Uttar Pradesh: ಯುಪಿಯಲ್ಲಿ ಕಂವಾರ ಯಾತ್ರಿಕರಿಗೆ ಹೆಲಿಕಾಪ್ಟರ್ ಪುಷ್ಪವೃಷ್ಟಿ; 7 ಜಿಲ್ಲೆಗಳಲ್ಲಿ 10 ಗಂಟೆಗಳ ಕಾಲ ಅಬ್ಬರಿಸಲಿದೆ ಹೂವಿನ ಮಳೆ!
ಲಕ್ನೋ: ಪಶ್ಚಿಮ ಉತ್ತರ ಪ್ರದೇಶದ (Uttar Pradesh) ಪ್ರಮುಖ ರಸ್ತೆಗಳಲ್ಲಿ ಸಾಗುವ ಕಂವಾರ ಯಾತ್ರಿಕರಿಗೆ ಈ ಬಾರಿ ವಿಶೇಷ ರೀತಿಯ ಗೌರವ ಸಿಗಲಿದೆ. ಆ ಆಗಸ್ಟ್ 9 ಮತ್ತು 10 ರಂದು ಏಳು ಜಿಲ್ಲೆಗಳಾದ್ಯಂತ ಹೆಲಿಕಾಪ್ಟರ್ ಮೂಲಕ ಕಂವಾರಿಯರ ಮೇಲೆ ಹೂವಿನ ಮಳೆ ಸುರಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಶಿವಭಕ್ತರ ಯಾತ್ರೆ ಅತ್ಯಂತ ವೈಭವದಿಂದ, ಸುರಕ್ಷಿತವಾಗಿ ಮತ್ತು ಶ್ರದ್ಧಾಭಕ್ತಿಗಳಿಂದ ನಡೆಯುವಂತೆ ಮಾಡಲು ಸರ್ಕಾರ ಈ ವಿಶೇಷ ವ್ಯವಸ್ಥೆ ಮಾಡಿದೆ. ಹೀಗಿದೆ ಸರ್ಕಾರದ ವೇಳಾಪಟ್ಟಿ ಸರ್ಕಾರ ಬಿಡುಗಡೆ…
