TOP NEWS
RBI new rules to stop digital fraud and selling insurance

RBI: ಗ್ರಾಹಕರ ಒಪ್ಪಿಗೆಯಿಲ್ಲದೆ ಇನ್ಮುಂದೆ ಯಾವುದೇ ಪಾಲಿಸಿ ಮಾರುವಂತಿಲ್ಲ: ಬ್ಯಾಂಕಿಂಗ್ ಆ್ಯಪ್‌ಗಳ ಡಿಜಿಟಲ್ ಮೋಸ ತಡೆಯಲು ಆರ್‌ಬಿಐ ಹೊಸ ಅಸ್ತ್ರ

ನವದೆಹಲಿ: ಬ್ಯಾಂಕಿಂಗ್ ವಲಯದಲ್ಲಿ ಗ್ರಾಹಕರ ಹಿತರಕ್ಷಣೆ ಕಾಯಲು ಮತ್ತು ವಿವಿಧ ಹಣಕಾಸು ಉತ್ಪನ್ನಗಳ ಮಾರಾಟದಲ್ಲಿ ನಡೆಯುತ್ತಿರುವ ವಂಚನೆಗಳಿಗೆ ಮುಕ್ತಿ ಹಾಡಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ನಿಯಮಾವಳಿಗಳಿಗೆ ಮಹತ್ವದ ತಿದ್ದುಪಡಿ ತಂದಿದೆ. ಬ್ಯಾಂಕುಗಳು, ಡೈರೆಕ್ಟ್ ಸೆಲ್ಲಿಂಗ್ ಏಜೆಂಟರು (DSA), ಮಾರ್ಕೆಟಿಂಗ್ ಏಜೆಂಟರು ಮತ್ತು ಥರ್ಡ್ ಪಾರ್ಟಿ ಸಂಸ್ಥೆಗಳು ಇನ್ಮುಂದೆ ಗ್ರಾಹಕರನ್ನು ತಪ್ಪು ದಾರಿಗೆ ಎಳೆಯುವುದನ್ನು ತಡೆಯಲು ಈ ಕಠಿಣ ನಿಯಮಗಳನ್ನು ರೂಪಿಸಲಾಗಿದ್ದು, ಇವು 2027ರ ಜನವರಿ 1ರಿಂದ ಅಧಿಕೃತವಾಗಿ ಅನುಷ್ಠಾನಕ್ಕೆ ಬರಲಿವೆ. ಆರ್‌ಬಿಐ ನಿಯಮಗಳ ಪ್ರಕಾರ,…

Read More
Businessman Mohan Das Pai suggestion to new cm dk shivakumar about Bengaluru development and metro problems

Mohan Das Pai: ಬೆಂಗಳೂರು ಅಭಿವೃದ್ಧಿಗೆ ಮೋಹನ್ ದಾಸ್ ಪೈ ಮಾಸ್ಟರ್ ಪ್ಲಾನ್: ಸಿಎಂ ಡಿ.ಕೆ. ಶಿವಕುಮಾರ್‌ಗೆ ಭ್ರಷ್ಟಾಚಾರ ರಹಿತ ಆಡಳಿತ ನೀಡಲು ವಿಶೇಷ ಸಲಹೆ!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಮೂಲಸೌಕರ್ಯಗಳ ದುಃಸ್ಥಿತಿ ಮತ್ತು ಆಡಳಿತ ವ್ಯವಸ್ಥೆಯಲ್ಲಿನ ಲೋಪಗಳ ವಿರುದ್ಧ ಖ್ಯಾತ ಉದ್ಯಮಿ ಮೋಹನ್ ದಾಸ್ ಪೈ (Mohan Das Pai) ಮತ್ತೊಮ್ಮೆ ಧ್ವನಿ ಎತ್ತಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮಗೆ ರಾಜಕೀಯ ಮಾರ್ಗದರ್ಶಕರಾಗಿರುವ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಮಾದರಿಯಲ್ಲೇ ಜನಪರ ಆಡಳಿತ ನೀಡಬೇಕು ಹಾಗೂ ಭ್ರಷ್ಟಾಚಾರಕ್ಕೆ ಸಂಪೂರ್ಣ ಬ್ರೇಕ್ ಹಾಕಿ ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಘನತೆಯನ್ನು ಮರುಸ್ಥಾಪಿಸಬೇಕು ಎಂದು ಸಲಹೆ ನೀಡಿದ್ದಾರೆ. ಲೂಟಿ ಹೊಡೆಯುವ ರಾಜಕಾರಣದಿಂದಾಗಿ ನಗರದ…

