TOP NEWS
encounter terrorists and security forces in jammu Kashmir

Encounter: ರಾಜೌರಿ ಅರಣ್ಯದಲ್ಲಿ ಉಗ್ರರ ವಿರುದ್ಧ ಭೀಕರ ಜಂಟಿ ಕಾರ್ಯಾಚರಣೆ: ಸೇನೆಯ ಸರಣಿ ಭೇಟೆಗೆ ನಲುಗಿದ ಭಯೋತ್ಪಾದಕ ಜಾಲ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ದೊರಿಮಾಲ್ ಅರಣ್ಯ ಪ್ರದೇಶದಲ್ಲಿ ಶನಿವಾರ ಮಧ್ಯಾಹ್ನ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಭೀಕರ (Encounter) ಗುಂಡಿನ ಚಕಮಕಿ ಆರಂಭವಾಗಿದೆ. ದಟ್ಟವಾದ ಕಾಡಿನೊಳಗೆ ಕನಿಷ್ಠ ಇಬ್ಬರಿಂದ ಮೂವರು ಪಾಕಿಸ್ತಾನಿ ಉಗ್ರರು ಅಡಗಿಕುಳಿತಿದ್ದು, ಸದ್ಯ ಅವರನ್ನು ಸೇನಾ ಪಡೆಗಳು ಯಶಸ್ವಿಯಾಗಿ ಸುತ್ತುವರೆದಿವೆ ಎಂದು ವರದಿಯಾಗಿದೆ. ಅರಣ್ಯ ಭಾಗದಲ್ಲಿ ಉಗ್ರರ ಚಲನವಲನದ ಬಗ್ಗೆ ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು ತಕ್ಷಣವೇ ಜಂಟಿ ಶೋಧ ಕಾರ್ಯಾಚರಣೆಯನ್ನು ಕೈಗೊಂಡಿದ್ದವು. ಈ ವೇಳೆ ಅಡಗಿದ್ದ…

Read More
donald trump shares AI video social media trend

Donald Trump: ಸ್ಟೀಫನ್ ಕೋಲ್ಬರ್ಟ್ ವಿದಾಯಕ್ಕೆ ಟ್ರಂಪ್ ವ್ಯಂಗ್ಯ

ವಾಷಿಂಗ್ಟನ್: ಖ್ಯಾತ ಟಿವಿ ನಿರೂಪಕ ಸ್ಟೀಫನ್ ಕೋಲ್ಬರ್ಟ್ ಅವರ ‘ದಿ ಲೇಟ್ ಶೋ’ ಕಾರ್ಯಕ್ರಮದ ಕೊನೆಯ ಪ್ರಸಾರದ ಬೆನ್ನಲ್ಲೇ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಮ್ಮ ಸಾಮಾಜಿಕ ಮಾಧ್ಯಮಗಳಾದ ಎಕ್ಸ್ (ಟ್ವಿಟರ್) ಹಾಗೂ ಟ್ರುತ್ ಸೋಶಿಯಲ್‌ನಲ್ಲಿ ವಿಲಕ್ಷಣವಾದ ಎಐ (AI) ತಂತ್ರಜ್ಞಾನ ಆಧಾರಿತ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ತೀವ್ರವಾಗಿ ಎಡಿಟ್ ಮಾಡಲಾದ ಈ ವಿಡಿಯೋ ಕ್ಲಿಪ್‌ನಲ್ಲಿ, ಟ್ರಂಪ್ ಅವರು ಕೋಲ್ಬರ್ಟ್ ಅವರನ್ನು ಎತ್ತಿ ಕಸದ ತೊಟ್ಟಿಗೆ ಎಸೆಯುವಂತೆ ಬಿಂಬಿಸಲಾಗಿದೆ. ತದನಂತರ ವಿಡಿಯೋದಲ್ಲಿ ಟ್ರಂಪ್ ಅವರು…

Read More
rahul gandhi controversial statement about pm modi and amit shah bjp reply

Rahul Gandhi: ಪ್ರಧಾನಿ, ಗೃಹ ಸಚಿವರ ವಿರುದ್ಧ ರಾಹುಲ್ ಗಾಂಧಿ ವಿವಾದಾತ್ಮಕ ವಾಗ್ದಾಳಿ: ತಿರುಗೇಟು ನೀಡಿದ ಬಿಜೆಪಿ

