TOP NEWS
Shocking AC Train Passengers Steal 1 27 Crore Bedroll Items in 4 Years Contractors Lose ₹104 Crore

Shocking: ಎಸಿ ರೈಲು ಪ್ರಯಾಣಿಕರ ಕೈಚಳಕ: ನಾಲ್ಕು ವರ್ಷಗಳಲ್ಲಿ ಬರೋಬ್ಬರಿ 1.27 ಕೋಟಿ ಬೆಡ್‌ರೋಲ್ ಸಾಮಗ್ರಿಗಳು ಕಳುವು

ನವದೆಹಲಿ: ರೈಲ್ವೆಯ ಹವಾನಿಯಂತ್ರಿತ (AC) ಬೋಗಿಗಳಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರಿಗೂ ಎರಡು ಬೆಡ್‌ಶೀಟ್‌ಗಳು, ಒಂದು ದಿಂಬು, ದಿಂಬಿನ ಕವರ್ ಮತ್ತು ಮುಖ ಒರೆಸುವ ಸಣ್ಣ ಟವಲ್ ಒಳಗೊಂಡ ಬೆಡ್‌ರೋಲ್ ಕಿಟ್ ಅನ್ನು ನೀಡಲಾಗುತ್ತದೆ. ಆದರೆ, ಪ್ರತಿ ಸಾವಿರ ಪ್ರಯಾಣಿಕರಲ್ಲಿ ಒಬ್ಬರು ಈ ಸಾಮಗ್ರಿಗಳನ್ನು ತಮ್ಮ ಬ್ಯಾಗ್‌ಗೆ ಹಾಕಿಕೊಂಡು ಮನೆಗೆ ಕೊಂಡೊಯ್ಯುತ್ತಿದ್ದಾರೆ. ಕೋವಿಡ್ ಸಾಂಕ್ರಾಮಿಕದ ನಂತರ ಅಂದರೆ ಜನವರಿ 2022 ರಿಂದ ಮೇ 2026 ರವರೆಗಿನ ಅವಧಿಯಲ್ಲಿ ದೇಶಾದ್ಯಂತ ರೈಲುಗಳಲ್ಲಿ ಬರೋಬ್ಬರಿ 1.27 ಕೋಟಿ ಬೆಡ್‌ರೋಲ್ ವಸ್ತುಗಳು ಕಳುವಾಗಿವೆ ಎಂಬ…

Read More
Konkan Railway Rewards Heroic Pointsman for Saving Passengers Life in shocking incident

Shocking: ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನಿಗೆ ಜೀವದಾನ ಮಾಡಿದ ಸಿಬ್ಬಂದಿ

ಮುರುಡೇಶ್ವರ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಮುರುಡೇಶ್ವರ ರೈಲ್ವೇ ನಿಲ್ದಾಣದಲ್ಲಿ ಭೀಕರ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಚಲಿಸುತ್ತಿದ್ದ ರೈಲಿನಿಂದ ಕೆಳಗಿಳಿಯಲು ಹೋಗಿ ಹಳಿಗಳ ಮಧ್ಯೆ ಸಿಲುಕಿಕೊಳ್ಳುತ್ತಿದ್ದ 22 ವರ್ಷದ ಯುವಕನೊಬ್ಬನನ್ನು ಕೊಂಕಣ (Shocking) ರೈಲ್ವೇಯ ಪಾಯಿಂಟ್ಸ್‌ಮನ್ ಗಣಪತಿ ನಾಯ್ಕ್ ಅವರು ತಕ್ಷಣ ಎಚ್ಚೆತ್ತುಕೊಂಡು ಬದುಕಿಸಿದ್ದಾರೆ. ಸದ್ಯ ಈ ರೋಮಾಂಚನಕಾರಿ ರಕ್ಷಣಾ ಕಾರ್ಯಾಚರಣೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರೈಲ್ವೇ ನೌಕರನ ಸಮಯಪ್ರಜ್ಞೆಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಏನಿದು ಘಟನೆ? ಕೇರಳದ ಕೊಚ್ಚುವೇಲಿಯಿಂದ ರಾಜಸ್ಥಾನದ…

Read More
ISI Handlers Directing Delhi Terror Plot here is how

Shocking: ದೆಹಲಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು: ಪಾಕ್ ಐಎಸ್‌ಐ ಬೆಂಬಲಿತ ನಾಲ್ವರು ಶಂಕಿತ ಉಗ್ರರ ಬಂಧನ

