TOP NEWS
good news gold rate falls in Indian market

Gold Rate: ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ

ಬೆಂಗಳೂರು: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳ ಪರಿಣಾಮವಾಗಿ (Good News) ಭಾರತದಲ್ಲಿ ಚಿನ್ನದ ಬೆಲೆ ಮತ್ತೊಮ್ಮೆ ಇಳಿಕೆ (Gold Rate) ಕಂಡಿದೆ. ಏಪ್ರಿಲ್ 24, 2026ರಂದು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 410 ರೂಪಾಯಿಗಳಷ್ಟು ಕುಸಿದಿದ್ದು, 1,51,810 ರೂಪಾಯಿಗಳಿಗೆ ತಲುಪಿದೆ. ಅದೇ ರೀತಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,39,159 ರೂಪಾಯಿಗಳಷ್ಟಿದೆ. ಗಮನಾರ್ಹ ಸಂಗತಿಯೆಂದರೆ, ಭಾರತದಲ್ಲಿನ ಚಿನ್ನದ ದರವು ದುಬೈಗಿಂತ ಸುಮಾರು 4.11% ಅಂದರೆ ಸುಮಾರು 6,000 ರೂಪಾಯಿಗಳಷ್ಟು ದುಬಾರಿಯಾಗಿದೆ. 10%ರಷ್ಟು ಕುಸಿದ…

Read More
RBI new rules regarding UPI gets backlash

UPI: ಆರ್‌ಬಿಐ ಹೊಸ ನಿಯಮಕ್ಕೆ ಬ್ಯಾಂಕ್‌ಗಳ ವಿರೋಧ

ಬೆಂಗಳೂರು: ದೇಶದಲ್ಲಿ ಹೆಚ್ಚುತ್ತಿರುವ ಆನ್‌ಲೈನ್ ವಂಚನೆಗಳನ್ನು ತಡೆಯಲು 10,000 ರೂಪಾಯಿಗಿಂತ ಹೆಚ್ಚಿನ ಮೊತ್ತದ ಹೊಸ ಪಾವತಿಗಳಿಗೆ (UPI) ಒಂದು ಗಂಟೆಯ ಕಾಲ ವಿಳಂಬ ಮಾಡುವ ಆರ್‌ಬಿಐ ಪ್ರಸ್ತಾವನೆಯು ಬ್ಯಾಂಕಿಂಗ್ ಮತ್ತು ಫಿನ್‌ಟೆಕ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ನಿಯಮವು ಭಾರತದ ಹೆಮ್ಮೆಯ ಪಾವತಿ ವ್ಯವಸ್ಥೆಯಾದ ಯುಪಿಐ (UPI) ವೇಗಕ್ಕೆ ಬ್ರೇಕ್ ಹಾಕಬಹುದು ಮತ್ತು ಜನರನ್ನು ಮತ್ತೆ ನಗದು ವ್ಯವಹಾರದತ್ತ ಮುಖ ಮಾಡುವಂತೆ ಮಾಡಬಹುದು ಎಂಬ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ವಂಚನೆ ತಡೆಯಲು ಹೊಸ ಕ್ರಮ 2024-25ರ…

Read More
crop pension special function in Bidar

Bidar: ಬೀದರ್‌ನಲ್ಲಿ ಬೆಳೆ ಪಿಂಚಣಿ ವಿಶೇಷ ಸೌಲಭ್ಯಕ್ಕೆ ಚಾಲನೆ

ಬೀದರ್:‌ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾ ಲೀಡ್  ಬ್ಯಾಂಕ್ ಸಹಯೋಗದಲ್ಲಿ ಕೃಷಿ ಮತ್ತು ಸಂಬಂಧಿತ ವಲಯದ ಜನರಿಗೆ ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ  ಬೀದರ್ ನಲ್ಲಿ (Bidar)  ಬೆಳೆ ಪಿಂಚಣಿ  ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಯಾರೆಲ್ಲಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು? ಈ ಕಾರ್ಯಕ್ರಮಕ್ಕೆ  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ್ ಬದೋಲೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ,…

Read More
Nirmala Sitharaman submits financial amendments

Nirmala Sitharaman: ಹಣಕಾಸು ಮಸೂದೆ ಪರಿಗಣನೆ ಮಂಡನೆ ಮಾಡಿದ ವಿತ್ತ ಸಚಿವೆ

ನವದೆಹಲಿ: ಲೋಕಸಭೆಯಲ್ಲಿ ಹಣಕಾಸು ಮಸೂದೆಯನ್ನು 2026ರ ಪರಿಗಣನೆ ಹಾಗೂ ಅಂಗೀಕಾರಕ್ಕಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮಂಡಿಸಿದ್ದಾರೆ.  ಆರ್ಥಿಕ ಬೆಳವಣಿಗೆ ಆದ್ಯತೆ ಈ ಮಸೂದೆ 2026-27ರ ಹಣಕಾಸು ವರ್ಷಕ್ಕೆ ಕೇಂದ್ರ ಸಕಾರದ ಹಣಕಾಸು ಪ್ರಸ್ತಾವನೆಗಳನ್ನು ಜಾರಿಗೆ ತರಲು ಉದ್ದೇಶಿಸಿದೆ.ಈ ವೇಳೆ ನಿರ್ಮಲಾ ಸೀತಾರಾಮನ್ , ವಿಧೇಯಕ,  2026-27ನೇ ಸಾಲಿನ ಸರ್ಕಾರದ ವಿತ್ತೀಯ ಯೋಜನೆಗಳನ್ನು ಒಳಗೊಂಡಿದ್ದು, ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಹಾಗೂಎಲ್ಲರನ್ನೊಳಗೊಂಡ ಅಭಿವೃದ್ಧಿಯ ಪ್ರಮುಖ ಪ್ರಸ್ತಾವನೆಗಳಿಗೆ ಆದ್ಯತೆ ನೀಡಿದೆ ಎಂದರು. ಬಳಿಕ  ಕಾಂಗ್ರೆಸ್ ಸದಸ್ಯ…

