TOP NEWS
PM kisan yojana 23 installment release on June 20 2026

PM Kisan: ರೈತರ ಖಾತೆಗೆ ನಾಳೆ ಬೀಳಲಿದೆ ಪಿಎಂ ಕಿಸಾನ್ ಹಣ

ಬೆಂಗಳೂರು: ದೇಶದ ಕೋಟ್ಯಂತರ ಅನ್ನದಾತರು ಕಾತರದಿಂದ ಕಾಯುತ್ತಿದ್ದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಯೋಜನೆಯ ಬಹುನಿರೀಕ್ಷಿತ 23ನೇ ಕಂತಿನ ಹಣ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಜೂನ್ 20ರ ಶನಿವಾರದಂದು ಪ್ರಧಾನಮಂತ್ರಿಯವರು ದೇಶದ ಅರ್ಹ ರೈತ ಕುಟುಂಬಗಳ ಖಾತೆಗೆ ಅಧಿಕೃತವಾಗಿ ಈ ಹಣವನ್ನು ಜಮೆ ಮಾಡಲಿದ್ದಾರೆ. ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಾರಕೇಶ್ವರದಲ್ಲಿ ಸಂಜೆ 4 ಗಂಟೆಗೆ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಪ್ರಧಾನಿಯವರು ಈ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದು, ಕೃಷಿ ಕ್ಷೇತ್ರಕ್ಕೆ…

Read More
sandalwood actor darshan kalasipalya re release

Actor Darshan: ಥಿಯೇಟರ್‌ಗಳಲ್ಲಿ ಮತ್ತೆ ‘ಡಿ ಬಾಸ್’ ಹವಾ: 20 ವರ್ಷಗಳ ಹಳೆಯ ‘ಕಲಾಸಿಪಾಳ್ಯ’ ರೀ-ರಿಲೀಸ್‌ಗೆ ಪ್ರಸನ್ನ ಚಿತ್ರಮಂದಿರ ಹೌಸ್‌ಫುಲ್!

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ (‌Actor Darshan) ಅಭಿನಯದ ಸ್ಯಾಂಡಲ್‌ವುಡ್‌ನ ಗರಂ ಆ್ಯಕ್ಷನ್ ಸಿನಿಮಾ ‘ಕಲಾಸಿಪಾಳ್ಯ’ ಜೂನ್ 19ರ ಶುಕ್ರವಾರದಂದು ಚಿತ್ರಮಂದಿರಗಳಲ್ಲಿ ಮತ್ತೆ ತೆರೆಕಂಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ದೂಳೆಬ್ಬಿಸುತ್ತಿದೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಐತಿಹಾಸಿಕ ಪ್ರಸನ್ನ ಥಿಯೇಟರ್‌ನಲ್ಲಿ ದರ್ಶನ್ ಅಭಿಮಾನಿಗಳು ಈ ಚಿತ್ರದ ಮರು-ಬಿಡುಗಡೆಯನ್ನು ದೊಡ್ಡ ಹಬ್ಬದಂತೆ ಆಚರಿಸಿದ್ದಾರೆ. ನೆಚ್ಚಿನ ನಟನ ಬೃಹತ್ ಕಟೌಟ್‌ಗಳಿಗೆ ಹಾಲಿನ ಅಭಿಷೇಕ ಮಾಡಿ, ಗಜಮಾಲೆ ಹಾಕಿ, ಪಟಾಕಿಗಳ ಸರವನ್ನೇ ಸಿಡಿಸಿ ಚಿತ್ರಪ್ರೇಮಿಗಳು ಅದ್ದೂರಿ ಸ್ವಾಗತ ಕೋರಿದ್ದಾರೆ. ಬೆಳ್ಳಿ ತೆರೆಯ ಮೇಲೆ ದರ್ಶನ್…

Read More
namma metro BMRCL proposes tree cutting shocks nature lovers

Namma Metro: ಬೆಂಗಳೂರಲ್ಲಿ ಮೆಟ್ರೋ ಫೇಸ್-3 ಅಬ್ಬರ: 3,600ಕ್ಕೂ ಹೆಚ್ಚು ಮರಗಳ ಕತ್ತರಿಸಲು ಬಿಎಂಆರ್‌ಸಿಎಲ್ ಪ್ಲಾನ್

