TOP NEWS
Khameneis Funeral Indian Envoy and Political Leaders Pay Final Respects in Tehran Iran Hails Ties

Iran: ಖಮೇನಿ ಅಂತ್ಯಕ್ರಿಯೆಯಲ್ಲಿ ಭಾರತದ ನಿಯೋಗ ಭಾಗಿ: ‘ಸ್ನೇಹರಾಷ್ಟ್ರ’ದ ಸಹಾನುಭೂತಿ ಮರೆಯಲ್ಲ ಎಂದು ಕೃತಜ್ಞತೆ ಸಲ್ಲಿಸಿದ ಇರಾನ್!

ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ವೈಮಾನಿಕ ದಾಳಿಗೆ ಬಲಿಯಾಗಿದ್ದ ಇರಾನ್‌ನ (Iran) ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಸಂಸ್ಕಾರದಲ್ಲಿ ಭಾರತದ ಅಧಿಕೃತ ರಾಜತಾಂತ್ರಿಕ ನಿಯೋಗ ಪಾಲ್ಗೊಂಡು ಅಂತಿಮ ಗೌರವ ಸಲ್ಲಿಸಿದೆ. ಭಾರತದ ಈ ನಡೆಯನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಇರಾನ್ ಸರ್ಕಾರ ಮತ್ತು ಅಲ್ಲಿನ ಜನತೆ, ಭಾರತೀಯರಿಗೆ ವಿಶೇಷ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ. ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಭಾರತದಲ್ಲಿನ ಇರಾನ್ ರಾಯಭಾರ ಕಚೇರಿಯು, ಇಡೀ ಇರಾನ್ ಜನತೆಯ ಪರವಾಗಿ ಭಾರತಕ್ಕೆ ಕೃತಜ್ಞತೆ…

Read More
India open visa for Bangladesh people many people standing in q

Bangladesh: ರಾಜತಾಂತ್ರಿಕ ಬಿಕ್ಕಟ್ಟಿದ್ದರೂ ತಪ್ಪದ ಭಾರತದ ಮೇಲಿನ ಅವಲಂಬನೆ; ವೀಸಾ ಕೇಂದ್ರಗಳ ಮುಂದೆ ಬಾಂಗ್ಲಾ ಜನರ ಕಿಲೋಮೀಟರ್ ಉದ್ದದ ಕ್ಯೂ

ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶಗಳ (Bangladesh) ನಡುವಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಎಷ್ಟೇ ಏರುಪೇರಾಗಿದ್ದರೂ, ಅಲ್ಲಿನ ಸಾಮಾನ್ಯ ಜನರಿಗೆ ಭಾರತದ ಮೇಲಿರುವ ಅವಲಂಬನೆ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂಬುದಕ್ಕೆ ಢಾಕಾದಲ್ಲಿರುವ ಭಾರತೀಯ ವೀಸಾ ಕೇಂದ್ರದ ಮುಂದೆ ನಿಂತಿರುವ ನೂರಾರು ಮೀಟರ್ ಉದ್ದದ ಕ್ಯೂ ಸಾಕ್ಷಿಯಾಗಿದೆ. ಬರೋಬ್ಬರಿ ಎರಡು ವರ್ಷಗಳ ಬಳಿಕ ಭಾರತ ಸರ್ಕಾರವು ಬಾಂಗ್ಲಾ ನಾಗರಿಕರಿಗೆ ಪ್ರವಾಸಿ ವೀಸಾ (ಟೂರಿಸ್ಟ್ ವೀಸಾ) ಸೇವೆಗಳನ್ನು ಪುನಾರಂಭಿಸಿದ್ದು, ವೀಸಾ ಪಡೆಯಲು ಜನ ಮುಗಿಬೀಳುತ್ತಿದ್ದಾರೆ. ವೀಸಾ ಸೇವೆ ಶುರುವಾದ ಕೇವಲ 24 ಗಂಟೆಗಳಲ್ಲಿ…

Read More
94 years old want Indian Citizenship now

Citizenship: “ನಾನು ಭಾರತೀಯಳಾಗಿಯೇ ಸಾಯಬೇಕು”: ತಾಯ್ನಾಡಿನ ಮಮಕಾರಕ್ಕೆ ಒಲಿದು ಅಮೆರಿಕ ಪೌರತ್ವ ತೊರೆದ 94 ವರ್ಷದ ವೃದ್ಧೆ!