ನವದೆಹಲಿ: ದೇಶದ ರಾಜಧಾನಿ ಹಾಗೂ ಸುತ್ತಮುತ್ತಲಿನ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಭಾರಿ ಪ್ರಮಾಣದ ಭಯೋತ್ಪಾದನಾ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ (Shocking) ಪಾಕಿಸ್ತಾನ ಬೆಂಬಲಿತ ನಾಲ್ವರು ಶಂಕಿತ ಉಗ್ರರನ್ನು ದೆಹಲಿ ಪೊಲೀಸರ ವಿಶೇಷ ದಳ (ಸ್ಪೆಷಲ್ ಸೆಲ್) ಯಶಸ್ವಿಯಾಗಿ ಬಂಧಿಸಿದೆ. ಈ ಮೂಲಕ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ISI) ನಂಟು ಹೊಂದಿದ್ದ ಅಂತರರಾಷ್ಟ್ರೀಯ ಮಟ್ಟದ ಕಾನೂನುಬಾಹಿರ ಶಸ್ತ್ರಾಸ್ತ್ರ ಜಾಲವನ್ನು ಪೊಲೀಸರು ಧ್ವಂಸಗೊಳಿಸಿದ್ದಾರೆ. ಬಂಧಿತ ಶಂಕಿತರು ಪಾಕ್ ಮೂಲದ ಹ್ಯಾಂಡ್ಲರ್ ಶಹಜಾದ್ ಭಟ್ಟಿ ಎಂಬಾತನ ನೇರ ಸೂಚನೆಯ ಮೇರೆಗೆ…

Read More
PM-Kisan sms of 1 paise shocked Maharashtra farmer

PM-Kisan: ತಾಂತ್ರಿಕ ದೋಷ ತಂದಿಟ್ಟ ತಲೆನೋವು: ಮಹಾರಾಷ್ಟ್ರದ ರೈತ ಮಹಿಳೆಗೆ ‘1 ಪೈಸೆ’ ಪಿಎಂ-ಕಿಸಾನ್ ಕಂತಿನ ಮೆಸೇಜ್

ಮುಂಬೈ: ಮಹಾರಾಷ್ಟ್ರದ ರೈತರೊಬ್ಬರಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಯ ಕಂತಿನ ಹಣ ಜಮೆಯಾದ ಕುರಿತು ಬಂದ ಒಂದು ಎಸ್‌ಎಮ್‌ಎಸ್ (SMS) ಇಡೀ ಕುಟುಂಬವನ್ನು ತೀವ್ರ ಗೊಂದಲಕ್ಕೆ ತಳ್ಳಿದ ಅಪರೂಪದ ಘಟನೆಯೊಂದು ವರದಿಯಾಗಿದೆ. ಯೋಜನೆಯಡಿ ಬರಬೇಕಿದ್ದ 2,000 ರೂಪಾಯಿ ಬದಲಿಗೆ ಕೇವಲ ‘1 ಪೈಸೆ’ ಮಾತ್ರ ಖಾತೆಗೆ ಜಮೆಯಾಗಿದೆ ಎಂಬ ಸಂದೇಶ ಮೊಬೈಲ್‌ಗೆ ಬಂದಿದ್ದೇ ಈ ಗೊಂದಲಕ್ಕೆ ಕಾರಣವಾಗಿತ್ತು. ಆದರೆ, ತಾಂತ್ರಿಕ ದೋಷದಿಂದಾಗಿ ಈ ರೀತಿ ತಪ್ಪು ಸಂದೇಶ ರವಾನೆಯಾಗಿದೆಯೇ ವಿನಃ ರೈತರ ಖಾತೆಗೆ ಪೂರ್ಣ…

Read More
Cancer death is increasing in men more than women in country

Cancer: ಭಾರತದಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಭೀತಿ: ಮಹಿಳೆಯರಿಗಿಂತ ಪುರುಷರಲ್ಲೇ ಸಾವಿನ ಪ್ರಮಾಣ ಗಣನೀಯ ಹೆಚ್ಚಳ

ನವದೆಹಲಿ: ಭಾರತದಲ್ಲಿ ಅತ್ಯಂತ ವೇಗವಾಗಿ ಹರಡುತ್ತಿರುವ ಮಾರಕ ಕಾಯಿಲೆಗಳಲ್ಲಿ ಕ್ಯಾನ್ಸರ್ ಮುಂಚೂಣಿಯಲ್ಲಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಮಹಿಳೆಯರಿಗಿಂತ ಪುರುಷರೇ ಕ್ಯಾನ್ಸರ್‌ನಿಂದಾಗಿ (Cancer) ಅತಿ ಹೆಚ್ಚು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಉಭಯ ಲಿಂಗಿಗಳಲ್ಲಿ ಕ್ಯಾನ್ಸರ್ ಬಾಧಿಸುವ ಒಟ್ಟು ಪ್ರಮಾಣ ಬಹುತೇಕ ಒಂದೇ ಸಮನಾಗಿದ್ದರೂ, ಮರಣ ಪ್ರಮಾಣದಲ್ಲಿ ಪುರುಷರ ಸಂಖ್ಯೆ ಹೆಚ್ಚಿರುವುದು ವೈದ್ಯಕೀಯ ಲೋಕಕ್ಕೆ ಹೊಸ ಆತಂಕ ತಂದಿಟ್ಟಿದೆ. ಆರೋಗ್ಯ ತಜ್ಞರ ಪ್ರಕಾರ, ಈ ವ್ಯತ್ಯಾಸಕ್ಕೆ ಕೇವಲ ಶಾರೀರಿಕ ಅಥವಾ ಜೈವಿಕ ಅಂಶಗಳು ಮಾತ್ರ…

