TOP NEWS

Sandeep

Big news Shravanabelagola Madikeri Rail Project Faces Hurdles Amid Low Projected Passenger Traffic

Big News: ಶ್ರವಣಬೆಳಗೊಳ-ಮಡಿಕೇರಿ ರೈಲ್ವೆ ಮಾರ್ಗ: ನಿರೀಕ್ಷಿತ ಸಂಚಾರ ವಿರಳ, ಯೋಜನೆಗೆ ತೊಡಕು

ಬೆಂಗಳೂರು: ಹೊಳೆನರಸೀಪುರ, ಅರಕಲಗೂಡು, ಕೊಣನೂರು ಮತ್ತು ಕುಶಾಲನಗರ ಮಾರ್ಗವಾಗಿ ಶ್ರವಣಬೆಳಗೊಳ ಮತ್ತು ಮಡಿಕೇರಿ ನಡುವೆ ಹೊಸ ರೈಲು ಮಾರ್ಗ ನಿರ್ಮಿಸುವ ಪ್ರಸ್ತಾಪಿತ (Big News) ಯೋಜನೆಗೆ ಹಿನ್ನಡೆಯಾಗಿದೆ. ಈ ಮಾರ್ಗದಲ್ಲಿ ನಿರೀಕ್ಷಿತ ಪ್ರಯಾಣಿಕರು ಹಾಗೂ ಸರಕು ಸಾಗಣೆಯ ಪ್ರಮಾಣ ತೀರಾ ಕಡಿಮೆ ಇರಲಿದೆ ಎಂದು ರೈಲ್ವೆ ಸಚಿವಾಲಯ ನಡೆಸಿದ ಸಾಧ್ಯತಾ ವರದಿ (ಫೀಸಿಬಿಲಿಟಿ ಸ್ಟಡಿ) ತಿಳಿಸಿದೆ. ಲೋಕಸಭೆಯಲ್ಲಿ ಹಾಸನ ಸಂಸದ ಶ್ರೇಯಸ್ ಎಂ. ಪಟೇಲ್ ಕೇಳಿದ ಪ್ರಶ್ನೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಕುರಿತು…

Read More
Big news Zero Tolerance for Exam Scams Modi Cabinet Clears Powerful Amendment to Check Paper Leaks

Big News: ಪೇಪರ್ ಲೀಕ್ ಮಾಡಿದ್ರೆ 10 ವರ್ಷ ಜೈಲು, ₹10 ಕೋಟಿ ದಂಡ!: ಮೋದಿ ಸರ್ಕಾರದ ಹೊಸ ಕಾನೂನಿಗೆ ಫಾಸ್ಟ್ ಟ್ರ್ಯಾಕ್ ಬಲ

ನವದೆಹಲಿ: ದೇಶಾದ್ಯಂತ ತೀವ್ರ ಆಂದೋಲನಕ್ಕೆ ಕಾರಣವಾಗಿರುವ ‘ನೀಟ್’ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ಬೆನ್ನಲ್ಲೇ, ಪರೀಕ್ಷಾ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರ (Big News) ತನ್ನ ಕಾನೂನು ಚೌಕಟ್ಟನ್ನು ಮತ್ತಷ್ಟು ಬಲಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯರಾತ್ರಿ ವಿಡಿಯೋ ಸಂದೇಶದ ಮೂಲಕ ಕಠಿಣ ಕ್ರಮದ ಭರವಸೆ ನೀಡಿದ ಮರುದಿನವೇ, ಕೇಂದ್ರ ಸರ್ಕಾರವು 2024ರ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆಗೆ ಮಹತ್ವದ ತಿದ್ದುಪಡಿಗಳನ್ನು ತಂದಿದೆ. ಪರೀಕ್ಷಾ ವಂಚನೆ ಮತ್ತು ಪೇಪರ್ ಲೀಕ್ ದಂಧೆಗೆ ಸಂಪೂರ್ಣ ಬ್ರೇಕ್ ಹಾಕುವ…

Read More
SIR creating problem in Bengaluru people facing issue

SIR: ಬೆಂಗಳೂರಿನ ಬದಲಾದ ಚಿತ್ರಣ: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಗೊಂದಲ, ಸವಾಲುಗಳ ಸುಳಿ

