Crime: ಚಿಕ್ಕಬಳ್ಳಾಪುರದಲ್ಲಿ ಹಠಾತ್ ದಾಳಿ: ಕೃಷಿ ತಜ್ಞನ ಸೋಗಿನಲ್ಲಿ ನಕಲಿ ಕೀಟನಾಶಕ ಮಾರುತಿದ್ದ ಖದೀಮ ವಶಕ್ಕೆ!
ಚಿಕ್ಕಬಳ್ಳಾಪುರ: ಪ್ರಮುಖ ಹಾಗೂ ಜನಪ್ರಿಯ ಕಂಪನಿಗಳ ಬ್ರ್ಯಾಂಡ್ ಹೆಸರನ್ನು ದುರುಪಯೋಗಪಡಿಸಿಕೊಂಡು ನಕಲಿ ಕೀಟನಾಶಕಗಳನ್ನು ತಯಾರಿಸಿ (Crime) ಮುಗ್ಧ ರೈತರಿಗೆ ವಂಚಿಸುತ್ತಿದ್ದ ಬೃಹತ್ ದಂಧೆಯನ್ನು ಕೃಷಿ ಇಲಾಖೆಯ ಜಾಗೃತ ದಳ ಭೇದಿಸಿದೆ. ನಗರದ ವಸತಿ ಗೃಹವೊಂದರ ಮೇಲೆ ಅನಿರೀಕ್ಷಿತ ದಾಳಿ ನಡೆಸಿದ ಅಧಿಕಾರಿಗಳ ತಂಡ, ಲಕ್ಷಾಂತರ ರೂಪಾಯಿ ಮೌಲ್ಯದ ಖೋಟಾ ಕೀಟನಾಶಕ ಹಾಗೂ ಪ್ಯಾಕಿಂಗ್ ಪರಿಕರಗಳನ್ನು ವಶಪಡಿಸಿಕೊಂಡಿದೆ. ಖೋಟಾ ಜಿಎಸ್ಟಿ ಬಳಸಿ ವಂಚನೆ: ಕಾಲಾವಧಿ ಮುಗಿದಿರುವ ಹಳೆಯ ಕೃಷಿ ರಾಸಾಯನಿಕಗಳನ್ನು ಅನಧಿಕೃತವಾಗಿ ಮಿಶ್ರಣ ಮಾಡಿ ಈ ನಕಲಿ ಕೀಟನಾಶಕವನ್ನು…
