TOP NEWS
crime police arrested a gang for thefting in bus

Crime: ಮಕ್ಕಳಿಂದ ವಾಂತಿ ನಾಟಕವಾಡಿಸಿ ಚಿನ್ನಾಭರಣ ದೋಚುತ್ತಿದ್ದ ಖತರ್ನಾಕ್ ಗ್ಯಾಂಗ್ ಪೊಲೀಸರ ವಶಕ್ಕೆ!

ಹೊಸಕೋಟೆ: ಬಸ್ಸುಗಳಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಅವರ ಮೈಮೇಲಿನ ಒಡವೆಗಳನ್ನು (Crime) ಲೂಟಿ ಮಾಡುತ್ತಿದ್ದ ಕುಪ್ಪಂ ಮೂಲದ ಗ್ಯಾಂಗ್‌ನ ಪ್ರಮುಖ ಆರೋಪಿಯನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ. ಕಳ್ಳತನದ ವಿಶಿಷ್ಟ ಶೈಲಿ: ಈ ಗ್ಯಾಂಗ್ ಕಳ್ಳತನಕ್ಕಾಗಿ ಮಕ್ಕಳನ್ನು ಬಳಸಿಕೊಳ್ಳುತ್ತಿತ್ತು. ಬಸ್ಸಿನಲ್ಲಿ ಪ್ರಯಾಣಿಸುವಾಗ ಈ ತಂಡದ ಸದಸ್ಯರು ತಮ್ಮೊಂದಿಗಿದ್ದ ಮಗುವಿಗೆ ವಾಂತಿ ಬರುತ್ತಿದೆ ಎಂದು ನಾಟಕವಾಡುತ್ತಿದ್ದರು. ಮಗುವಿನ ಅಸ್ವಸ್ಥತೆ ನೋಡಿ ಪ್ರಯಾಣಿಕರು ಸಹಾಯಕ್ಕೆ ಬಂದಾಗ ಅಥವಾ ಅವರ…

Read More
Thieves Dial Police Helpline For Rescue After Being Caught By Mob while doing theft

Theft: ಕಳ್ಳತನಕ್ಕೆ ಹೋದವರು ಜನರಿಗೆ ಹೆದರಿ ಪೊಲೀಸರಿಗೇ ಫೋನ್‌ ಮಾಡಿದರು! ಒಡಿಶಾದಲ್ಲಿ ನಡೆದ ‘ಉಲ್ಟಾ’ ಘಟನೆ

ಭುವನೇಶ್ವರ: ಕಳ್ಳರು ಪೊಲೀಸರನ್ನು ಕಂಡರೆ ಓಡಿಹೋಗುವುದು ನಮಗೆ ಗೊತ್ತು. ಆದರೆ ಒಡಿಶಾದ ಬಸಂತಿ ಕಾಲೋನಿಯಲ್ಲಿ ನಡೆದ ಘಟನೆಯಲ್ಲಿ, ಇಬ್ಬರು ಕಳ್ಳರು ಸಾರ್ವಜನಿಕರ ಹೊಡೆತಕ್ಕೆ ಹೆದರಿ ತಾವೇ ಪೊಲೀಸರಿಗೆ ಫೋನ್ ಮಾಡಿ “ನಮ್ಮನ್ನು ಕಾಪಾಡಿ” ಎಂದು (Theft) ಕೇಳಿಕೊಂಡಿದ್ದಾರೆ! ಈ ವಿಲಕ್ಷಣ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಮನೆಗೆ ನುಗ್ಗಿದ್ದ ಖದೀಮರು: ನಾನಕ್ ಸಿಂಗ್ ಮತ್ತು ಸತ್ಯೇಂದ್ರ ಕುಮಾರ್ ಸಿಂಗ್ ಎಂಬಿಬ್ಬರು ಕಳ್ಳರು ಗಣೇಶ್ ಬಿಸ್ವಾಲ್ ಎಂಬುವವರ ಎರಡು ಅಂತಸ್ತಿನ ಮನೆಗೆ ಕನ್ನ ಹಾಕಿದ್ದರು….

