TOP NEWS
Dk shivakumar announced government will by 620 new buses

DK Shivakumar: ಸಾರಿಗೆ ಸುಧಾರಣೆಗೆ ಸರ್ಕಾರದ ಬಿಗ್ ಪ್ಲಾನ್: ಹಳ್ಳಿಗಳಿಗೆ ಸಿಗಲಿವೆ ಹೊಸ ಬಸ್ಸುಗಳು

ಬೆಂಗಳೂರು: ರಾಜ್ಯದ ಸಾರ್ವಜನಿಕ ಸಾರಿಗೆ ರಂಗಕ್ಕೆ ಹೊಸ ಕಳೆ ತುಂಬಲು ಮುಂದಾಗಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ನೇತೃತ್ವದ ಸಚಿವ ಸಂಪುಟ ಸಭೆಯು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದೆ. ಎರಡನೇ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಸಾರಿಗೆ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಕೋಟ್ಯಂತರ ರೂಪಾಯಿ ವೆಚ್ಚದ ವಿನೂತನ ಯೋಜನೆಗಳಿಗೆ ಒಪ್ಪಿಗೆ ಸೂಚಿಸಲಾಗಿದೆ. 620 ಬಸ್‌ ಖರೀದಿಗೆ ಸಿದ್ಧತೆ ರಾಜ್ಯದ ವಿವಿಧ ಭಾಗಗಳಲ್ಲಿ ಸಾರಿಗೆ ಸಂಪರ್ಕವನ್ನು ಮತ್ತಷ್ಟು ಸಲೀಸುಗೊಳಿಸುವ ಸಲುವಾಗಿ ಒಟ್ಟು 620 ನೂತನ ಬಸ್‌ಗಳನ್ನು ಖರೀದಿಸಲು ಸರ್ಕಾರ ಸಜ್ಜಾಗಿದೆ….

Read More
Karnataka government cabinet announces electricity discount to farmers

Cabinet: ರೈತರು ಹಾಗೂ ಹೈನುಗಾರರ ನೆರವಿಗೆ ನಿಂತ ಸರ್ಕಾರ: ಕೊಟ್ಟಿಗೆ, ರೇಷ್ಮೆ ಮನೆಗಳಿಗೆ ಕರೆಂಟ್ ಬಿಲ್ ರಿಯಾಯಿತಿ

ಬೆಂಗಳೂರು: ರಾಜ್ಯದ ಹಳ್ಳಿಗಳ ಆರ್ಥಿಕತೆಗೆ ಚೈತನ್ಯ ತುಂಬುವ ಹಾಗೂ ಗ್ರಾಮೀಣ ಜನತೆಗೆ ಉತ್ತಮ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟ (Cabinet) ಸಭೆಯು ಹಲವು ಐತಿಹಾಸಿಕ ತೀರ್ಮಾನಗಳನ್ನು ಕೈಗೊಂಡಿದೆ. ತಮ್ಮ ಎರಡನೇ ಕ್ಯಾಬಿನೆಟ್ ಸಭೆಯ ಬಳಿಕ ಜಂಟಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿಗಳು, ರೈತರು, ಹೈನುಗಾರರು ಹಾಗೂ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರುತ್ತಿರುವುದಾಗಿ ಪ್ರಕಟಿಸಿದರು. ವಿದ್ಯುತ್‌ ಶುಲ್ಕದಲ್ಲಿ ವಿನಾಯಿತಿ ಗ್ರಾಮೀಣ ಭಾಗದ ಪ್ರಮುಖ ಉಪಕಸುಬುಗಳಾದ ರೇಷ್ಮೆ ಕೃಷಿ…

Read More
BWSSB writes letter to reserve water for bengaluru

Bengaluru: ಮಳೆ ಕೊರತೆ ಮತ್ತು ಎಲ್ ನಿನೋ ಭೀತಿ: ಬೆಂಗಳೂರಿಗೆ ತಟ್ಟಲಿದೆಯೇ ಭೀಕರ ನೀರಿನ ಕ್ಷಾಮ?

