TOP NEWS
Floral Welcome from the Skies Uttar Pradesh Govt Plans Aerial Flower Showers for Kanwar Yatra Across 7 Districts

Uttar Pradesh: ಯುಪಿಯಲ್ಲಿ ಕಂವಾರ ಯಾತ್ರಿಕರಿಗೆ ಹೆಲಿಕಾಪ್ಟರ್ ಪುಷ್ಪವೃಷ್ಟಿ; 7 ಜಿಲ್ಲೆಗಳಲ್ಲಿ 10 ಗಂಟೆಗಳ ಕಾಲ ಅಬ್ಬರಿಸಲಿದೆ ಹೂವಿನ ಮಳೆ!

ಲಕ್ನೋ: ಪಶ್ಚಿಮ ಉತ್ತರ ಪ್ರದೇಶದ (Uttar Pradesh) ಪ್ರಮುಖ ರಸ್ತೆಗಳಲ್ಲಿ ಸಾಗುವ ಕಂವಾರ ಯಾತ್ರಿಕರಿಗೆ ಈ ಬಾರಿ ವಿಶೇಷ ರೀತಿಯ ಗೌರವ ಸಿಗಲಿದೆ. ಆ ಆಗಸ್ಟ್ 9 ಮತ್ತು 10 ರಂದು ಏಳು ಜಿಲ್ಲೆಗಳಾದ್ಯಂತ ಹೆಲಿಕಾಪ್ಟರ್ ಮೂಲಕ ಕಂವಾರಿಯರ ಮೇಲೆ ಹೂವಿನ ಮಳೆ ಸುರಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಶಿವಭಕ್ತರ ಯಾತ್ರೆ ಅತ್ಯಂತ ವೈಭವದಿಂದ, ಸುರಕ್ಷಿತವಾಗಿ ಮತ್ತು ಶ್ರದ್ಧಾಭಕ್ತಿಗಳಿಂದ ನಡೆಯುವಂತೆ ಮಾಡಲು ಸರ್ಕಾರ ಈ ವಿಶೇಷ ವ್ಯವಸ್ಥೆ ಮಾಡಿದೆ. ಹೀಗಿದೆ ಸರ್ಕಾರದ ವೇಳಾಪಟ್ಟಿ ಸರ್ಕಾರ ಬಿಡುಗಡೆ…

Read More
Yogi Adityanath Government Big Move Jalalabad Officially Renamed Parashuramapuri

Yogi Adityanath: ಉತ್ತರ ಪ್ರದೇಶದಲ್ಲಿ ಮತ್ತೊಂದು ನಗರದ ಹೆಸರು ಬದಲಾವಣೆ: ಜಲಾಲಾಬಾದ್ ಇನ್ಮುಂದೆ ‘ಪರಶುರಾಮಪುರಿ’

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ನೇತೃತ್ವದ ಸರ್ಕಾರವು ಮತ್ತೊಂದು ಮಹತ್ವದ ಹೆಸರು ಬದಲಾವಣೆಯ ತೀರ್ಮಾನ ಕೈಗೊಂಡಿದೆ. ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಷಹಜಹಾನ್‌ಪುರ ಜಿಲ್ಲೆಯ ಪ್ರಮುಖ ಪಟ್ಟಣವಾದ ಜಲಾಲಾಬಾದ್ ಹೆಸರನ್ನು ಅಧಿಕೃತವಾಗಿ ‘ಪರಶುರಾಮಪುರಿ’ ಎಂದು ಮರುನಾಮಕರಣ ಮಾಡಲು ಅನುಮೋದನೆ ನೀಡಲಾಗಿದೆ. ಈ ಐತಿಹಾಸಿಕ ತೀರ್ಮಾನದ ಮೂಲಕ ಈ ಪ್ರಾಚೀನ ಪಟ್ಟಣಕ್ಕೆ ಹೊಸ ಸಾಂಸ್ಕೃತಿಕ ಹಾಗೂ ಧಾರ್ಮಿಕ ಗುರುತು ಸಿಕ್ಕಂತಾಗಿದೆ. ಸ್ಥಳದ ಹಿನ್ನಲೆ ಏನು? ಪೌರಾಣಿಕ ಹಿನ್ನೆಲೆಯ ಪ್ರಕಾರ, ಈ ಜಲಾಲಾಬಾದ್ ಪ್ರದೇಶವು…