ರಾಯ್‌ಬರೇಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ (Rahul Gandhi) ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಅತ್ಯಂತ ಕಠಿಣ ಪದಗಳ ಬಳಕೆಯೊಂದಿಗೆ ರಾಜಕೀಯ ವಲಯದಲ್ಲಿ ಹೊಸ ವಿವಾದವೊಂದನ್ನು ಹುಟ್ಟುಹಾಕಿದ್ದಾರೆ. ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದ ಉನ್ನತ ನಾಯಕರನ್ನು ನೇರವಾಗಿ ಗುರಿಯಾಗಿಸಿಕೊಂಡು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸಂವಿಧಾನ ಮತ್ತು ದೇಶದ ಹಿತಾಸಕ್ತಿಗೆ ಧಕ್ಕೆ: ಸಭೆಯಲ್ಲಿ ಕೇಂದ್ರ ಸರ್ಕಾರದ ನೀತಿಗಳ…

Read More
viral news women delivered 4 babies over 5 days

Viral News: ವೈದ್ಯಕೀಯ ಇತಿಹಾಸದಲ್ಲೇ ಅಪರೂಪದ ಪವಾಡ: 5 ದಿನಗಳ ಅಂತರದಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ತಾಯಿ!

ಮೊರಾದಾಬಾದ್: ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ವೈದ್ಯಕೀಯ ಲೋಕವೇ ಬೆರಗಾಗುವಂತಹ ಅತ್ಯಂತ (Viral News) ಅಪರೂಪದ ಹಾಗೂ ಸವಾಲಿನ ಹೆರಿಗೆ ಪ್ರಕರಣವೊಂದು ವರದಿಯಾಗಿದೆ. ಜಿಲ್ಲೆಯ ಸಂಭಲ್ ಮೂಲದ 31 ವರ್ಷದ ಮಹಿಳೆಯೊಬ್ಬರು ಬರೋಬ್ಬರಿ ಐದು ದಿನಗಳ ಅಂತರದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸಾಮಾನ್ಯವಾಗಿ ಇಂತಹ ಹೆಚ್ಚು ಅಪಾಯವಿರುವ (ಹೈ-ರಿಸ್ಕ್) ಗರ್ಭಧಾರಣೆಯ ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆ (ಸಿಜೇರಿಯನ್) ಅನಿವಾರ್ಯ ಇರುತ್ತದೆ. ಆದರೆ ಇಲ್ಲಿ ಯಾವುದೇ ಸರ್ಜರಿ ಇಲ್ಲದೆ, ನಾಲ್ಕೂ ಮಕ್ಕಳು ಸಹಜ ಹೆರಿಗೆಯ (ನಾರ್ಮಲ್ ಡೆಲಿವರಿ) ಮೂಲಕವೇ ಜನಿಸಿರುವುದು ಜಾಗತಿಕ…

Read More
CBSE changed makes indian language mandatory

CBSE: ಸಿಬಿಎಸ್‌ಇ ಪ್ರೌಢಶಾಲಾ ಭಾಷಾ ನೀತಿ ಪರಿಷ್ಕರಣೆ: ಮುಂಬರುವ ಶೈಕ್ಷಣಿಕ ಸಾಲಿನಿಂದ ಮೂರು ಭಾಷೆಗಳ ಕಲಿಕೆ ಕಡ್ಡಾಯ

ನವದೆಹಲಿ: ಹೊಸ ನಿಯಮಾವಳಿಗಳ ಪ್ರಕಾರ, ಸಿಬಿಎಸ್‌ಇ (CBSE) ಅಡಿಯ ಪ್ರೌಢಶಾಲಾ ವಿದ್ಯಾರ್ಥಿಗಳು ಇನ್ಮುಂದೆ ಕಡ್ಡಾಯವಾಗಿ ಮೂರು ಭಾಷೆಗಳನ್ನು (R1, R2 ಮತ್ತು R3) ಕಲಿಯಬೇಕಾಗುತ್ತದೆ. ಈ ಮೂರರಲ್ಲಿ ಕನಿಷ್ಠ ಎರಡು ಭಾಷೆಗಳು ಕಡ್ಡಾಯವಾಗಿ ಭಾರತೀಯ ಮೂಲದ ಸ್ಥಳೀಯ ಅಥವಾ ಪ್ರಾದೇಶಿಕ ಭಾಷೆಗಳೇ ಆಗಿರಬೇಕು ಎಂದು ಮಂಡಳಿ ಕಡ್ಡಾಯಗೊಳಿಸಿದೆ. ಮುಂಬರುವ ಜುಲೈ 1 ರಿಂದ ಈ ನಿಯಮ ಜಾರಿಗೆ ಬರಲಿದ್ದು, ಇತ್ತೀಚೆಗೆ ಬಿಡುಗಡೆಯಾದ ಎನ್‌ಸಿಇಆರ್‌ಟಿ (NCERT) ಪಠ್ಯಕ್ರಮವನ್ನು ಪರಾಮರ್ಶಿಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಸಕ್ತ ಸಾಲಿನ ತರಗತಿಗಳು…

