Viral News: ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಅತ್ತೆಯ ಮರಣ ಶಾಸನ ಬರೆದ ಸೊಸೆ!: ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದ 20 ರೂಪಾಯಿ ನೋಟು!
ಆಂಧ್ರಪ್ರದೇಶ: ಸಾಮಾನ್ಯವಾಗಿ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತಾದಿಗಳು ತಮಗೆ ಒಳ್ಳೆಯದಾಗಲಿ, ಮನೆ ಮಂದಿಗೆಲ್ಲಾ ಸುಖ-ಶಾಂತಿ ಸಿಗಲಿ ಎಂದು ದೇವರಲ್ಲಿ ಮೊರೆ ಇಡುತ್ತಾರೆ. ಆದರೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಿಂದ ಇಡೀ ಸಮಾಜವೇ ಮೂಗಿನ ಮೇಲೆ ಬೆರಳಿಡುವಂತಹ ವಿಲಕ್ಷಣ ಪ್ರಸಂಗವೊಂದು ಮುನ್ನೆಲೆಗೆ (Viral News) ಬಂದಿದೆ. ಅತ್ತೆಯ ಕಿರುಕುಳದಿಂದ ಸಂಪೂರ್ಣವಾಗಿ ಜಿಗುಪ್ಸೆಗೊಂಡ ಸೊಸೆಯೊಬ್ಬಳು, ತನ್ನ ಅತ್ತೆ ಇಷ್ಟರಲ್ಲೇ ಸಾಯುವಂತೆ ಅನುಗ್ರಹಿಸು ಎಂದು ನೇರವಾಗಿ ದೇವರಿಗೇ ಪತ್ರ ಬರೆದು ಹುಂಡಿಗೆ ಎಸೆದು ಬಂದಿದ್ದಾಳೆ! ಎಲ್ಲಿ ನಡೆದಿದ್ದು ಈ ಘಟನೆ? ಈ ಕುತೂಹಲಕಾರಿ…
