TOP NEWS

Sandeep

vijay TVK rare achievement like TDP and AAP

TVK: ತಮಿಳುನಾಡು ರಾಜಕೀಯದಲ್ಲಿ ವಿಜಯ್ ಸುನಾಮಿ, ರಾಜಕೀಯದ ಹೊಸ ‘ಯೂನಿಕಾರ್ನ್’ ಟಿವಿಕೆ!

ಚೆನ್ನೈ: ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ದಶಕಗಳ ಕಾಲ ಅಧಿಪತ್ಯ ಸ್ಥಾಪಿಸಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಎಂಬ ಎರಡು ದೈತ್ಯ ಪಕ್ಷಗಳನ್ನು ಬದಿಗೆ ಸಳ್ಳಿ, ನಟ ವಿಜಯ್ (Vijay) ಸಾರಥ್ಯದ ‘ತಮಿಳಗ ವೆಟ್ರಿ ಕಳಗಂ’ (TVK) ಅಧಿಕಾರದ ಹತ್ತಿರಕ್ಕೆ ಬಂದಿದೆ. ಚೊಚ್ಚಲ ಚುನಾವಣೆಯಲ್ಲೇ ದ್ರಾವಿಡ ಪಕ್ಷಗಳ ಭದ್ರಕೋಟೆಯನ್ನು ಛಿದ್ರಗೊಳಿಸಿರುವ ವಿಜಯ್ ಅವರ ಈ ಸಾಧನೆಯನ್ನು ರಾಜಕೀಯ ವಿಶ್ಲೇಷಕರು ‘ಬಿಗ್ ಬ್ಯಾಂಗ್’ ಕ್ಷಣ ಎಂದು ಕರೆಯುತ್ತಿದ್ದಾರೆ. ಮೊದಲ ಯತ್ನದಲ್ಲೇ ಭರ್ಜರಿ ಮುನ್ನಡೆ: ರಾಜ್ಯದ ಒಟ್ಟು 234 ವಿಧಾನಸಭಾ ಕ್ಷೇತ್ರಗಳ ಪೈಕಿ…

Read More
Bjp workers celebrated win with fish meal

BJP: ಬಂಗಾಳದಲ್ಲಿ ದೀದಿ ಯುಗಾಂತ್ಯ; ಕೇಸರಿ ಸುನಾಮಿಗೆ ನಲುಗಿದ ಟಿಎಂಸಿ ಕೋಟೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಅಖಂಡ ಬಹುಮತದತ್ತ ಮುನ್ನುಗ್ಗುವ ಮೂಲಕ ಇತಿಹಾಸ ಸೃಷ್ಟಿಸಿದೆ. ಮಮತಾ ಬ್ಯಾನರ್ಜಿ ಅವರ ಸುದೀರ್ಘ 15 ವರ್ಷಗಳ ಆಡಳಿತವನ್ನು ಅಂತ್ಯಗೊಳಿಸಿ ಅಧಿಕಾರದ ಗದ್ದುಗೆಯತ್ತ ಹೆಜ್ಜೆ ಹಾಕಿರುವ ಬಿಜೆಪಿ (BJP) ಕಾರ್ಯಕರ್ತರು, ಬಂಗಾಳದ ಸಂಪ್ರದಾಯದಂತೆ ಮೀನೂಟ ಸವಿಯುವ ಮೂಲಕ ವಿಶಿಷ್ಟವಾಗಿ ವಿಜಯೋತ್ಸವ ಆಚರಿಸಿದ್ದಾರೆ. ಮೀನೂಟದ ಮೂಲಕವೇ ತಿರುಗೇಟು: ಚುನಾವಣಾ ಪ್ರಚಾರದ ವೇಳೆ “ಬಿಜೆಪಿ ಬಂದರೆ ರಾಜ್ಯದಲ್ಲಿ ಮೀನು, ಮಾಂಸ ನಿಷೇಧಿಸುತ್ತದೆ” ಎಂದು ಟಿಎಂಸಿ ಹರಡಿದ್ದ ವದಂತಿಗೆ ಬಿಜೆಪಿ ಕಾರ್ಯಕರ್ತರು…

Read More
Cm Siddaramaiah social media post about kerala and tamil nadu election

CM Siddaramaiah: ಕೇರಳದಲ್ಲಿ ಕಾಂಗ್ರೆಸ್ ವಿಜಯೋತ್ಸವ: ಪಶ್ಚಿಮ ಬಂಗಾಳದ ಫಲಿತಾಂಶ ಪ್ರಜಾಪ್ರಭುತ್ವದ ಸೋಲು!: ಸಿಎಂ ಸಿದ್ದರಾಮಯ್ಯ