ಬೆಂಗಳೂರು: ಕರ್ನಾಟಕದಲ್ಲಿ ಬರೋಬ್ಬರಿ 24 ವರ್ಷಗಳ ನಂತರ ಅಂದರೆ 2002ರ ಬಳಿಕ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಾಂದ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ತೀವ್ರ ಗೊಂದಲ ಮತ್ತು ಸವಾಲುಗಳಿಗೆ ಕಾರಣವಾಗಿದೆ. ಕಳೆದ ಎರಡು ದಶಕಗಳಲ್ಲಿ ಬೆಂಗಳೂರಿನ ಭೌಗೋಳಿಕ ಮತ್ತು ಜನಸಂಖ್ಯಾ ಚಿತ್ರಣ ಸಂಪೂರ್ಣವಾಗಿ ಬದಲಾಗಿದ್ದು, ಈ ಹಿನ್ನೆಲೆಯಲ್ಲಿ ನಗರದ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಹಾಗೂ ಮತದಾರರು ಸೂಕ್ತ ದಾಖಲೆಗಳನ್ನು ಪತ್ತೆ ಹಚ್ಚಲು ಮತ್ತು ನಮೂನೆಗಳನ್ನು ಭರ್ತಿ ಮಾಡಲು ತೀವ್ರ ಪರದಾಡುವಂತಾಗಿದೆ. ನಗರದಲ್ಲಿ…

Read More
NEET Paper Leak Sadhu Kokila Urges Sandalwood to Drop Ego and Speak Up for Students

Sandalwood: ವಿದ್ಯಾರ್ಥಿಗಳ ಪರ ಹೋರಾಟಕ್ಕೆ ಸ್ಯಾಂಡಲ್‌ವುಡ್ ತಾರೆಯರ ಉದಾಸೀನತೆ: ಸಾಧುಕೋಕಿಲ ತೀವ್ರ ಆಕ್ರೋಶ

ಬೆಂಗಳೂರು: ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET-UG) ಪರೀಕ್ಷಾ ಅಕ್ರಮದ ವಿರುದ್ಧದ ವಿದ್ಯಾರ್ಥಿಗಳ ಹೋರಾಟಕ್ಕೆ ಬಾಲಿವುಡ್ ಸೇರಿದಂತೆ ನೆರೆಯ ಕಾಲಿವುಡ್ ಚಿತ್ರರಂಗದ ಸ್ಟಾರ್‌ಗಳು ಬೀದಿಗಿಳಿದು ಸಾಥ್ ನೀಡಿದ್ದಾರೆ. ಆದರೆ, ಇದೇ ವಿಚಾರದಲ್ಲಿ ಕನ್ನಡ ಚಿತ್ರರಂಗದ (Sandalwood) ಬಹುತೇಕ ದೊಡ್ಡ ನಟರು ಹಾಗೂ ಗಣ್ಯರು ಮೌನಕ್ಕೆ ಶರಣಾಗಿರುವುದು ಈಗ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಕನ್ನಡ ತಾರೆಯರ ಮೌನಕ್ಕೆ ಸಾಧುಕೋಕಿಲ ಕಿಡಿ: ಸ್ಯಾಂಡಲ್‌ವುಡ್ ಕಲಾವಿದರ ಈ ನಿಲುವಿನ ವಿರುದ್ಧ ಹಿರಿಯ ನಟ ಹಾಗೂ…

Read More
Ramayana Trailer release postponed sony pictures gives support

Ramayana: ರಾಮಾಯಣ’ ಟ್ರೇಲರ್ ಬಿಡುಗಡೆ ಮುಂದೂಡಿಕೆ: ಗ್ಲೋಬಲ್ ವಿತರಣೆಗೆ ಸಾಥ್ ನೀಡಿದ ಸೋನಿ ಪಿಕ್ಚರ್ಸ್

ಮುಂಬೈ: ನಿಖಿಲ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ (Ramayana) ಚಿತ್ರದ ಟ್ರೇಲರ್ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ನಿರ್ಮಾಪಕ ನಮಿತ್ ಮಲ್ಹೋತ್ರಾ ಶುಕ್ರವಾರ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಈ ಪೌರಾಣಿಕ ಮಹಾಕಾವ್ಯ ಆಧಾರಿತ ಚಿತ್ರಕ್ಕೆ ಜಾಗತಿಕ ಮಟ್ಟದಲ್ಲಿ ಬೃಹತ್ ಬೆಂಬಲ ಸಿಕ್ಕಿದ್ದು, ಖ್ಯಾತ ನಿರ್ಮಾಣ ಸಂಸ್ಥೆ ‘ಸೋನಿ ಪಿಕ್ಚರ್ಸ್’ ಈ ಸಿನಿಮಾದ ಜಾಗತಿಕ ವಿತರಣೆಯ ಹಕ್ಕನ್ನು ಪಡೆದುಕೊಂಡಿದೆ. ಸಿನಿಮಾ ತಂಡ ಹೇಳಿದ್ದೇನು? ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ನಮಿತ್ ಮಲ್ಹೋತ್ರಾ, ಭಾರತೀಯ ಸಂಸ್ಕೃತಿ ಮತ್ತು ಕಥೆಯನ್ನು…