Read More
home minister priyank kharge taunts RSS mohan bhagwat and BJP

Priyank Kharge: ರೌಡಿಶೀಟರ್‌ಗಳ ಬಿಡುಗಡೆಗೆ ಪ್ರಿಯಾಂಕ್ ಖರ್ಗೆ ತಡೆ

ನವದೆಹಲಿ: ರಾಜ್ಯದ ಸುವ್ಯವಸ್ಥೆಗೆ ಧಕ್ಕೆ ತರಬಲ್ಲ 66 ಮಂದಿ ರೌಡಿಶೀಟರ್‌ಗಳನ್ನು ರೌಡಿಪಟ್ಟಿಯಿಂದ ಮುಕ್ತಗೊಳಿಸುವ ಪೊಲೀಸ್ ಇಲಾಖೆಯ ವಿವಾದಾತ್ಮಕ ಪ್ರಸ್ತಾವನೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತುರ್ತು ತಡೆ ಆದೇಶ ನೀಡಿದ್ದಾರೆ. ದೆಹಲಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಚಿವರು, ರೌಡಿಮುಕ್ತಗೊಳಿಸಲು ಸಿದ್ಧಪಡಿಸಲಾಗಿದ್ದ ಪಟ್ಟಿಯಲ್ಲಿ ಕನಿಷ್ಠ 10 ರಿಂದ 12 ಮಂದಿ ಅತ್ಯಂತ ಭಯಾನಕ ಮತ್ತು ಕುಖ್ಯಾತ ಅಪರಾಧಿಗಳಿದ್ದಾರೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ ಎಂದು ತಿಳಿಸಿದರು. ಬೆಂಗಳೂರು ಪೊಲೀಸ್ ಕಮಿಷನರ್‌ಗೆ…

Read More
RSS Mohan Bhagwat answers to priyank kharge letter

RSS: ಆರ್‌ಎಸ್‌ಎಸ್ ರಿಜಿಸ್ಟ್ರೇಷನ್ ವಿವಾದ: ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಮೋಹನ್ ಭಾಗವತ್ ಕೌಂಟರ್

ತಿರುವನಂತಪುರಂ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕಾನೂನಾತ್ಮಕ ಸ್ಥಾನಮಾನ ಹಾಗೂ ನೋಂದಣಿ ಪ್ರಕ್ರಿಯೆಯನ್ನು ಪ್ರಶ್ನಿಸಿ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬರೆದಿದ್ದ ಕಠಿಣ ಪತ್ರಕ್ಕೆ ಸಂಘದ ಮುಖ್ಯಸ್ಥ (ಸರಸಂಘಚಾಲಕ) ಮೋಹನ್ ಭಾಗವತ್ ಅವರು ಕೇರಳದ ಮಣ್ಣಿನಿಂದಲೇ ನೇರ ತಿರುಗೇಟು ನೀಡಿದ್ದಾರೆ. ಕೇರಳದಲ್ಲಿ ಆಯೋಜನೆಯಾಗಿದ್ದ ಸಂಘದ ಅಧಿಕೃತ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರದ ಇಂತಹ ರಾಜಕೀಯ ಪ್ರೇರಿತ ಪ್ರಶ್ನೆಗಳಿಗೆ ಉತ್ತರಿಸುವ ಯಾವುದೇ ಅನಿವಾರ್ಯತೆ ನಮಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ಬೂಟಾಟಿಕೆ ಕಾಂಗ್ರೆಸ್ ಸರ್ಕಾರದ…

Read More
priyank kharge write letters to RSS asks 8 questions

Priyank Kharge: ಆರ್‌ಎಸ್‌ಎಸ್ ವಿರುದ್ಧ ಪ್ರಿಯಾಂಕ್ ಖರ್ಗೆ ಹೊಸ ಸಮರ: ಶತಮಾನೋತ್ಸವದ ಬೆನ್ನಲ್ಲೇ ಮೋಹನ್ ಭಾಗವತ್‌ಗೆ 8 ಪ್ರಶ್ನೆಗಳ ಪತ್ರ!

ಬೆಂಗಳೂರು: ರಾಜ್ಯದ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ(Priyank Kharge) ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವಿರುದ್ಧ ತಮ್ಮ ರಾಜಕೀಯ ವಾಗ್ದಾಳಿಯನ್ನು ತೀವ್ರಗೊಳಿಸಿದ್ದಾರೆ. ಈ ಹಿಂದಿನ ಸಿದ್ದರಾಮಯ್ಯ ಸಂಪುಟದಲ್ಲೂ ಆರ್‌ಎಸ್‌ಎಸ್ ಸಿದ್ಧಾಂತಗಳನ್ನು ಕಟುವಾಗಿ ವಿರೋಧಿಸುತ್ತಿದ್ದ ಖರ್ಗೆ, ಈಗ ಇಲಾಖೆಯ ಉಸ್ತುವಾರಿ ಸಿಗುತ್ತಿದ್ದಂತೆ ಸಂಘದ ಮುಖ್ಯಸ್ಥರಾದ (ಸರಸಂಘಚಾಲಕ) ಮೋಹನ್ ಭಾಗವತ್ ಅವರಿಗೆ ಪತ್ರವೊಂದನ್ನು ಬರೆಯುವ ಮೂಲಕ ನೇರ ಸವಾಲು ಹಾಕಿದ್ದಾರೆ. ಸಂಘಟನೆಯು ಯಶಸ್ವಿಯಾಗಿ 100 ವರ್ಷಗಳನ್ನು ಪೂರೈಸಿರುವುದಕ್ಕೆ ಪತ್ರದಲ್ಲಿ ಶುಭ ಹಾರೈಸುತ್ತಲೇ, ಅದರ ಕಾನೂನಾತ್ಮಕ…