Read More
Crime NEET aspirant takes his life after

Crime: ನೀಟ್ ಮರುಪರೀಕ್ಷೆಗೆ ಮುನ್ನವೇ ಘೋರ ದುರಂತ: ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ

ಘಾಜಿಯಾಬಾದ್: ದೇಶಾದ್ಯಂತ ಜೂನ್ 21ರಂದು ನೀಟ್ ಮರುಪರೀಕ್ಷೆ ನಡೆಯಲು ಇನ್ನು ಕೇವಲ ಎರಡೇ ದಿನ ಬಾಕಿ ಇರುವಾಗ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಅತ್ಯಂತ ಬೇಸರದ (Crime) ಘಟನೆಯೊಂದು ಸಂಭವಿಸಿದೆ. ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ 22 ವರ್ಷದ ವೈದ್ಯಕೀಯ ಆಕಾಂಕ್ಷಿ ಜತಿನ್ ಕುಮಾರ್ ಎಂಬ ಯುವಕ ಪ್ರತಾಪ್ ವಿಹಾರ್‌ನಲ್ಲಿರುವ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿಗೂ ಮುನ್ನ ಆತ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿರುವ ಕೊನೆಯ ವಿಡಿಯೋ ಈಗ ಲಭ್ಯವಾಗಿದ್ದು, ಇಡೀ ಪ್ರಕರಣಕ್ಕೆ ಹೊಸ ತಿರುವು…

Read More
new ATM scam fraudsters allegedly tampered

ATM Scam: ಏಟಿಎಂ ಕ್ಯಾಶ್‌ ಬಾಕ್ಸ್‌ಗೆ ಟೇಪ್‌ ಅಂಟಿಸಿ ಗ್ರಾಹಕರಿಗೆ ಪಂಗನಾಮ

ಪ್ರಯಾಗ್‌ರಾಜ್: ಬ್ಯಾಂಕ್ ಖಾತೆದಾರರನ್ನು ಲೂಟಿ ಮಾಡಲು ಸೈಬರ್ ಕಳ್ಳರು ಹಾಗೂ ಸ್ಥಳೀಯ ವಂಚಕರು ದಿನಕ್ಕೊಂದು ವಿನೂತನ ಉಪಾಯಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇದೀಗ ಏಟಿಎಂ (ATM Scam) ಯಂತ್ರದ ಒಳಭಾಗವನ್ನೇ ಜಾಣ್ಮೆಯಿಂದ ಟ್ಯಾಂಪರ್ ಮಾಡಿ, ಗ್ರಾಹಕರು ಡ್ರಾ ಮಾಡುವ ಹಣವನ್ನು ಕದಿಯುವ ಸಖತ್ ಡೇಂಜರಸ್ ಸ್ಕ್ಯಾಮ್ ಒಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಬ್ಯಾಂಕ್ ಆಫ್ ಬರೋಡಾದ ಏಟಿಎಂ ಕೇಂದ್ರವೊಂದರಲ್ಲಿ ವಂಚಕರು ಈ ಕೃತ್ಯ ಎಸಗಿದ್ದು, ಪ್ರಸ್ತುತ ಇದಕ್ಕೆ ಸಂಬಂಧಿಸಿದ ಶಾಕಿಂಗ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ…

Read More
Crime groom family asked extra dowry on wedding day

Crime: ವರದಕ್ಷಿಣೆ ದುರಾಸೆಗೆ ಮದುವೆ ಮಂಟಪದಲ್ಲೇ ಬೀಗರ ಜಗಳ, ಕಲ್ಯಾಣ ಮಂಟಪವೇ ರಣರಂಗ

ಉತ್ತರ ಪ್ರದೇಶ: ವರದಕ್ಷಿಣೆ ಎಂಬ ಸಾಮಾಜಿಕ (Crime) ಪಿಡುಗು ಇಂದಿನ ಆಧುನಿಕ ಜಗತ್ತಿನಲ್ಲೂ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿಯಾಗಿ ಉತ್ತರ ಪ್ರದೇಶದ ಝಾನ್ಸಿಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ವರನ ಕಡೆಯವರು ಮದುವೆ ಮಂಟಪದಲ್ಲೇ ದಿಢೀರನೆ ಹೆಚ್ಚುವರಿ ಹಣಕ್ಕಾಗಿ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ನಡುವೆ ಭೀಕರ ಹೊಡೆದಾಟ ನಡೆದಿದ್ದು, ಸುಂದರ ಮದುವೆ ಮನೆ ನೋಡನೋಡುತ್ತಿದ್ದಂತೆಯೇ ಯುದ್ಧಭೂಮಿಯಾಗಿ ಮಾರ್ಪಟ್ಟಿದೆ. ಹಾರ ಬದಲಾಯಿಸುವ ಹಣಕ್ಕೆ ಬೇಡಿಕೆ ಇಟ್ಟ ವರನ ಕುಟುಂಬ ಝಾನ್ಸಿಯ ಪ್ರೇಮನಗರ ಪೊಲೀಸ್ ಠಾಣಾ…