Read More
200 Mineral Blocks successful auction

Mineral Blocks: 200 ಖನಿಜ ಬ್ಲಾಕ್ ಯಶಸ್ವಿ ಹರಾಜು

ನವದೆಹಲಿ: 2025-26ನೇ ಹಣಕಾಸು ವರ್ಷದಲ್ಲಿ  ಭಾರತದ ಖನಿಜ ವಲಯ 200  ಖನಿಜ ಬ್ಲಾಕ್ (Mineral Blocks) ಗಳ ಯಶಸ್ವಿ ಹರಾಜಿನೊಂದಿಗೆ  ಮಹತ್ವದ ಮೈಲಿಗಲ್ಲು ಸಾಧಿಸಿದೆ. ಇದು ಈ ಸಾಲಿನ ಅತ್ಯಧಿಕ  ದಾಖಲೆಯಾಗಿದೆ.  123 ಗಣಿಗಾರಿಕೆ  ಗುತ್ತಿಗೆ ಬ್ಲಾಕ್  ಈ ಸಾಧನೆಯು  ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ  ಬಲವಾದ ಸಹಕಾರಿ ಪ್ರಯತ್ನಗಳನ್ನು  ಪ್ರತಿಬಿಂಬಿಸುತ್ತದೆ. ಹರಾಜಾದ 200 ಬ್ಲಾಕ್ ಗಳ  ಪೈಕಿ 123 ಗಣಿಗಾರಿಕೆ  ಗುತ್ತಿಗೆ ಬ್ಲಾಕ್ ಗಳಾಗಿದ್ದು, 77 ಪರವಾನಗಿ ಪಡೆದ  ಬ್ಲಾಕ್ ಗಳಾಗಿವೆ ಎಂದು  ಕಲ್ಲಿದ್ದಲು…

Read More
Advertisement should get people confidence says Sanjay Jaju

Sanjay Jaju: ಜಾಹೀರಾತುಗಳು ಜನರ ವಿಶ್ವಾಸಗಳಿಸಬೇಕು: ಸಂಜಯ್‌ ಜಾಜು

ಮುಂಬೈ: ಜಾಹೀರಾತು ಕೇವಲ ಜನರನ್ನು ತಲುಪುವುದಷ್ಟೇ ಅಲ್ಲ, ಅದು ವಿಶ್ವಾಸವನ್ನು ನಿರ್ಮಿಸಬೇಕು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಜಾಜು (Sanjay Jaju) ಹೇಳಿದ್ದಾರೆ.   ಆಡ್‌ ಟ್ರಸ್ಟ್ ಶೃಂಗಸಭೆ ಮುಂಬೈನಲ್ಲಿ ನಿನ್ನೆ ನಡೆದ ಆಡ್‌ ಟ್ರಸ್ಟ್ ಶೃಂಗಸಭೆ 2026 ರಲ್ಲಿ  ಮಾತನಾಡಿದ ಅವರು, ಭಾರತದಲ್ಲಿ ಜಾಹೀರಾತು ವಲಯವು ವ್ಯಾಪ್ತಿ, ಸಂಕೀರ್ಣತೆ ಮತ್ತು ಪ್ರಭಾವದಲ್ಲಿ ಬೆಳೆಯುತ್ತಿದ್ದು, ಜವಾಬ್ದಾರಿಯುತ, ಪಾರದರ್ಶಕ ಮತ್ತು ವಿಶ್ವಾಸಾರ್ಹ ವ್ಯವಸ್ಥೆ ಅಗತ್ಯವಾಗಿದೆ ಎಂದರು.   ಬೆಳವಣಿಗೆ ಆಗಬೇಕು ಈ ವಲಯದ ಬೆಳವಣಿಗೆ ಮುಂದುವರಿಯಬೇಕಾಗಿದ್ದು,…

Read More
FasTag pass price has hiked by nhai

FasTag: ಫಾಸ್ಟ್‌ಟ್ಯಾಗ್‌ ಪಾಸ್‌ ದರ ಹೆಚ್ಚಳ, ಇಲ್ಲಿದೆ ಮಾಹಿತಿ

ನವದೆಹಲಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI), 2026-27ನೇ ಹಣಕಾಸು ವರ್ಷಕ್ಕೆ ಅನ್ವಯವಾಗುವಂತೆ ಫಾಸ್ಟ್ಯಾಗ್ (FasTag) ವಾರ್ಷಿಕ ಪಾಸ್ ದರವನ್ನು 3,000 ರೂಪಾಯಿಗಳಿಂದ 3,075 ರೂಪಾಯಿಗಳಿಗೆ ಪರಿಷ್ಕರಣೆ ಮಾಡಿದೆ. ಏಪ್ರಿಲ್‌ 1 ರಿಂದ ಹೊಸ ದರ ಜಾರಿ  ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ ನಿಯಮಗಳು, 2008ರ ಅನ್ವಯ ಈ ಬದಲಾವಣೆ ಮಾಡಲಾಗಿದ್ದು, ಹೊಸ ದರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ದೇಶಾದ್ಯಂತ ಇರುವ ಸುಮಾರು 1,150 ಟೋಲ್ ಪ್ಲಾಜಾಗಳಲ್ಲಿ ಈ ಸೌಲಭ್ಯ ಲಭ್ಯವಿದೆ.  ಮುಂದುವರೆಯಲಿದೆ ಕೆಲ ಹಳೆಯ…

Read More