TOP NEWS
Third Party Can not Claim Insurance Supreme Court

Supreme Court: ಇನ್ಶೂರೆನ್ಸ್ ಕಂಪನಿ ಮತ್ತು ಗ್ರಾಹಕರ ನಡುವೆ ಮೂರನೇ ವ್ಯಕ್ತಿಗೆ ಜಾಗವಿಲ್ಲ: ಸುಪ್ರೀಂ

ನವದೆಹಲಿ: ವಿಮಾ ಪಾಲಿಸಿಗಳಿಗೆ ಸಂಬಂಧಿಸಿದಂತೆ ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ (Supreme Court) ಮಹತ್ವದ ತೀರ್ಪೊಂದನ್ನು ನೀಡಿದೆ. ವಿಮೆ ಎಂಬುದು ಪಾಲಿಸಿದಾರ ಮತ್ತು ವಿಮಾ ಕಂಪನಿಯ ನಡುವೆ ನಡೆಯುವ ತೀರಾ ವೈಯಕ್ತಿಕ ಒಪ್ಪಂದವಾಗಿದ್ದು, ಇದರಲ್ಲಿ ಯಾವುದೇ ಮೂರನೇ ವ್ಯಕ್ತಿ ಅಥವಾ ಹಣಕಾಸು ಸಂಸ್ಥೆಗಳು (ಫೈನಾನ್ಸಿಯರ್) ನಷ್ಟ ಪರಿಹಾರಕ್ಕಾಗಿ ಹಕ್ಕು ಸಾಧಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ಸಂದೀಪ್ ಮೆಹ್ತಾ ಮತ್ತು ವಿಜಯ್ ಬಿಷ್ಣೋಯ್ ಅವರನ್ನೊಳಗೊಂಡ ಪೀಠವು ಈ ಆದೇಶ ಹೊರಡಿಸಿದೆ. ಸುಪ್ರೀಂ ಹೇಳಿದ್ದೇನು? ಲೋನ್…

Read More
India summons US diplomat second time over attacks on Indian crew vessels

America: ಸಮುದ್ರದಲ್ಲಿ ಭಾರತೀಯ ನಾವಿಕರ ಮೇಲೆ ಸಾಲು ಸಾಲು ದಾಳಿ: ಈ ವಾರದಲ್ಲೇ 2ನೇ ಬಾರಿ ಅಮೆರಿಕ ರಾಯಭಾರಿಗೆ ಭಾರತದ ಸಮನ್ಸ್!

ನವದೆಹಲಿ: ಒಮಾನ್ ಕರಾವಳಿ ತೀರದಲ್ಲಿ ಭಾರತೀಯ ಸಿಬ್ಬಂದಿ ಇದ್ದ ಮತ್ತೊಂದು ವಾಣಿಜ್ಯ ಹಡಗಿನ ಮೇಲೆ ಭೀಕರ ದಾಳಿ ನಡೆದಿರುವ ಬೆನ್ನಲ್ಲೇ, ಭಾರತ ಸರ್ಕಾರವು ಶುಕ್ರವಾರ ಅಮೆರಿಕದ (America) ಹಿರಿಯ ರಾಯಭಾರಿ ಜೇಸನ್ ಮೀಕ್ಸ್ ಅವರಿಗೆ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿದೆ. ಕೇವಲ ನಾಲ್ಕು ದಿನಗಳ ಅವಧಿಯಲ್ಲಿ ಭಾರತೀಯ ನಾವಿಕರಿದ್ದ ಹಡಗುಗಳ ಮೇಲೆ ನಡೆದಿರುವ ಮೂರನೇ ದಾಳಿ ಇದಾಗಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಗಳು ಈ ವಾರದಲ್ಲೇ ಎರಡನೇ ಬಾರಿಗೆ ಅಮೆರಿಕದ ರಾಜತಾಂತ್ರಿಕರನ್ನು…

Read More
Taiwan and south Africa faced low in AI share market

AI: ಎಐ (AI) ಅಬ್ಬರ ತಣ್ಣಗಾಗುತ್ತಿದ್ದಂತೆ ಭಾರತಕ್ಕೆ ಮತ್ತೆ ಸಿಕ್ಕಿತು ಜಾಗತಿಕ ಗದ್ದುಗೆ: ದಕ್ಷಿಣ ಕೊರಿಯಾ, ತೈವಾನ್ ಮಾರುಕಟ್ಟೆಗಳು ಉಡೀಸ್!

