TOP NEWS
Crime tollywood actor bharath and cinematographer sai trilok lost life

Crime: ಟಾಲಿವುಡ್‌ನಲ್ಲಿ ಶೋಕ ಸಾಗರ: ಭೀಕರ ಅಪಘಾತಕ್ಕೆ ಬಲಿಯಾದ ನಟ ಭರತ್ ಕಾಂತ್ ಮತ್ತು ಸಾಯಿ ತ್ರಿಲೋಕ್!

ಹೈದರಾಬಾದ್: ತೆಲುಗು ಚಿತ್ರರಂಗದ ಭರವಸೆಯ ನಟ, ಖ್ಯಾತ ಯೂಟ್ಯೂಬರ್ ಭರತ್ ಕಾಂತ್ ಹಾಗೂ ಸಿನಿಮಾಟೋಗ್ರಾಫರ್ ಸಾಯಿ ತ್ರಿಲೋಕ್ ಭಾನುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ (Crime) ಅಪಘಾತದಲ್ಲಿ ಬಲಿಯಾಗಿದ್ದಾರೆ. ಯೌವನದ ಹೊಸ್ತಿಲಲ್ಲಿದ್ದ ಈ ಇಬ್ಬರೂ ಪ್ರತಿಭೆಗಳು ಕೇವಲ 31ನೇ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿರುವುದು ಸಿನಿಮಾ ಪ್ರೇಮಿಗಳಲ್ಲಿ ತೀವ್ರ ನೋವುಂಟು ಮಾಡಿದೆ. ನಿಯಂತ್ರಣ ತಪ್ಪಿ ಕಂಟೈನರ್‌ಗೆ ಡಿಕ್ಕಿ ಹೊಡೆದ ಕಾರು ನೆಹರು ಔಟರ್ ರಿಂಗ್ ರೋಡ್‌ನಲ್ಲಿ ಈ ಭೀಕರ ಘಟನೆ ನಡೆದಿದೆ. ಎಕ್ಸಿಟ್ ನಂಬರ್ 12ರ ಸಮೀಪ ಭರತ್…

Read More
tamilnadu new cm vijay old interview about favorite song and trisha goes viral

Vijay: ಸಿಎಂ ವಿಜಯ್‌ಗೆ ಡ್ರೈವಿಂಗ್ ಕಿಕ್ ಕೊಡೋದು ತ್ರಿಶಾ ಅಭಿನಯದ ಆ ಹಾಡಂತೆ! ಹಳೆಯ ವಿಡಿಯೋ ಈಗ ಫುಲ್ ವೈರಲ್

ತಮಿಳುನಾಡಿನ ಆಡಳಿತ ಚುಕ್ಕಾಣಿ ಹಿಡಿದಿರುವ ‘ದಳಪತಿ’ ವಿಜಯ್ (Vijay) ಅವರ ಹಳೆಯ ವಿಡಿಯೋವೊಂದು ಈಗ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಅವರ ವೈಯಕ್ತಿಕ ಇಷ್ಟ-ಕಷ್ಟಗಳ ಬಗ್ಗೆ ಅಭಿಮಾನಿಗಳು ಹೆಚ್ಚು ಆಸಕ್ತಿ ತೋರುತ್ತಿದ್ದು, ಈ ನಡುವೆ ನಟಿ ತ್ರಿಶಾ ಕುರಿತಾದ ಅವರ ಹಳೆಯ ಮಾತುಗಳು ಮುನ್ನೆಲೆಗೆ ಬಂದಿವೆ. ವಿಜಯ್ ಫೇವರಿಟ್ ‘ಅರ್ಜುನರ್ ವಿಲ್’ ಹಾಡು ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ ವಿಜಯ್ ತಮ್ಮ ಸಿನಿಪಯಣದ ಆಪ್ತ ಕ್ಷಣಗಳನ್ನು ಹಂಚಿಕೊಂಡಿದ್ದರು. “ನನಗೆ ನನ್ನದೇ ನಟನೆಯ ‘ಗಿಲ್ಲಿ‘…

Read More
new cm vijay meets dmk leader mk stalin in Chennai home

Vijay: ತಮಿಳುನಾಡು ಸಿಎಂ ಆಗಿ ವಿಜಯ್ ಅಧಿಕಾರ ಸ್ವೀಕಾರ: ಮರುದಿನವೇ ಸ್ಟಾಲಿನ್ ಭೇಟಿಯಾದ ‘ದಳಪತಿ’!

ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪಟ್ಟಕ್ಕೇರಿರುವ ನಟ ವಿಜಯ್ (Vijay) ಅವರು ಇಂದು ಮಹತ್ವದ ರಾಜಕೀಯ ಭೇಟಿಯೊಂದನ್ನು ನಡೆಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಡಿಎಂಕೆ ಹಿರಿಯ ನಾಯಕ ಎಂ.ಕೆ. ಸ್ಟಾಲಿನ್ ಅವರ ನಿವಾಸಕ್ಕೆ ತೆರಳಿದ ಅವರು, ಮಾಜಿ ಸಿಎಂ ಜೊತೆ ಕೆಲಕಾಲ ಸಮಾಲೋಚನೆ ನಡೆಸಿದರು. ಹೊಸ ಸಂಪುಟದಲ್ಲಿ ಹಳೆ-ಹೊಸ ಮುಖಗಳ (Vijay) ಸಮಾಗಮ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥರಾಗಿರುವ ವಿಜಯ್ ಅವರು ಭಾನುವಾರ ನಡೆದ ಅದ್ದೂರಿ ಸಮಾರಂಭದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರ ಸಂಪುಟದಲ್ಲಿ ಅನುಭವಿ…

Read More
Sandalwood Sanvi Sudeep Ganesha tattoo goes viral

Sanvi Sudeep: ಕಿಚ್ಚನ ಮಗಳ ಬೆನ್ನ ಮೇಲೆ ‘ಗಣಪನ’ ದರ್ಶನ: 8 ಗಂಟೆಗಳ ಕಾಲ ಕುಳಿತು ಸಾನ್ವಿ ಸುದೀಪ್ ಹಾಕಿಸಿಕೊಂಡ ಟ್ಯಾಟೂ ಹೇಗಿದೆ ನೋಡಿ!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ (Sanvi Sudeep) ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಇತ್ತೀಚೆಗಷ್ಟೇ ಹಾಡಿನ ಮೂಲಕ ಫೇಮಸ್ ಆಗಿದ್ದ ಸಾನ್ವಿ, ಈಗ ಬೆನ್ನಿನ ಮೇಲೆ ಬಿಡಿಸಿಕೊಂಡಿರುವ ಆಕರ್ಷಕ ಟ್ಯಾಟೂ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಗಣೇಶನ ಟ್ಯಾಟೂಗೆ ಸಾನ್ವಿ (Sanvi Sudeep) ಫಿದಾ! ಸಾಮಾನ್ಯವಾಗಿ ಸಣ್ಣಪುಟ್ಟ ಟ್ಯಾಟೂ ಹಾಕಿಸಿಕೊಳ್ಳುವವರ ನಡುವೆ ಸಾನ್ವಿ ಅವರು ಬೆನ್ನಿನ ಮೇಲ್ಭಾಗದಲ್ಲಿ ಅಂದರೆ ಕತ್ತಿನ ಕೆಳಭಾಗದಲ್ಲಿ ಅದ್ದೂರಿಯಾದ ಗಣೇಶನ ಚಿತ್ರವನ್ನು ಬಿಡಿಸಿಕೊಂಡಿದ್ದಾರೆ. ಈ ಟ್ಯಾಟೂ…

Read More
Good news Cm Siddaramaiah increased DA of government employs and pensioner

CM Siddaramaiah: ಸರ್ಕಾರಿ ನೌಕರರಿಗೆ ಸಿದ್ದರಾಮಯ್ಯ ಸತ್ಕಾರ: ಶೇ. 1.50 ರಷ್ಟು ತುಟ್ಟಿಭತ್ಯೆ ಹೆಚ್ಚಳ, ಇಂದಿನಿಂದಲೇ ಜಾರಿ!

ಬೆಂಗಳೂರು: ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಅವರು ಸಿಹಿ ಸುದ್ದಿ ನೀಡಿದ್ದಾರೆ. ನೌಕರರ ತುಟ್ಟಿಭತ್ಯೆಯನ್ನು (DA) ಮೂಲ ವೇತನದ ಶೇ. 1.50 ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ವಿಶೇಷವೆಂದರೆ, ಈ ಪರಿಷ್ಕೃತ ದರವು ಜನವರಿ 1, 2026ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ. 14.25 ರಿಂದ 15.75ಕ್ಕೆ ಏರಿಕೆ 2024ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ಪಡೆಯುತ್ತಿರುವ ನೌಕರರಿಗೆ ಈ ಹೆಚ್ಚಳದ ಲಾಭ ದೊರೆಯಲಿದೆ….