ಬಾಪಟ್ಲಾ (ಆಂಧ್ರಪ್ರದೇಶ): ಇಂದಿನ ದಿನಗಳಲ್ಲಿ ಉದ್ಯೋಗ ಅಥವಾ ಉನ್ನತ ಜೀವನ ಮಟ್ಟಕ್ಕಾಗಿ ಅಮೆರಿಕ, ಕೆನಡಾದಂತಹ ವಿದೇಶಗಳಿಗೆ ವಲಸೆ ಹೋಗುವುದು ಮತ್ತು ಅಲ್ಲಿನ ಪೌರತ್ವ (Citizenship) ಪಡೆಯುವುದು ದೊಡ್ಡ ಸಾಧನೆ ಎಂದು ಅನೇಕರು ಭಾವಿಸುತ್ತಾರೆ. ಆದರೆ, ಶತಾಯುಷಿಯ ಹತ್ತಿರವಿರುವ ವೃದ್ಧೆಯೊಬ್ಬರು ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ತಾಯ್ನಾಡಿನ ಗುರುತಿಗಿಂತ ದೊಡ್ಡದು ಯಾವುದೂ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. “ನನ್ನ ಕೊನೆಯ ದಿನಗಳನ್ನು ನಾನು ಭಾರತೀಯಳಾಗಿಯೇ ಕಳೆಯಬೇಕು ಮತ್ತು ಹೆತ್ತ ಕರುಳಿನ ಮಣ್ಣಿನಲ್ಲೇ ನನ್ನ ಅಂತ್ಯಕ್ರಿಯೆ ನಡೆಯಬೇಕು” ಎಂದು ಆಶಿಸಿರುವ ೯೪ ವರ್ಷದ…

Read More
supreme court declined plea about ram mandir urgent hearing application for cbi investigation

Supreme Court: ಇನ್ಶೂರೆನ್ಸ್ ಕಂಪನಿ ಮತ್ತು ಗ್ರಾಹಕರ ನಡುವೆ ಮೂರನೇ ವ್ಯಕ್ತಿಗೆ ಜಾಗವಿಲ್ಲ: ಸುಪ್ರೀಂ

ನವದೆಹಲಿ: ವಿಮಾ ಪಾಲಿಸಿಗಳಿಗೆ ಸಂಬಂಧಿಸಿದಂತೆ ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ (Supreme Court) ಮಹತ್ವದ ತೀರ್ಪೊಂದನ್ನು ನೀಡಿದೆ. ವಿಮೆ ಎಂಬುದು ಪಾಲಿಸಿದಾರ ಮತ್ತು ವಿಮಾ ಕಂಪನಿಯ ನಡುವೆ ನಡೆಯುವ ತೀರಾ ವೈಯಕ್ತಿಕ ಒಪ್ಪಂದವಾಗಿದ್ದು, ಇದರಲ್ಲಿ ಯಾವುದೇ ಮೂರನೇ ವ್ಯಕ್ತಿ ಅಥವಾ ಹಣಕಾಸು ಸಂಸ್ಥೆಗಳು (ಫೈನಾನ್ಸಿಯರ್) ನಷ್ಟ ಪರಿಹಾರಕ್ಕಾಗಿ ಹಕ್ಕು ಸಾಧಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ಸಂದೀಪ್ ಮೆಹ್ತಾ ಮತ್ತು ವಿಜಯ್ ಬಿಷ್ಣೋಯ್ ಅವರನ್ನೊಳಗೊಂಡ ಪೀಠವು ಈ ಆದೇಶ ಹೊರಡಿಸಿದೆ. ಸುಪ್ರೀಂ ಹೇಳಿದ್ದೇನು? ಲೋನ್…

Read More
India summons US diplomat second time over attacks on Indian crew vessels

America: ಸಮುದ್ರದಲ್ಲಿ ಭಾರತೀಯ ನಾವಿಕರ ಮೇಲೆ ಸಾಲು ಸಾಲು ದಾಳಿ: ಈ ವಾರದಲ್ಲೇ 2ನೇ ಬಾರಿ ಅಮೆರಿಕ ರಾಯಭಾರಿಗೆ ಭಾರತದ ಸಮನ್ಸ್!