Read More
this is what pawan kalyan say about his and vijay comparison

Pawan Kalyan: ವಿಜಯ್ ಸಿಎಂ ಆದದ್ದಕ್ಕೆ ಆಂಧ್ರದಲ್ಲಿ ಜನಾಕ್ರೋಶವೇ? ಜನರ ಹೋಲಿಕೆಗೆ ಪವನ್ ಕಲ್ಯಾಣ್ ಕೊಟ್ಟ ಚಾಟಿ ಏಟು!

ಮಂಗಳಗಿರಿ: ತಮಿಳುನಾಡಿನಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷ ಭರ್ಜರಿ ಜಯ ಸಾಧಿಸಿ, ಅವರು ಮುಖ್ಯಮಂತ್ರಿಯಾದಾಗಿನಿಂದ ಸೋಶಿಯಲ್ ಮೀಡಿಯಾದಲ್ಲಿ ಪವನ್ ಕಲ್ಯಾಣ್ (Pawan Kalyan) ಅವರ ಹೆಸರೇ ಮುಂಚೂಣಿಯಲ್ಲಿದೆ. ಜನರು ವಿಜಯ್ ಅವರ ರಾಜಕೀಯ ಸಾಧನೆಯನ್ನು ಮುಂದಿಟ್ಟುಕೊಂಡು ಪವನ್ ಅವರ ಮೇಲೆ ಅನಗತ್ಯವಾಗಿ ನಿರೀಕ್ಷೆಗಳ ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ಮಂಗಳಗಿರಿಯ ಜನಸೇನಾ ಪಕ್ಷದ ಮುಖ್ಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪವನ್ ಕಲ್ಯಾಣ್ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಟಾಂಗ್ ನೀಡಿದ್ದಾರೆ. ಪವನ್‌ ಕಲ್ಯಾಣ್‌ ಹೇಳಿದ್ದೇನು? ಸಭೆಯಲ್ಲಿ ಮಾತನಾಡಿದ…

Read More
tamil nadu cm vijay cabinet details

Tamil Nadu: ಜೋಸೆಫ್ ವಿಜಯ್ ಕ್ಯಾಬಿನೆಟ್ ಫೈನಲ್: ಯಾರಿಗೆ ಯಾವ ಖಾತೆ? ಇಲ್ಲಿದೆ ಸಂಪೂರ್ಣ ವಿವರ

ಚೆನ್ನೈ: ತಮಿಳುನಾಡಿನ (Tamil Nadu) ನೂತನ ಮುಖ್ಯಮಂತ್ರಿಯಾಗಿ ಮೇ 10ರಂದು ಪ್ರಮಾಣ ವಚನ ಸ್ವೀಕರಿಸಿದ ಸಿ. ಜೋಸೆಫ್ ವಿಜಯ್ ನೇತೃತ್ವದ ಸಚಿವ ಸಂಪುಟದ ಸದಸ್ಯರ ಖಾತೆ ಹಂಚಿಕೆಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಮುಖ್ಯಮಂತ್ರಿಯವರ ಶಿಫಾರಸಿಗೆ ರಾಜ್ಯಪಾಲರು ಅನುಮೋದನೆ ನೀಡಿದ್ದು, ಲೋಕಭವನದಿಂದ ಈ ಕುರಿತು ಅಧಿಕೃತ ಪ್ರಕಟಣೆ ಹೊರಬಿದ್ದಿದೆ. ಮುಖ್ಯಮಂತ್ರಿ ವಿಜಯ್ ಅವರು ತಮ್ಮ ಬಳಿಯೇ ಗೃಹ ಇಲಾಖೆ, ಪೊಲೀಸ್, ಐಎಎಸ್, ಐಪಿಎಸ್ ಮತ್ತು ಭಾರತೀಯ ಅರಣ್ಯ ಸೇವೆಯಂತಹ ಅತ್ಯಂತ ಪ್ರಮುಖ ಖಾತೆಗಳನ್ನು ಉಳಿಸಿಕೊಂಡಿದ್ದಾರೆ. ಇದರೊಂದಿಗೆ ಜಿಲ್ಲಾ ಕಂದಾಯ ಅಧಿಕಾರಿಗಳು,…

Read More