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಆರಂಭದಲ್ಲೇ ತೀವ್ರ ಹಿನ್ನಡೆ ಅನುಭವಿಸಿರುವುದರಿಂದ ರಾಜಧಾನಿ ಬೆಂಗಳೂರಿಗೆ (Bengaluru) ಕುಡಿಯುವ ನೀರಿನ ದೊಡ್ಡ ಗಂಡಾಂತರ ಎದುರಾಗುವ ಮುನ್ಸೂಚನೆ ಸಿಕ್ಕಿದೆ. ನೈಋತ್ಯ ಮುಂಗಾರು ಮಾರುತಗಳು ದುರ್ಬಲಗೊಂಡಿರುವುದರಿಂದ ಜೂನ್ ಮೊದಲಾರ್ಧದಲ್ಲೇ ಭಾರಿ ಮಳೆ ಕೊರತೆ ಉಂಟಾಗಿದ್ದು, ಜಲಾಶಯಗಳು ಬತ್ತುತ್ತಿವೆ. ಈ ಕಠಿಣ ಪರಿಸ್ಥಿತಿಯನ್ನು ಮನಗಂಡು ಎಚ್ಚೆತ್ತುಕೊಂಡಿರುವ ಬೆಂಗಳೂರು ಜಲಮಂಡಳಿ (BWSSB), ಕೋಟ್ಯಂತರ ನಾಗರಿಕರ ದಾಹ ನೀಗಿಸಲು 9.56 ಟಿಎಂಸಿ ನೀರನ್ನು ಕಾಯ್ದಿರಿಸುವಂತೆ ಕಾವೇರಿ ನೀರಾವರಿ ನಿಗಮಕ್ಕೆ ತುರ್ತು ಮನವಿ ಸಲ್ಲಿಸಿದೆ. ಜಲಾಶಯಗಳಲ್ಲೂ ನೀರಿನ ಕೊರತೆ…

Read More
DK Shivakumar Karnataka government starting new department called praja seve

DK Shivakumar: ಜನರ ಅಹವಾಲು ಆಲಿಸಲು ರಾಜ್ಯ ಸರ್ಕಾರದ ಹೊಸ ಪ್ಲಾನ್: ‘ಪ್ರಜಾ ಸೇವೆ’ ಇಲಾಖೆ ಸ್ಥಾಪನೆ, ಸಚಿವರಿಗೆ ಟಾಸ್ಕ್

ಬೆಂಗಳೂರು: ರಾಜ್ಯದ ನಾಗರಿಕರ ಕುಂದುಕೊರತೆಗಳನ್ನು ಅತ್ಯಂತ ವೇಗವಾಗಿ ಬಗೆಹರಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು (DK Shivakumar) ಹೊಸದಾಗಿ ‘ಪ್ರಜಾ ಸೇವೆ’ ಎಂಬ ಪ್ರತ್ಯೇಕ ಇಲಾಖೆಯನ್ನು ಅಸ್ತಿತ್ವಕ್ಕೆ ತರಲು ನಿರ್ಧರಿಸಿದೆ. ಈ ಹೊಸ ಇಲಾಖೆಯ ಉಸ್ತುವಾರಿಗಾಗಿಯೇ ಪ್ರತ್ಯೇಕ ಸಚಿವರೊಬ್ಬರನ್ನು ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಕಟಿಸಿದ್ದಾರೆ. ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸಚಿವರಾದ ಪ್ರಿಯಾಂಕ್ ಖರ್ಗೆ, ಈಶ್ವರ್ ಖಂಡ್ರೆ ಮತ್ತು ಯು.ಟಿ. ಖಾದರ್ ಅವರ ಸಮ್ಮುಖದಲ್ಲಿ ಸಿಎಂ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು….

Read More
TMC leader Jyotipriya Mallick resigned to party

TMC: ಟಿಎಂಸಿ ಸಂಸ್ಥಾಪಕ ದಿನಗಳ ನಾಯಕ, ಮಮತಾ ಆಪ್ತ ಜ್ಯೋತಿಪ್ರಿಯ ಮಲ್ಲಿಕ್ ಪಕ್ಷಕ್ಕೆ ರಾಜೀನಾಮೆ!

ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಸ್ಥಾಪನೆಗೂ ಮುನ್ನವೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನೆರಳಿನಂತೆ ನಿಂತಿದ್ದ ಹಿರಿಯ ನಾಯಕ ಜ್ಯೋತಿಪ್ರಿಯ ಮಲ್ಲಿಕ್ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ತಮಗೆ ತೀವ್ರವಾಗಿ ಸಕ್ಕರೆ ಕಾಯಿಲೆ (ಶುಗರ್) ಹೆಚ್ಚಾಗಿರುವ ಕಾರಣ ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎಂದು ಮಮತಾ ಬ್ಯಾನರ್ಜಿ ಅವರಿಗೆ ಬರೆದಿರುವ ಕೈಬರಹದ ಬಂಗಾಳಿ ಪತ್ರದಲ್ಲಿ ಮಲ್ಲಿಕ್ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭಾಜಪ ಭರ್ಜರಿ…

Read More
6 lakh organizations register for Yoga Sangam ahead IDY 2026 Narendra Modi

IDY 2026: ಯೋಗ ಸಂಗಮ ಪೋರ್ಟಲ್‌ನಲ್ಲಿ 6 ಲಕ್ಷಕ್ಕೂ ಅಧಿಕ ನೋಂದಣಿ

ನವದೆಹಲಿ: ದೇಶಾದ್ಯಂತ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ (IDY 2026) ಸಂಭ್ರಮ ಮನೆಮಾಡಿದ್ದು, ಆಯುಷ್ ಸಚಿವಾಲಯದ ‘ಯೋಗ ಸಂಗಮ’ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡ ಸಂಸ್ಥೆಗಳ ಸಂಖ್ಯೆ ಬರೋಬ್ಬರಿ 6 ಲಕ್ಷದ ಗಡಿ ದಾಟಿದೆ. ಇದು ಭಾರತದಾದ್ಯಂತ ಯೋಗ ದಿನಾಚರಣೆಗೆ ವ್ಯಕ್ತವಾಗುತ್ತಿರುವ ಅಭೂತಪೂರ್ವ ಜನಬೆಂಬಲವನ್ನು ತೋರಿಸುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಯೋಗ ಫಾರ್ ಹೆಲ್ತಿ ಏಜಿಂಗ್ ‘ಯೋಗ ಫಾರ್ ಹೆಲ್ತಿ ಏಜಿಂಗ್’ (ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ) ಎಂಬ ವಿಶೇಷ ಧ್ಯೇಯವಾಕ್ಯದೊಂದಿಗೆ ಈ ಬಾರಿಯ ಯೋಗ ದಿನವನ್ನು ಆಚರಿಸಲಾಗುತ್ತಿದ್ದು,…

Read More
Rahul Gandhi slams NTA and central government regarding neet exam centre allotment

Rahul Gandhi: ನೀಟ್ ಮರುಪರೀಕ್ಷೆ ಯಡವಟ್ಟು: ನಾಗ್ಪುರದ ವಿದ್ಯಾರ್ಥಿಗೆ ಅಬುಧಾಬಿಯಲ್ಲಿ ಸೆಂಟರ್! ಮೋದಿ ಸರ್ಕಾರಕ್ಕೆ ರಾಹುಲ್ ಗಾಂಧಿ ತರಾಟೆ

ನವದೆಹಲಿ: ನೀಟ್ ಪರೀಕ್ಷೆಯ ಮರುಪರೀಕ್ಷೆ ಹಂಚಿಕೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಾಡಿರುವ ಎಡವಟ್ಟು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮಹಾರಾಷ್ಟ್ರದ ನಾಗ್ಪುರದ ನೀಟ್ ಅಭ್ಯರ್ಥಿಯೊಬ್ಬನಿಗೆ ಜೂನ್ 21ರಂದು ನಡೆಯಲಿರುವ ಮರುಪರೀಕ್ಷೆಗೆ ಯುಎಇಯ ಅಬುಧಾಬಿಯಲ್ಲಿ ಪರೀಕ್ಷಾ ಕೇಂದ್ರವನ್ನು ನಿಗದಿಪಡಿಸಲಾಗಿದೆ. ಈ ಗಂಭೀರ ಲೋಪವನ್ನು ತೀವ್ರವಾಗಿ ಖಂಡಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, (Rahul Gandhi) ದೇಶದ ಮಕ್ಕಳ ಭವಿಷ್ಯದ ಜೊತೆ ಜೂಜಾಡುವುದನ್ನು ಕೇಂದ್ರ ಸರ್ಕಾರ ತಕ್ಷಣ ನಿಲ್ಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳವಳ ವ್ಯಕ್ತಪಡಿಸಿದ…

Read More