Read More
Iran america Strait of Hormuz y oil supply face problem

Strait of Hormuz: ಅಮೆರಿಕ-ಇರಾನ್ ಯುದ್ಧಕ್ಕೆ ಬ್ರೇಕ್; ಹೋರ್ಮುಜ್ ಜಲಸಂಧಿ ಮರು ಆರಂಭವಾದ್ರೂ ತಕ್ಷಣವೇ ಮುಗಿಯಲ್ಲ ತೈಲ ಬಿಕ್ಕಟ್ಟು!

ನ್ಯೂಯಾರ್ಕ್: ಜಾಗತಿಕ ಆರ್ಥಿಕತೆಗೆ ಭಾರಿ ಕಂಟಕ ತಂದಿಟ್ಟಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಸುದೀರ್ಘ ಯುದ್ಧಕ್ಕೆ ಅಂತೂ ಇಂತೂ ತೆರೆಬಿದ್ದಿದೆ. ಪ್ರಪಂಚದ ಇಂಧನ ಸಾಗಾಟದ ಅತ್ಯಂತ ಪ್ರಮುಖ ಕಡಲ ಹೆದ್ದಾರಿಯಾದ ‘ಹೋರ್ಮುಜ್ ಜಲಸಂಧಿ’ಯನ್ನು (Strait of Hormuz) ಮರು ಆರಂಭಿಸುವ ಕುರಿತು ಉಭಯ ದೇಶಗಳ ನಡುವೆ ಐತಿಹಾಸಿಕ ಒಪ್ಪಂದವೇನೋ ಪ್ರಕಟವಾಗಿದೆ. ಆದರೆ, ಈ ಒಪ್ಪಂದದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಅನಿಲದ ಕೊರತೆ ಹಾಗೂ ಗಗನಕ್ಕೇರಿರುವ ಇಂಧನ ಬೆಲೆಯ ಬಿಸಿ ತಕ್ಷಣವೇ ತಣ್ಣಗಾಗುವುದಿಲ್ಲ ಎಂದು…

Read More
Actor tamil nadu CM vijay and sangeetha divorce case adjourned

CM Vijay: ವಿಜಯ್-ಸಂಗೀತಾ ಡಿವೋರ್ಸ್‌ ಪ್ರಕರಣ, ವಿಚಾರಣೆ ಮುಂದೂಡಿದ ಕೋರ್ಟ್

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹಾಗೂ ಖ್ಯಾತ ನಟ ವಿಜಯ್ (CM Vijay) ಮತ್ತು ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ ಅವರ ಹೈಪ್ರೊಫೈಲ್ ವಿಚ್ಛೇದನ ಅರ್ಜಿ ವಿಚಾರಣೆಯು ಸೋಮವಾರ (ಜೂನ್ 15) ಚೆಂಗಲ್ಪಟ್ಟು ಮಹಿಳಾ ನ್ಯಾಯಾಲಯದಲ್ಲಿ ಯಾವುದೇ ಪ್ರಮುಖ ನಿರ್ಧಾರಗಳಿಲ್ಲದೆ ಮುಕ್ತಾಯಗೊಂಡಿದೆ. ನ್ಯಾಯಾಲಯದ ಕಟ್ಟುನಿಟ್ಟಿನ ಆದೇಶದ ಮೇರೆಗೆ ಸಿಎಂ ವಿಜಯ್ ಹಾಗೂ ಸಂಗೀತಾ ಇಬ್ಬರೂ ಬೆಳಿಗ್ಗೆ 10:30ಕ್ಕೆ ಆರಂಭವಾದ ವಿಚಾರಣೆಗೆ ಖುದ್ದಾಗಿ ಹಾಜರಾಗಿದ್ದರು. ಇಬ್ಬರ ಉಪಸ್ಥಿತಿಯ ನಡುವೆಯೂ ಉಭಯ ಪಕ್ಷಗಳ ನಡುವೆ ಯಾವುದೇ ಒಪ್ಪಂದ ಅಥವಾ ಪ್ರಮುಖ ಬೆಳವಣಿಗೆಗಳು…

Read More