ದಕ್ಷಿಣದ ರಾಜ್ಯಗಳಾದ ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಂತೆ ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿಯೂ ಬಿಜೆಪಿಯ ಕೋಮುವಾದಿ ರಾಜಕಾರಣಕ್ಕೆ ಪ್ರವೇಶ ಇಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ನೀಡಿರುವ ಎರಡು ರಾಜ್ಯಗಳ ಮತದಾರರನ್ನು ದೇಶದ ಎಲ್ಲ ಜಾತ್ಯತೀತ ಮತ್ತು ಪ್ರಜಾಪ್ರಭುತ್ವವಾದಿ ಜನರ ಪರವಾಗಿ ಅಭಿನಂದಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಪೋಸ್ಟ್‌ ಮಾಡಿದ್ದಾರೆ. ಕೇರಳದಲ್ಲಿ ಉತ್ತಮ ಆಡಳಿತ ಕೊಡಲಿದ್ದೇವೆ ಕೇರಳದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ನಿರೀಕ್ಷಿತವಾಗಿತ್ತು. ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಪ್ರಚಾರದ ಕಾರ್ಯತಂತ್ರದ ವರೆಗೆ ಎಲ್ಲವನ್ನೂ ಆ…

Read More
High Court rules no business under tourist visa

High Court: ಪ್ರವಾಸಿ ವೀಸಾ ದುರುಪಯೋಗಪಡಿಸಿಕೊಂಡ ವಿದೇಶಿಗನಿಗೆ ಹೈಕೋರ್ಟ್ ಚಾಟಿ

ಬೆಂಗಳೂರು: ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಆಗಮಿಸಿ ನಿಯಮಬಾಹಿರವಾಗಿ ಉದ್ಯಮ ಮತ್ತು ಆಸ್ತಿ ಖರೀದಿ ವ್ಯವಹಾರಗಳಲ್ಲಿ ತೊಡಗಿದ್ದ ಫ್ರಾನ್ಸ್ ಮೂಲದ ವ್ಯಕ್ತಿಗೆ ಕರ್ನಾಟಕ ಹೈಕೋರ್ಟ್ (High Court) ಬಿಸಿ ಮುಟ್ಟಿಸಿದೆ. ವೀಸಾ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ನೀಡಿದ್ದ ‘ದೇಶ ಬಿಟ್ಟು ತೆರಳಿ’ ಎಂಬ ನೋಟಿಸ್ ಅನ್ನು ನ್ಯಾಯಾಲಯ ಎತ್ತಿಹಿಡಿದಿದೆ. ಟೂರಿಸ್ಟ್ ವೀಸಾದಲ್ಲೇ 15 ವರ್ಷಗಳ ವಾಸ್ತವ್ಯ: ಫ್ರಾನ್ಸ್ ಪ್ರಜೆಯಾದ ಕ್ರಿಸ್ಟೋಫೆ ಸ್ಟೆಫಾನ್ ಕಳೆದ 15 ವರ್ಷಗಳಿಂದ ಪ್ರವಾಸಿ ವೀಸಾದ ಆಧಾರದ ಮೇಲೆ…

Read More
winning west Bengal election win bjp releases new india map

West Bengal: ಬಂಗಾಳ ಗೆದ್ದ ಸಂಭ್ರಮ: ದೇಶದ ಹೊಸ ರಾಜಕೀಯ ಭೂಪಟ ಬಿಡುಗಡೆ ಮಾಡಿದ ಬಿಜೆಪಿ!

ನವದೆಹಲಿ: ಪಶ್ಚಿಮ ಬಂಗಾಳದ (West Bengal) ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ವಿಜಯ ದಾಖಲಿಸಿರುವ ಬಿಜೆಪಿ, ಇಡೀ ದೇಶದ ಗಮನ ಸೆಳೆದಿದೆ. ದಶಕಗಳ ಕಾಲದ ಮಮತಾ ಬ್ಯಾನರ್ಜಿ ಅವರ ಆಡಳಿತಕ್ಕೆ ಅಂತ್ಯ ಹಾಡಿರುವ ಸಂಭ್ರಮದಲ್ಲಿರುವ ಕೇಸರಿ ಪಡೆ, ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ಹೊಸ ರಾಜಕೀಯ ನಕ್ಷೆಯನ್ನು ಹಂಚಿಕೊಳ್ಳುವ ಮೂಲಕ ವಿರೋಧ ಪಕ್ಷಗಳಿಗೆ ಬಲವಾದ ಸಂದೇಶ ರವಾನಿಸಿದೆ. ನಕ್ಷೆಯಲ್ಲಿ ಕೇಸರಿಮಯ ಬಂಗಾಳ: ಬಿಜೆಪಿ ಬಿಡುಗಡೆ ಮಾಡಿರುವ ಈ ವಿಶೇಷ ಭೂಪಟದಲ್ಲಿ ಪಶ್ಚಿಮ ಬಂಗಾಳವನ್ನು ಸಂಪೂರ್ಣವಾಗಿ ಕೇಸರಿ ಬಣ್ಣದಲ್ಲಿ…