Read More
Narendra modi statement about gold created stress in market

Narendra Modi: ಮೋದಿಯವರ ‘ಚಿನ್ನ’ದ ಕರೆಗೆ ಆಭರಣ ಉದ್ಯಮ ತಲ್ಲಣ: 1 ಕೋಟಿ ಉದ್ಯೋಗಕ್ಕೆ ಸಂಚಕಾರದ ಭೀತಿ!

ನವದೆಹಲಿ: ಜಾಗತಿಕ ತೈಲ ಬಿಕ್ಕಟ್ಟು ಮತ್ತು ಆರ್ಥಿಕ ಒತ್ತಡದ ಹಿನ್ನೆಲೆಯಲ್ಲಿ “ಒಂದು ವರ್ಷ ಚಿನ್ನ ಖರೀದಿಸಬೇಡಿ” ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ನೀಡಿದ ಸಲಹೆಯು ದೇಶದ ಜ್ಯುವೆಲ್ಲರಿ ವಲಯದಲ್ಲಿ ಆತಂಕದ ಅಲೆ ಎಬ್ಬಿಸಿದೆ. ಸರ್ಕಾರದ ಈ ನಿಲುವಿನಿಂದಾಗಿ ಕೋಟ್ಯಂತರ ಕುಟುಂಬಗಳ ಜೀವನೋಪಾಯಕ್ಕೆ ಸಂಕಷ್ಟ ಎದುರಾಗಲಿದೆ ಎಂದು ಅಖಿಲ ಭಾರತ ರತ್ನ ಮತ್ತು ಆಭರಣ ದೇಶೀಯ ಮಂಡಳಿ (GJC) ಕಳವಳ ವ್ಯಕ್ತಪಡಿಸಿದೆ. ನಿರುದ್ಯೋಗದ ಭೀತಿಯಲ್ಲಿ ಒಂದು ಕೋಟಿ ಜನ ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಜೆಸಿ ಅಧ್ಯಕ್ಷ…

Read More
Ban on bottle supply of petrol and diesel in state

Petrol: ಇಂಧನ ಮಾರಾಟಕ್ಕೆ ಸರ್ಕಾರದ ಹೊಸ ಬ್ರೇಕ್: ಬಂಕ್‌ಗಳಲ್ಲಿ ಇನ್ನುಮುಂದೆ ಪೆಟ್ರೋಲ್ ಕ್ಯಾನ್, ಬಾಟಲಿಗಳಿಗೆ ನೋ ಎಂಟ್ರಿ!

ಬೆಂಗಳೂರು: ರಾಜ್ಯದ ಪೆಟ್ರೋಲ್ ಬಂಕ್‌ಗಳಲ್ಲಿ (Petrol) ಇಂಧನ ವಿತರಣೆಗೆ ಸಂಬಂಧಿಸಿದಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಮಹತ್ವದ ಬದಲಾವಣೆ ತಂದಿದೆ. ಇಂಧನ ದಾಸ್ತಾನು ನಿರ್ವಹಣೆ ಮತ್ತು ಸಾರ್ವಜನಿಕರ ರಕ್ಷಣೆಯ ಹಿತದೃಷ್ಟಿಯಿಂದ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದ್ದು, ನಿಯಮ ಮೀರುವ ಮಾಲೀಕರಿಗೆ ಭಾರೀ ದಂಡ ಹಾಗೂ ಪರವಾನಗಿ ರದ್ದತಿಯ ಎಚ್ಚರಿಕೆ ನೀಡಲಾಗಿದೆ. ವಾಹನಗಳ ಟ್ಯಾಂಕ್‌ಗಷ್ಟೇ ಇಂಧನ ಸೀಮಿತ ಸಾಮಾನ್ಯವಾಗಿ ತುರ್ತು ಅಗತ್ಯಕ್ಕೆ ಅಥವಾ ಗಾಡಿ ರಿಪೇರಿ ಎಂಬ ಕಾರಣ ನೀಡಿ ಬಾಟಲಿ ಹಾಗೂ ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಪೆಟ್ರೋಲ್…

Read More