ಬೆಂಗಳೂರು: ರಾಜಧಾನಿಯ ಸಂಚಾರ ದಟ್ಟಣೆಗೆ ಮುಕ್ತಿ ನೀಡಲಿರುವ ನಮ್ಮ ಮೆಟ್ರೋ ಮೂರನೇ ಹಂತದ (Namma Metro) ಯೋಜನೆಗೆ ಗ್ರೌಂಡ್ ವರ್ಕ್ ಆರಂಭವಾಗುತ್ತಿದ್ದಂತೆಯೇ, ಇತ್ತ ಸಿಲಿಕಾನ್ ಸಿಟಿಯ ಪರಿಸರಕ್ಕೆ ದೊಡ್ಡ ಮಟ್ಟದ ಕಂಟಕ ಎದುರಾಗಿದೆ. ಈ ಹೊಸ ಮೆಟ್ರೋ ಲೈನ್ ಕಾಮಗಾರಿಗಾಗಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಒಟ್ಟು 3,627 ಮರಗಳನ್ನು ಧರಾಶಾಹಿ ಮಾಡಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ನಿರ್ಧರಿಸಿದೆ. ಮರಗಳ ತೆರವು ಕಾರ್ಯಾಚರಣೆಗೆ ಅನುಮತಿ ಕೋರಿ ಬಿಎಂಆರ್‌ಸಿಎಲ್ ಅಧಿಕಾರಿಗಳು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಅರಣ್ಯ…

Read More
Shocking bomb threat e mails to 4 district courts

Bomb Threat: ಕೋರ್ಟ್‌ಗಳಿಗೆ ಸರಣಿ ಇ-ಮೇಲ್ ಬಾಂಬ್ ಬೆದರಿಕೆ: ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಹೈಡ್ರಾಮಾ

ಬೆಂಗಳೂರು: ಕರ್ನಾಟಕದ ವಿವಿಧ ಜಿಲ್ಲಾ ನ್ಯಾಯಾಲಯಗಳನ್ನು ಗುರಿಯಾಗಿಸಿಕೊಂಡು ಕಿಡಿಗೇಡಿಗಳು ನಡೆಸುತ್ತಿರುವ ಹುಸಿ ಬಾಂಬ್ ಇ-ಮೇಲ್ (‌Bomb Threat) ದಂಧೆ ಸಾರ್ವಜನಿಕ ವಲಯದಲ್ಲಿ ಭಾರಿ ತಲ್ಲಣ ಸೃಷ್ಟಿಸಿದೆ. ಜೂನ್ 19ರ ಶುಕ್ರವಾರದಂದು ರಾಜ್ಯದ ನಾಲ್ಕು ಪ್ರಮುಖ ಜಿಲ್ಲೆಗಳಾದ ಬಾಗಲಕೋಟೆ, ದಾವಣಗೆರೆ, ಧಾರವಾಡ ಮತ್ತು ಕೋಲಾರದ ಕೋರ್ಟ್ ಆವರಣಗಳಿಗೆ ಏಕಕಾಲದಲ್ಲಿ ಬೆದರಿಕೆ ಇ-ಮೇಲ್‌ಗಳು ಬಂದಿವೆ. ನ್ಯಾಯಾಲಯಗಳ ಒಳಗೆ ಬಾಂಬ್ ಅಡಗಿಸಿಡಲಾಗಿದೆ ಎಂಬ ಮಾಹಿತಿ ಹರಡುತ್ತಿದ್ದಂತೆ ವಕೀಲರು, ಕಕ್ಷಿದಾರರು ಹಾಗೂ ನ್ಯಾಯಾಂಗ ಸಿಬ್ಬಂದಿ ಪ್ರಾಣಭಯದಿಂದ ಆಚೆ ಓಡಿ ಬಂದಿದ್ದು, ಇಡೀ ಪೊಲೀಸ್…

Read More
Viral news 20rs note in temple donation box shocks everyone

Viral News: ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಅತ್ತೆಯ ಮರಣ ಶಾಸನ ಬರೆದ ಸೊಸೆ!: ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದ 20 ರೂಪಾಯಿ ನೋಟು!