ನವದೆಹಲಿ: ಒಮಾನ್ ಕರಾವಳಿ ತೀರದಲ್ಲಿ ಭಾರತೀಯ ಸಿಬ್ಬಂದಿ ಇದ್ದ ಮತ್ತೊಂದು ವಾಣಿಜ್ಯ ಹಡಗಿನ ಮೇಲೆ ಭೀಕರ ದಾಳಿ ನಡೆದಿರುವ ಬೆನ್ನಲ್ಲೇ, ಭಾರತ ಸರ್ಕಾರವು ಶುಕ್ರವಾರ ಅಮೆರಿಕದ (America) ಹಿರಿಯ ರಾಯಭಾರಿ ಜೇಸನ್ ಮೀಕ್ಸ್ ಅವರಿಗೆ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿದೆ. ಕೇವಲ ನಾಲ್ಕು ದಿನಗಳ ಅವಧಿಯಲ್ಲಿ ಭಾರತೀಯ ನಾವಿಕರಿದ್ದ ಹಡಗುಗಳ ಮೇಲೆ ನಡೆದಿರುವ ಮೂರನೇ ದಾಳಿ ಇದಾಗಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಗಳು ಈ ವಾರದಲ್ಲೇ ಎರಡನೇ ಬಾರಿಗೆ ಅಮೆರಿಕದ ರಾಜತಾಂತ್ರಿಕರನ್ನು…

Read More
Taiwan and south Africa faced low in AI share market

AI: ಎಐ (AI) ಅಬ್ಬರ ತಣ್ಣಗಾಗುತ್ತಿದ್ದಂತೆ ಭಾರತಕ್ಕೆ ಮತ್ತೆ ಸಿಕ್ಕಿತು ಜಾಗತಿಕ ಗದ್ದುಗೆ: ದಕ್ಷಿಣ ಕೊರಿಯಾ, ತೈವಾನ್ ಮಾರುಕಟ್ಟೆಗಳು ಉಡೀಸ್!

ನವದೆಹಲಿ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಅತಿಯಾದ ಕ್ರೇಜ್‌ನಿಂದಾಗಿ ಕಳೆದ ವಾರವಷ್ಟೇ ಭಾರತದ ಷೇರು ಮಾರುಕಟ್ಟೆಯನ್ನು ಹಿಂದಿಕ್ಕಿದ್ದ ತೈವಾನ್ ಮತ್ತು ದಕ್ಷಿಣ ಕೊರಿಯಾಗಳಿಗೆ ಭಾರಿ ಮುಖಭಂಗವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಎಐ ವಲಯದ ಷೇರುಗಳು ದಿಢೀರನೆ ನೆಲಕಚ್ಚಿದ ಪರಿಣಾಮ ಈ ಎರಡೂ ದೇಶಗಳ ಷೇರು ಮಾರುಕಟ್ಟೆಗಳು ಭಾರಿ ಕುಸಿತ ಕಂಡು ಯಥಾಸ್ಥಾನಕ್ಕೆ ಮರಳಿವೆ. ಇದರ ನೇರ ಲಾಭ ಪಡೆದಿರುವ ಭಾರತೀಯ ಷೇರು ಬಜಾರ್, ಜಾಗತಿಕವಾಗಿ ತನ್ನ ಬಲಿಷ್ಠ 6ನೇ ಸ್ಥಾನವನ್ನು ಅತ್ಯಂತ ಯಶಸ್ವಿಯಾಗಿ ಮರಳಿ ಪಡೆದಿದೆ. ಒಂದೇ ವಾರದಲ್ಲಿ…

Read More
india showed great gesture towards pak regarding indus water

Indus River: ಸಿಂಧೂ ನದಿ ಒಪ್ಪಂದ ಅಮಾನತು ನಡುವೆಯೂ ಮಾನವೀಯತೆ ಮೆರೆದ ಭಾರತ

ನವದೆಹಲಿ: ಕಳೆದ ವರ್ಷ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯ ಬಳಿಕ ಭಾರತ ಸರ್ಕಾರವು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಂಡು ಐತಿಹಾಸಿಕ ‘ಸಿಂಧೂ ನದಿ (Indus River) ನೀರು ಹಂಚಿಕೆ ಒಪ್ಪಂದ’ವನ್ನು (IWT) ಅಮಾನತ್ತಿನಲ್ಲಿಟ್ಟಿದೆ. ಅಂದಿನಿಂದ ಜಾಗತಿಕ ವೇದಿಕೆಗಳಲ್ಲಿ ಭಾರತವು ನೀರನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಪಾಕಿಸ್ತಾನವು ಸರಣಿ ಅಪಪ್ರಚಾರ ಹಾಗೂ ಕಟು ಟೀಕೆಗಳನ್ನು ಮಾಡುತ್ತಲೇ ಬಂದಿದೆ. ಆದರೆ, ನೆರೆರಾಷ್ಟ್ರದ ಈ ದುರುದ್ದೇಶಪೂರ್ವಕ ಅಪಪ್ರಚಾರದ ನಡುವೆಯೂ ಭಾರತವು ಮತ್ತೊಮ್ಮೆ ಭಾರಿ ಮಾನವೀಯತೆ ಮೆರೆದಿದೆ. ಜಮ್ಮು ಮತ್ತು…

Read More