Read More
SP leader azam khan sentenced with 2 years jail and 5 thousand fine

Azam Khan: ಅಧಿಕಾರಿಗಳ ವಿರುದ್ಧ ನಿಂದನೆ: ಆಜಂ ಖಾನ್‌ಗೆ 2 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದ ಕೋರ್ಟ್

ನವದೆಹಲಿ: ವಿವಾದಾತ್ಮಕ ಹೇಳಿಕೆಗಳ ಮೂಲಕ ಸದಾ ಸುದ್ದಿಯಲ್ಲಿರುವ ಸಮಾಜವಾದಿ ಪಕ್ಷದ (SP) ಪ್ರಭಾವಿ ನಾಯಕ ಆಜಂ ಖಾನ್ (Azam Khan) ಅವರಿಗೆ ಕಾನೂನು ಸಂಕಷ್ಟಗಳು ಮುಗಿಯುವಂತೆ ಕಾಣುತ್ತಿಲ್ಲ. ಕಳೆದ 2019ರ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಸಾರ್ವಜನಿಕವಾಗಿ ಅವಹೇಳನಕಾರಿ ಮಾತುಗಳನ್ನಾಡಿದ ಆರೋಪ ಸಾಬೀತಾಗಿದ್ದು, ವಿಶೇಷ ನ್ಯಾಯಾಲಯವು ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ 5,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಏನಿದು ವಿವಾದಾತ್ಮಕ ಭಾಷಣ?: 2019ರಲ್ಲಿ ನಡೆದ ಚುನಾವಣಾ ಸಮಾವೇಶವೊಂದರಲ್ಲಿ ಮಾತನಾಡಿದ್ದ ಆಜಂ ಖಾನ್,…

Read More
heavy storm in uttar pradesh 104 people lost life

Heavy Storm: ಯುಪಿಯಲ್ಲಿ ಪ್ರಕೃತಿ ವಿಕೋಪ: 104ಕ್ಕೆ ಏರಿದ ಸಾವಿನ ಸಂಖ್ಯೆ

ಲಕ್ನೋ: ಉತ್ತರ ಪ್ರದೇಶದಲ್ಲಿ ಬುಧವಾರ ಸಂಜೆ ಸಂಭವಿಸಿದ ಭೀಕರ ಬಿರುಗಾಳಿ (Heavy Storm) ಮತ್ತು ಅಕಾಲಿಕ ಮಳೆಗೆ ಬಲಿಯಾದವರ ಸಂಖ್ಯೆ 104ಕ್ಕೆ ಏರಿಕೆಯಾಗಿದ್ದು, ರಾಜ್ಯಾದ್ಯಂತ ಸ್ಮಶಾನ ಮೌನ ಆವರಿಸಿದೆ. ಕೇವಲ ಕೆಲವೇ ಗಂಟೆಗಳಲ್ಲಿ ಬದಲಾದ ಹವಾಮಾನವು ಸಾವಿರಾರು ಜನರ ಬದುಕನ್ನು ಅಸ್ತವ್ಯಸ್ತಗೊಳಿಸಿದೆ. ಬೃಹತ್ ಮರಗಳು ನೆಲಕ್ಕುರುಳಿವೆ, ಮನೆಗಳ ಗೋಡೆಗಳು ಕುಸಿದಿವೆ ಮತ್ತು ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಮೃತರ ಸಂಖ್ಯೆಯು ರಾತ್ರೋರಾತ್ರಿ 27ರಿಂದ 89ಕ್ಕೆ ಏರಿದ್ದು, ಇನ್ನೂ ಅನೇಕರು ಗಾಯಗೊಂಡಿರುವುದರಿಂದ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ…

Read More