ಆಂಧ್ರಪ್ರದೇಶ: ಸಾಮಾನ್ಯವಾಗಿ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತಾದಿಗಳು ತಮಗೆ ಒಳ್ಳೆಯದಾಗಲಿ, ಮನೆ ಮಂದಿಗೆಲ್ಲಾ ಸುಖ-ಶಾಂತಿ ಸಿಗಲಿ ಎಂದು ದೇವರಲ್ಲಿ ಮೊರೆ ಇಡುತ್ತಾರೆ. ಆದರೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಿಂದ ಇಡೀ ಸಮಾಜವೇ ಮೂಗಿನ ಮೇಲೆ ಬೆರಳಿಡುವಂತಹ ವಿಲಕ್ಷಣ ಪ್ರಸಂಗವೊಂದು ಮುನ್ನೆಲೆಗೆ (Viral News) ಬಂದಿದೆ. ಅತ್ತೆಯ ಕಿರುಕುಳದಿಂದ ಸಂಪೂರ್ಣವಾಗಿ ಜಿಗುಪ್ಸೆಗೊಂಡ ಸೊಸೆಯೊಬ್ಬಳು, ತನ್ನ ಅತ್ತೆ ಇಷ್ಟರಲ್ಲೇ ಸಾಯುವಂತೆ ಅನುಗ್ರಹಿಸು ಎಂದು ನೇರವಾಗಿ ದೇವರಿಗೇ ಪತ್ರ ಬರೆದು ಹುಂಡಿಗೆ ಎಸೆದು ಬಂದಿದ್ದಾಳೆ! ಎಲ್ಲಿ ನಡೆದಿದ್ದು ಈ ಘಟನೆ? ಈ ಕುತೂಹಲಕಾರಿ…

Read More
BY Vijayendra express sadness about cross voting in MLC Election

BY Vijayendra: ‘ಇವರು ಹೆತ್ತ ತಾಯಿಗೆ ದ್ರೋಹ ಬಗೆದ ಮೀರ್ ಸಾಧಕರು!’: ಬಿ.ವೈ. ವಿಜಯೇಂದ್ರ

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡಮತದಾನ ಮಾಡಿದ ಸ್ವಪಕ್ಷದ ಶಾಸಕರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಬೆನ್ನಿಗೆ ಚೂರಿ ಹಾಕಿದವರನ್ನು ‘ಮೀರ್ ಸಾಧಕರು’ ಎಂದು ಕರೆಯುವ ಮೂಲಕ ಪರೋಕ್ಷವಾಗಿ ಕಠಿಣ ಶಿಸ್ತು ಕ್ರಮ ಜರುಗಿಸುವ ಗ್ಯಾರಂಟಿ ಎಚ್ಚರಿಕೆಯನ್ನು ನೀಡಿದ್ದಾರೆ. ಹೆತ್ತ ತಾಯಿಗೆ ದ್ರೋಹ ಬಗೆದಂತೆ ನಡೆದುಕೊಂಡಿರುವ ಇಂತಹ ನಾಯಕರಿಗೆ ಯಾವುದೇ ಕಾರಣಕ್ಕೂ ಕ್ಷಮೆಯಿಲ್ಲ, ಇವರಿಗೆ ತಕ್ಕ ಪಾಠ ಕಲಿಸಲೇಬೇಕು ಎಂದು…

Read More
bollywood director rajkumar hirani shares story line of 3 idiots film

Bollywood: ‘3 ಈಡಿಯಟ್ಸ್’ ಸೀಕ್ವೆಲ್ ಕಥೆ ಕೇಳಿ ಫಿದಾ ಆದ ಅಮೀರ್ ಖಾನ್: ಕಥೆ ಬಿಚ್ಚಿಟ್ಟ ರಾಜ್‌ಕುಮಾರ್ ಹಿರಾನಿ!

ಮುಂಬೈ: ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಪ್ರೀತಿ ಹಾಗೂ ಜನಪ್ರಿಯತೆ ಗಳಿಸಿದ ‘3 ಈಡಿಯಟ್ಸ್’ ಸಿನಿಮಾ ಬಿಡುಗಡೆಯಾಗಿ ಹದಿನೈದು ವರ್ಷಗಳೇ (Bollywood) ಕಳೆದಿದ್ದರೂ, ಅದರ ಎರಡನೇ ಭಾಗದ (ಸೀಕ್ವೆಲ್) ಮೇಲಿನ ನಿರೀಕ್ಷೆ ಮಾತ್ರ ಕಮ್ಮಿಯಾಗಿಲ್ಲ. ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸ್ನೇಹ, ಸಂಕಟ ಹಾಗೂ ಭಾರತೀಯ ಶಿಕ್ಷಣ ವ್ಯವಸ್ಥೆಯ ಮೇಲಿನ ಹಾಸ್ಯಭರಿತ ಚಾಟಿ ಏಟಿನ ಕಥೆ ಹೊಂದಿದ್ದ ಈ ಚಿತ್ರ ಪ್ರತಿಯೊಬ್ಬ ಪ್ರೇಕ್ಷಕನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಇದೀಗ ಚಿತ್ರದ ಅಭಿಮಾನಿಗಳಿಗೆ ಖುಷಿ ಕೊಡುವಂತಹ ಪ್ರಮುಖ ಅಪ್‌ಡೇಟ್…

Read More