TOP NEWS
Narendra modi statement used by women to send msg to hr

Narendra Modi: “ಮೋದಿ ಹೇಳಿದ್ದಾರೆ, ನಾನು ಆಫೀಸ್‌ಗೆ ಬರಲ್ಲ”: ಪ್ರಧಾನಿ ಮನವಿಯನ್ನೇ ನೆಪವಾಗಿಸಿ WFH ಕೇಳಿದ ಯುವತಿಯ ಇಮೇಲ್ ವೈರಲ್!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ‘ಮಿತವ್ಯಯ’ದ ಕರೆಯನ್ನು ಯುವತಿಯೊಬ್ಬಳು ತನಗೆ ಬೇಕಾದಂತೆ ಬಳಸಿಕೊಂಡಿರುವ ರೀತಿ ಈಗ ಇಂಟರ್ನೆಟ್‌ನಲ್ಲಿ ಭಾರಿ ನಗು ಹರಿಸುತ್ತಿದೆ. ದೇಶಕ್ಕಾಗಿ ಇಂಧನ ಉಳಿಸಿ ಎಂದು ಪ್ರಧಾನಿ ಹೇಳಿದ್ದನ್ನೇ ಅಸ್ತ್ರವಾಗಿಸಿಕೊಂಡ ಸುಪ್ರಿಯಾ ಎಂಬ ಉದ್ಯೋಗಿ, ತನಗೆ 2027ರವರೆಗೆ ‘ವರ್ಕ್ ಫ್ರಮ್ ಹೋಮ್’ ಬೇಕೆಂದು ಕಂಪನಿಗೆ ಇಮೇಲ್ ಮಾಡಿದ್ದಾಳೆ. ದೇಶಪ್ರೇಮದ ಹೆಸರಲ್ಲಿ ‘ಮನೆಗೆಲಸ’ದ ಬೇಡಿಕೆ ಪಶ್ಚಿಮ ಏಷ್ಯಾದ ಯುದ್ಧದ ಭೀತಿಯಿಂದಾಗಿ ಪೆಟ್ರೋಲ್ ಉಳಿಸಲು ಪ್ರಧಾನಿ ಮೋದಿ ಜನತೆಗೆ ಮನವಿ ಮಾಡಿದ್ದರು. ಇದನ್ನು ಗಂಭೀರವಾಗಿ…

Read More
Ambani family introduces Vantara Creamery a premium ice cream brand

Vantara: ಐಸ್‌ಕ್ರೀಂ ಲೋಕಕ್ಕೆ ಅಂಬಾನಿ ಪುತ್ರನ ಎಂಟ್ರಿ: ಎ2 ಗಿರ್ ಹಸುವಿನ ಹಾಲಿನ ‘ವಂತಾರಾ ಕ್ರೀಮರಿ’ ಈಗ ಮುಂಬೈನಲ್ಲಿ ಲಭ್ಯ!

ಮುಂಬೈ: ವನ್ಯಜೀವಿಗಳ ರಕ್ಷಣೆಗಾಗಿ ‘ವಂತಾರಾ’ (Vantara) ಎಂಬ ಬೃಹತ್ ಅಭಿಯಾನ ಆರಂಭಿಸಿದ್ದ ಅನಂತ್ ಅಂಬಾನಿ, ಈಗ ಆಹಾರ ಮತ್ತು ಜೀವನಶೈಲಿ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಮುಖೇಶ್ ಅಂಬಾನಿ ಅವರ ಪುತ್ರನ ಈ ಹೊಸ ಸಾಹಸದ ಭಾಗವಾಗಿ ‘ವಂತಾರಾ ಕ್ರೀಮರಿ’ ಎಂಬ ಆರ್ಟಿಸನಲ್ ಐಸ್‌ಕ್ರೀಂ ಬ್ರ್ಯಾಂಡ್ ಮುಂಬೈನಲ್ಲಿ ಅದ್ಧೂರಿಯಾಗಿ ಚಾಲನೆ ಪಡೆದಿದೆ. ಗಿರ್ ಹಸುವಿನ ಹಾಲಿನ ವಿಶೇಷತೆ ಈ ಐಸ್‌ಕ್ರೀಂಗಳ ಪ್ರಮುಖ ಆಕರ್ಷಣೆಯೇ ಅದರ ಶುದ್ಧತೆ. ಎ2 ದರ್ಜೆಯ ಗಿರ್ ಹಸುಗಳ ಹಾಲಿನಿಂದ ತಯಾರಿಸಲಾದ ಈ ಐಸ್‌ಕ್ರೀಂಗಳು ನೈಸರ್ಗಿಕ ರುಚಿಯನ್ನು…

Read More
supreme court notice about land dispute case in high courts

Supreme Court: “ಜಾಮೀನು ಅರ್ಜಿಗಳನ್ನು ಬಾಕಿ ಇಡಬೇಡಿ”: ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್‌ನಿಂದ ಕಟ್ಟುನಿಟ್ಟಿನ ಡೆಡ್‌ಲೈನ್!

