Crime: ಮಕ್ಕಳಿಂದ ವಾಂತಿ ನಾಟಕವಾಡಿಸಿ ಚಿನ್ನಾಭರಣ ದೋಚುತ್ತಿದ್ದ ಖತರ್ನಾಕ್ ಗ್ಯಾಂಗ್ ಪೊಲೀಸರ ವಶಕ್ಕೆ!
ಹೊಸಕೋಟೆ: ಬಸ್ಸುಗಳಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಅವರ ಮೈಮೇಲಿನ ಒಡವೆಗಳನ್ನು (Crime) ಲೂಟಿ ಮಾಡುತ್ತಿದ್ದ ಕುಪ್ಪಂ ಮೂಲದ ಗ್ಯಾಂಗ್ನ ಪ್ರಮುಖ ಆರೋಪಿಯನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ. ಕಳ್ಳತನದ ವಿಶಿಷ್ಟ ಶೈಲಿ: ಈ ಗ್ಯಾಂಗ್ ಕಳ್ಳತನಕ್ಕಾಗಿ ಮಕ್ಕಳನ್ನು ಬಳಸಿಕೊಳ್ಳುತ್ತಿತ್ತು. ಬಸ್ಸಿನಲ್ಲಿ ಪ್ರಯಾಣಿಸುವಾಗ ಈ ತಂಡದ ಸದಸ್ಯರು ತಮ್ಮೊಂದಿಗಿದ್ದ ಮಗುವಿಗೆ ವಾಂತಿ ಬರುತ್ತಿದೆ ಎಂದು ನಾಟಕವಾಡುತ್ತಿದ್ದರು. ಮಗುವಿನ ಅಸ್ವಸ್ಥತೆ ನೋಡಿ ಪ್ರಯಾಣಿಕರು ಸಹಾಯಕ್ಕೆ ಬಂದಾಗ ಅಥವಾ ಅವರ…
