು: ‘ಕಾಂತಾರ’ ಚಲನಚಿತ್ರದ ದೃಶ್ಯವೊಂದನ್ನು ಅನುಕರಿಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh), ತಮ್ಮ ಕ್ಷಮೆಯಾಚನೆ ಪತ್ರವನ್ನು (ಅಫಿಡವಿಟ್) ದೂರುದಾರರ ಸಮಾಧಾನಕ್ಕೆ ತಕ್ಕಂತೆ ತಿದ್ದುಪಡಿ ಮಾಡಲು ಒಪ್ಪಿಕೊಂಡಿದ್ದಾರೆ. ಈ ಕುರಿತು ಶುಕ್ರವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ರಣವೀರ್ ಪರ ವಕೀಲರು ನ್ಯಾಯಾಲಯಕ್ಕೆ ಈ ಭರವಸೆ ನೀಡಿದ್ದಾರೆ. ಕಳೆದ ವರ್ಷ ಮಿಮಿಕ್ರಿ ಮಾಡಿದ್ದ ನಟ ಕಳೆದ ವರ್ಷ ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ…

Read More
Sometimes I also want to take break says Shreya Ghoshal

Shreya Ghoshal: ನನಗೂ ಬ್ರೇಕ್‌ ತಗೋಬೇಕು ಅನಿಸುತ್ತೆ, ಶಾಕಿಂಗ್‌ ಹೇಳಿಕೆ ನೀಡಿದ ಗಾಯಕಿ

ನವದೆಹಲಿ: ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ (Shreya Ghoshal) ಇತ್ತೀಚೆಗೆ ಅರಿಜಿತ್ ಸಿಂಗ್ ಅವರು ಹಿನ್ನೆಲೆ ಗಾಯನದಿಂದ ವಿರಾಮ ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು, ಅವರ ಈ ನಿರ್ಧಾರವನ್ನು ಧೈರ್ಯಯುತ ನಿರ್ಧಾರ ಎಂದು ಕರೆದಿದ್ದು ಅವರು ಕೂಡ ಬ್ರೇಕ್‌ ತೆಗೆದುಕೊಳ್ಳುವ ಬಗ್ಗೆಯೂ ಯೋಚಿಸುತ್ತಿದ್ದೇನೆ ಎನ್ನುವ ಮೂಲಕ ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ. ನನಗೂ ಬ್ರೇಕ್‌ ತೆಗೆದುಕೊಳ್ಳುವ ಮನಸ್ಸಿದೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಅರಿಜಿತ್ ಸಿಂಗ್ ಹಿನ್ನೆಲೆ ಗಾಯನದಿಂದ ನಿವೃತ್ತರಾದ ಬಗ್ಗೆ ಮಾಡಿದ ಪ್ರಶ್ನೆಗೆ…

Read More
Samantha ruth prabhu to do film with salman khan

Samantha: ಸಲ್ಮಾನ್‌ ಖಾನ್‌ ಜೊತೆ ಸಿನಿಮಾ ಮಾಡ್ತಾರಾ ಸಮಂತಾ? ಏನಿದು ಹೊಸ ಸುದ್ದಿ?

ಮುಂಬೈ: ಕಳೆದ ಕೆಲವು ದಿನಗಳಿಂದ, ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ತೆಲುಗು ನಿರ್ಮಾಪಕ ದಿಲ್ ರಾಜು ಅವರೊಂದಿಗೆ ಹೊಸ ಸಿನಿಮಾ ಮಾಡಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಈ ನಡುವೆ ಹೊಸ ಸಿನಿಮಾದಲ್ಲಿ ನಟಿ ಸಮಂತಾ ರುತ್‌ ಪ್ರಭು (Samantha) ಅವರು ಬಾಲಿವುಡ್‌ ಬಾಯ್‌ಜಾನ್‌ ಸಲ್ಮಾನ್‌ ಖಾನ್‌ ಅವರ ಜೊತೆ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ರಾಜ್‌-ಡಿಕೆ ನಿರ್ದೇಶನದಲ್ಲಿ ಸಿನಿಮಾ ಕೆಲ ಮಾಹಿತಿಗಳ ಪ್ರಕಾರ, ಈ ಸಿನಿಮಾವನ್ನ ಫೇಮಸ್‌ ನಿರ್ದೇಶಕ ಜೋಡಿ ರಾಜ್‌ ಮತ್ತು ಡಿಕೆ ನಿರ್ದೇಶನ…

Read More
Rashmika Mandanna vijay devarakonda wedding

Rashmika: ಸತಿಪತಿಗಳಾದ ರಶ್ಮಿಕಾ-ವಿಜಯ್‌, ಜೋಡಿಗೆ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ

ಉದಯಪುರ: ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್‌ ದೇವರಕೊಂಡ (Rashmika) ಇಂದು ಸತಿಪತಿಗಳಾಗಿದ್ದು, ತೆಲುಗು ಹಾಗೂ ಕೊಡವ ಸಂಪ್ರದಾಯದಂತೆ ಇಬ್ಬರೂ ಹಸೆಮಣೆ ಏರಿದ್ದಾರೆ. ಮೊದಲು ತೆಲುಗು ಸಂಪ್ರದಾಯದಂತೆ ವಿವಾಹ ಇನ್ನು ಮಾಹಿತಿಗಳ ಪ್ರಕಾರ, ಇಂದು ಬೆಳಗ್ಗೆ ರಶ್ಮಿಕಾ ಹಾಗೂ ವಿಜಯ್‌ ತೆಲುಗು ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದಾರೆ. ಹಾಗೆಯೇ, ಸಂಜೆ ಕೊಡವ ಸಂಪ್ರದಾಯದಂತೆ ವಿವಾಹ ನಡೆಯಲಿದೆ ಎನ್ನಲಾಗಿದೆ. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಉದಯಪುರದ ಐಟಿಸಿ ಮೆಮೆಂಟೋಸ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಬಹಳ…

Read More
Don't Want Sympathy says Rajpal Yadav

Rajpal Yadav: ನನಗೆ ಸಹಾನೂಭೂತಿ ಬೇಡ ಎಂದ ನಟ ರಾಜ್‌ಪಾಲ್ ಯಾದವ್

ಹೈದರಾಬಾದ್: 9 ಕೋಟಿ ರೂಪಾಯಿ ಸಾಲ ಮತ್ತು ಚೆಕ್ ಬೌನ್ಸ್ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಬಾಲಿವುಡ್ ನಟ ರಾಜ್‌ಪಾಲ್ ಯಾದವ್, (Rajpal Yadav) ಅವರಿಗೆ ಮಧ್ಯಂತರ ಜಾಮೀನು ಲಭಿಸಿದ್ದು, ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ಅಲ್ಲದೇ, ತಮಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಸಹಾಯ ಮಾಡಿದ ಜನರ ಹೆಸರನ್ನ ಬಹಿರಂಗ ಮಾಡದ ನಟ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಫೆಬ್ರವರಿ 16 ರಂದು ನಟನಿಗೆ ಮಧ್ಯಂತರ ಜಾಮೀನು ನೀಡಲಾಗಿದೆ. ಅವರ ಜಾಮೀನು ಮಾರ್ಚ್ 18 ರವರೆಗೆ ಮಾನ್ಯವಾಗಿರುತ್ತದೆ. ಇನ್ನು…

Read More