ನವದೆಹಲಿ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಅತಿಯಾದ ಕ್ರೇಜ್‌ನಿಂದಾಗಿ ಕಳೆದ ವಾರವಷ್ಟೇ ಭಾರತದ ಷೇರು ಮಾರುಕಟ್ಟೆಯನ್ನು ಹಿಂದಿಕ್ಕಿದ್ದ ತೈವಾನ್ ಮತ್ತು ದಕ್ಷಿಣ ಕೊರಿಯಾಗಳಿಗೆ ಭಾರಿ ಮುಖಭಂಗವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಎಐ ವಲಯದ ಷೇರುಗಳು ದಿಢೀರನೆ ನೆಲಕಚ್ಚಿದ ಪರಿಣಾಮ ಈ ಎರಡೂ ದೇಶಗಳ ಷೇರು ಮಾರುಕಟ್ಟೆಗಳು ಭಾರಿ ಕುಸಿತ ಕಂಡು ಯಥಾಸ್ಥಾನಕ್ಕೆ ಮರಳಿವೆ. ಇದರ ನೇರ ಲಾಭ ಪಡೆದಿರುವ ಭಾರತೀಯ ಷೇರು ಬಜಾರ್, ಜಾಗತಿಕವಾಗಿ ತನ್ನ ಬಲಿಷ್ಠ 6ನೇ ಸ್ಥಾನವನ್ನು ಅತ್ಯಂತ ಯಶಸ್ವಿಯಾಗಿ ಮರಳಿ ಪಡೆದಿದೆ. ಒಂದೇ ವಾರದಲ್ಲಿ…

Read More
india showed great gesture towards pak regarding indus water

Indus River: ಸಿಂಧೂ ನದಿ ಒಪ್ಪಂದ ಅಮಾನತು ನಡುವೆಯೂ ಮಾನವೀಯತೆ ಮೆರೆದ ಭಾರತ

ನವದೆಹಲಿ: ಕಳೆದ ವರ್ಷ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯ ಬಳಿಕ ಭಾರತ ಸರ್ಕಾರವು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಂಡು ಐತಿಹಾಸಿಕ ‘ಸಿಂಧೂ ನದಿ (Indus River) ನೀರು ಹಂಚಿಕೆ ಒಪ್ಪಂದ’ವನ್ನು (IWT) ಅಮಾನತ್ತಿನಲ್ಲಿಟ್ಟಿದೆ. ಅಂದಿನಿಂದ ಜಾಗತಿಕ ವೇದಿಕೆಗಳಲ್ಲಿ ಭಾರತವು ನೀರನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಪಾಕಿಸ್ತಾನವು ಸರಣಿ ಅಪಪ್ರಚಾರ ಹಾಗೂ ಕಟು ಟೀಕೆಗಳನ್ನು ಮಾಡುತ್ತಲೇ ಬಂದಿದೆ. ಆದರೆ, ನೆರೆರಾಷ್ಟ್ರದ ಈ ದುರುದ್ದೇಶಪೂರ್ವಕ ಅಪಪ್ರಚಾರದ ನಡುವೆಯೂ ಭಾರತವು ಮತ್ತೊಮ್ಮೆ ಭಾರಿ ಮಾನವೀಯತೆ ಮೆರೆದಿದೆ. ಜಮ್ಮು ಮತ್ತು…

Read More
india gives strong warning to china regarding Operation Sindoor

Operation Sindoor: ಉಗ್ರರ ರಕ್ಷಣೆಗೆ ನಿಂತ ಚೀನಾಕ್ಕೆ ಭಾರತದ ಛೀಮಾರಿ: ‘ಜವಾಬ್ದಾರಿಯುತ ದೇಶಗಳ ನಡವಳಿಕೆ ಹೀಗಿರಬಾರದು’ ಎಂದ ವಿದೇಶಾಂಗ ಇಲಾಖೆ!