Read More
Theft raichuru police arrested marriage broker

Theft: ಮದುವೆ ಬ್ರೋಕರ್ ಸೋಗಿನಲ್ಲಿ ಬೈಕ್ ಕಳ್ಳತನ; ಖದೀಮ ದೊಡ್ಡಬಸವ ಅರೆಸ್ಟ್

ರಾಯಚೂರು: ಮದುವೆಗೆ ಕನ್ಯೆ ತೋರಿಸುವುದಾಗಿ ನಂಬಿಸಿ ಅಮಾಯಕರನ್ನು (Theft) ಲೂಟಿ ಮಾಡುತ್ತಿದ್ದ ಖತರ್ನಾಕ್ ಆರೋಪಿಯನ್ನು ಕವಿತಾಳ ಪೊಲೀಸರು ಬಂಧಿಸಿದ್ದಾರೆ. ಮಸ್ಕಿ ತಾಲೂಕಿನ ಬಳಗಾನೂರು ಗ್ರಾಮದ ದೊಡ್ಡಬಸವ ಬಂಧಿತ ಆರೋಪಿಯಾಗಿದ್ದು, ಈತನಿಂದ ₹8.40 ಲಕ್ಷ ಮೌಲ್ಯದ ಒಟ್ಟು 14 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜನರ ಅಸಹಾಯಕತೆಯೇ ಬಂಡವಾಳ ಮದುವೆಯಾಗಲು ಹೆಣ್ಣು ಹುಡುಕುತ್ತಿರುವ ಯುವಕರ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡಿದ್ದ ಈತ, ಮದುವೆ ದಲ್ಲಾಳಿಯಂತೆ ನಟಿಸುತ್ತಿದ್ದ. ಹೆಣ್ಣು ನೋಡಲು ಬರುವವರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಕು ತೋರಿಸಿ ಬೆದರಿಸುತ್ತಿದ್ದ. ಬಳಿಕ ಅವರ ಬಳಿಯಿದ್ದ…

Read More
Theft crime Mysuru police returned lost items to people

Theft: ಮೈಸೂರಿನಲ್ಲಿ ಕಳವು ಪ್ರಕರಣ ಭೇದಿಸಿದ ಪೊಲೀಸರು, ಮಾಲೀಕರಿಗೆ ವಸ್ತುಗಳ ಹಸ್ತಾಂತರ

ಮೈಸೂರು: ನಗರದಲ್ಲಿ ಕಳವು ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಚಿನ್ನ, ಬೆಳ್ಳಿ, ವಾಹನ, ನಗದು ಸೇರಿದಂತೆ ಕದ್ದ ವಸ್ತುಗಳನ್ನು (Theft) ಅವುಗಳ ಮಾಲೀಕರಿಗೆ ತಲುಪಿಸಲಾಗಿದೆ ಎಂದು ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದ್ದಾರೆ.  2 ಕೋಟಿ 96 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಸುದ್ದಿಗೋಷ್ಠಿಯಲ್ಲಿ ಅವರು, ಸರಸ್ವತಿಪುರಂ, ಕುವೆಂಪುನಗರ, ಲಷ್ಕರ್‌, ವಿದ್ಯಾರಣ್ಯಪುರಂ, ವಿಜಯನಗರ, ಮೇಟಗಳ್ಳಿ, ಮಂಡಿ ಹಾಗೂ ನರಸಿಂಹರಾಜ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಕಳವು ಪ್ರಕರಣಗಳಲ್ಲಿ ಸುಮಾರು 2 ಕೋಟಿ 96 ಲಕ್ಷ ಮೌಲ್ಯದ ಚಿನ್ನಾಭರಣವನ್ನು…

Read More