Read More
Mukesh Khanna shares why he did not married

Mukesh Khanna: ಮದುವೆ ಆಗದೇ ಇರೋದೇಕೆ ಶಕ್ತಿಮಾನ್‌? ಇಲ್ಲಿದೆ ರಹಸ್ಯ

ಮುಂಬೈ: ಭಾರತೀಯ ಕಿರುತೆರೆಯ ಅದ್ಭುತ ಶಕ್ತಿಮಾನ್ ಎಂದೇ ಹೆಸರಾದ ನಟ ಮುಕೇಶ್ ಖನ್ನಾ (Mukesh Khanna) ಅವರು ನೇರ ನಡೆ ಹಾಗೂ ನುಡಿಗೆ ಹೆಸರಾದವರು. 67ನೇ ವಯಸ್ಸಿನಲ್ಲೂ ತಮ್ಮ ವಿಚಾರಗಳನ್ನು ಬಹಳ ಸ್ಪಷ್ಟವಾಗಿ ಹಂಚಿಕೊಳ್ಳುವ ಅವರು, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಅವಿವಾಹಿತರಾಗಿಯೇ ಉಳಿದಿದ್ದೇಕೆ ಮತ್ತು ಪ್ರೀತಿ ಹಾಗೂ ದಾಂಪತ್ಯದ ಬಗ್ಗೆ ತಮ್ಮ ನಿಲುವೇನು ಎಂಬುದನ್ನು ವಿವರಿಸಿದ್ದಾರೆ. ಸಾಮಾನ್ಯವಾಗಿ ಮದುವೆಯಾಗದವರ ಬಗ್ಗೆ ಸಮಾಜದಲ್ಲಿ ಒಂದು ರೀತಿಯ ಕುತೂಹಲವಿರುತ್ತದೆ. ಆದರೆ ಮುಕೇಶ್ ಖನ್ನಾ ಅವರು ವಿವಾಹ ವ್ಯವಸ್ಥೆಯ ಮೇಲೆ ಅಪಾರ…

Read More
by election davangere internal conflict in congress

By Election: ಸಮರ್ಥ್ ಮಲ್ಲಿಕಾರ್ಜುನ್‌ಗೆ ಜಯ; ಕಾಂಗ್ರೆಸ್ ಆಂತರಿಕ ಬಣಗಳ ನಡುವೆ ಪ್ರತಿಷ್ಠೆಯ ಸಮರ!

ದಾವಣಗೆರೆ: ದಾವಣಗೆರೆ ದಕ್ಷಿಣ (By Election) ವಿಧಾನಸಭಾ ಕ್ಷೇತ್ರದ ಉಪಸಮರದಲ್ಲಿ ಕಾಂಗ್ರೆಸ್‌ನ ಸಮರ್ಥ್ ಮಲ್ಲಿಕಾರ್ಜುನ್ ಅವರು ಸುಮಾರು 7,000 ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದಾರೆ. ಈ ಗೆಲುವು ಕೇವಲ ಅಭ್ಯರ್ಥಿಯ ಯಶಸ್ಸಷ್ಟೇ ಅಲ್ಲದೆ, ರಾಜ್ಯ ಕಾಂಗ್ರೆಸ್ ಘಟಕದ ಪ್ರಭಾವಿ ನಾಯಕರ ನಡುವಿನ ಶಕ್ತಿ ಪ್ರದರ್ಶನಕ್ಕೂ ಸಾಕ್ಷಿಯಾಗಿದೆ. ರಿಜ್ವಾನ್-ಸಲೀಂ ಕಾರ್ಯತಂತ್ರಕ್ಕೆ ಯಶಸ್ಸು; ಜಮೀರ್ ಬಣಕ್ಕೆ ಮುಖಭಂಗ? ಸಮರ್ಥ್ ಅವರ ಈ ವಿಜಯವು ಶಾಸಕ ರಿಜ್ವಾನ್ ಅರ್ಷದ್ ಮತ್ತು ಸಲೀಂ ಅಹ್ಮದ್ ಅವರ ಬಣಕ್ಕೆ ಸಂದ ದೊಡ್ಡ ಜಯ ಎಂದು ವಿಶ್ಲೇಷಿಸಲಾಗುತ್ತಿದೆ….

Read More