Read More
shocking 55 minor pregnant girl scanning took place

Shocking: ಮಂಡ್ಯದಲ್ಲಿ ಬಯಲಾಯ್ತು ಸ್ಫೋಟಕ ಮಾಹಿತಿ: ಒಂದೇ ವರ್ಷದಲ್ಲಿ 55 ಅಪ್ರಾಪ್ತ ಬಾಲಕಿಯರ ಸ್ಕ್ಯಾನಿಂಗ್!

ಮಂಡ್ಯ: ಜಿಲ್ಲೆಯಲ್ಲಿ ಭ್ರೂಣ ಹತ್ಯೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ಬೆನ್ನಲ್ಲೇ, ಮಂಡ್ಯ ನಗರದ ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ಕಳೆದ ಒಂದು ವರ್ಷದಲ್ಲಿ 55 ಅಪ್ರಾಪ್ತ ಬಾಲಕಿಯರು ಗರ್ಭಿಣಿ ಸ್ಕ್ಯಾನಿಂಗ್ ಮಾಡಿಸಿಕೊಂಡಿರುವ ಗಂಭೀರ ವಿಚಾರ (Shocking) ಬಯಲಾಗಿದೆ. ಜಾಗೃತ ದಳದ ಅಧಿಕಾರಿಗಳು ನಡೆಸಿದ ಮಿಂಚಿನ ದಾಳಿಯ ವೇಳೆ ಈ ಆಘಾತಕಾರಿ ಅಂಕಿಅಂಶಗಳು ಲಭ್ಯವಾಗಿವೆ. ದಾಖಲೆಗಳ ಪರಿಶೀಲನೆ ವೇಳೆ ಸತ್ಯ ದರ್ಶನ: ಉಪ ಲೋಕಾಯುಕ್ತರ ಸೂಚನೆಯಂತೆ ಮಂಡ್ಯದ ವಿವಿಧ ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ತಹಸೀಲ್ದಾರ್ ವಿಶ್ವನಾಥ್ ಮತ್ತು ಆರೋಗ್ಯ…

Read More
two peacocks lost life due to bird flu

Bird Flu: ತುಮಕೂರಿನಲ್ಲಿ ನವಿಲುಗಳ ಮಾರಣಹೋಮ: ಹಕ್ಕಿಜ್ವರಕ್ಕೆ ಮತ್ತೆರಡು ಬಲಿ

ತುಮಕೂರು: ಕಲ್ಪತರು ನಾಡು ತುಮಕೂರಿನಲ್ಲಿ ರಾಷ್ಟ್ರಪಕ್ಷಿ ನವಿಲುಗಳ ಸಾವು ಮುಂದುವರಿದಿದ್ದು, ಪರಿಸರ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ. ಹಕ್ಕಿಜ್ವರದ (Bird Flu) ಬಾಧೆಯಿಂದಾಗಿ ತಾಲೂಕಿನ ಗೂಳರಿವೆ ಗ್ರಾಮದ ‘ಸುಣ್ಣಕಲ್ಲು ಕಟ್ಟೆ’ ಬಳಿ ಮತ್ತೆರಡು ನವಿಲುಗಳು ಮೃತಪಟ್ಟಿವೆ. ಈ ಭಾಗದಲ್ಲಿ ಸತತವಾಗಿ ನವಿಲುಗಳು ಸಾವನ್ನಪ್ಪುತ್ತಿರುವುದು ಪ್ರಕೃತಿ ಪ್ರೇಮಿಗಳ ನಿದ್ರೆ ಗೆಡಿಸಿದೆ. ಬೀದಿ ನಾಯಿಗಳ ಪಾಲಾದ ಮೃತದೇಹ: ಘಟನಾ ಸ್ಥಳದಲ್ಲಿ ಮೃತ ನವಿಲುಗಳ ದೇಹಗಳು ಅನಾಥವಾಗಿ ಬಿದ್ದಿದ್ದು, ಅವುಗಳನ್ನು ಬೀದಿ ನಾಯಿಗಳು ಕಿತ್ತು ತಿನ್ನುತ್ತಿರುವ ದೃಶ್ಯ ಮನಕಲಕುವಂತಿದೆ. ಇತ್ತೀಚೆಗಷ್ಟೇ ಈ ಭಾಗದಲ್ಲಿ…

Read More