Read More
Adani Enters Airline Business Group Puts an End to Market Speculations

Adani: ಹೊಸ ಏರ್‌ಲೈನ್ಸ್ ಆರಂಭಿಸುವ ಸುದ್ದಿ ಸಂಪೂರ್ಣ ಸುಳ್ಳು: ಅಧಿಕೃತ ಸ್ಪಷ್ಟನೆ ನೀಡಿದ ಅದಾನಿ ಸಂಸ್ಥೆ

ನವದೆಹಲಿ: ಅದಾನಿ ಗ್ರೂಪ್ (Adani) ಶೀಘ್ರದಲ್ಲೇ ವಿಮಾನ ಯಾನ (ಏರ್‌ಲೈನ್) ಉದ್ಯಮಕ್ಕೆ ಕಾಲಿಡಲಿದೆ ಎಂದು ಹರಿದಾಡುತ್ತಿದ್ದ ವರದಿಗಳನ್ನು ಅದಾನಿ ಎಂಟರ್‌ಪ್ರೈಸಸ್ ಸಂಸ್ಥೆಯು ಸಂಪೂರ್ಣವಾಗಿ ತಳ್ಳಿಹಾಕಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಕಂಪನಿಯು, ವಿಮಾನ ಯಾನ ಕ್ಷೇತ್ರಕ್ಕೆ ಪ್ರವೇಶಿಸುವ ಯಾವುದೇ ಪ್ರಸ್ತಾಪವನ್ನು ತಾವು ಪರಿಶೀಲಿಸುತ್ತಿಲ್ಲ. ಮಾಧ್ಯಮಗಳಲ್ಲಿ ಬಂದಿರುವ ಸುದ್ದಿ ಸಂಪೂರ್ಣ ಆಧಾರರಹಿತ ಮತ್ತು ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟಪಡಿಸಿದೆ. ವಿರೋಧ ವ್ಯಕ್ತಪಡಿಸಿದ್ದ ಇಂಡಿಗೋ-ಏರ್‌ ಇಂಡಿಯಾ ಅದಾನಿ ಸಮೂಹವು ಏರ್‌ಲೈನ್ ಉದ್ಯಮಕ್ಕೆ ಕಾಲಿಡಲು ಆಸಕ್ತಿ ತೋರಿದೆ ಎಂಬ ಸುದ್ದಿಗಳು ಹೊರಬಿದ್ದ…

Read More
Global LPG Prices Soar Centre Pumps in Massive Subsidy to Shield Domestic Consumers

LPG: ಉಜ್ವಲ ಫಲಾನುಭವಿಗಳಿಗೆ ಮತ್ತಷ್ಟು ನಿರಾಳ: ತೈಲ ಕಂಪನಿಗಳ ನಷ್ಟ ತಾನೇ ಭರಿಸಿದ ಸರ್ಕಾರ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಭೀತಿಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಅಡುಗೆ ಅನಿಲದ (LPG) ಬೆಲೆ ಗಗನಕ್ಕೇರುತ್ತಿದ್ದರೂ, ಕೇಂದ್ರ ಸರ್ಕಾರವು ದೇಶದ ಗ್ರಾಹಕರ ಮೇಲೆ ಇದರ ಹೊರೆ ಬೀಳದಂತೆ ಭಾರಿ ಪ್ರಮಾಣದ ಸಬ್ಸಿಡಿಯನ್ನು ತಾನೇ ಭರಿಸುತ್ತಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಲೋಕಸಭೆಯಲ್ಲಿ ತಿಳಿಸಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ದರಗಳು ತೀವ್ರವಾಗಿ ಏರಿಕೆಯಾಗಿದ್ದರೂ, ಸಾರ್ವಜನಿಕರ ಹಿತದೃಷ್ಟಿಯಿಂದ ದೇಶೀಯ ಅಡುಗೆ ಅನಿಲದ ಬೆಲೆಯನ್ನು ನಿಯಂತ್ರಣದಲ್ಲಿಡಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಸರ್ಕಾರವೇ ಭರಿಸಿದೆ ಎಂದ ಕೇಂದ್ರ ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಲಿಖಿತ…

Read More