Tamil Nadu: ಕೇವಲ ಒಂದು ಮತದ ಅಂತರದಿಂದ ಸಚಿವರ ಸೋಲು: ತಿರುಪ್ಪತ್ತೂರಿನಲ್ಲಿ ‘ದೈತ್ಯ ಸಂಹಾರ’ ಮಾಡಿದ ವಿಜಯ್ ಪಕ್ಷದ ಅಭ್ಯರ್ಥಿ!
ಚೆನ್ನೈ: ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿಯೊಂದು ಮತವೂ ಎಷ್ಟು ನಿರ್ಣಾಯಕ ಎಂಬುದಕ್ಕೆ ತಮಿಳುನಾಡಿನ ತಿರುಪ್ಪತ್ತೂರು (Tamil Nadu) ವಿಧಾನಸಭಾ ಕ್ಷೇತ್ರದ ಫಲಿತಾಂಶವು ಜೀವಂತ ಸಾಕ್ಷಿಯಾಗಿದೆ. ದಳಪತಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಮ್’ (TVK) ಪಕ್ಷದ ಅಭ್ಯರ್ಥಿ ಶ್ರೀನಿವಾಸ ಸೇತುಪತಿ ಅವರು ಡಿಎಂಕೆಯ ಪ್ರಭಾವಿ ಸಚಿವ ಕೆ.ಆರ್. ಪೆರಿಯಕರುಪ್ಪನ್ ಅವರನ್ನು ಕೇವಲ ಒಂದೇ ಒಂದು ಮತದ ಅಂತರದಿಂದ ಪರಾಭವಗೊಳಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಕೊನೆಯ ಕ್ಷಣದವರೆಗೆ ಉಸಿರು ಬಿಗಿಹಿಡಿಯುವ ಕುತೂಹಲ: ಡಿಎಂಕೆಯ ಭದ್ರಕೋಟೆ ಎಂದೇ ನಂಬಲಾದ ಈ ಕ್ಷೇತ್ರದಲ್ಲಿ…
