Crime: ಪ್ರೇಮವಿವಾಹವಾಗಿದ್ದ ನವವಿವಾಹಿತೆ ಬಾವಿಯಲ್ಲಿ ಶವವಾಗಿ ಪತ್ತೆ, ಕೊಲೆ ಆರೋಪ
ಚಿತ್ರದುರ್ಗ: ಪ್ರೇಮ ವಿವಾಹವಾಗಿದ್ದ ನವವಿವಾಹಿತೆಯೊಬ್ಬಳು ಸಂಶಯಾಸ್ಪದ ರೀತಿಯಲ್ಲಿ ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ದಾರುಣ (Crime) ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮಹಾದೇವಪುರ ಗ್ರಾಮದಲ್ಲಿ ನಡೆದಿದೆ. ಅನುಮಾನ ಸೃಷ್ಟಿ ಮಾಡಿದ ಸಾವು ಕಾರಿಪಾಲಯ್ಯನಹಟ್ಟಿ ಮೂಲದ 21 ವರ್ಷದ ಸುಮಲತಾ ಮೃತಪಟ್ಟ ದುರ್ದೈವಿ ನವವಿವಾಹಿತೆ. ಈ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಆಕೆಯ ಪತಿ ಗುಂಡಯ್ಯನಹಟ್ಟಿ ಮೂಲದ ಗಜೇಂದ್ರ ಹಾಗೂ ಆತನ ಕಡೆಯವರ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಸುಮಲತಾ ಅವರು ಕಳೆದ ಆಗಸ್ಟ್…