ನವದೆಹಲಿ: ದೇಶದ ವಿವಿಧ ಉನ್ನತ ನ್ಯಾಯಾಲಯಗಳಲ್ಲಿ (High Courts) ಲಕ್ಷಾಂತರ ಜಾಮೀನು ಅರ್ಜಿಗಳು ವಿಲೇವಾರಿಯಾಗದೆ ಉಳಿದಿರುವ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ವ್ಯಕ್ತಿಯ ಸ್ವಾತಂತ್ರ್ಯವನ್ನು ಕಾಪಾಡುವುದು ನ್ಯಾಯಾಂಗದ ಮೊದಲ ಆದ್ಯತೆಯಾಗಬೇಕು ಎಂದು ಹೇಳಿರುವ ಸುಪ್ರೀಂ ಕೋರ್ಟ್, ಈ ಪ್ರಕ್ರಿಯೆಯನ್ನು ವೇಗಗೊಳಿಸಲು ಮಹತ್ವದ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅಲಹಾಬಾದ್ ಮತ್ತು ಪಾಟ್ನಾ ಹೈಕೋರ್ಟ್‌ಗಳ ಸ್ಥಿತಿಗೆ ಕಳವಳ ಸಿಜೆಐ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರಿದ್ದ ಪೀಠವು ವಿಶೇಷವಾಗಿ ಉತ್ತರ ಪ್ರದೇಶ ಮತ್ತು ಬಿಹಾರದ…

Read More
kollywood Trisha Krishnan to act in kamal and rajini film

Trisha Krishnan: ರಜನಿ-ಕಮಲ್ ಮೆಗಾ ಮೂವಿಗೆ ನಾಯಕಿ ಫಿಕ್ಸ್: ‘ದಳಪತಿ’ಯ ಗಿಲ್ಲಿ ಬೆಡಗಿ ತ್ರಿಶಾಗೆ ಲಕ್ಕಿ ಚಾನ್ಸ್!

ಚೆನ್ನೈ: ಕಾಲಿವುಡ್‌ನ ಇಬ್ಬರು ದಿಗ್ಗಜ ನಟರಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ದಶಕಗಳ ನಂತರ ಒಂದಾಗುತ್ತಿರುವ ‘KHxRK’ ಚಿತ್ರದ ಬಗ್ಗೆ ದಿನಕ್ಕೊಂದು ರೋಚಕ ಸುದ್ದಿಗಳು ಹೊರಬರುತ್ತಿವೆ. ಈಗ ಈ ಬೃಹತ್ ಸಿನಿಮಾಗೆ ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ತ್ರಿಶಾ ಕೃಷ್ಣನ್ (Trisha Krishnan) ನಾಯಕಿಯಾಗಿ ಆಯ್ಕೆಯಾಗುವ ಮೂಲಕ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದ್ದಾರೆ. ತಾರಾಬಳಗಕ್ಕೆ ತ್ರಿಶಾ ಎಂಟ್ರಿ ಸುಮಾರು ಎರಡು ದಶಕಗಳಿಂದ ಸಿನಿಮಾ ರಂಗದಲ್ಲಿ ಸಕ್ರಿಯವಾಗಿರುವ ತ್ರಿಶಾ, ಈ ಚಿತ್ರದಲ್ಲಿ ಮಹತ್ವದ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ. ವರದಿಗಳ ಪ್ರಕಾರ, ಇಬ್ಬರು…

Read More
modi cabinet should scarifies first not people says DK Shivakumar

DK Shivakumar: ಜನರಿಗೆ ಬುದ್ಧಿ ಹೇಳುವ ಮುನ್ನ ನಿಮ್ಮ ಸಚಿವರು ಬಸ್‌ ಹತ್ತಲಿ”: ಪ್ರಧಾನಿ ಮೋದಿಗೆ ಡಿ.ಕೆ. ಶಿವಕುಮಾರ್‌ ನೇರ ಸವಾಲು!

