G Parameshwar: ಸಿಎಂ ಸ್ಥಾನ ಕೈತಪ್ಪಿದ ನೋವು ಕೊನೆಗೂ ಬಹಿರಂಗ: ಭಾವುಕರಾಗಿ ಕಣ್ಣೀರಿಟ್ಟ ಡಿಸಿಎಂ ಡಾ. ಜಿ. ಪರಮೇಶ್ವರ್!
ತುಮಕೂರು: ಕರ್ನಾಟಕ ಕಾಂಗ್ರೆಸ್ನ ಅತ್ಯಂತ ಹಿರಿಯ ಹಾಗೂ ನಿಷ್ಠಾವಂತ ದಲಿತ ನಾಯಕ, ಪ್ರಸ್ತುತ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ (G Parameshwar) ಅವರ ಮನಸ್ಸಿನಲ್ಲಿದ್ದ ಸಿಎಂ ಹುದ್ದೆಯ ನಿರಾಸೆಯ ನೋವು ಕೊನೆಗೂ ಸಾರ್ವಜನಿಕವಾಗಿ ಸ್ಫೋಟಗೊಂಡಿದೆ. ಸತತ ಪ್ರಯತ್ನಗಳ ನಡುವೆಯೂ ತಮಗೆ ಮೂರು ಬಾರಿ ಮುಖ್ಯಮಂತ್ರಿ ಸ್ಥಾನ ಸಿಗದೇ ಹೋದದ್ದಕ್ಕೆ ತೀವ್ರ ಬೇಸರ ಹೊರಹಾಕಿರುವ ಅವರು, ತಮ್ಮ ಆಪ್ತರು ಹಾಗೂ ಸಿದ್ದಾರ್ಥ ಕಾಲೇಜಿನ ಸಿಬ್ಬಂದಿ ಎದುರು ಮನಬಿಚ್ಚಿ ಮಾತನಾಡುತ್ತಾ ಕಣ್ಣೀರು ಹಾಕಿದ್ದಾರೆ. ಅಲ್ಲದೆ, ಸಿಎಂ ಸ್ಥಾನ ಸಿಗದಿದ್ದರೆ ರಾಜಕೀಯ…