ನವದೆಹಲಿ: ಕಳೆದ ವರ್ಷ ನಡೆದ ‘ಆಪರೇಷನ್ ಸಿಂಧೂರ್’ (Operation Sindoor) ಕಾರ್ಯಾಚರಣೆಯ ವೇಳೆ ಪಾಕಿಸ್ತಾನಕ್ಕೆ ಚೀನಾ ತಾಂತ್ರಿಕ ನೆರವು ನೀಡಿದೆ ಎಂಬ ಮಾಹಿತಿ ಹೊರಬರುತ್ತಿದ್ದಂತೆಯೇ ಭಾರತವು ಚೀನಾಕ್ಕೆ ಕಟು ಶಬ್ದಗಳಲ್ಲಿ ಎಚ್ಚರಿಕೆ ನೀಡಿದೆ. “ತಮ್ಮನ್ನು ತಾವು ಜವಾಬ್ದಾರಿಯುತ ರಾಷ್ಟ್ರಗಳೆಂದು ಕರೆದುಕೊಳ್ಳುವವರು, ಭಯೋತ್ಪಾದನೆಯನ್ನು ಬೆಂಬಲಿಸುವ ಇಂತಹ ಕ್ರಮಗಳು ತಮ್ಮ ಜಾಗತಿಕ ಸ್ಥಾನಮಾನದ ಮೇಲೆ ಎಂತಹ ಪರಿಣಾಮ ಬೀರಬಹುದು ಎಂಬುದನ್ನು ಯೋಚಿಸಲಿ” ಎಂದು ಭಾರತ ತಿರುಗೇಟು ನೀಡಿದೆ. ಏನಿದು ಚೀನಾದ ಗುಪ್ತ ಕಾರ್ಯಾಚರಣೆ? ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತವು ಪಾಕಿಸ್ತಾನದ…

Read More
china becomes indias biggest trade partner

CHINA: ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರನಾದ ಚೀನಾ

ನವದೆಹಲಿ: ಕಳೆದ ನಾಲ್ಕು ವರ್ಷಗಳಿಂದ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದ್ದ ಅಮೆರಿಕವನ್ನು ಹಿಂದಿಕ್ಕಿ ಚೀನಾ (China) ಮತ್ತೆ ಮೊದಲ ಸ್ಥಾನಕ್ಕೇರಿದೆ. ಸರ್ಕಾರದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, 2025-26ನೇ ಹಣಕಾಸು ವರ್ಷದಲ್ಲಿ ಭಾರತ ಮತ್ತು ಚೀನಾ ನಡುವಿನ ಒಟ್ಟು ದ್ವಿಪಕ್ಷೀಯ ವ್ಯಾಪಾರವು ಬರೋಬ್ಬರಿ 151.1 ಬಿಲಿಯನ್ ಡಾಲರ್‌ಗೆ ತಲುಪಿದೆ. ಈ ಮೂಲಕ 2021-22ರಿಂದ ಸತತವಾಗಿ ಅಗ್ರಸ್ಥಾನದಲ್ಲಿದ್ದ ಅಮೆರಿಕವನ್ನು ಚೀನಾ ಎರಡನೇ ಸ್ಥಾನಕ್ಕೆ ತಳ್ಳಿದ್ದು, ಜಾಗತಿಕ ವ್ಯಾಪಾರ ಸಮೀಕರಣದಲ್ಲಿ ಮಹತ್ವದ ಬದಲಾವಣೆಯಾಗಿದೆ. ಹೇಗಿದೆ ರಫ್ತು-ಆಮದು ಅಂಕಿಅಂಶ? ಕಳೆದ ಹಣಕಾಸು…

Read More
West Asia war impact on import of the country

Import: ಪಶ್ಚಿಮ ಏಷ್ಯಾ ಸಂಘರ್ಷ, ರಫ್ತು ಉತ್ತೇಜನಕ್ಕೆ ವಿವಿಧ ಕ್ರಮ

ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷ ಪರಿಸ್ಥಿತಿ ಹಿನ್ನೆಲೆಯಲ್ಲಿ  ದೇಶದ ರಫ್ತು (Import) ಉತ್ತೇಜನಕ್ಕಾಗಿ  ವಿವಿಧ ಪರ್ಯಾಯ  ಕ್ರಮ ಕೈಗೊಳ್ಳಲಾಗಿದೆ ಎಂದು ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಅಗರ್ ವಾಲ್ ಹೇಳಿದ್ದಾರೆ.  ಸರಕು ಸಾಗಣೆಯಲ್ಲಿ ವ್ಯತ್ಯಯ ದೆಹಲಿಯಲ್ಲಿ  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಶ್ಚಿಮ ಏಷ್ಯಾ ಸಂಘರ್ಷ ಪರಿಸ್ಥಿತಿಯಿಂದ  ಜಾಗತಿಕವಾಗಿ  ಸುಮಾರು 18 ಭೌಗೋಳಿಕ ಪ್ರದೇಶಗಳ ಮೇಲೆ  ಪರಿಣಾಮ ಉಂಟಾಗಿದ್ದು, ಕಳೆದ ಒಂದು ತಿಂಗಳಿನಿಂದ  ಸರಕು-ಸಾಗಣೆ ವ್ಯತ್ಯಯವಾಗಿದೆ ಎಂದರು. ಸರಕು ಹೊತ್ತ  ಹಲವು ಹಡಗುಗಳು  ಗುರಿ ತಲುಪದೆ ವಿವಿಧ…

Read More