ಬೆಂಗಳೂರು: ಪೆಟ್ರೋಲ್‌ ಬಳಕೆ ತಗ್ಗಿಸಿ ಹಾಗೂ ಬಂಗಾರ ಕೊಳ್ಳುವುದನ್ನು ನಿಲ್ಲಿಸಿ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಜನರ ವೈಯಕ್ತಿಕ ಬದುಕು ಮತ್ತು ಸಂಪ್ರದಾಯಗಳ ಬಗ್ಗೆ ಮಾತನಾಡುವ ಮುನ್ನ ಕೇಂದ್ರ ಸರ್ಕಾರ ವಾಸ್ತವ ನೆಲೆಗಟ್ಟಿನಲ್ಲಿ ಯೋಚಿಸಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿನ್ನದ ಮೇಲಿನ ನಿರ್ಬಂಧಕ್ಕೆ ಆಕ್ಷೇಪ ದೇಶದಲ್ಲಿ ಚಿನ್ನ ಮತ್ತು ಇಂಧನ ಬೆಲೆ ಏರಿಕೆಗೆ ಕೇಂದ್ರದ ನೀತಿಗಳೇ ಕಾರಣ ಎಂದು ಆರೋಪಿಸಿದ ಡಿ.ಕೆ. ಶಿವಕುಮಾರ್‌,…

Read More
HD devegowda supports modi regarding his limit usage statement

HD Devegowda: ಪ್ರಧಾನಿ ಮೋದಿ ‘ಮಿತ ಬಳಕೆ’ ಕರೆಗೆ ದೇವೇಗೌಡರ ಬೆಂಬಲ: ದೇಶದಲ್ಲಿ ಇಂಧನ ಕೊರತೆ ಇಲ್ಲ ಎಂದು ಕೇಂದ್ರದ ಸ್ಪಷ್ಟನೆ

ಬೆಂಗಳೂರು: ಸಂಪನ್ಮೂಲಗಳನ್ನು ಹಿತಮಿತವಾಗಿ ಬಳಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಸಂದೇಶಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು (HD Devegowda) ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳ ಭೀಕರ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ಮೋದಿ ಅವರು ಈ ಸಲಹೆ ನೀಡಿದ್ದಾರೆ, ಇದನ್ನು ದೇಶದ 150 ಕೋಟಿ ಜನರೂ ಪಾಲಿಸಬೇಕು ಎಂದಿದ್ದಾರೆ. ಯುದ್ಧದ ನೆರಳು ಮತ್ತು ಮಿತ (HD Devegowda) ಬಳಕೆಯ ಅಗತ್ಯ ಅಮೆರಿಕ, ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ…

Read More
central government to end narega and starting new one

Narega: ನರೇಗಾ ಇನ್ನು ಇತಿಹಾಸ: ಜುಲೈ 1ರಿಂದ ದೇಶಾದ್ಯಂತ ಜಾರಿಗೆ ಬರಲಿದೆ ‘ವಿಬಿ ಜಿರಾಮ್‌ಜಿ’ ಕಾಯ್ದೆ!

ನವದೆಹಲಿ: ಗ್ರಾಮೀಣ ಭಾರತದ ಬದುಕಿಗೆ ಆಧಾರವಾಗಿದ್ದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) (Narega) ಯೋಜನೆಗೆ ಕೇಂದ್ರ ಸರ್ಕಾರ ಮಂಗಳ ಹಾಡಿದೆ. ಇದರ ಬದಲಾಗಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ‘ವಿಕಸಿತ ಭಾರತ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್’ (VB Jiram-G) ಎಂಬ ಹೊಸ ಕಾಯ್ದೆಯನ್ನು ಕೇಂದ್ರ ಸರ್ಕಾರ ಸೋಮವಾರ ಘೋಷಿಸಿದ್ದು, ಜುಲೈ 1ರಿಂದ ಇದು ಜಾರಿಗೆ ಬರಲಿದೆ. ಜೂನ್ 30ಕ್ಕೆ ಹಳೆಯ ಯೋಜನೆಗೆ ತೆರೆ ದಶಕಗಳಿಂದ ಜಾರಿಯಲ್ಲಿದ್ದ ನರೇಗಾ (MGNREGA-2005) ಕಾಯ್ದೆಯು ಜೂನ್ 30ರಂದು ಅಧಿಕೃತವಾಗಿ…

Read More